AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಗ್ನೈಜೆಂಟ್ ಲಂಚ ಪ್ರಕರಣ: ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಮಣ್ಯನ್ ಮತ್ತಿತರ ಹೇಳಿಕೆ ಕೋರಿದ ಅಮೆರಿಕ

Cognizant bribery case updates: ಅಮೆರಿಕದ ಮೂಲದ ಐಟಿ ಸಂಸ್ಥೆ ಕಾಗ್ನೈಜೆಂಟ್ ಲಂಚ ನೀಡಿಕೆ ಪ್ರಕರಣದಲ್ಲಿ ಎಲ್ ಅಂಡ್ ಟಿ ಛೇರ್ಮನ್ ಎಸ್.ಎನ್. ಸುಬ್ರಮಣಿಯನ್ ಸೇರಿದಂತೆ ನಾಲ್ಕೈದು ಮಂದಿಯ ಹೇಳಿಕೆ ದಾಖಲಿಸಲು ಅಮೆರಿಕ ಪ್ರಯತ್ನಿಸಿದೆ. 2013ರಿಂದ 2015ರ ಅವಧಿಯಲ್ಲಿ ಪುಣೆ ಮತ್ತು ಚೆನ್ನೈನಲ್ಲಿ ಎಲ್ ಅಂಡ್ ಟಿಯಿಂದ ಕಾಗ್ನೈಜೆಂಟ್​ಗೆ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪ ಇದೆ.

ಕಾಗ್ನೈಜೆಂಟ್ ಲಂಚ ಪ್ರಕರಣ: ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಮಣ್ಯನ್ ಮತ್ತಿತರ ಹೇಳಿಕೆ ಕೋರಿದ ಅಮೆರಿಕ
ಎಸ್ ಎನ್ ಸುಬ್ರಮಣಿಯನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2024 | 1:54 PM

Share

ವಾಷಿಂಗ್ಟನ್, ಆಗಸ್ಟ್ 20: ಅಮೆರಿಕ ಮೂಲದ ಕಾಗ್ನೇಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಭಾರತದಲ್ಲಿ ತನ್ನ ಕಟ್ಟಡ ನಿರ್ಮಾನಕ್ಕಾಗಿ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಪ್ರಕರಣದಲ್ಲಿ ಅಮೆರಿಕ ಸರ್ಕಾರ ಸಾಕ್ಷ್ಯ ಸಂಗ್ರಹ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್ ಹಾಗೂ ಇತರ ಮಂದಿಯಿಂದ ಅಮೆರಿಕ ಸರ್ಕಾರ ಹೇಳಿಕೆ ದಾಖಲಿಸಲು ಮುಂದಾಗಿದೆ ಎಂದು ದಿ ಮಿಂಟ್ ಪತ್ರಿಕೆಯಲ್ಲಿ ವರದಿಯಾಗಿದೆ. ಎಲ್ ಅಂಡ್ ಟಿ ಸಂಸ್ಥೆ ಮೂಲಕ ಕಾಗ್ನೈಜೆಂಟ್ ಲಂಚ ನೀಡಿದೆ ಎನ್ನುವ ಆರೋಪ ಇದೆ.

ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಮಣಿಯನ್, ಆ ಸಂಸ್ಥೆಯ ಇತರ ನಾಲ್ವರು ಉದ್ಯೋಗಿಗಳಾದ ರಮೇಶ್ ವಡಿವೇಲು, ಆದಿಮೂಲಂ ತ್ಯಾಗರಾಜನ್, ಬಾಲಾಜಿ ಸುಬ್ರಮಣಿಯನ್, ಟಿ ನಂದಕುಮಾರ್ ಅವರಿಗೆ ಹೇಳಿಕೆ ನೀಡುವಂತೆ ಅಮೆರಿಕದ ಸರ್ಕಾರ ಕೇಳಿದೆ. ಹಾಗೆಯೇ, ಕಾಗ್ನೈಜೆಂಟ್ ಟೆಕ್ನಾಲಜಿ ಸಲ್ಯೂಶನ್ಸ್​ನ ಮಾಜಿ ಉದ್ಯೋಗಿಗಳಾದ ವೆಂಕಟೇಶನ್ ನಟರಾಜನ್ ಮತ್ತು ನಾಗಸುಬ್ರಮಣಿಯನ್ ಗೋಪಾಲಕೃಷ್ಣನ್ ಅವರಿಗೂ ಹೇಳಿಕೆ ಕೊಡುವಂತೆ ಕೇಳಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಸಖತ್ ಬಿಸಿನೆಸ್ ಕಾಣುತ್ತಿರುವ ಫಾಕ್ಸ್​ಕಾನ್; 2024ರಲ್ಲಿ 83 ಸಾವಿರ ಕೋಟಿ ರೂ ವ್ಯವಹಾರ ಕಂಡ ತೈವಾನ್ ಕಂಪನಿ

ಕಾಗ್ನೈಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಸಂಸ್ಥೆ ಪುಣೆ ಮತ್ತು ಚೆನ್ನೈನಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ 2013ರಿಂದ 2015ರ ಅವಧಿಯಲ್ಲಿ ಭಾರತೀಯ ಅಧಿಕಾರಿಗಳು ಎಲ್ ಅಂಡ್ ಟಿ ಮುಖಾಂತರ ಲಂಚ ನೀಡಿತ್ತು ಎನ್ನಲಾಗಿದೆ. ಆ ಕಟ್ಟಡಗಳನ್ನು ಎಲ್ ಅಂಡ್ ಟಿ ಸಂಸ್ಥೆ ನಿರ್ಮಿಸಿತ್ತು. ಅಮೆರಿಕದ ಕಾನೂನು ಪ್ರಕಾರ, ಆ ದೇಶದ ಯಾವುದೇ ಪ್ರಜೆಗಳು ಅಥವಾ ಸಂಸ್ಥೆಗಳು ವಿದೇಶೀ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತಿಲ್ಲ. ಈ ಸಂಬಂಧ ಅಮೆರಿಕದ ಕೋರ್ಟ್​ನಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ.

ಭಾರತದಲ್ಲೂ ಎಲ್ ಅಂಡ್ ಟಿ ಮತ್ತು ಕಾಗ್ನೈಜೆಂಟ್ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪುಣೆ ಮತ್ತು ಚೆನ್ನೈನಲ್ಲಿ ತನಿಖೆ ನಡೆಯುತ್ತಿದೆ. ಲಂಚ ಸ್ವೀಕರಿಸಿದರೆನ್ನಲಾದ ಸರ್ಕಾರಿ ಅಧಿಕಾರಿಗಳನ್ನೂ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ದೇಶಪ್ರೇಮಿಗಳಾದ್ರೆ ಸ್ಲಿಮ್ ಆಗಿ… ದೇಶದ ಆರ್ಥಿಕ ಆರೋಗ್ಯಕ್ಕೆ ಮಗ್ಗುಲ ಮುಳ್ಳಾಗಿದೆ ಜನರ ಬೊಜ್ಜು

2016ರಲ್ಲಿ ಕಾಗ್ನೈಜೆಂಟ್ ಕಂಪನಿ ಈ ಲಂಚದ ವಿಚಾರವನ್ನು ಬಹಿರಂಗಪಡಿಸಿತ್ತು. ಅದರ ಬೆನ್ನಲ್ಲೇ ಸಂಸ್ಥೆಯ ಸಿಇಒ ಗಾರ್ಡಾನ್ ಕೋಬರ್ನ್ ರಾಜೀನಾಮೆ ನೀಡಿದ್ದರು. ಈಗ ಗಾರ್ಡಾನ್ ಕೋಬರ್ನ್, ಸಂಸ್ಥೆಯ ಚೀಫ್ ಲೀಗಲ್ ಆಫೀಸರ್ ಆಗಿದ್ದ ಸ್ಟೀವನ್ ಶ್ವಾರ್ಟ್ಜ್ ವಿರುದ್ಧ ಅಮೆರಿಕದಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು