AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಟಿಎಫ್, ಡೀಸೆಲ್, ಪೆಟ್ರೋಲ್ ರಫ್ತಿನ ಮೇಲೆ ಸರ್ಕಾರದ ತೆರಿಗೆ ಹೆಚ್ಚಳ; ದೇಶೀಯ ಕಚ್ಚಾ ತೈಲಕ್ಕೆ ಭಾರೀ ತೆರಿಗೆ

ಕೇಂದ್ರ ಸರ್ಕಾರವು ಎಟಿಎಫ್, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಫ್ತು ತೆರಿಗೆಯನ್ನು ಹೆಚ್ಚಿಸಿ ಆದೇಶ ನೀಡಿದೆ. ಆ ಬಗ್ಗೆ ವಿವರ ಇಲ್ಲಿದೆ.

ಎಟಿಎಫ್, ಡೀಸೆಲ್, ಪೆಟ್ರೋಲ್ ರಫ್ತಿನ ಮೇಲೆ ಸರ್ಕಾರದ ತೆರಿಗೆ ಹೆಚ್ಚಳ; ದೇಶೀಯ ಕಚ್ಚಾ ತೈಲಕ್ಕೆ ಭಾರೀ ತೆರಿಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 01, 2022 | 11:31 AM

ಪೆಟ್ರೋಲ್ ಮತ್ತು ಎಟಿಎಫ್ ರಫ್ತಿನ ಮೇಲೆ ಲೀಟರ್‌ಗೆ ರೂ. 6 ಮತ್ತು ಡೀಸೆಲ್ ರಫ್ತಿನ ಮೇಲೆ ರೂ. 13 ತೆರಿಗೆಯನ್ನು ಸರ್ಕಾರ ಶುಕ್ರವಾರ ವಿಧಿಸಿದೆ. ಹೆಚ್ಚಿನ ಅಂತಾರಾಷ್ಟ್ರೀಯ ತೈಲ ಬೆಲೆಗಳಿಂದ ಉತ್ಪಾದಕರಿಗೆ ಉಂಟಾಗುವ ಭಾರೀ ಲಾಭವನ್ನು ಕಡಿಮೆ ಮಾಡಲು ಸರ್ಕಾರವು ದೇಶೀಯವಾಗಿ ಉತ್ಪಾದಿಸಲಾದ ಕಚ್ಚಾ ತೈಲದ (Crude Oil) ಮೇಲೆ ಪ್ರತಿ ಟನ್‌ಗೆ ರೂ. 23,230 ಹೆಚ್ಚುವರಿ ತೆರಿಗೆಯನ್ನು ವಿಧಿಸಿದೆ ಎಂದು ಸರ್ಕಾರದ ಪ್ರತ್ಯೇಕ ಅಧಿಸೂಚನೆಯು ತೋರಿಸಿದೆ.

ರಫ್ತುಗಳ ಮೇಲಿನ ತೆರಿಗೆಯು ತೈಲ ರಿಫೈನರ್​ಗಳನ್ನು ಅನುಸರಿಸುತ್ತದೆ. ವಿಶೇಷವಾಗಿ ಖಾಸಗಿ ವಲಯವು ಯುರೋಪ್ ಮತ್ತು ಅಮೆರಿಕದಂತಹ ಮಾರುಕಟ್ಟೆಗಳಿಗೆ ಇಂಧನವನ್ನು ರಫ್ತು ಮಾಡುವುದರಿಂದ ಭಾರೀ ಲಾಭವನ್ನು ಪಡೆಯುತ್ತದೆ.

ದೇಶೀಯವಾಗಿ ಉತ್ಪಾದಿಸಲಾದ ಕಚ್ಚಾ ತೈಲದ ಮೇಲಿನ ತೆರಿಗೆಯು ಸ್ಥಳೀಯ ಉತ್ಪಾದಕರು ಅಂತಾರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯಿಂದ ಹೆಚ್ಚಿನ ಲಾಭವನ್ನು ಪಡೆಯುವುದನ್ನು ಅನುಸರಿಸುತ್ತದೆ.

ಆದರೆ, ರಫ್ತು-ಕೇಂದ್ರಿತ ರಿಫೈನರಿಗಳು ದೇಶೀಯ ಮಾರಾಟಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಅಧಿಸೂಚನೆಯಿಂದ ವಿನಾಯಿತಿ ಪಡೆದಿವೆ. ರಫ್ತುದಾರರು ತಮ್ಮ ಡೀಸೆಲ್ ಉತ್ಪಾದನೆಯ ಶೇ 30ರಷ್ಟು ಮೊದಲು ಸ್ಥಳೀಯವಾಗಿ ಮಾರಾಟ ಮಾಡಬೇಕೆಂದು ಆದೇಶವು ಒತ್ತಾಯಿಸುತ್ತದೆ.

ಇದನ್ನೂ ಓದಿ: India Exports: ಒಟ್ಟಾರೆ ಮಾರುಕಟ್ಟೆ ವಸ್ತುಗಳು ಮತ್ತು ಸೇವೆಗಳ ರಫ್ತು 2022ರ ಮೇ ತಿಂಗಳಲ್ಲಿ ಶೇ 24ರಷ್ಟು ಜಿಗಿತ

ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಆರ್​ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆಗೆ ಕೆರಳಿದ ಕನ್ನಡಿಗರು, ಎಚ್ಚರಿಕೆ
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ಪ್ರಸ್ತುತವಾಗಿ ಉಚ್ಚಾಟಿತರು ಕಾಂಗ್ರೆಸ್ ಸೇರಬಹುದೇ ಅಂತ ಗೊತ್ತಿಲ್ಲ: ಸಚಿವ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ರೌಡಿಶೀಟರ್ ಅನಿಸ್ಕೊಂಡು ಬದುಕು ನಡೆಸುವುದು ಬಹಳ ಕಷ್ಟ: ನವಾಬ್ ಪಾಶಾ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ನಕಲಿ ಫೋಟೋ ವಿವಾದದ ಬಗ್ಗೆ ಪಾಕ್ ಪಿಎಂ, ಸೇನಾ ಮುಖ್ಯಸ್ಥರನ್ನು ಕೆಣಕಿದ ಓವೈಸಿ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ಬಿಜೆಪಿಯ 25 ಶಾಸಕರನ್ನು ಸೇರಿಸಿಕೊಳ್ಳಲು ಶಿವಕುಮಾರ್ ರೆಡಿ ಮಾಡಿದ್ದಾರೆ:ಶಾಸಕ
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ವಿಜಯೇಂದ್ರ ನಾಯಕತ್ವದಲ್ಲಿ 245/224 ಸೀಟು ಬಂದರೂ ಅಚ್ಚರಿಯಿಲ್ಲ: ಯತ್ನಾಳ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಕ್ಷೇತ್ರದಲ್ಲಿ ಮಾಡಲು ಬೇಕಾದಷ್ಟು ಕೆಲಸವಿದೆ, ಮುಂದುವರಿಸುತ್ತೇನೆ: ಸೋಮಶೇಖರ್
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ
ಸೋಮಶೇಖರ್‌, ಹೆಬ್ಬಾರ್‌ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ಯಾಕೆ?ಇಲ್ಲಿದೆ ಕಾರಣ