Sign In

By signing in or creating an account, you agree with Associated Broadcasting Company's Terms & Conditions and Privacy Policy.

CEO Salary: ಒಬ್ಬ ಸಿಇಒಗೆ 15 ಸಾವಿರ ರೂ ಸಂಬಳ; ಬೆರಗಾದ ನೆಟ್ಟಿಗರಿಗೆ ಇವರು ಕೊಟ್ಟ ಕಾರಣ ಏನು?

CRED CEO Kunal Shah Gets Rs 15,000 Salary: ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಪ್ಲಾಟ್​ಫಾರ್ಮ್ ಎನಿಸಿರುವ ಕ್ರೆಡ್​ನ ಸಿಇಒ ಕುನಾಲ್ ಶಾ ತಿಂಗಳಿಗೆ 15 ಸಾವಿರ ರೂ ಸಂಬಳ ಪಡೆಯುತ್ತಾರಂತೆ. ಇಷ್ಟು ಕಡಿಮೆ ಸಂಬಳ ಪಡೆಯಲು ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ ಈ ವಿಚಾರ.

CEO Salary: ಒಬ್ಬ ಸಿಇಒಗೆ 15 ಸಾವಿರ ರೂ ಸಂಬಳ; ಬೆರಗಾದ ನೆಟ್ಟಿಗರಿಗೆ ಇವರು ಕೊಟ್ಟ ಕಾರಣ ಏನು?
ಕುನಾಲ್ ಶಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 28, 2023 | 10:49 AM

ಸಿಇಒಗಳೆಂದರೆ ವರ್ಷಕ್ಕೆ ಕೋಟಿಗಿಂತಲೂ ಹೆಚ್ಚು ಸಂಬಳ ಎಣಿಸುತ್ತಾರೆ. ವಿಶ್ವದ ಟಾಪ್ ಗ್ರೇಡ್ ಸಿಇಒಗಳ ಸಂಬಳ (CEO Salaries) ವರ್ಷಕ್ಕೆ 50 ಕೋಟಿ ರೂಗಿಂತಲೂ ಅಧಿಕ ಇರುತ್ತದೆ. ಭಾರತದಲ್ಲಿ ಇನ್ಫೋಸಿಸ್ ಸಿಇಒ ಸಂಬಳ 71 ಕೋಟಿ ರೂ. ಇಂತಹ ಸ್ಥಿತಿಯಲ್ಲಿ ಉದಯೋನ್ಮುಖ ಎನಿಸಿರುವ ಸ್ಟಾರ್ಟಪ್​ವೊಂದರ ಸಿಇಒ ಸಂಬಳ ಕೇಳಿದರೆ ನೀವು ಗಾಬರಿ ಬೀಳಬಹುದು. ಕ್ರೆಡ್ ಆ್ಯಪ್ ಹೆಸರು ಕೇಳಿರಬಹುದು, ಬಳಸುತ್ತಿರಬಹುದು. ಕ್ರೆಡ್ ಕಂಪನಿಯ ಸಿಇಒ ಕುನಾಲ್ ಶಾ (CRED CEO Kunal Shah) ಸಂಬಳ ತಿಂಗಳಿಗೆ ಕೇವಲ 15 ಸಾವಿರ ರೂ. ಅಂದರೆ ವರ್ಷಕ್ಕೆ 2 ಲಕ್ಷ ರೂಗಿಂತಲೂ ಕಡಿಮೆ.

ಇಷ್ಟು ಕಡಿಮೆ ಸಂಬಳ ತಾನು ಪಡೆಯುತ್ತಿರುವ ಸಂಗತಿಯನ್ನು ಕ್ರೆಡ್ ಸಿಇಒ ಕುನಾಲ್ ಅವರೇ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಬಹಿರಂಗಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನರ ಜೊತೆ ಮುಕ್ತ ಸಂವಾದದಲ್ಲಿ ತೊಡಗಿದ ಅವರು ತಾನು ಅಷ್ಟು ಕಡಿಮೆ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ. ಈ ವಿಚಾರ ಟ್ವಿಟ್ಟರ್​ನಂತಹ ಸಾಮಾಜಿಕ ತಾಣದಲ್ಲೂ ಚರ್ಚೆಗೆ ಗ್ರಾಸವಾಗಿದೆ.

ಕ್ರೆಡ್ ಸಿಇಒ ಕುನಾಲ್ ಶಾ ಇನ್ಸ್​ಟಾಗ್ರಾಮ್​ನಲ್ಲಿ ಜನರೊಂದಿಗೆ ಪ್ರಶ್ನೋತ್ತರಕ್ಕೆ ಇಳಿದ ಸಂದರ್ಭದಲ್ಲಿ ಒಬ್ಬ ಬಳಕೆದಾರ ಕೇಳಿದ್ದು, ಕ್ರೆಡ್​ನಲ್ಲಿ ನಿಮ್ಮ ಸಂಬಳ ಇಷ್ಟು ಕಡಿಮೆ ಇದೆ? ಹೇಗೆ ಬದುಕುತ್ತೀರಿ? ಎಂದು.

ಇದಕ್ಕೆ ಕುನಾಲ್ ನೀಡಿದ ಉತ್ತರ ಇದು: ಕಂಪನಿ ಲಾಭದಾಯಕವಾಗುವವರೆಗೂ ನನಗೆ ಒಳ್ಳೆಯ ಸಂಬಳ ಬರಬೇಕೆಂದು ಅನಿಸುವುದಿಲ್ಲ. ಕ್ರೆಡ್​ನಲ್ಲಿ ನನ್ನ ಸಂಬಳ ತಿಂಗಳಿಗೆ 15 ಸಾವಿರ ರೂ ಇದೆ. ಹಿಂದಿನ ನನ್ನ ಕಂಪನಿ ಫ್ರೀಚಾರ್ಜ್ ಅನ್ನು ಮಾರಿದ್ದರಿಂದ ನಾನು ಬದಕಲು ಸಾಧ್ಯವಾಗಿದೆ ಎಂದಿದ್ದಾರೆ.

ಇದನ್ನೂ ಓದಿPM Kisan: ಪಿಎಂ ಕಿಸಾನ್ ಯೋಜನೆ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯುವುದು ಹೇಗೆ? ನೊಂದಣಿ ಹೇಗೆ? ಇಲ್ಲಿದೆ ವಿವರ

ಅಜೀತ್ ಪಟೇಲ್ ಎಂಬ ಟ್ವೀಟಿಗರೊಬ್ಬರು ಈ ಇನ್ಸ್​ಟಾಗ್ರಾಮ್ ಸ್ಟೋರಿಯ ಸ್ಕ್ರೀನ್​ಶಾಟ್ ತೆಗೆದು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡುತ್ತಾ, ಕೋಟಿಗಟ್ಟಲೆ ಸಂಬಳ ಪಡೆಯುವ ಸಿಇಒಗಳು ಇದ್ದಾರೆ. ಇವರ ಮಧ್ಯೆ ಕುನಾಲ್ ಶಾ ಭಿನ್ನ ಎನಿಸುತ್ತಾರೆ ಎಂದು ಬರೆದಿದ್ದಾರೆ.

ಈ ಪೋಸ್ಟ್ ಬಹಳಷ್ಟು ಪರ ವಿರೋಧ ಚರ್ಚೆಗೆ ವೇದಿಕೆ ಒದಗಿಸಿದೆ. ಸಿಇಒಗಳು ಇಷ್ಟು ಕಡಿಮೆ ಸಂಬಳ ತೆಗೆದುಕೊಳ್ಳುತ್ತೇನೆಂದು ಹೇಳುವುದು ಬುದ್ಧಿವಂತಿಕೆಯ ಮಾತು ಹೊರತು ವಾಸ್ತವ ಅದಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಒಬ್ಬ ಸಿಇಒ ಜೀವನ 15 ಸಾವಿರ ರೂ ಸಂಬಳದಿಂದ ಬದಲಾಗಿಬಿಡುತ್ತದೆ ಎಂದು ಭಾವಿಸುವಷ್ಟು ಮೂರ್ಖರು ಇಲ್ಲಿದ್ದೀರಾ? ಈ ವ್ಯಕ್ತಿ ನೂರಾರು ಕೋಟಿ ರೂ ಮೌಲ್ಯದ ಸ್ಟಾರ್ಟಪ್ ಅನ್ನು ಮಾರಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಕೆಲವರು, ಇದು ತೆರಿಗೆ ಉಳಿಸಲು ಸಿಇಒ ಮಾಡುತ್ತಿರುವ ತಂತ್ರ. ಇವರು ಕೋಟಿಗಟ್ಟಲೆ ಖರ್ಚು ಮಾಡಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದಿದ್ದಾರೆ.

ಇದನ್ನೂ ಓದಿPost Office Savings: ಆನ್​ಲೈನ್, ಆಫ್​​ಲೈನ್​ನಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ ಬ್ಯಾಲೆನ್ಸ್​ ಪರಿಶೀಲಿಸಲು ಹೀಗೆ ಮಾಡಿ

ಕ್ರೆಡ್ ಎಂಬುದು ಕ್ರೆಡಿಟ್ ಕಾರ್ಡ್​ಗಳ ಪೇಮೆಂಟ್ ಪ್ಲಾಟ್​ಫಾರ್ಮ್ ಆಗಿದೆ. ಎಲ್ಲಾ ರೀತಿಯ ಕ್ರೆಡಿಟ್ ಕಾರ್ಡ್​ಗಳ ಬಿಲ್​ಗಳನ್ನು, ಎಲೆಕ್ಟ್ರಿಕ್ ಇತ್ಯಾದಿ ವಿವಿಧ ಬಗೆಯ ಬಿಲ್​ಗಳನ್ನು ಕ್ರೆಡ್​ನಲ್ಲಿ ಕಟ್ಟಬಹುದು. ಇಲ್ಲಿ ಬಿಲ್ ಪಾವತಿಗೆ ಇಂತಿಷ್ಟು ರಿಟರ್ನ್ಸ್ ಸಿಗುತ್ತದೆ. ಈ ಕಾರಣಕ್ಕೆ ಕ್ರೆಡ್ ಬಹಳ ಜನಪ್ರಿಯವಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಕ್ರೆಡ್ ಏರುಗತಿ ಪಡೆದಿಲ್ಲ. ನಷ್ಟದಲ್ಲಿ ನಡೆಯುತ್ತಿರುವುದು ವಾಸ್ತವ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:45 am, Tue, 28 February 23

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು