AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಟ್​ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ

Reddit user shares his experience of stealing from a thief: ಆನ್​ಲೈನ್​ನಲ್ಲಿ ಆಗಂತುಕರು ವಂಚಿಸಲು ಯತ್ನಿಸುತ್ತಿರುವುದು ಗೊತ್ತಾದಾಗ ಹೆಚ್ಚಿನ ಜನರು ತಪ್ಪಿಸಿಕೊಂಡರೆ ಸಾಕೆಂದು ಸುಮ್ಮನಾಗುತ್ತಾರೆ. ಆದರೆ, ದೆಹಲಿಯ ವ್ಯಕ್ತಿಯೊಬ್ಬರು ವಂಚಕನಿಗೆ ಮಂಕುಬೂದಿ ಯಾಕಿ ದಮ್ಮಯ್ಯ ಎಂದು ಬೇಡಿಕೊಳ್ಳುವಂತೆ ಮಾಡಿದ ಘಟನೆ ಇದೆ. ರೆಡ್ಡಿಟ್​ನಲ್ಲಿ ಈ ಅನುಭವ ಹಂಚಿಕೊಂಡಿರುವ ಆ ವ್ಯಕ್ತಿ, ತಾನು ಚಾಟ್​ಜಿಪಿಟಿ ಬಳಸಿ ಹೇಗೆ ಯಾಮಾರಿಸಿದೆ ಎಂದು ಘಟನೆ ವಿವರಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಈ ಘಟನೆ.

ಚಾಟ್​ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ
ವಂಚಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 04, 2025 | 1:44 PM

Share

ನವದೆಹಲಿ, ಡಿಸೆಂಬರ್ 4: ಆನ್​ಲೈನ್​ನಲ್ಲಿ ಜನರನ್ನು ಯಾಮಾರಿಸಲು ವಂಚಕರು (online scammers) ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಎಸ್ಸೆಮ್ಮೆಸ್, ವಾಟ್​ಸಾಪ್ ಮೆಸೇಜ್​ಗಳಲ್ಲಿ ಲಿಂಕ್​ಗಳನ್ನು ಕಳುಹಿಸುವುದು, ಸುಳ್ಳು ಕಥೆಗಳನ್ನು ಸೃಷ್ಟಿಸಿ ಹಣ ಪಡೆಯುವುದು, ಸುಳ್ಳು ಬ್ಯುಸಿನೆಸ್ ಟ್ರಾನ್ಸಾಕ್ಷನ್ ಜಾಲಕ್ಕೆ ಸಿಲುಕಿಸಿ ಹಣ ಹೂಡಿಕೆಗೆ ಪುಸಲಾಯಿಸುವುದು ಇತ್ಯಾದಿ ಹಲವು ಮಾರ್ಗಗಳನ್ನು ವಂಚಕರು ಅನುಸರಿಸುತ್ತಾರೆ. ಈ ವಂಚನೆ ಎಸಗುತ್ತಿರುವುದು ಗೊತ್ತಾದಾಗ, ಹೆಚ್ಚಿನ ಜನರು ಆ ವಂಚಕರಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎಂದು ದೂರ ಉಳಿಯಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿಯು ತನಗೆ ವಂಚನೆ ಎಸಗಲು ಬಂದ ವಂಚಕನಿಗೇ ಮಂಕುಬೂದಿ ಹಾಕಿ, ಆತನ ಬೆವರಿಳಿಸಿದ ಘಟನೆ ನಡೆದಿದೆ.

ರೆಡ್ಡಿಟ್ ಯೂಸರ್​ವೊಬ್ಬರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಚಾಟ್​ಜಿಪಿಟಿ (ChatGPT) ನೆರವಿನಿಂದ ವಂಚಕನ ಗುರುತು ಪತ್ತೆ ಮಾಡಿ ಆತ ಬೇಡಿಕೊಳ್ಳುವಂತೆ ಮಾಡಿದೆ ಎಂದು RailfanHSs ಎನ್ನುವ ಐಡಿ ಹೊಂದಿರುವ ದೆಹಲಿಯ ವ್ಯಕ್ತಿಯೊಬ್ಬರು ರೆಡ್ಡಿಟ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸ್ಕ್ಯಾಮರ್ ಅಟಕಾಯಿಸಿಕೊಂಡಿದ್ದು ಹೀಗೆ…

ತಾನು ಕಾಲೇಜು ಸೀನಿಯರ್ ಹಾಗೂ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಫೇಸ್​ಬುಕ್​ನಲ್ಲಿ ವಂಚಕನು ಮೆಸೇಜ್ ಹಾಕಿದ್ದಾನೆ. ಸಿಆರ್​ಪಿಎಫ್ ಅಧಿಕಾರಿ ತನ್ನ ಸ್ನೇಹಿತನಾಗಿದ್ದು, ಆತ ಬೇರೆ ಊರಿಗೆ ವರ್ಗಾವಣೆ ಆಗುತ್ತಿದ್ದು ಬಹಳ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಿದ್ದಾನೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?

ಆ ವಂಚಕ ಹೆಸರಿಸಿದ ಕಾಲೇಜು ಸೀನಿಯರ್ ವಾಸ್ತವವಾಗಿ ತನಗೆ ಪರಿಚಯವಿರುವ ವ್ಯಕ್ತಿಯೇ ಆಗಿದ್ದು, ಫೋನ್ ನಂಬರ್ ಕೂಡ ಇದೆ. ಆದರೂ ಫೇಸ್​ಬುಕ್​ನಲ್ಲಿ ಮೆಸೇಜ್ ಹಾಕಿದ್ದರಿಂದ ಅನುಮಾನ ಬಂದಿತು. ತಾನು ವಾಟ್ಸಾಪ್​ನಲ್ಲಿ ಖಚಿತಪಡಿಸಿಕೊಂಡ ಬಳಿಕ ವಂಚಕನ ಆಟ ಎಂಬುದು ಗೊತ್ತಾಯಿತು ಎಂದು ವಿವರಿಸಿರುವ ಈ ರೆಡ್ಡಿಟ್ ಬಳಕೆದಾರ, ತಾನು ಸ್ಕ್ಯಾಮರ್​ನನ್ನು ಉಪೇಕ್ಷಿಸುವ ಬದಲು ಆತನೊಂದಿಗೆಯೇ ಆಟವಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಇದೇ ವೇಳೆ, ಆ ವಂಚಕನು ಬೇರೆ ನಂಬರ್​ನಿಂದ ಸಂಪರ್ಕ ಮಾಡಿ, ಕ್ಯುಆರ್ ಕೋಡ್ ಕಳುಹಿಸಿ, ಕೂಡಲೇ ಹಣ ವರ್ಗಾಯಿಸುವಂತೆ ತಿಳಿಸಿದ್ದಾನೆ. ಈಗ ಈ ರೆಡ್ಡಿಟ್ ಬಳಕೆದಾರ ಚಾಟ್​ಜಿಪಿಟಿ ಬಳಸಿ ಒಂದು ವೆಬ್​ಪೇಜ್ ನಿರ್ಮಿಸುತ್ತಾರೆ. ಆ ಪೇಜ್​ಗೆ ಹೋದರೆ ಜಿಯೋಲೊಕೇಶನ್ ಬಯಲಾಗುತ್ತದೆ, ಫ್ರಂಟ್ ಕ್ಯಾಮರಾ ತಾನಾಗೇ ಕ್ಲಿಕ್ ಮಾಡುತ್ತದೆ. ಅಂಥದ್ದೊಂದು ವೆಬ್​ಪೇಜ್ ಸೃಷ್ಟಿಸಿದ ಇವರು, ಆ ವಂಚಕನಿಗೆ ಅದನ್ನು ಕಳುಹಿಸಿ, ಆ ವೆಬ್​ಪೇಜ್​ಗೆ ಕ್ಯುಆರ್ ಕೋಡ್ ಅಪ್​ಲೋಡ್ ಮಾಡುವಂತೆ ಪುಸಲಾಯಿಸಿದ್ದಾರೆ.

ದೆಹಲಿ ವ್ಯಕ್ತಿ ರೆಡ್ಡಿಟ್​ನಲ್ಲಿ ಹಾಕಿದ ಪೋಸ್ಟ್ ಇದು

Used ChatGPT to locate a scammer and made him beg me byu/RailfanHS indelhi

ಎಲ್ಲರನ್ನೂ ಯಾಮಾರಿಸುತ್ತಾ ಬಂದಿದ್ದ ಆ ವಂಚಕ, ತನಗೇ ಯಾರಾದರೂ ಯಾಮಾರಿಸಬಹುದು ಎಂದು ಭಾವಿಸಿರಲಿಲ್ಲ. ಈ ದೆಹಲಿ ವ್ಯಕ್ತಿ ಕಳುಹಿಸಿದ ಲಿಂಕ್ ಅನ್ನು ಆ ವಂಚಕ ಕ್ಲಿಕ್ ಮಾಡುತ್ತಿದ್ದಂತೆಯೇ ಆತನ ಜಿಪಿಎಸ್ ಲೊಕೇಶನ್, ಐಪಿ ಅಡ್ರೆಸ್, ಮತ್ತು ಮುಖದ ಚಹರೆ ಎಲ್ಲವೂ ಬಯಲಾಗಿ ಹೋಗುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್​ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ

ಈ ಎಲ್ಲಾ ವಿವರವನ್ನೂ ಈ ದಿಲ್ಲಿ ವ್ಯಕ್ತಿ ವಂಚಕನಿಗೆ ಕಳುಹಿಸುತ್ತಾರೆ. ಅದನ್ನು ಕಂಡೊಡನೆ ವಂಚಕ ಗಾಬರಿ ಬೀಳುತ್ತಾನೆ. ಹಲವು ಬಾರಿ ಕರೆ ಮಾಡಿ, ತನ್ನನ್ನು ಕ್ಷಮಿಸುವಂತೆಯೂ, ಪ್ರಕರಣವನ್ನೂ ದೊಡ್ಡದು ಮಾಡಬೇಡವೆಂದೂ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಮತ್ತೆಂದೂ ಈ ಕೆಲಸ ಮಾಡೋದಿಲ್ಲ ಎಂದೂ ಹೇಳಿದ್ದಾನೆ.

ಈ ಘಟನೆಯನ್ನು ಹಂಚಿಕೊಂಡಿರುವ ಈ ದಿಲ್ಲಿ ವ್ಯಕ್ತಿ, ಆ ವಂಚಕ ತನ್ನ ಕೆಲಸ ನಿಲ್ಲಿಸೋದಿಲ್ಲ ಅಂತ ತನಗೆ ಗೊತ್ತು. ಆದರೆ, ಒಬ್ಬ ಕಳ್ಳನಿಂದಲೇ ಕದ್ದಿದ್ದೇನೆ ಎನ್ನುವ ಸಮಾಧಾನ ನನಗೆ ಸಿಕ್ಕಿದೆ ಎಂದು ಕೊನೆಯಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ರಷ್ಯಾ ಅಧ್ಯಕ್ಷ ಪುಟಿನ್​​ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿದ ಮೋದಿ
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಜಾರ್ಖಂಡ್ ಕಲ್ಲಿದ್ದಲು ಪ್ರದೇಶದಲ್ಲಿ ವಿಷಕಾರಿ ಅನಿಲ ಸೋರಿಕೆ; ಇಬ್ಬರು ಸಾವು
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ಸಾಕ್ಷಿ ಕೇಳ್ತಿದ್ದ ಸಿದ್ರಾಮಯ್ಯಗೆ ವಿಡಿಯೋ ಪ್ಲೇ ಮಾಡಿ ತೋರಿಸಿದ ಅಶೋಕ್​
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?
ನಿರ್ದೇಶಕ ಸಂಗೀತ್ ಸಾಗರ್ ನಿಧನಕ್ಕೂ ಮುನ್ನ ಪರಿಸ್ಥಿತಿ ಹೇಗಿತ್ತು?