AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್

ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್
ಭಾರ್ತಿ ಏರ್​ಟೆಲ್
TV9 Web
| Edited By: |

Updated on: Dec 20, 2022 | 5:49 PM

Share

ನವದೆಹಲಿ: ಬೆಂಗಳೂರಿನ ಸ್ಟಾರ್ಟಪ್ ಕಂಪನಿ ಲೆಮ್​ನಿಸ್ಕ್ (Lemnisk) ಶೇಕಡಾ 8ರಷ್ಟು ಷೇರುಗಳನ್ನು ದೇಶದ ಅತಿದೊಡ್ಡ ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ (Bharti Airtel) ಖರೀದಿಸಿದೆ. ಸ್ಟಾರ್ಟಪ್ ಉತ್ತೇಜನ ಯೋಜನೆಯ ಅಂಗವಾಗಿ ಈ ಷೇರು ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಏರ್​​ಟೆಲ್ ತಿಳಿಸಿದೆ. ಬೆಂಗಳೂರಿನ ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಮತ್ತು ಸೆಕ್ಯೂರ್ ಕಸ್ಟಮರ್ ಡಾಟಾ ಪ್ಲಾಟ್​ಫಾರ್ಮ್ (ಸಿಡಿಪಿ) ಅನ್ನು ಒದಗಿಸುತ್ತದೆ.

‘ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ. ಈ ಮೈತ್ರಿಯಿಂದ ಅನೇಕ ಸಾಧ್ಯತೆಗಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಜಗತ್ತಿನ ಅತಿದೊಡ್ಡ ಸಿಡಿಪಿ ತಾಣವನ್ನು ಸೃಷ್ಟಿಸಬಹುದಾಗಿದೆ. ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಪ್ರತಿ ದಿನ ಸುಮಾರು 350 ದಶಲಕ್ಷ ಗ್ರಾಹಕರನ್ನು ಹೊಂದಿರುವ ನಮಗೆ ಚೆನ್ನಾಗಿ ಹೊಂದಾಣಿಕೆಯಾಗಲಿದೆ’ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Holidays in 2023: 15 ಸುದೀರ್ಘ ವಾರಾಂತ್ಯಗಳು; ಇಲ್ಲಿದೆ 2023ರ ರಜೆ ವಿವರ

ಶೇಕಡಾ 8ರಷ್ಟು ಷೇರು ಖರೀದಿಸಿರುವುದಾಗಿ ಷೇರುಮಾರುಕಟ್ಟೆಗೆ ಏರ್​ಟೆಲ್ ಮಾಹಿತಿ ನೀಡಿದೆ. ಹಣಕಾಸು ವಿವರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಲೆಮ್​ನಿಸ್ಕ್ ಕಂಪನಿಯು ಸಿಂಗಾಪುರ, ದುಬೈ, ಬೋಸ್ಟನ್​​ ಹಾಗೂ ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. ಏರ್​ಟೆಲ್​ನ ಡಿಜಿಟಲ್ ಉದ್ಯಮಗಳಾದ ಏರ್​ಟೆಲ್ ಆ್ಯಡ್ಸ್, ಡಿಜಿಟಲ್ ಎಂಟರ್​ಟೇನ್​​​ಮೆಂಟ್ ಹಾಗೂ ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​​ಗಳಿಗೆ ಲೆಮ್​ನಿಸ್ಕ್ ಕಂಪನಿಯು ಸಿಡಿಪಿ ಪ್ಲಾಟ್​ಫಾರ್ಮ್​ಗಳನ್ನು ಸಿದ್ಧಪಡಿಸಲಿದೆ. ಭವಿಷ್ಯದಲ್ಲಿ, ಏರ್‌ಟೆಲ್ ಈ ಸೇವೆಯನ್ನು ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಇಂಟಿಗ್ರೇಟೆಡ್ ಕ್ಲೌಡ್ ಪ್ಲಾಟ್‌ಫಾರ್ಮ್ ಮೂಲಕ ಐಕ್ಯೂ ಸೇವೆಯಾಗಿ ನೀಡಲು ಯೋಜಿಸಿದೆ ಎಂದು ಕಂಪನಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ