AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪ್ರಕರಣ: ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿ ಐವರನ್ನು ಬಂಧಿಸಿದ ಸಿಬಿಐ

CBI Arrests GAIL's Executive Director: ಪೈಪ್​ಲೈನ್ ಯೋಜನೆ ಸಂಬಂಧ ಲಂಚ ವಿನಿಮಯವಾದ ಆರೋಪದ ಮೇಲೆ ಸರ್ಕಾರಿ ಸ್ವಾಮ್ಯದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಬಿ ಸಿಂಗ್ ಹಾಗು ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ದೆಹಲಿ, ವಿಶಾಖಪಟ್ಟಣಂ, ನೋಯ್ಡಾದ ವಿವಿಧ ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಮಾಡಿದ್ದಾರೆ. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಲಂಚ ಪ್ರಕರಣ: ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸೇರಿ ಐವರನ್ನು ಬಂಧಿಸಿದ ಸಿಬಿಐ
ಜಿಎಐಎಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 05, 2023 | 6:46 PM

ನವದೆಹಲಿ, ಸೆಪ್ಟಂಬರ್ 5: ಸರ್ಕಾರಿ ಸ್ವಾಮ್ಯದ ಜಿಎಐಎಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಲಂಚ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದಿದ್ದಾರೆ. ಜಿಎಐಎಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೆಬಿ ಸಿಂಗ್ (GAIL’s Executive Director) ಹಾಗೂ ಇತರ ನಾಲ್ವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಭಾರತೀಯ ಅನಿಲ ಪ್ರಾಧಿಕಾರ ಜಿಎಐಎಲ್​ನ ಮುಖ್ಯ ಜನರಲ್ ಮ್ಯಾನೇಜರ್ ದಾವಿಂದರ್ ಸಿಂಗ್, ವಡೋದರಾದ ಅಡ್ವಾನ್ಸ್ ಇನ್​ಫ್ರಾಸ್ಟ್ರಕ್ಚರ್ಸ್​ನ ನಿರ್ದೇಶಕ ಸುರೇಂದರ್ ಕುಮಾರ್ ಅವರು ಇತರ ಬಂಧಿತರ ಪೈಕಿ ಇದ್ದಾರೆ. ಇವರ ವಿರುದ್ಧ 50 ಲಕ್ಷ ರೂ ಮೊತ್ತದ ಲಂಚ ಪ್ರಕರಣ ಇದೆ. ಬ್ರೈಬರಿ ಕೇಸ್​ನಲ್ಲಿ ಜಿಎಐಎಲ್​ನ ಅಧಿಕಾರಿಗಳನ್ನು ಬಂಧಿಸಲಾಗಿರುವುದನ್ನು ಸಂಸ್ಥೆ ಕೂಡ ರೆಗ್ಯುಲೇಟರಿ ಫೈಲಿಂಗ್​ನಲ್ಲಿ ಖಚಿತಪಡಿಸಿದೆ.

ಏನಿದು ಲಂಚ ಪ್ರಕರಣ?

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿ ಸಂಸ್ಥೆಯ ಎರಡು ಪೈಪ್​ಲೈನ್ ಯೋಜನೆಗಳಲ್ಲಿ ಲಂಚ ಸ್ವೀಕರಿಸಿದ ಆರೋಪ ಇದೆ. ಆಂಧ್ರದ ಶ್ರೀಕಾಕುಲಂನಿಂದ ಅಂಗುಲ್​ವರೆಗಿನ ಒಂದು ಪೈಪ್​ಲೈನ್ ಯೋಜನೆ, ಹಾಗು ವಿಜಯ್​ಪುರ್​ನಿಂದ ಔರಾಯವರೆಗಿನ ಇನ್ನೊಂದು ಪೈಪ್​ಲೈನ್ ಯೋಜನೆಯಲ್ಲಿ ಲಂಚ ಪಡೆಯಲಾದ ಆರೋಪ ಇದೆ.

ಸಿಬಿಐ ಈ ನಿಟ್ಟಿನಲ್ಲಿ ಜಿಎಐಎಲ್​ನ ಹಿರಿಯ ಅಧಿಕಾರಿಗಳ ಕಚೇರಿಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿ, ಇಂದು (ಸೆ. 5) ಐವರನ್ನು ಬಂಧಿಸಿದೆ.

ಇದನ್ನೂ ಓದಿ:

ದೆಹಲಿ, ನೋಯ್ಡಾ, ವಿಶಾಖಪಟ್ಟಣಂನ ವಿವಿಧ ಜಾಗದಲ್ಲಿ ಸಿಬಿಐ ಶೋಧ ನಡೆಸಿದೆ. ಈಗಲೂ ಕೂಡ ದೆಹಲಿ, ನೋಯ್ಡಾ, ವಿಶಾಖಪಟ್ಟಣಂ ಇನ್ನೂ ಹಲವು ಪ್ರದೇಶಗಳಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ.

ಏರುಗತಿಯಲ್ಲಿದ್ದ ಜಿಎಐಎಲ್ ಷೇರಿಗೆ ಹಿನ್ನಡೆ?

ಜಿಎಐಎಲ್ ಸಂಸ್ಥೆ ಇವತ್ತಿನವರೆಗೂ ಷೇರುಪೇಟೆಯಲ್ಲಿ ಒಳ್ಳೆಯ ಡಿಮ್ಯಾಂಡ್ ಹೊಂದಿದೆ. ಅದರ ಷೇರುಬೆಲೆ ಬಹುತೇಕ ಉಚ್ಛ್ರಾಯ ಮಟ್ಟಕ್ಕೆ ಏರುತ್ತಿದೆ. 2018ರಲ್ಲಿ ಅದರ ಷೇರುಬೆಲೆ 130 ರೂ ಆಸುಪಾಸಿಗೆ ಏರಿತ್ತು. ಈಗಲೂ ಅದು ಜಿಎಐಎಲ್​ನ ಗರಿಷ್ಠ ಷೇರುಬೆಲೆಯಾಗಿದೆ. ಇವತ್ತು ಅದು 123 ರೂ ಗಟಿ ದಾಟಿದೆ. ಒಂದು ವರ್ಷದ ಹಿಂದೆ 87 ರೂ ಇದ್ದ ಅದರ ಬೆಲೆ ಈಗ 123 ರೂ ಆಗಲು ಸತತ ಓಟ ಕಾರಣ.

ಇದನ್ನೂ ಓದಿ:

ಇದೇ ಸಂದರ್ಭದಲ್ಲಿ ಜಿಎಐಎಲ್​ನ ಅಧಿಕಾರಿಗಳು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಸಿಬಿಐನಿಂದ ಬಂಧಿತರಾಗಿರುವುದು ಅದರ ಷೇರು ಓಟಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇಲ್ಲದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು