Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಕೆಲ ಕಳೆದುಕೊಳ್ಳುವ ಆತಂಕದಲ್ಲಿ ಬೈಜುಸ್​ ಉದ್ಯೋಗಿಗಳು; ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಬೈಜೂಸ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್

BYJU'S To Layoff 11pc Employees: ವೆಚ್ಚ ಕಡಿತ ಮತ್ತು ಕಂಪನಿ ಪುನಾರಚನೆಯ ಭಾಗವಾಗಿ ಬೈಜುಸ್​ನ ಬಹಳಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಕಂಪನಿಯ ಈ ಹೊಸ ಸುತ್ತಿನ ಲೇ ಆಫ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 4,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಬೈಜುಸ್​ನಲ್ಲಿರುವ 35 ಸಾವಿರ ಮಂದಿ ಉದ್ಯೋಗಿಗಳಲ್ಲಿ ಶೇ. 11ರಷ್ಟು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿಯಲ್ಲಿ ಹೇಳಿದೆ.

ಮತ್ತೆ ಕೆಲ ಕಳೆದುಕೊಳ್ಳುವ ಆತಂಕದಲ್ಲಿ ಬೈಜುಸ್​ ಉದ್ಯೋಗಿಗಳು; ವೆಚ್ಚ ಕಡಿತದ ಹಿನ್ನೆಲೆಯಲ್ಲಿ ಬೈಜೂಸ್​ನಲ್ಲಿ ಮತ್ತೊಂದು ಸುತ್ತಿನ ಲೇ ಆಫ್
ಬೈಜುಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 27, 2023 | 12:40 PM

ಬೆಂಗಳೂರು, ಸೆಪ್ಟೆಂಬರ್ 27: ಸಾಲ ಮತ್ತು ವಿವಾದಗಳಿಂದ ಬಾಧಿತವಾಗಿರುವ ಭಾರತದ ಪ್ರಮುಖ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (BYJU’S) ಮತ್ತೊಂದು ಸುತ್ತಿನ ಲೇ ಆಫ್​ಗೆ ಕೈ ಹಾಕಲು ನಿರ್ಧರಿಸಿದೆ. ಬಿಸಿನೆಸ್ ಟುಡೇ ವಾಹಿನಿಯಲ್ಲಿ ಬಂದಿರುವ ವರದಿ ಪ್ರಕಾರ ವೆಚ್ಚ ಕಡಿತ ಮತ್ತು ಕಂಪನಿ ಪುನಾರಚನೆಯ (Restructuring) ಭಾಗವಾಗಿ ಬೈಜುಸ್​ನ ಬಹಳಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಕಂಪನಿಯ ಈ ಹೊಸ ಸುತ್ತಿನ ಲೇ ಆಫ್ ಪ್ರಕ್ರಿಯೆಯಲ್ಲಿ ಬರೋಬ್ಬರಿ 4,000 ಮಂದಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ (Job Loss) ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂದರೆ ಬೈಜುಸ್​ನಲ್ಲಿರುವ 35 ಸಾವಿರ ಮಂದಿ ಉದ್ಯೋಗಿಗಳಲ್ಲಿ ಶೇ. 11ರಷ್ಟು ಮಂದಿ ಕೆಲಸ ಕಳೆದುಕೊಳ್ಳಬಹುದು ಎಂದು ಬಿಸಿನೆಸ್ ಟುಡೇ ವರದಿಯಲ್ಲಿ ಹೇಳಿದೆ.

ಇಷ್ಟು ಅಗಾಧ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಬೈಜುಸ್​ನಿಂದ ಅಧಿಕೃತವಾಗಿ ಹೇಳಿಕೆ ಬಂದಿಲ್ಲ. ಆದರೆ, ಬಿಸಿನೆಸ್ ರೀಸ್ಟ್ರಕ್ಚರಿಂಗ್ ಕಾರ್ಯದ ಅಂತಿಮ ಹಂತದಲ್ಲಿದ್ದೇವೆ ಎಂದು ಮಾಧ್ಯಮಗಳಿಗೆ ಬೈಜುಸ್​ನ ವಕ್ತಾರರು ತಿಳಿಸಿದ್ದಾರೆ.

‘ಕಾರ್ಯಾಚರಣೆ ರಚನೆಯನ್ನು (Operational structure) ಸರಳಗೊಳಿಸಲು, ವೆಚ್ಚವನ್ನು ಕಡಿಮೆ ಮಾಡಲು ಮತ್ತು ನಗದು ಹರಿವಿನ ನಿರ್ವಹಣೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ವ್ಯವಹಾರ ಪುನಾರಚನೆ (business restructuring) ಕಾರ್ಯದ ಅಂತಿಮ ಹಂತದಲ್ಲಿದ್ದೇವೆ,’ ಎಂದು ಬೈಜುಸ್​ನ ವಕ್ತಾರರು ಪ್ರತಿಕ್ರಿಯಿಸಿದರೆಂದು ಬಿಸಿನೆಸ್ ಟುಡೇ ವರದಿ ಮಾಡಿದೆ.

ಇದನ್ನೂ ಓದಿ: ಹಬ್ಬದ ಸೀಸನ್ ಅಕ್ಟೋಬರ್ 2023ರಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಯಾವ್ಯಾವತ್ತು ಬ್ಯಾಂಕ್ ಬಂದ್? ಇಲ್ಲಿದೆ ವಿವರ

ಕೆಲ ವಾರಗಳ ಹಿಂದಷ್ಟೇ ಬೈಜುಸ್​ನ ಭಾರತ ವಿಭಾಗಕ್ಕೆ ಹೊಸ ಸಿಇಒ ಆಗಿ ಬಂದಿರುವ ಅರ್ಜುನ್ ಮೋಹನ್ ಅವರ ನೇತೃತ್ವದಲ್ಲಿ ಮುಂದಿನ ಕೆಲ ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಲಾಗಿದೆ.

ಸಾಲು ಸಾಲು ರಾಜೀನಾಮೆ

ಸಿಇಒ ಆಗಿ ಮೃಣಾಲ್ ಮೋಹಿತ್ ಅವರ ಸ್ಥಾನವನ್ನು ತುಂಬುವ ಮುನ್ನ ಅರ್ಜುನ್ ಮೋಹನ್ ಅವರು ಬೈಜುಸ್​ನ ಚೀಫ್ ಬಿಸಿನೆಸ್ ಆಫೀಸರ್ ಆಗಿದ್ದರು. ಮೃಣಾಲ್ ಮೋಹಿತ್ ಅವರು ಬೈಜುಸ್​ನ ಪ್ರತಿಸ್ಪರ್ಧಿ ಅಪ್​ಗ್ರಾಡ್ ಅನ್ನು ಸೇರಿಕೊಂಡಿದ್ದಾರೆ. ಅವರಷ್ಟೇ ಅಲ್ಲ, ಬೈಜುಸ್​ನ ಇತರ ನಾಲ್ವರು ಹಿರಿಯ ಎಕ್ಸಿಕ್ಯೂಟಿವ್​ಗಳಾದ ಪ್ರತ್ಯುಶಾ ಅಗರ್ವಾಲ್, ಹಿಮಾಂಶು ಬಜಾಜ್, ಮುಕುತ್ ದೀಪಕ್ ಮತ್ತು ಚೆರಿಯನ್ ಥಾಮಸ್ ಅವರೂ ರಾಜೀನಾಮೆ ನೀಡಿದ್ದಾರೆ.

ಇದನ್ನೂ ಓದಿ: Google 25th Birthday:: ಗೂಗಲ್ ಜನ್ಮದಿನ ಇಂದು; ಗೂಗಲ್ ಹೆಸರಿನ ಅರ್ಥ ಏನು? ಗ್ಯಾರೇಜ್​ನಿಂದ ಶುರುವಾಗಿ ಇವತ್ತದು ಎಷ್ಟು ಅಗಾಧವಾಗಿ ಬೆಳೆದಿದೆ ನೋಡಿ..!

ಸಾಕಷ್ಟು ಕಷ್ಟಕ್ಕೆ ಸಿಲುಕಿರುವ ಹೊತ್ತಿನಲ್ಲಿ ಬೈಜುಸ್​ನ ಚುಕ್ಕಾಣಿ ಹಿಡಿದಿರುವ ಅರ್ಜುನ್ ಮೋಹನ್ ಅವರಿಗೆ ಗುರುತರ ಜವಾಬ್ದಾರಿಗಳಿವೆ. ಹಣಕಾಸು ಸಂಕಷ್ಟದಲ್ಲಿರುವ ಬೈಜುಸ್​ಗೆ ಫಂಡಿಂಗ್ ತರುವುದು, ವೆಚ್ಚ ಕಡಿತ ಮಾಡುವುದು, ಬಿಸಿನೆಸ್ ಹೆಚ್ಚಿಸುವುದು ಹೇಗೆ ಕಠಿಣ ಸವಾಲುಗಳಿವೆ. ಈ ಹಿನ್ನೆಲೆಯಲ್ಲಿ ಉದ್ಯೋಗಕಡಿತದಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬೈಜುಸ್​ಗೆ ಅನಿವಾರ್ಯವಾಗಬಹುದು.

ಬೈಜುಸ್ ಈ ಮುಂಚೆ ಮೂರ್ನಾಲ್ಕು ಬಾರಿ ಲೇ ಆಫ್ ಮಾಡಿದ್ದಿದೆ. ಕಳೆದ ವರ್ಷ 2,500 ಮಂದಿಯನ್ನು ಕೆಲಸದಿಂದ ತೆಗೆಯಲಾಗಿತ್ತು. ಈಗ 4,000 ಮಂದಿ ಕೆಲಸ ಕಳೆದುಕೊಳ್ಳುವುದು ನಿಜವೇ ಆದಲ್ಲಿ ಬೈಜುಸ್​ನಿಂದ ಆಗಿರುವ ಅತಿದೊಡ್ಡ ಲೇ ಆಫ್ ಎನಿಸಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್