AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಲ್ ಇಂಡಿಯಾ ಮತ್ತು ಇತರ ಪಿಎಸ್​ಯುಗಳಿಂದ ಕೇಂದ್ರ ಸರ್ಕಾರಕ್ಕೆ ಬಂಪರ್ ಡಿವಿಡೆಂಡ್

ಕೇಂದ್ರ ಸರ್ಕಾರವು ಕೋಲ್ ಇಂಡಿಯಾ ಸೇರಿದಂತೆ ಇತರ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಿಂದ ಭಾರೀ ಪ್ರಮಾಣದ ಡಿವಿಡೆಂಡ್ ಪಡೆದುಕೊಂಡಿದೆ.

ಕೋಲ್ ಇಂಡಿಯಾ ಮತ್ತು ಇತರ ಪಿಎಸ್​ಯುಗಳಿಂದ ಕೇಂದ್ರ ಸರ್ಕಾರಕ್ಕೆ ಬಂಪರ್ ಡಿವಿಡೆಂಡ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 24, 2021 | 11:13 PM

ಕೇಂದ್ರ ಸರ್ಕಾರವು ಕೋಲ್ ಇಂಡಿಯಾದಿಂದ ಲಾಭಾಂಶದ ಭಾಗವಾಗಿ ರೂ. 3,668 ಕೋಟಿಗಳನ್ನು ಪಡೆದುಕೊಂಡಿದೆ. ಇದುವರೆಗೆ FY22ಕ್ಕಾಗಿ ಸಾರ್ವಜನಿಕ ವಲಯದ ಉದ್ಯಮಗಳ ಲಾಭಾಂಶದಿಂದ ಒಟ್ಟು ಆದಾಯ ರೂ. 33,479 ಕೋಟಿ ತೆಗೆದುಕೊಂಡಿದೆ. ಇನ್ನು ಟೆಲಿಕಮ್ಯುನಿಕೇಷನ್ಸ್ ಇಂಡಿಯಾ ಲಿಮಿಟೆಡ್, IRCON, RITES ಮತ್ತು NIIFLನಿಂದ ಲಾಭಾಂಶದ ಭಾಗವಾಗಿ ರೂ. 21ಕೋಟಿ, ರೂ. 48 ಕೋಟಿ, ರೂ. 69 ಕೋಟಿ ಮತ್ತು ರೂ. 23 ಕೋಟಿಗಳನ್ನು ಪಡೆದುಕೊಂಡಿದೆ. “ಸರ್ಕಾರವು ಕೋಲ್ ಇಂಡಿಯಾ ಲಿಮಿಟೆಡ್‌ನಿಂದ ಸುಮಾರು ರೂ. 3668 ಕೋಟಿ ಮತ್ತು ಟೆಲಿಕಮ್ಯುನಿಕೇಷನ್ಸ್ ಇಂಡಿಯಾ ಲಿಮಿಟೆಡ್‌ನಿಂದ ರೂ. 21 ಕೋಟಿಯನ್ನು ಲಾಭಾಂಶದ ಭಾಗವಾಗಿ ಸ್ವೀಕರಿಸಿದೆ,” ಎಂದು ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (ಡಿಐಪಿಎಎಂ) ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಶುಕ್ರವಾರ ಸಂಜೆ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

“ಸರ್ಕಾರವು ಕ್ರಮವಾಗಿ ರೂ. 48 ಕೋಟಿ, ರೂ. 69 ಕೋಟಿ ಮತ್ತು ರೂ. 23 ಕೋಟಿಗಳನ್ನು IRCON, RITES ಮತ್ತು NIIFLನಿಂದ ಲಾಭಾಂಶದ ಭಾಗವಾಗಿ ಸ್ವೀಕರಿಸಿದೆ,” ಎಂದು ಅವರು ಹೇಳಿದ್ದಾರೆ. ಸರ್ಕಾರವು ಬಂಡವಾಳ ಹಿಂತೆಗೆತ ಮತ್ತು ಲಾಭಾಂಶದಿಂದ ಇದುವರೆಗೆ ಒಟ್ಟು ರೂ. 42,809.48 ಕೋಟಿಗಳನ್ನು ಪಡೆದಿದೆ. ಇದರಲ್ಲಿ ಕೇವಲ ರೂ. 9,329.9 ಕೋಟಿ ಮಾತ್ರ ಆಯಕಟ್ಟಿನ ಮತ್ತು ಕಾರ್ಯತಂತ್ರವಲ್ಲದ ಮಾರಾಟದಿಂದ ಬಂದಿದೆ. ಜೊತೆಗೆ ಎನ್​ಎಂಡಿಸಿ, ಹುಡ್ಕೋ ಮತ್ತು ಹಿಂದೂಸ್ತಾನ್ ಕಾಪರ್‌ ಲಿಮಿಟೆಡ್​ನ ಒಎಫ್​ಎಸ್ ಮತ್ತು ಉದ್ಯೋಗಿ OFS ಮಾರ್ಗವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ 2022ರ ಹೂಡಿಕೆಯಿಂದ ರೂ. 1.75 ಲಕ್ಷ ಕೋಟಿಗಳ ಗುರಿಯನ್ನು ಸರ್ಕಾರ ಹೊಂದಿದೆ. ಇದು ಬಿಪಿಸಿಎಲ್, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಬಿಇಎಂಎಲ್​ ಮತ್ತು ಪವನ್ ಹನ್ಸ್‌ನಂತಹ ಪಿಎಸ್​ಯುಗಳ ಕಾರ್ಯತಂತ್ರದ ಬಂಡವಾಳ ಹಿಂತೆಗೆದುಕೊಳ್ಳುವಿಕೆಯಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸುತ್ತದೆ.

ಇದನ್ನೂ ಓದಿ: Government Asset Sale: ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ

ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ವಿವಾಹ ವಾರ್ಷಿಕೋತ್ಸವ: ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಡ್ಯಾನ್ಸ್
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್!
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
5 ಲಕ್ಷ ರೂ ಮೌಲ್ಯದ ಸಿಕ್ಸರ್ ಬಾರಿಸಿದ ಮಿಚೆಲ್ ಮಾರ್ಷ್
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಜೈಲಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಆರೋಪಿ ಮೇಲೆ ದಾಳಿ: ವಿಡಿಯೋ ನೋಡಿ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾ. ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಟೀಕೆ
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಅಧಿಕಾರಿಗಳ ನಿರ್ಲಕ್ಷ್ಯ, ಉಡಾಫೆ ಗೊತ್ತಾಗುತ್ತಿದೆ;ಸರ್ಕಾರವೇನು ಮಾಡುತ್ತಿದೆ?
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಬಿಡದಿ ದಿವ್ಯಾಂಗ ಬಾಲಕಿ ಸಾವಿನ ಬಗ್ಗೆ ಮತ್ತಷ್ಟು ಸ್ಫೋಟಕ ಅಂಶ ಬಿಚ್ಚಿಟ್ಟ SP
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಇವತ್ತೂ ನಗರದಲ್ಲಿ ಮಳೆ, ಮುಂದಿನ ಎರಡು ದಿನಗಳಲ್ಲೂ ಮಳೆ; ಬವಣೆ ತಪ್ಪಿದ್ದಲ್ಲ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ
ಹಬ್ಬಕ್ಕೆಂದು ಬೆಂಗಳೂರಿನಿಂದ ಬಂದವರು ಮಸಣಕ್ಕೆ: ಇಲ್ಲಿದೆ ಕೊನೆಯ ಕ್ಷಣ