AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್

ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bharti Airtel: ಬೆಂಗಳೂರಿನ ಸ್ಟಾರ್ಟಪ್​ ಲೆಮ್​ನಿಸ್ಕ್ ಷೇರು ಖರೀದಿಸಿದ ಏರ್​ಟೆಲ್
ಭಾರ್ತಿ ಏರ್​ಟೆಲ್
TV9 Web
| Edited By: |

Updated on: Dec 20, 2022 | 5:49 PM

Share

ನವದೆಹಲಿ: ಬೆಂಗಳೂರಿನ ಸ್ಟಾರ್ಟಪ್ ಕಂಪನಿ ಲೆಮ್​ನಿಸ್ಕ್ (Lemnisk) ಶೇಕಡಾ 8ರಷ್ಟು ಷೇರುಗಳನ್ನು ದೇಶದ ಅತಿದೊಡ್ಡ ದೂರಸಂಪರ್ಕ ಕಂಪನಿ ಭಾರ್ತಿ ಏರ್​ಟೆಲ್ (Bharti Airtel) ಖರೀದಿಸಿದೆ. ಸ್ಟಾರ್ಟಪ್ ಉತ್ತೇಜನ ಯೋಜನೆಯ ಅಂಗವಾಗಿ ಈ ಷೇರು ಖರೀದಿ ಪ್ರಕ್ರಿಯೆ ನಡೆದಿದೆ ಎಂದು ಏರ್​​ಟೆಲ್ ತಿಳಿಸಿದೆ. ಬೆಂಗಳೂರಿನ ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಮತ್ತು ಸೆಕ್ಯೂರ್ ಕಸ್ಟಮರ್ ಡಾಟಾ ಪ್ಲಾಟ್​ಫಾರ್ಮ್ (ಸಿಡಿಪಿ) ಅನ್ನು ಒದಗಿಸುತ್ತದೆ.

‘ಏರ್​ಟೆಲ್​ನ ಸ್ಟಾರ್ಟಪ್ ಉತ್ತೇಜನ ಯೋಜನೆಯ ಮತ್ತು ಡಿಜಿಟಲ್ ಇನ್ನೋವೇಷನ್​​ ಎಂಜಿನ್​ನ ಭಾಗವಾಗಿ ಲೆಮ್​ನಿಸ್ಕ್ ಅನ್ನು ಸ್ವಾಗತಿಸಲು ಸಂತಸಗೊಂಡಿದ್ದೇವೆ. ಈ ಮೈತ್ರಿಯಿಂದ ಅನೇಕ ಸಾಧ್ಯತೆಗಳಿರುವುದನ್ನು ನಾವು ಕಂಡುಕೊಂಡಿದ್ದೇವೆ. ಇದರಿಂದ ಜಗತ್ತಿನ ಅತಿದೊಡ್ಡ ಸಿಡಿಪಿ ತಾಣವನ್ನು ಸೃಷ್ಟಿಸಬಹುದಾಗಿದೆ. ಲೆಮ್​ನಿಸ್ಕ್ ಕಂಪನಿಯು ರಿಯಲ್​ಟೈಂ ಮಾರ್ಕೆಟಿಂಗ್ ಆಟೊಮೇಷನ್ ಪ್ರತಿ ದಿನ ಸುಮಾರು 350 ದಶಲಕ್ಷ ಗ್ರಾಹಕರನ್ನು ಹೊಂದಿರುವ ನಮಗೆ ಚೆನ್ನಾಗಿ ಹೊಂದಾಣಿಕೆಯಾಗಲಿದೆ’ ಎಂದು ಏರ್​ಟೆಲ್ ಡಿಜಿಟಲ್​ನ ಸಿಇಒ ಆದರ್ಶ್ ನಾಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Holidays in 2023: 15 ಸುದೀರ್ಘ ವಾರಾಂತ್ಯಗಳು; ಇಲ್ಲಿದೆ 2023ರ ರಜೆ ವಿವರ

ಶೇಕಡಾ 8ರಷ್ಟು ಷೇರು ಖರೀದಿಸಿರುವುದಾಗಿ ಷೇರುಮಾರುಕಟ್ಟೆಗೆ ಏರ್​ಟೆಲ್ ಮಾಹಿತಿ ನೀಡಿದೆ. ಹಣಕಾಸು ವಿವರಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.

ಲೆಮ್​ನಿಸ್ಕ್ ಕಂಪನಿಯು ಸಿಂಗಾಪುರ, ದುಬೈ, ಬೋಸ್ಟನ್​​ ಹಾಗೂ ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ. ಏರ್​ಟೆಲ್​ನ ಡಿಜಿಟಲ್ ಉದ್ಯಮಗಳಾದ ಏರ್​ಟೆಲ್ ಆ್ಯಡ್ಸ್, ಡಿಜಿಟಲ್ ಎಂಟರ್​ಟೇನ್​​​ಮೆಂಟ್ ಹಾಗೂ ಏರ್​ಟೆಲ್ ಥ್ಯಾಂಕ್ಸ್ ಆ್ಯಪ್​​ಗಳಿಗೆ ಲೆಮ್​ನಿಸ್ಕ್ ಕಂಪನಿಯು ಸಿಡಿಪಿ ಪ್ಲಾಟ್​ಫಾರ್ಮ್​ಗಳನ್ನು ಸಿದ್ಧಪಡಿಸಲಿದೆ. ಭವಿಷ್ಯದಲ್ಲಿ, ಏರ್‌ಟೆಲ್ ಈ ಸೇವೆಯನ್ನು ತನ್ನ ಗ್ರಾಹಕರಿಗೆ ನೆಟ್‌ವರ್ಕ್ ಇಂಟಿಗ್ರೇಟೆಡ್ ಕ್ಲೌಡ್ ಪ್ಲಾಟ್‌ಫಾರ್ಮ್ ಮೂಲಕ ಐಕ್ಯೂ ಸೇವೆಯಾಗಿ ನೀಡಲು ಯೋಜಿಸಿದೆ ಎಂದು ಕಂಪನಿ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್