AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BHEL: ಬೆಂಗಳೂರಿನ ಬಿಎಚ್​ಇಎಲ್​ನಿಂದ ತಯಾರಾಗಲಿವೆ 80 ವಂದೇ ಭಾರತ್ ಟ್ರೈನುಗಳು; 24 ಸಾವಿರ ಕೋಟಿ ರೂ ಗುತ್ತಿಗೆ ನೀಡಿದ ಭಾರತೀಯ ರೈಲ್ವೆ

Contract To Manufacture 80 Vande Bharat Trains: ಬಿಎಚ್​ಇಎಲ್, ಟಿಆರ್​ಎಸ್​ಎಲ್ ಮೊದಲಾದ ಕಂಪನಿಗಳ ಕನ್ಸಾರ್ಟಿಯಂಗೆ 80 ವಂದೇ ಭಾರತ್ ಟ್ರೈನುಗಳ ತಯಾರಿಕೆಯ ಗುತ್ತಿಗೆಯನ್ನು ಭಾರತೀಯ ರೈಲ್ವೆ ನೀಡಿದೆ. 2029ರಷ್ಟರಲ್ಲಿ ಈ ರೈಲುಗಳು ತಯಾರಾಗಬೇಕು. 24,000 ಕೋಟಿ ರೂ ಮೊತ್ತದ ಗುತ್ತಿಗೆ ಇದಾಗಿದೆ.

BHEL: ಬೆಂಗಳೂರಿನ ಬಿಎಚ್​ಇಎಲ್​ನಿಂದ ತಯಾರಾಗಲಿವೆ 80 ವಂದೇ ಭಾರತ್ ಟ್ರೈನುಗಳು; 24 ಸಾವಿರ ಕೋಟಿ ರೂ ಗುತ್ತಿಗೆ ನೀಡಿದ ಭಾರತೀಯ ರೈಲ್ವೆ
ವಂದೇ ಭಾರತ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 15, 2023 | 6:10 PM

Share

ನವದೆಹಲಿ: ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿ (BHEL) ಮತ್ತು ಕೋಲ್ಕತಾದ ತೀತಾಗಡ್ ರೈಲ್ ಸಿಸ್ಟಮ್ಸ್ ಲಿ (TRSL) ನೇತೃತ್ವದ ಸಮೂಹಕ್ಕೆ ವಂದೇ ಭಾರತ್ ಸ್ಲೀಪರ್ ಟ್ರೈನುಗಳ (Vande Bharat Sleeper Coach Trains) ತಯಾರಿಕೆಯ ಯೋಜನೆ ಸಿಕ್ಕಿದೆ. 80 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಭಾರತೀಯ ರೈಲ್ವೇಸ್ ಈ ಗುತ್ತಿಗೆ ನೀಡಿದೆ. 24,000 ರೂ ಮೊತ್ತದ ಗುತ್ತಿಗೆ ಇದಾಗಿದೆ. ಈ ವಿಚಾರವನ್ನು ಜಂಟಿ ಹೇಳಿಕೆ ಮೂಲಕ ಈ ಸಂಸ್ಥೆಗಳು ಪ್ರಕಟಿಸಿವೆ.

2029ರಷ್ಟರಲ್ಲಿ ಈ 80 ಸ್ಲೀಪರ್ ಕೋಚ್ ಟ್ರೈನುಗಳನ್ನು ತಯಾರಿಸಬೇಕಿದೆ. ಟ್ರೈನ್​ನ ವಿನ್ಯಾಸದಿಂದ ಹಿಡಿದು ಎಲ್ಲವನ್ನೂ ಪೂರ್ಣವಾಗಿ ತಯಾರಿಸಬೇಕು. ಹಾಗೂ 35 ವರ್ಷಗಳ ಕಾಲ ಈ ಟ್ರೈನುಗಳ ಮೈಂಟೆನೆನ್ಸ್ ಕೂಡ ಮಾಡಬೇಕು. ಇದು ಗುತ್ತಿಗೆಯಲ್ಲಿರುವ ಷರತ್ತುಗಳು. ಈ ರೀತಿಯ ಪರಿಪೂರ್ಣ ರೈಲ್ವೆ ಗುತ್ತಿಗೆಯನ್ನು ಭಾರತೀಯ ಸಂಸ್ಥೆಗಳಿಗೆ ನೀಡಲಾಗಿರುವುದು ಇದೇ ಮೊದಲು.

ಇದನ್ನೂ ಓದಿPakistan: ಪಾಕಿಸ್ತಾನದಿಂದ ಕಾಲ್ಕೀಳುತ್ತಿದೆ ಶೆಲ್; ಅಲ್ಲಾಹುವೇ ಕಾಪಾಡಬೇಕೆಂದ ನೆಟ್ಟಿಗರು

ಈ ಗುತ್ತಿಗೆಯನ್ನು 6 ವರ್ಷದ ಅವಧಿಯಲ್ಲಿ ನೆರವೇರಿಸಲಾಗುವುದು. ಎರಡು ವರ್ಷದೊಳಗೆ ಮೊದಲ ವಂದೇ ಭಾರತ್ ಟ್ರೈನಿನ ಪ್ರೋಟೋಟೈಪ್ ಒದಗಿಸಲಾಗುವುದು. ಅದಾದ ಬಳಿಕ ಉಳಿದ ಟ್ರೈನುಗಳನ್ನು ತಯಾರಿಸಿ ಭಾರತೀಯ ರೈಲ್ವೆಗೆ ಒಪ್ಪಿಸಲಾಗುವುದು ಎಂದು ತೀತಾಗಡ್ ರೈಲ್ ಸಿಸ್ಟಮ್ಸ್​ನ ಎಂಡಿ ಮತ್ತು ಉಪಾಧ್ಯಕ್ಷ ಉಮೇಸ್ ಚೌಧರಿ ಹೇಳಿದ್ದಾರೆ.

ಈ ವಂದೇ ಭಾರತ್ ರೈಲುಗಳು ಗಂಟೆಗೆ 160 ಕಿಮೀ ವೇಗದಲ್ಲಿ ಸಾಗುವಂತೆ ವಿನ್ಯಾಸ ಮಾಡಲಾಗುತ್ತದೆ. ಒಂದು ಟ್ರೈನಿನಲ್ಲಿ 16 ಬೋಗಿಗಳಿರಲಿದ್ದು, ಒಟ್ಟು 887 ಪ್ರಯಾಣಿಕರಿಗೆ ಸ್ಥಳಾವಕಾಶ ಇರುತ್ತದೆ. ಇಂಥ 80 ಟ್ರೈನುಗಳು 2029ರಷ್ಟರಲ್ಲಿ ಹಂತ ಹಂತವಾಗಿ ಬಿಡುಗಡೆ ಆಗಲಿವೆ. ಈ ಟ್ರೈನುಗಳ ಅಂತಿಮ ಜೋಡಣೆ, ಪರೀಕ್ಷೆ ಮತ್ತು ಚಾಲನೆಯನ್ನು ಚೆನ್ನೈನಲ್ಲಿರುವ ಭಾರತೀಯ ರೈಲ್ವೆಯ ಜಾಗದಲ್ಲಿ ನಡೆಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ