AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್​ಲೈನ್ ವಿಸ್ತರಣೆಗೆ ಆದೇಶ

Bombay HC gives relief to tax payers: ವಿಳಂಬವಾಗಿ ಐಟಿಆರ್ ಸಲ್ಲಿಸುತ್ತಿರುವವರು, ಪರಿಷ್ಕೃತ ಐಟಿಆರ್ ಅನ್ನು ಸಲ್ಲಿಸುತ್ತಿರುವವರು ಡಿಸೆಂಬರ್ 31ರವರೆಗೂ ಕಾಲಾವಕಾಶ ಹೊಂದಿದ್ದಾರೆ. ಆದರೆ, ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಪಡೆಯುವ ಅವಕಾಶವು ಅಪ್​ಡೇಟೆಡ್ ಸಾಫ್ಟ್​ವೇರ್​ನಲ್ಲಿ ಇಲ್ಲವಾಗಿದೆ. ಈ ಕಾರಣಕ್ಕೆ ಬಾಂಬೆ ಹೈಕೋರ್ಟ್ ಐಟಿಆರ್ ಸಲ್ಲಿಕೆಯ ಡೆಡ್​ಲೈನ್ ಅನ್ನು ಕನಿಷ್ಠ ಜನವರಿ 15ರವರೆಗಾದರೂ ವಿಸ್ತರಿಸಬೇಕೆಂದು ಸಿಬಿಡಿಟಿಗೆ ಆದೇಶಿಸಿದೆ.

ವಿಳಂಬದ ಐಟಿ ರಿಟರ್ನ್ಸ್ ಸಲ್ಲಿಕೆ: ಬಾಂಬೆ ಹೈಕೋರ್ಟ್ ಮಧ್ಯಪ್ರವೇಶ; ಡಿ. 31ರ ಡೆಡ್​ಲೈನ್ ವಿಸ್ತರಣೆಗೆ ಆದೇಶ
ಇನ್ಕಮ್ ಟ್ಯಾಕ್ಸ್ ರಿಟರ್ನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 23, 2024 | 1:36 PM

ಮುಂಬೈ, ಡಿಸೆಂಬರ್ 23: ವಿಳಂಬದ ಮತ್ತು ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಸಲು ಡಿಸೆಂಬರ್ 31ರಂದು ಇದ್ದ ಡೆಡ್​ಲೈನ್ ಅನ್ನು ವಿಸ್ತರಿಸುವಂತೆ ಬಾಂಬೆ ಹೈಕೋರ್ಟ್​ನಿಂದ ಕೇಂದ್ರೀಯ ನೇರ ತೆರಿಗೆ ಮಂಡಳಿಗೆ ನಿರ್ದೇಶಿಸಲ್ಪಟ್ಟಿದೆ. 2024-25ರ ಮೌಲ್ಯಮಾಪನ ವರ್ಷದ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೂ ಗಡುವು ಇದೆ. ಆದರೆ, ಐಟಿಆರ್ ಯುಟಿಲಿಟಿಯಲ್ಲಿನ ಬದಲಾದ ಕ್ರಮಗಳ ಸಮಸ್ಯೆಯಿಂದಾಗಿ ಡೆಡ್​ಲೈನ್ ವಿಸ್ತರಿಸುವಂತೆ ಐಪಿಎಲ್​ವೊಂದು ಸಲ್ಲಿಕೆಯಾಗಿತ್ತು. ಟ್ಯಾಕ್ಸ್ ಕನ್ಸಲ್ಟೆಂಟ್ಸ್ ಚೇಂಬರ್​ನಿಂದ ಸಲ್ಲಿಸಲಾದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಐಟಿಆರ್ ಸಲ್ಲಿಕೆಯ ಗಡುವನ್ನು ಕನಿಷ್ಠ ಜನವರಿ 15ರವರೆಗಾದರೂ ವಿಸ್ತರಿಸುವಂತೆ ಸಿಬಿಡಿಟಿಗೆ ಸೂಚಿಸಿದೆ.

ರಿಬೇಟ್ ನಿರಾಕರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್

ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ಟ್ಯಾಕ್ಸ್ ರಿಬೇಟ್ ಅವಕಾಶ ಸಿಗುತ್ತದೆ. ಆದರೆ, ರಿಟರನ್ ಫೈಲಿಂಗ್ ಮಾಡಲು ಬಳಸುವ ಯುಟಿಲಿಟಿ ಸಾಫ್ಟ್​ವೇರ್​ನಲ್ಲಿ ಮಾಡಲಾಗಿರುವ ಬದಲಾವಣೆಗಳಿಂದಾಗಿ ಈ ರಿಬೇಟ್ ಅವಕಾಶ ಸಿಗುತ್ತಿಲ್ಲ. 2024ರ ಜುಲೈ 5ರಂದು ಸಾಫ್ಟ್​ವೇರ್ ಅಪ್​ಡೇಟ್ ಆದಾಗಿನಿಂದ ಈ ಸಮಸ್ಯೆ ಕಾಣಿಸಿದೆ. ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಕ್ಲೇಮ್ ಮಾಡುವ ಅವಕಾಶವನ್ನು ಇದು ತೋರಿಸುತ್ತಿಲ್ಲ. ಹೀಗಾಗಿ, ಟ್ಯಾಕ್ಸ್ ಕನ್ಸಲ್ಟೆಂಟ್​ಗಳ ಸಂಘಟನೆಯು ಬಾಂಬೆ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಿತ್ತು.

ಇದನ್ನೂ ಓದಿ: ಎಪಿಗ್ಯಾಮಿಯಾ ಸಂಸ್ಥಾಪಕ ರೋಹನ್ ಮಿರ್​ಚಂದಾನಿ ನಿಧನ; ಹೃದಯಸ್ತಂಭನದಿಂದ ಮೃತರಾದ ಸಿಇಒಗಳ ಸಾಲಿಗೆ ರೋಹನ್

ಐಟಿ ಕಾಯ್ದೆಯ 87ಎ ಸೆಕ್ಷನ್​ನ ಅಡಿಯಲ್ಲಿ ಸಿಗುವ ರಿಬೇಟ್ ಬಹಳ ಮುಖ್ಯ. ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 7 ಲಕ್ಷ ರೂವರೆಗಿನ ಆದಾಯದ ಮಿತಿಯಲ್ಲಿದ್ದರೆ ಟ್ಯಾಕ್ಸ್ ರಿಬೇಟ್ ಸಿಗುತ್ತದೆ. ಅಂದರೆ ತೆರಿಗೆ ಪಾವತಿಸು ಅವಶ್ಯಕತೆ ಇರುವುದಿಲ್ಲ. ಈ ರಿಬೇಟ್ ಇಲ್ಲವೆಂದರೆ ಟ್ಯಾಕ್ಸ್ ಸ್ಲ್ಯಾಬ್ ದರದ ಪ್ರಕಾರ ತೆರಿಗೆ ಅನ್ವಯ ಆಗುತ್ತದೆ. ಇದರಿಂದ ಮಧ್ಯಮ ಆದಾಯ ಮತ್ತು ಕೆಳ ಮಧ್ಯಮ ಆದಾಯ ಗುಂಪಿನ ಜನರಿಗೆ ತೆರಿಗೆ ಹೊರೆ ಬೀಳುತ್ತದೆ.

ಬಾಂಬೆ ಹೈಕೋರ್ಟ್ ಈ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ. ಯಾವುದೋ ತಾಂತ್ರಿಕ ದೋಷದಿಂದ ಈ ಪ್ರಮುಖ ತೆರಿಗೆ ಹಕ್ಕನ್ನು ನಿರಾಕರಿಸಲಾಗುವುದು ಸರಿಯಲ್ಲ ಎಂದಿರುವ ಉಚ್ಚ ನ್ಯಾಯಾಲಯ, ವಿಳಂಬಿತ ಐಟಿಆರ್ ಸಲ್ಲಿಕೆಯ ಡೆಡ್​ಲೈನ್ ಅನ್ನು ವಿಸ್ತರಿಸಬೇಕೆಂದು ಆದೇಶಿಸಿದೆ.

ಇದನ್ನೂ ಓದಿ: ಸಾಫ್ಟ್​ಪವರ್​ಗಿಂತಲೂ ಮಿಗಿಲಾದ ಶಕ್ತಿ ಭಾರತದ್ದು; ಭಾರತವಿಲ್ಲದೇ ಜಗತ್ತು ನಡೆಯಲ್ಲ: ಮಾಜಿ ಜರ್ಮನ್ ರಾಯಭಾರಿ ಲಿಂಡ್ನರ್

ವಿಳಂಬವಾಗಿ ರಿಟನ್ಸ್ ಸಲ್ಲಿಸುತ್ತಿರುವವರಿಗೆ ದಂಡ

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಜುಲೈ 31ಕ್ಕೆ ಡೆಡ್​ಲೈನ್ ಇತ್ತು. ಆ ವೇಳೆಗೆ ಐಟಿಆರ್ ಸಲ್ಲಿಕೆ ಮಾಡಲಾಗದವರಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ಕೊಡಲಾಗಿದೆ. ಆದರೆ, 5,000 ರೂ ದಂಡ ಕಟ್ಟಬೇಕಾಗುತ್ದೆ. ಐದು ಲಕ್ಷ ರೂಗಿಂತ ಕಡಿಮೆ ಟ್ಯಾಕ್ಸಬಲ್ ಇನ್ಕಮ್ ಇರುವವರು 1,000 ರೂ ಮಾತ್ರವೇ ದಂಡ ಕಟ್ಟಬಹುದು. ಜುಲೈ 31ಕ್ಕೆ ಮುನ್ನವೇ ಐಟಿಆರ್ ಸಲ್ಲಿಸಿ, ಬಳಿಕ ಪರಿಷ್ಕೃತ ರಿಟರ್ನ್ ಸಲ್ಲಿಸುತ್ತಿರುವವರು ದಂಡ ಪಾವತಿಸುವ ಪ್ರಮೇಯ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ