AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Government Asset Sale: ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಾದ ಬಿಎಸ್​ಎನ್​ಎಲ್​, ಎಂಟಿಎನ್​ಎಲ್​ ರಿಯಲ್ ಎಸ್ಟೇಟ್ ಆಸ್ತಿಗಳನ್ನು 1100 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಕ್ಕೆ ನಿರ್ಧರಿಸಲಾಗಿದೆ.

Government Asset Sale: ಸರ್ಕಾರದಿಂದ ಎಂಟಿಎನ್ಎಲ್​, ಬಿಎಸ್​ಎನ್​ಎಲ್ ರಿಯಲ್ ಎಸ್ಟೇಟ್ ಆಸ್ತಿ 1100 ಕೋಟಿಗೆ ಮಾರಾಟ
ಪ್ರಾತಿನಿಧಿಕ ಚಿತ್ರ
TV9 Web
| Updated By: Srinivas Mata|

Updated on: Nov 20, 2021 | 8:20 PM

Share

DIPAM ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳ ಪ್ರಕಾರ, ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್​ಎಲ್​ ಮತ್ತು ಬಿಎಸ್​ಎನ್​ಎಲ್​ನ ರಿಯಲ್ ಎಸ್ಟೇಟ್ ಆಸ್ತಿಗಳನ್ನು ಸುಮಾರು 1,100 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ದಾಖಲೆಗಳನ್ನು ಅಪ್​ಲೋಡ್​ ಮಾಡಿದೆ. ಹೈದರಾಬಾದ್, ಚಂಡೀಗಡ, ಭಾವನಗರ ಮತ್ತು ಕೋಲ್ಕತ್ತಾದಲ್ಲಿರುವ ಬಿಎಸ್‌ಎನ್‌ಎಲ್ ಆಸ್ತಿಗಳನ್ನು ಸುಮಾರು 800 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಪೋಸ್ಟ್ ಮಾಡಲಾಗಿದೆ. ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ (DIPAM) ವೆಬ್‌ಸೈಟ್ ಮುಂಬೈನ ವಸಾರಿ ಹಿಲ್, ಗೋರೆಗಾಂವ್‌ನಲ್ಲಿರುವ MTNL ಆಸ್ತಿಗಳನ್ನು ಸುಮಾರು 270 ಕೋಟಿ ರೂಪಾಯಿಗಳ ಮೀಸಲು ಬೆಲೆಗೆ ಮಾರಾಟ ಮಾಡಲು ಲಿಸ್ಟ್ ಮಾಡಿದೆ.

ಒಶಿವಾರದಲ್ಲಿ ಇರುವ ಎಂಟಿಎನ್​ಎಲ್​ನ 20 ಫ್ಲ್ಯಾಟ್‌ಗಳನ್ನು ಕಂಪೆನಿಯ ಆಸ್ತಿ ಹಣ ಗಳಿಸುವ ಯೋಜನೆಯ ಭಾಗವಾಗಿ ಮಾರಾಟಕ್ಕೆ ಇಡಲಾಗಿದೆ. ಫ್ಲ್ಯಾಟ್‌ಗಳು 1-ಕೋಣೆಯ ಸೆಟ್‌ನ ಎರಡು ಯೂನಿಟ್, 1 ಮಲಗುವ ಕೋಣೆ ಹಾಲ್ ಮತ್ತು ಅಡುಗೆಮನೆಯ 17 ಘಟಕಗಳು (BHK) ಮತ್ತು 2 ಬಿಎಚ್​ಕೆ ಒಂದು ಘಟಕವನ್ನು ಒಳಗೊಂಡಿವೆ. ಅವುಗಳ ಮೀಸಲು ಬೆಲೆ 52.26 ಲಕ್ಷ ರೂಪಾಯಿಯಿಂದ 1.59 ಕೋಟಿ ರೂಪಾಯಿ ಇದೆ.

ಎಂಟಿಎನ್​ಎಲ್​ನ ಆಸ್ತಿಗಳ ಇ-ಹರಾಜು ಡಿಸೆಂಬರ್ 14ರಂದು ನಡೆಯಲಿದೆ. 2019ರ ಅಕ್ಟೋಬರ್​ನಲ್ಲಿ ಸರ್ಕಾರವು ಅನುಮೋದಿಸಿದ ಎಂಟಿಎನ್ಎಲ್​ ಮತ್ತು ಬಿಎಸ್​ಎನ್​ಎಲ್​ಗಾಗಿ 69,000 ಕೋಟಿ ರೂಪಾಯಿಗಳ ಆಸ್ತಿ ಹಣಗಳಿಕೆ ಪುನಶ್ಚೇತನ ಯೋಜನೆಯ ಭಾಗವಾಗಿದೆ. ಎರಡೂ ಸಾರ್ವಜನಿಕ ವಲಯದ ಸಂಸ್ಥೆಗಳು 2022ರ ವೇಳೆಗೆ 37,500 ಕೋಟಿ ಮೌಲ್ಯದ ಆಸ್ತಿಯನ್ನು ಗುರುತಿಸಿ, ಹಣ ಗಳಿಸಬೇಕಿದೆ.

ಇದನ್ನೂ ಓದಿ: 6 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ನಿರ್ಧಾರ; ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಚಿಂತನೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ