AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi

Delhi

ಭಾರತದ ರಾಜಧಾನಿಯಾದ ದೆಹಲಿಯು ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದ ಕೂಡಿದ ನಗರವಾಗಿದೆ. ಐತಿಹಾಸಿಕ ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಇಂಡಿಯಾ ಗೇಟ್‌ನಂತಹ ಪುರಾತನ ಸ್ಮಾರಕಗಳ ಶ್ರೀಮಂತ ವಸ್ತ್ರದೊಂದಿಗೆ ದೆಹಲಿಯು ತನ್ನ ಶತಮಾನಗಳ-ಹಳೆಯ ಪರಂಪರೆಗೆ ಸಾಕ್ಷಿಯಾಗಿದೆ. ಚಾಂದಿನಿ ಚೌಕ್‌ನಂತಹ ನಗರದ ರೋಮಾಂಚಕ ಮಾರುಕಟ್ಟೆಗಳು ವೈವಿಧ್ಯಮಯ ಬೀದಿ ಆಹಾರ, ಜವಳಿ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳೊಂದಿಗೆ ಸಂವೇದನಾ ಮಿತಿಮೀರಿದ ಹೊರೆಯನ್ನು ನೀಡುತ್ತವೆ.
ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ, ದೆಹಲಿಯು ಭಾರತೀಯ ಸರ್ಕಾರದ ಸ್ಥಾನವನ್ನು ಮತ್ತು ಹಲವಾರು ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳನ್ನು ಹೊಂದಿದೆ. ಇದರ ವಿಸ್ತಾರವಾದ ಮಹಾನಗರವು ಹಳೆಯ ಮತ್ತು ನವದೆಹಲಿ ಎರಡನ್ನೂ ಒಳಗೊಳ್ಳುತ್ತದೆ. ದೆಹಲಿ ಮೆಟ್ರೊ ಐತಿಹಾಸಿಕ ಹೆಗ್ಗುರುತುಗಳನ್ನು ಸಮಕಾಲೀನ ನೆರೆಹೊರೆಗಳೊಂದಿಗೆ ಸಂಪರ್ಕಿಸುತ್ತದೆ.
ವಾಯು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುತ್ತಿರುವ ಹೊರತಾಗಿಯೂ, ದೆಹಲಿಯು ಹೊಸತನ ಮತ್ತು ಜಾಗತಿಕ ಪ್ರಭಾವಗಳನ್ನು ಅಳವಡಿಸಿಕೊಂಡು ಕ್ರಿಯಾತ್ಮಕ ನಗರವಾಗಿ ವಿಕಸನಗೊಳ್ಳುತ್ತಲೇ ಇದೆ.

ಇನ್ನೂ ಹೆಚ್ಚು ಓದಿ

ಅಮೇಜಾನ್​ನಿಂದ ಭಾರೀ ಹೂಡಿಕೆ ಘೋಷಣೆ; ಭಾರತದಲ್ಲಿ ಗೂಗಲ್, ಮೈಕ್ರೋಸಾಫ್ಟ್​ಗಿಂತ ಎರಡು ಪಟ್ಟು ಹೆಚ್ಚು ಹೂಡಿಕೆ

Amazon commits for 35 billion dollar investment in India: ಜಾಗತಿಕ ಇಕಾಮರ್ಸ್ ದೈತ್ಯ ಅಮೇಜಾನ್ ಭಾರತದಲ್ಲಿ 35 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿದೆ. ಈಗಾಗಲೇ ಇಲ್ಲಿ 40 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಹೆಚ್ಚುವರಿಯಾಗಿ ಈ 35 ಬಿಲಿಯನ್ ಡಾಲರ್ ಹಣ ಹಾಕಲಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್ ಕಂಪನಿಗಳಿಗಿಂತ ಅಮೇಜಾನ್ ಎರಡು ಪಟ್ಟು ಹೆಚ್ಚು ಹೂಡಿಕೆ ಮಾಡುತ್ತಿದೆ.

ರಷ್ಯಾದ ಪ್ರವಾಸಿಗರಿಗೆ 30 ದಿನಗಳಲ್ಲಿ ಉಚಿತ ಇ-ವೀಸಾ; ಪುಟಿನ್ ಸಮ್ಮುಖದಲ್ಲಿ ಪ್ರಧಾನಿ ಮೋದಿ ಘೋಷಣೆ

ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ದೆಹಲಿಯ ಹೈದರಾಬಾದ್‌ ಹೌಸ್​​ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಾಗಿದೆ. ಭಾರತ-ರಷ್ಯಾ ನಡುವೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ರಕ್ಷಣೆ, ವ್ಯಾಪಾರ, ಇಂಧನ ಪೂರೈಕೆ ಸೇರಿದಂತೆ ಹಲವು ಒಪ್ಪಂದವಾಗಿದೆ. ಈ ಬಗ್ಗೆ ಮೋದಿ ಹಾಗೂ ಪುಟಿನ್ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ಪುಟಿನ್ ಭೇಟಿ; ರಷ್ಯಾ ಅಧ್ಯಕ್ಷ 2 ದಿನ ದೆಹಲಿಯಲ್ಲಿ ಏನು ಮಾಡಲಿದ್ದಾರೆ?

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸಂಜೆ 6.30ಕ್ಕೆ ದೆಹಲಿಗೆ ಆಗಮಿಸಲಿದ್ದಾರೆ. ಪುಟಿನ್ ಅವರ ಜೊತೆಗೆ ಅವರ ನೆಚ್ಚಿನ ಕಾರು ಔರಸ್ ಸೆನಾಟ್ ಲಿಮೋಸುಯಿನ್ ಕೂಡ ಭಾರತಕ್ಕೆ ಬರಲಿದೆ. ಈ ಕಾರನ್ನು ಅತ್ಯಂತ ಸುರಕ್ಷತೆಯ ದೃಷ್ಟಿಯಿಂದ ಐಷಾರಾಮಿಯಾಗಿ ಸಿದ್ಧಪಡಿಸಲಾಗಿದೆ. ಇದು ರಷ್ಯಾದ ಅಧಿಕೃತ ಅಧ್ಯಕ್ಷೀಯ ಸರ್ಕಾರಿ ಕಾರು. ಇದನ್ನು ಹೆಚ್ಚಾಗಿ ರೋಲ್ಸ್ ರಾಯ್ಸ್‌ಗೆ ಹೋಲಿಸಲಾಗುತ್ತದೆ. ಈ ಕಾರು ಪುಟಿನ್ ಜೊತೆಗೆ ದೆಹಲಿಗೂ ಬರಲಿದೆ. ದೆಹಲಿಯಲ್ಲಿ ಪುಟಿನ್ ಅವರ ವೇಳಾಪಟ್ಟಿ ಹೀಗಿದೆ.

ದೆಹಲಿಯಲ್ಲಿ ಇಂದು ಪುಟಿನ್ ತಂಗಲಿರುವ ಹೋಟೆಲ್ ರೂಂ ಬಾಡಿಗೆ ಕೇಳಿದರೆ ಶಾಕ್ ಆಗುತ್ತೀರಿ!

Putin Visit to Delhi: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಭೇಟಿಗಾಗಿ ಇಂದು (ಡಿಸೆಂಬರ್ 4) ನವದೆಹಲಿಗೆ ಆಗಮಿಸಲಿದ್ದಾರೆ. ಈ ಉನ್ನತ ಮಟ್ಟದ ಭೇಟಿಗಾಗಿ ದೆಹಲಿಯ ಐಟಿಸಿ ಮೌರ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ, ಈ ಐಷಾರಾಮಿ ಹೋಟೆಲ್ ಮಾಧ್ಯಮ ಮತ್ತು ಭದ್ರತಾ ಸಂಸ್ಥೆಗಳ ಗಮನ ಸೆಳೆಯುತ್ತಿರುವ ಕೇಂದ್ರಬಿಂದುವಾಗಿದೆ. ಈ ಹೋಟೆಲ್ ಈಗ ಬಿಗಿಯಾದ ಕಣ್ಗಾವಲಿನಲ್ಲಿದೆ. ಈ ಹೋಟೆಲ್​​ನ ಬಹುತೇಕ ಎಲ್ಲಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಈ ಹೋಟೆಲ್​​ನ ರೂಂನ ಬಾಡಿಗೆ ಎಷ್ಟು ಗೊತ್ತಾ?

ಚಾಟ್​ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ

Reddit user shares his experience of stealing from a thief: ಆನ್​ಲೈನ್​ನಲ್ಲಿ ಆಗಂತುಕರು ವಂಚಿಸಲು ಯತ್ನಿಸುತ್ತಿರುವುದು ಗೊತ್ತಾದಾಗ ಹೆಚ್ಚಿನ ಜನರು ತಪ್ಪಿಸಿಕೊಂಡರೆ ಸಾಕೆಂದು ಸುಮ್ಮನಾಗುತ್ತಾರೆ. ಆದರೆ, ದೆಹಲಿಯ ವ್ಯಕ್ತಿಯೊಬ್ಬರು ವಂಚಕನಿಗೆ ಮಂಕುಬೂದಿ ಯಾಕಿ ದಮ್ಮಯ್ಯ ಎಂದು ಬೇಡಿಕೊಳ್ಳುವಂತೆ ಮಾಡಿದ ಘಟನೆ ಇದೆ. ರೆಡ್ಡಿಟ್​ನಲ್ಲಿ ಈ ಅನುಭವ ಹಂಚಿಕೊಂಡಿರುವ ಆ ವ್ಯಕ್ತಿ, ತಾನು ಚಾಟ್​ಜಿಪಿಟಿ ಬಳಸಿ ಹೇಗೆ ಯಾಮಾರಿಸಿದೆ ಎಂದು ಘಟನೆ ವಿವರಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಈ ಘಟನೆ.

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ ಹಿನ್ನೆಲೆ ದೆಹಲಿಯಲ್ಲಿ ಕಟ್ಟೆಚ್ಚರ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮಾಸ್ಕೋ ಬಗ್ಗೆ ಭಾರತ ಅತ್ಯಂತ ಸ್ನೇಹಪರ ನಿಲುವು ತಾಳಿದ್ದಕ್ಕಾಗಿ ರಷ್ಯಾ ಧನ್ಯವಾದಗಳನ್ನು ಅರ್ಪಿಸಿದೆ. ಉಕ್ರೇನ್ ಸಂಘರ್ಷದ ಬಗ್ಗೆ ಭಾರತದ ನಿಲುವನ್ನು ರಷ್ಯಾ ಶ್ಲಾಘಿಸಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎರಡು ದಿನಗಳ ಭಾರತ ಭೇಟಿಗೆ ಮುನ್ನ ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಹೇಳಿಕೆ ನೀಡಿದ್ದಾರೆ.

ದೆಹಲಿಯ ಗಾಳಿಯನ್ನು ಉಸಿರಾಡುವುದೂ ಒಂದೇ, ದಿನಕ್ಕೆ 14 ಸಿಗರೇಟ್ ಸೇದುವುದೂ ಒಂದೇ!

ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಇದೆ. ವಾಯುಮಾಲಿನ್ಯವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅನೇಕ ಜನರು ತಮ್ಮ ಶ್ವಾಸಕೋಶದ ಮೇಲೆ ಅದರ ದೀರ್ಘಕಾಲೀನ ಪರಿಣಾಮವನ್ನು ಅರಿತುಕೊಳ್ಳದೆ ಪ್ರತಿದಿನ ಹಾನಿಕಾರಕ ಗಾಳಿಯನ್ನು ಉಸಿರಾಡುತ್ತಿದ್ದಾರೆ. ಶುದ್ಧ ಗಾಳಿಯು ಮೂಲಭೂತ ಅವಶ್ಯಕತೆಯಾಗಿದೆ.

ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು

Delhi High Court judgement in favour of 88 yr old Daljit Kaur: ಅಪ್ಪ ಅಮ್ಮನಿಂದ ಆಸ್ತಿ ಬರೆಯಿಸಿಕೊಂಡು, ನಂತರ ಅವರನ್ನು ಬೀದಿಗೆ ತಳ್ಳುವ ಮಕ್ಕಳು ಹಲವರಿರುತ್ತಾರೆ. ಕೊನೆಗಾಲದಲ್ಲಿ ತಮ್ಮ ಆರೈಕೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಕ್ಕಳಿಗೆ ಮಾಡಿದ್ದ ಗಿಫ್ಟ್ ಡೀಡ್ ಅನ್ನು ವೃದ್ಧರು ರದ್ದು ಮಾಡಬಹುದು. ದಲ್ಜೀತ್ ಕೌರ್ ಎನ್ನುವ 88 ವರ್ಷದ ಮಹಿಳೆಯ ಪರವಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.

Viral Video: 6 ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಕಿವಿ ಕಚ್ಚಿದ ಪಿಟ್‌ಬುಲ್

ದೆಹಲಿಯಲ್ಲಿ 6 ವರ್ಷದ ಬಾಲಕನ ಮೇಲೆ ಪಿಟ್‌ಬುಲ್ ನಾಯಿ ದಾಳಿ ಮಾಡಿ ಕಿವಿ ಕಚ್ಚಿದೆ. ನಾಯಿಯ ಮಾಲೀಕನನ್ನು ಬಂಧಿಸಲಾಗಿದೆ. ವಿಡಿಯೋದಲ್ಲಿ ಆ ನಾಯಿ ಹುಡುಗನ ಕಡೆಗೆ ಹಾರಿ ದಾಳಿ ಮಾಡುತ್ತಿರುವುದನ್ನು ನೋಡಬಹುದು. ಆಗ ಆ ಬಾಲಕ ಓಡಲು ಪ್ರಯತ್ನಿಸುತ್ತಾನೆ, ಆದರೆ ನಾಯಿ ಅವನನ್ನು ಬೆನ್ನಟ್ಟಿ ಕಚ್ಚುತ್ತದೆ. ನಾಯಿ ಹುಡುಗನ ಕಿವಿಗಳನ್ನು ಕಚ್ಚಿ ನೆಲದಲ್ಲಿ ಎಳೆದುಕೊಂಡು ಹೋಗುತ್ತದೆ. ಆಗ ಆ ಮಗುವನ್ನು ಹಿಂಬಾಲಿಸುವ ಮಹಿಳೆಯೊಬ್ಬರು ನಾಯಿಯನ್ನು ಎಳೆಯಲು ಪ್ರಯತ್ನಿಸುತ್ತಾರೆ. ಅದಾದ ಕೆಲವು ಕ್ಷಣಗಳ ನಂತರ, ಒಬ್ಬ ಪುರುಷ ಕೂಡ ಸಹಾಯ ಮಾಡಲು ಮುಂದಾಗುತ್ತಾನೆ. ಕೊನೆಗೆ ಆ ಮಹಿಳೆ ನಾಯಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾಳೆ.

ನ್ಯಾ| ಸೂರ್ಯಕಾಂತ್ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ಸ್ವೀಕಾರ

Justice Surya Kant takes oath as 53rd CJI: ಹರ್ಯಾಣ ಮೂಲದ 63 ವರ್ಷದ ನ್ಯಾ| ಸೂರ್ಯಕಾಂತ್ ಅವರು ಭಾರತದ ಮುಖ್ಯನ್ಯಾಯಮೂರ್ತಿಯಾಗಿ ಪದಗ್ರಹಣ ಮಾಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನ. 24ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಬೇಗ ವಿಲೇವಾರಿ ಮಾಡುವುದು ನೂತನ ಮುಖ್ಯನ್ಯಾಯಮೂರ್ತಿಗಳ ಮೊದಲ ಆದ್ಯತೆಯಾಗಿದೆ.

ನರರಕ್ಷಕರೋ, ನರಹಂತಕರೋ..! ರಕ್ಕಸ ಕಾರ್ಯಕ್ಕೆ ಉಗ್ರ ವೈದ್ಯರ ಜಾಲ ನಿರ್ಮಾಣಗೊಂಡ ಕಥೆ

Delhi Bomb blast case: ಹರ್ಯಾಣದ ಫರೀದಾಬಾದ್​ನ ಅಲ್ ಯೂನಿವರ್ಸಿಟಿಯ ವೈದ್ಯರು ಹಾಗೂ ಇತರೆ ವ್ಯಕ್ತಿಗಳ ಉಗ್ರ ಜಾಲದ ವಿಚಾರ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಿದೆ. ಬಂಧಿತರಾದ ಡಾ. ಮುಜಾಮ್ಮಿಲ್, ಡಾ. ಶಾಹೀನ್, ಡಾ. ಆದಿಲ್, ಅಮೀರ್ ಅವರ ಉಗ್ರ ಚಟುವಟಿಕೆಯ ಮಾಹಿತಿ ಬಯಸಲಾಗುತ್ತಿದೆ. ಪುಲ್ವಾಮ ದಾಳಿಯ ಮಾಸ್ಟರ್​ಮೈಂಡ್​ನ ಪತ್ನಿಯ ನೆರವಿನಿಂದ ಡಾ. ಶಾಹೀನ್ ಹೇಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ನೆರವಾಗುತ್ತಿದ್ದಳು ಎಂಬುದು ಗೊತ್ತಾಗಿದೆ.

ದೆಹಲಿ ಸ್ಫೋಟ; ಎನ್​ಐಎಯಿಂದ ಮುಜಮ್ಮಿಲ್, ಶಾಹೀನ್ ಸೇರಿ ನಾಲ್ವರ ಬಂಧನ

ದೆಹಲಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದಿಂದ NIA ನಾಲ್ವರು ಆರೋಪಿಗಳನ್ನು ಬಂಧಿಸಿದೆ. ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟಕ್ಕೆ ಸಂಬಂಧಿಸಿದಂತೆ ಡಾ. ಮುಜಮ್ಮಿಲ್ ಗನೈ, ಶಾಹೀನ್ ಶಾಹೀದ್ ಮತ್ತು ಇತರ ಇಬ್ಬರನ್ನು ಪಟಿಯಾಲ ಹೌಸ್ ನ್ಯಾಯಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) 10 ದಿನಗಳ ವಶಕ್ಕೆ ನೀಡಿದೆ.

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ