Delhi
ಭಾರತದ ರಾಜಧಾನಿಯಾದ ದೆಹಲಿಯು ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದ ಕೂಡಿದ ನಗರವಾಗಿದೆ. ಐತಿಹಾಸಿಕ ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಇಂಡಿಯಾ ಗೇಟ್ನಂತಹ ಪುರಾತನ ಸ್ಮಾರಕಗಳ ಶ್ರೀಮಂತ ವಸ್ತ್ರದೊಂದಿಗೆ ದೆಹಲಿಯು ತನ್ನ ಶತಮಾನಗಳ-ಹಳೆಯ ಪರಂಪರೆಗೆ ಸಾಕ್ಷಿಯಾಗಿದೆ. ಚಾಂದಿನಿ ಚೌಕ್ನಂತಹ ನಗರದ ರೋಮಾಂಚಕ ಮಾರುಕಟ್ಟೆಗಳು ವೈವಿಧ್ಯಮಯ ಬೀದಿ ಆಹಾರ, ಜವಳಿ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳೊಂದಿಗೆ ಸಂವೇದನಾ ಮಿತಿಮೀರಿದ ಹೊರೆಯನ್ನು ನೀಡುತ್ತವೆ.
ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ, ದೆಹಲಿಯು ಭಾರತೀಯ ಸರ್ಕಾರದ ಸ್ಥಾನವನ್ನು ಮತ್ತು ಹಲವಾರು ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳನ್ನು ಹೊಂದಿದೆ. ಇದರ ವಿಸ್ತಾರವಾದ ಮಹಾನಗರವು ಹಳೆಯ ಮತ್ತು ನವದೆಹಲಿ ಎರಡನ್ನೂ ಒಳಗೊಳ್ಳುತ್ತದೆ. ದೆಹಲಿ ಮೆಟ್ರೊ ಐತಿಹಾಸಿಕ ಹೆಗ್ಗುರುತುಗಳನ್ನು ಸಮಕಾಲೀನ ನೆರೆಹೊರೆಗಳೊಂದಿಗೆ ಸಂಪರ್ಕಿಸುತ್ತದೆ.
ವಾಯು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುತ್ತಿರುವ ಹೊರತಾಗಿಯೂ, ದೆಹಲಿಯು ಹೊಸತನ ಮತ್ತು ಜಾಗತಿಕ ಪ್ರಭಾವಗಳನ್ನು ಅಳವಡಿಸಿಕೊಂಡು ಕ್ರಿಯಾತ್ಮಕ ನಗರವಾಗಿ ವಿಕಸನಗೊಳ್ಳುತ್ತಲೇ ಇದೆ.
ದೆಹಲಿ ಬೆಂಕಿ ದುರಂತ; ಹೋಟೆಲ್ ಮಾಲೀಕ ಬಂಧನ, ನ್ಯಾಯಾಂಗ ತನಿಖೆಗೆ ಆದೇಶ
ದಕ್ಷಿಣ ದೆಹಲಿಯ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿ ನಡೆದ ಭೀಕರ ಅಗ್ನಿ ಅವಘಡದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ ಪೊಲೀಸರು, ತಲೆಮರೆಸಿಕೊಂಡಿದ್ದ ಹೋಟೆಲ್ ಮಾಲೀಕ ಲವಕೇಶ್ ಬಜಾಜ್ ಎಂಬುವವರನ್ನು ಬಂಧಿಸಿದ್ದಾರೆ. ಈ ದುರಂತದಲ್ಲಿ 18 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 21 ಜನರು ಜೀವಂತವಾಗಿ ದಹನವಾಗಿದ್ದರು. ಈ ಪ್ರಕರಣದ ನ್ಯಾಯಾಂಗ ತನಿಖೆಗೂ ಲೆಫ್ಟಿನೆಂಟ್ ಗವರ್ನರ್ ಆದೇಶಿಸಿದ್ದಾರೆ.
- Sushma Chakre
- Updated on: Jun 3, 2026
- 11:09 pm
ದೆಹಲಿಯ ಬೆಂಕಿ ದುರಂತದಲ್ಲಿ ಬಾಂಗ್ಲಾ, ಅಫ್ಘಾನ್, ಆಫ್ರಿಕಾದ ಪ್ರವಾಸಿಗರೂ ಸಾವು; ಹೋಟೆಲ್ ಮಾಲೀಕ ಪರಾರಿ
ಇಂದು ಬೆಳಿಗ್ಗೆ ದೆಹಲಿಯ ಮಾಳವೀಯ ನಗರದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ 21 ಜನರಲ್ಲಿ ಕನಿಷ್ಠ 18 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ. ಮೂಲಗಳ ಪ್ರಕಾರ, ಮೃತಪಟ್ಟವರನ್ನು ನೈಜೀರಿಯಾ, ಆಫ್ರಿಕಾ, ಮೊಜಾಂಬಿಕ್, ಬಾಂಗ್ಲಾದೇಶ, ಸೊಮಾಲಿಯಾ, ಲೈಬೀರಿಯಾ ಮತ್ತು ಅಫ್ಘಾನಿಸ್ತಾನದ ಪ್ರಜೆಗಳು ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಮಾಳವೀಯ ನಗರದ ಹೌಜ್ ರಾಣಿ ಪ್ರದೇಶದಲ್ಲಿರುವ ಐದು ಅಂತಸ್ತಿನ ಹೋಟೆಲ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ನಂದಿಸುವಾಗ ಮತ್ತು ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಸುಮಾರು 10 ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ.
- Sushma Chakre
- Updated on: Jun 3, 2026
- 7:46 pm
ದೆಹಲಿ, ಮುಂಬೈ ಸೇರಿ ಹಲವೆಡೆ ದಾಳಿಗೆ ಸಂಚು ರೂಪಿಸಿದ್ದ 9 ಮಂದಿ ಶಂಕಿತ ಉಗ್ರರ ಬಂಧನ
ದೆಹಲಿ ಮತ್ತು ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ದಾಳಿಗೆ ಸಂಚು ರೂಪಿಸಿದ್ದ ಐಸಿಸ್ ಸಂಪರ್ಕಿತ 9 ಮಂದಿ ಶಂಕಿತ ಉಗ್ರರನ್ನು ದೆಹಲಿ ಪೊಲೀಸ್ ವಿಶೇಷ ಘಟಕ ಬಂಧಿಸಿದೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದ್ದು, ದೇಶದ ಎಲ್ಲೆಲ್ಲಿ ಇವರ ಜಾಲ ಇದೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಬಂಧಿತರ ಪೈಕಿ ಕೆಲ ವಿದೇಶಿ ಪ್ರಜೆಗಳೂ ಇದ್ದಾರೆ ಎನ್ನಲಾಗಿದ್ದು, ಅವರ ಗುರುತು ಹಾಗೂ ರಾಷ್ಟ್ರೀಯತೆಯನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
- Prasanna Hegde
- Updated on: May 30, 2026
- 4:27 pm
ದೆಹಲಿಯಲ್ಲಿ ನಕಲಿ ಕೆವೈಸಿ ಮೂಲಕ ಚಹಾ ವ್ಯಾಪಾರಿಗೆ 90,000 ರೂ. ವಂಚನೆ; ಮೂವರ ಬಂಧನ
ದೆಹಲಿಯಲ್ಲಿ ಚಹಾ ವ್ಯಾಪಾರಿಯೊಬ್ಬರಿಗೆ ಕೆವೈಸಿ (KYC) ಅಪ್ಡೇಟ್ ಮಾಡುವ ನೆಪದಲ್ಲಿ 90,000 ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ದೊಡ್ಡ ಮಟ್ಟದ ಅಂತರರಾಜ್ಯ ಸೈಬರ್ ಜಾಲವನ್ನು ಪತ್ತೆಹಚ್ಚಿದ್ದಾರೆ. ವಂಚಕನೊಬ್ಬ ತಾನು ಪ್ರಮುಖ ಡಿಜಿಟಲ್ ಪೇಮೆಂಟ್ ಕಂಪನಿಯೊಂದರ ಉದ್ಯೋಗಿ ಎಂದು ಪರಿಚಯಿಸಿಕೊಂಡು ಚಹಾ ಅಂಗಡಿಗೆ ಬಂದಿದ್ದನು. ವ್ಯಾಪಾರಿಯ ಮೊಬೈಲ್ನಲ್ಲಿ ಪೇಮೆಂಟ್ ಆಪ್ನ ಸೆಟ್ಟಿಂಗ್ಸ್ ಸರಿಪಡಿಸಿಕೊಡುವ ಮತ್ತು ಕೆವೈಸಿ (KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ನೆಪದಲ್ಲಿ ಆತನ ವಿಶ್ವಾಸ ಗಳಿಸಿದ್ದ.
- Sushma Chakre
- Updated on: May 27, 2026
- 8:09 pm
ಬಲವಂತವಾಗಿ ದೆಹಲಿ ಜಿಮ್ಖಾನಾ ಕ್ಲಬ್ ಖಾಲಿ ಮಾಡಿಸುವುದಿಲ್ಲ; ಕೋರ್ಟ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ
ದೆಹಲಿಯ ಜಿಮ್ಖಾನಾ ಕ್ಲಬ್ಗೆ (Delhi Gymkhana Club) ಸದ್ಯಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದ್ದು, ಕ್ಲಬ್ನ ಜಾಗವನ್ನು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ. ಈ ವಿಷಯದಲ್ಲಿ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದು ಕೇಂದ್ರ ಸರ್ಕಾರ ಇಂದು ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಕಳೆದ ವಾರವಷ್ಟೇ ಕೇಂದ್ರ ಸರ್ಕಾರವು ಈ ಪ್ರತಿಷ್ಠಿತ ಕ್ಲಬ್ಗೆ ಜಾಗ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿತ್ತು. ಲುಟ್ಯೆನ್ಸ್ ದೆಹಲಿಯ ಹೃದಯಭಾಗದಲ್ಲಿರುವ 27 ಎಕರೆ ವಿಸ್ತೀರ್ಣದ ಅತ್ಯಮೂಲ್ಯ ಆಸ್ತಿಯನ್ನು ತನ್ನ ಸುಪರ್ದಿಗೆ ಪಡೆಯಲು ಮುಂದಾಗಿತ್ತು.
- Sushma Chakre
- Updated on: May 26, 2026
- 5:32 pm
ದಿಲ್ಲಿ ಜಿಮ್ಖಾನಾ ಕ್ಲಬ್ಗೆ ಬೀಗ? ಹೃದಯಭಾಗದಲ್ಲಿ 27 ಎಕರೆಯಲ್ಲಿರವ ಈ ಕ್ಲಬ್ ಸುತ್ತಮುತ್ತಲ ವಿವಾದಗಳೇನು?
Delhi Gymkhana Club controveries: ದೆಹಲಿಯ ಪ್ರತಿಷ್ಠಿತ ಮತ್ತು ಅತ್ಯಂತ ಗಣ್ಯ ವ್ಯಕ್ತಿಗಳ ತಾಣವಾದ 'ದೆಹಲಿ ಜಿಮ್ಖಾನಾ ಕ್ಲಬ್' ಸದ್ಯ ತೀವ್ರ ವಿವಾದಕ್ಕೆ ಸಿಲುಕಿದ್ದು, ಸಂಪೂರ್ಣವಾಗಿ ಮುಚ್ಚಿಹೋಗುವ ಭೀತಿಯಲ್ಲಿದೆ. ಬ್ರಿಟಿಷರ ಕಾಲದ ಈ ಐತಿಹಾಸಿಕ ಕ್ಲಬ್ಗೆ ಕೇಂದ್ರ ಸರ್ಕಾರವು ಜೂನ್ 5ರೊಳಗೆ ತನ್ನ ಸಂಪೂರ್ಣ 27.3 ಎಕರೆ ಆವರಣವನ್ನು ಖಾಲಿ ಮಾಡಿ ಸರ್ಕಾರದ ವಶಕ್ಕೆ ನೀಡುವಂತೆ ಆದೇಶ ಜಾರಿ ಮಾಡಿದೆ. ಇದರ ಬೆನ್ನಲ್ಲೇ ಕ್ಲಬ್ನ ಸದಸ್ಯರು ಜಂಟಿಯಾಗಿ ಈ ಆದೇಶವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ವಿವಾದ ಈಗ ಕಾನೂನು ಸಮರಕ್ಕೆ ತಿರುಗಿದೆ.
- Vijaya Sarathy SN
- Updated on: May 25, 2026
- 7:42 pm
ಅಗ್ಗದ ಇಂಧನ ಮತ್ತು ಸ್ಥಿರ ಪೂರೈಕೆ ಇವತ್ತು ಜಗತ್ತಿಗೆ ಅವಶ್ಯಕ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಜೈಶಂಕರ್, ರುಬಿಯೋ ಹೇಳಿಕೆ
India-US Strengthen Energy Security: ಭಾರತ-ಅಮೆರಿಕ ಇಂಧನ ಸಹಕಾರವು ಜಾಗತಿಕ ಸವಾಲುಗಳ ಮಧ್ಯೆ ಬಲಗೊಂಡಿದೆ. ಭಾರತದ 140 ಕೋಟಿ ಜನರಿಗೆ ಕೈಗೆಟುಕುವ ಮತ್ತು ಸ್ಥಿರ ಇಂಧನ ಪೂರೈಕೆಯೇ ನಮ್ಮ ಆದ್ಯತೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದರು. ಇಂಧನ ವ್ಯಾಪಾರ ಗಮನಾರ್ಹವಾಗಿ ಹೆಚ್ಚಿದ್ದು, ಪಶ್ಚಿಮ ಏಷ್ಯಾ ಪ್ರಕ್ಷುಬ್ಧತೆಯ ನಡುವೆ ಅಮೆರಿಕದ ಸಹಕಾರ ಭಾರತದ ಇಂಧನ ಭದ್ರತೆಗೆ ಅತ್ಯಗತ್ಯವಾಗಿದೆ.
- Vijaya Sarathy SN
- Updated on: May 24, 2026
- 3:19 pm
ದೇಶದ ಅರ್ಧದಷ್ಟು ಜಿಡಿಪಿಗೆ ಹೊಟ್ಟೆ ತುಂಬಿಸುತ್ತಿರೋದು ಕರ್ನಾಟಕ ಸೇರಿ 5 ರಾಜ್ಯಗಳು ಮಾತ್ರ; ಇಲ್ಲಿವೆ ವರದಿಯ ಅಂಶಗಳು
India's Economic Divide: ಭಾರತವು ವಿಶ್ವದ ಅತಿ ವೇಗದ ಆರ್ಥಿಕತೆಗಳಲ್ಲಿ ಒಂದಾಗಿದ್ದರೂ, ರಾಜ್ಯಗಳ ನಡುವೆ ತೀವ್ರ ಅಸಮಾನತೆಗಳಿವೆ. ದೇಶದ ಒಟ್ಟು ಜಿಡಿಪಿಯ ಶೇ. 48ರಷ್ಟು ಪಾಲು ಕೇವಲ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ 5 ರಾಜ್ಯಗಳಿಂದ ಬರುತ್ತದೆ. ವಿದೇಶಿ ಹೂಡಿಕೆಯಲ್ಲೂ ಇದೇ ಪ್ರವೃತ್ತಿ. ಉತ್ತರ ಪ್ರದೇಶದ ಬೆಳವಣಿಗೆ ಸಕಾರಾತ್ಮಕವಾಗಿದ್ದು, ಆದರೆ ಆದಾಯ, ಉದ್ಯೋಗ ಸೃಷ್ಟಿಯಲ್ಲಿ ಇತರ ರಾಜ್ಯಗಳು ಹಿಂದುಳಿದಿವೆ. ಸಮಗ್ರ ಅಭಿವೃದ್ಧಿಗೆ ಎಲ್ಲ ರಾಜ್ಯಗಳ ಆರ್ಥಿಕ ಬೆಳವಣಿಗೆ ಅನಿವಾರ್ಯ.
- Vijaya Sarathy SN
- Updated on: May 22, 2026
- 6:42 pm
ಶಾಪಿಂಗ್ಗೆ ಅಸಿಸ್ಟೆಂಟ್ಗಳನ್ನು ಕೊಡುತ್ತೆ ಈ ಸ್ಟಾರ್ಟಪ್; ಲಗೇಜ್ ಹೊರೋದ್ರಿಂದ ಹಿಡಿದು, ಗಾಡಿ ಹತ್ತಿಸೋವರೆಗೂ ಎಲ್ಲಾ ನೆರವೂ ಕೊಡ್ತಾರಂತೆ
Hands-Free Shopping in Delhi: ದೆಹಲಿಯ 'ಕ್ಯಾರಿಮೆನ್' ಸ್ಟಾರ್ಟಪ್ ಶಾಪಿಂಗ್ ಬ್ಯಾಗ್ಗಳ ಹೊರೆಯಿಂದ ಗ್ರಾಹಕರನ್ನು ಮುಕ್ತಗೊಳಿಸುತ್ತದೆ. ಗಂಟೆಗೆ ₹149 ಶುಲ್ಕದೊಂದಿಗೆ ತರಬೇತಿ ಪಡೆದ ಸಹಾಯಕರು ಶಾಪಿಂಗ್ ಸಾಮಾನುಗಳನ್ನು ಹೊತ್ತು, ದೈಹಿಕ ಆಯಾಸವಿಲ್ಲದೆ ಶಾಪಿಂಗ್ ಆನಂದಿಸಲು ನೆರವಾಗುತ್ತಾರೆ. ಗರ್ಭಿಣಿಯರು, ಮಕ್ಕಳಿರುವವರು ಮತ್ತು ಇತರೆ ಅಗತ್ಯವುಳ್ಳವರಿಗೆ ಇದು ಉತ್ತಮ ಪರಿಹಾರವಾಗಿದ್ದು, ದೈಹಿಕ ಶ್ರಮವಿಲ್ಲದೆ ಶಾಪಿಂಗ್ ಮಾಡುವುದು ಇದರ ಮುಖ್ಯ ಉದ್ದೇಶ.
- Vijaya Sarathy SN
- Updated on: May 21, 2026
- 11:41 am
ದಿಲ್ಲಿಯಲ್ಲಿ ಟ್ಯಾಕ್ಸಿ, ಆಟೊ ಚಾಲಕರಿಂದ 3 ದಿನ ಮುಷ್ಕರ; ಏನಿವೆ ಅವರ ಬೇಡಿಕೆಗಳು?
Delhi Auto, tax drivers strike on May 21-23: ದೆಹಲಿಯಲ್ಲಿ ಪ್ರಯಾಣದ ಮೀಟರ್ ದರ ಏರಿಸುವಂತೆ ಒತ್ತಾಯಿಸಿ ಟ್ಯಾಕ್ಸಿ, ಆಟೊ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೇ 21ರಿಂದ 23ರವರೆಗೆ ದೆಹಲಿಯಲ್ಲಿ ಚಾಲಕರ ಮುಷ್ಕರ ನಡೆಯಲಿದೆ. ಈ ಮೂರು ದಿನಗಳ ಕಾಲ ದೆಹಲಿಯಲ್ಲಿ ಟ್ಯಾಕ್ಸಿ, ಆಟೊರಿಕ್ಷಾ ಮತ್ತಿತತರ ಕಮರ್ಷಿಯಲ್ ವಾಹನಗಳ ಸೇವೆ ಇರುವ ಸಾಧ್ಯತೆ ಇಲ್ಲ.
- Vijaya Sarathy SN
- Updated on: May 19, 2026
- 11:43 am
ಕೇಜ್ರಿವಾಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ಇಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಹಿರಿಯ ನಾಯಕರಾದ ಸಂಜಯ್ ಸಿಂಗ್, ಮನೀಶ್ ಸಿಸೋಡಿಯಾ, ಸೌರಭ್ ಭಾರದ್ವಾಜ್ ಮತ್ತು ಇತರರ ವಿರುದ್ಧ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮತ್ತು ನ್ಯಾಯಾಲಯದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸುವುದಾಗಿ ಹೇಳಿದ್ದಾರೆ.
- Sushma Chakre
- Updated on: May 14, 2026
- 9:20 pm
2 ದಿನ ವರ್ಕ್ ಫ್ರಂ ಹೋಂ, ಆನ್ಲೈನ್ ಮೀಟಿಂಗ್, ವಾಹನ ರಹಿತ ದಿನ; ದೆಹಲಿ ಸರ್ಕಾರ ಮಹತ್ವದ ನಿರ್ಧಾರ
ಇಂಧನ ಉಳಿಸಲು ಭಾರತೀಯ ನಾಗರಿಕರಿಗೆ ಪ್ರಧಾನಿ ನರೇಂದ್ರ ಮೋದಿ ವಾಹನಗಳ ಬಳಕೆ ಕಡಿಮೆ ಮಾಡಲು, ಆನ್ಲೈನ್ ಮೀಟಿಂಗ್ ನಡೆಸಲು, ವರ್ಕ್ ಫ್ರಂ ಹೋಂ ಮಾಡಲು ಕರೆನೀಡಿದ್ದರು. ಈಗಾಗಲೇ ಪ್ರಧಾನಿ ಮೋದಿಯವರೂ ಸೇರಿದಂತೆ ಕೇಂದ್ರ ಸಚಿವರು ಇಂಧನ ಉಳಿಸಲು ತಮ್ಮ ಬೆಂಗಾವಲು ಪಡೆಯ ವಾಹನಗಳ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಇದೀಗ ದೆಹಲಿ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಾರದಲ್ಲಿ 2 ದಿನಗಳ ಕಾಲ ಮನೆಯಿಂದ ಕೆಲಸ ಮಾಡಬೇಕು (ವರ್ಕ್ ಫ್ರಂ ಹೋಂ), ಆನ್ಲೈನ್ ಮೀಟಿಂಗ್ ನಡೆಸಬೇಕು ಮತ್ತು ವಾಹನ ರಹಿತ ದಿನದಂದು ವಾಹನಗಳನ್ನು ರಸ್ತೆಗೆ ತರುವಂತಿಲ್ಲ ಎಂದು ದೆಹಲಿ ಸರ್ಕಾರ ಘೋಷಿಸಿದೆ.
- Sushma Chakre
- Updated on: May 14, 2026
- 7:20 pm