
ನವದೆಹಲಿ, ಜೂನ್ 24: ಡಿಜಿಟಲ್ ವಹಿವಾಟುಗಳಲ್ಲಿ ಹೆಚ್ಚುತ್ತಿರುವ ವಂಚನೆಗಳನ್ನು ತಡೆಗಟ್ಟಲು ಮತ್ತು ಗ್ರಾಹಕರ ಹೊಣೆಗಾರಿಕೆಯನ್ನು (Customer Liability) ಮಿತಿಗೊಳಿಸಲು ಆರ್ಬಿಐ ತನ್ನ ನಿಯಮಾವಳಿಗಳನ್ನು ವಿಸ್ತರಿಸಿದೆ. ವಂಚಕರು ಅಧಿಕೃತ ವ್ಯಕ್ತಿಗಳಂತೆ ನಟಿಸಿ ಗ್ರಾಹಕರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಪ್ರಕರಣಗಳನ್ನು (Scams) ಕೂಡ ಈಗ ಈ ಹೊಸ ನಿಯಮಗಳ ಅಡಿಯಲ್ಲಿ ತರಲಾಗಿದೆ. ಜೊತೆಗೆ ಸಣ್ಣ ಮೊತ್ತದ ಡಿಜಿಟಲ್ ವಂಚನೆಗೆ ಒಳಗಾದವರಿಗೆ ವಿಶೇಷ ಪರಿಹಾರ ವ್ಯವಸ್ಥೆಯನ್ನು ಆರ್ಬಿಐ ಪರಿಚಯಿಸಿದೆ.
ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಂಚನೆಯಿಂದಾಗಿ 50,000 ರೂವರೆಗೆ ನಷ್ಟ ಅನುಭವಿಸಿದ ಸಂತ್ರಸ್ತರು (Bona fide victims) ಈ ಪರಿಹಾರಕ್ಕೆ ಅರ್ಹರಾಗಿರುತ್ತಾರೆ. ಇಂತಹ ಸಂತ್ರಸ್ತರು ತಮ್ಮ ಒಟ್ಟು ನಷ್ಟದ ಶೇ. 85 ರಷ್ಟು ಪರಿಹಾರವನ್ನು ಪಡೆಯಬಹುದು. ಆದರೆ, ಈ ಪರಿಹಾರದ ಗರಿಷ್ಠ ಮಿತಿ 25,000 ರೂ ಆಗಿರುತ್ತದೆ.
ಒಬ್ಬ ಗ್ರಾಹಕರು ತಮ್ಮ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಈ ರೀತಿಯ ಪರಿಹಾರವನ್ನು ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: ಅಮೆರಿಕದಿಂದ ತವರಿಗೆ ಬಂದ ಭಾರತ ಮೂಲದ ಎಐ ಸಂಶೋಧಕ; ಭಾರತದಲ್ಲಿ ಮಹತ್ವದ ಎಐ ಪ್ರಾಜೆಕ್ಟ್ನಲ್ಲಿ ಭಾಗಿ?
ವಂಚಕರು ಗ್ರಾಹಕರ ಬ್ಯಾಂಕಿಂಗ್ ವಿವರಗಳನ್ನು (Credentials) ಅಕ್ರಮವಾಗಿ ಪಡೆದುಕೊಂಡು ನಡೆಸುವ ವಹಿವಾಟುಗಳು.
ಗ್ರಾಹಕರಿಗೆ ಬಲವಂತ ಅಥವಾ ಬೆದರಿಕೆ (Coercion or Duress) ಹಾಕಿ ಅವರಿಂದಲೇ ವಹಿವಾಟುಗಳಿಗೆ ಅನುಮೋದನೆ ಪಡೆದುಕೊಂಡಿರುವ ಪ್ರಕರಣಗಳು.
ಇದನ್ನೂ ಓದಿ: ಬೆಂಗಳೂರು, ಮುಂಬೈನಲ್ಲಿ ರಾಜೇಶ್ ಎಕ್ಸ್ಪೋರ್ಟ್ಸ್ ಕಚೇರಿಗಳ ಮೇಲೆ ಇಡಿ ದಾಳಿ; ಮಹತ್ವದ ಸಾಕ್ಷ್ಯಗಳು ವಶಕ್ಕೆ
SMS ಅಲರ್ಟ್ಗಳು: ₹500 ಕ್ಕಿಂತ ಹೆಚ್ಚಿನ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳಿಗೆ ಬ್ಯಾಂಕುಗಳು ಕಡ್ಡಾಯವಾಗಿ ತಕ್ಷಣದ SMS ಅಲರ್ಟ್ಗಳನ್ನು ಕಳುಹಿಸುವ ನಿಯಮವನ್ನು ಆರ್ಬಿಐ ಮುಂದುವರಿಸಿದೆ. ಸ್ಮಾರ್ಟ್ಫೋನ್ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದ ಸಾಮಾನ್ಯ ಗ್ರಾಹಕರಿಗೂ ಇದು ತಲುಪಬೇಕು ಎಂಬುದು ಆರ್ಬಿಐ ಉದ್ದೇಶವಾಗಿದೆ.
ಅನುಷ್ಠಾನ ದಿನಾಂಕ: ಈ ಪರಿಷ್ಕೃತ ನಿಯಮಗಳು ಜನವರಿ 1, 2027 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಕೇಂದ್ರ ಬ್ಯಾಂಕ್ ತಿಳಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:21 pm, Wed, 24 June 26