Delhi
ಭಾರತದ ರಾಜಧಾನಿಯಾದ ದೆಹಲಿಯು ಇತಿಹಾಸ, ಸಂಸ್ಕೃತಿ ಮತ್ತು ಆಧುನಿಕತೆಯಿಂದ ಕೂಡಿದ ನಗರವಾಗಿದೆ. ಐತಿಹಾಸಿಕ ಕೆಂಪು ಕೋಟೆ, ಕುತುಬ್ ಮಿನಾರ್ ಮತ್ತು ಇಂಡಿಯಾ ಗೇಟ್ನಂತಹ ಪುರಾತನ ಸ್ಮಾರಕಗಳ ಶ್ರೀಮಂತ ವಸ್ತ್ರದೊಂದಿಗೆ ದೆಹಲಿಯು ತನ್ನ ಶತಮಾನಗಳ-ಹಳೆಯ ಪರಂಪರೆಗೆ ಸಾಕ್ಷಿಯಾಗಿದೆ. ಚಾಂದಿನಿ ಚೌಕ್ನಂತಹ ನಗರದ ರೋಮಾಂಚಕ ಮಾರುಕಟ್ಟೆಗಳು ವೈವಿಧ್ಯಮಯ ಬೀದಿ ಆಹಾರ, ಜವಳಿ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳೊಂದಿಗೆ ಸಂವೇದನಾ ಮಿತಿಮೀರಿದ ಹೊರೆಯನ್ನು ನೀಡುತ್ತವೆ.
ರಾಜಕೀಯ ಮತ್ತು ಆರ್ಥಿಕ ಕೇಂದ್ರವಾಗಿ, ದೆಹಲಿಯು ಭಾರತೀಯ ಸರ್ಕಾರದ ಸ್ಥಾನವನ್ನು ಮತ್ತು ಹಲವಾರು ಅಂತರರಾಷ್ಟ್ರೀಯ ರಾಯಭಾರ ಕಚೇರಿಗಳನ್ನು ಹೊಂದಿದೆ. ಇದರ ವಿಸ್ತಾರವಾದ ಮಹಾನಗರವು ಹಳೆಯ ಮತ್ತು ನವದೆಹಲಿ ಎರಡನ್ನೂ ಒಳಗೊಳ್ಳುತ್ತದೆ. ದೆಹಲಿ ಮೆಟ್ರೊ ಐತಿಹಾಸಿಕ ಹೆಗ್ಗುರುತುಗಳನ್ನು ಸಮಕಾಲೀನ ನೆರೆಹೊರೆಗಳೊಂದಿಗೆ ಸಂಪರ್ಕಿಸುತ್ತದೆ.
ವಾಯು ಮಾಲಿನ್ಯದಂತಹ ಸವಾಲುಗಳನ್ನು ಎದುರಿಸುತ್ತಿರುವ ಹೊರತಾಗಿಯೂ, ದೆಹಲಿಯು ಹೊಸತನ ಮತ್ತು ಜಾಗತಿಕ ಪ್ರಭಾವಗಳನ್ನು ಅಳವಡಿಸಿಕೊಂಡು ಕ್ರಿಯಾತ್ಮಕ ನಗರವಾಗಿ ವಿಕಸನಗೊಳ್ಳುತ್ತಲೇ ಇದೆ.
ಮನೆಯೊಳಗೆ ಅಕ್ಕ-ತಂಗಿಯರ ನಿಗೂಢ ಸಾವು; ಹೆತ್ತಮ್ಮನೇ ಮುಖ್ಯ ಆರೋಪಿ!
ದೆಹಲಿಯ ಮಾಲ್ವಿಯಾ ನಗರದಲ್ಲಿನ ಮನೆಯೊಳಗೆ ಅಕ್ಕ-ತಂಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಟೈಮ್ಸ್ ಆಫ್ ಇಂಡಿಯಾದಲ್ಲಿನ ವರದಿಯ ಪ್ರಕಾರ, ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಕುಟುಂಬದ ಸಂಬಂಧಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅವರು ಪದೇ ಪದೇ ಬಾಗಿಲು ಬಡಿದರೂ ಮನೆಯವರು ಬಾಗಿಲು ತೆರೆಯುತ್ತಿಲ್ಲ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
- Sushma Chakre
- Updated on: Mar 6, 2026
- 4:59 pm
ದೇಶದ 9 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಪಾಲರ ಬದಲಾವಣೆ! ಇಲ್ಲಿದೆ ಲಿಸ್ಟ್
ಭಾರತದ ರಾಷ್ಟ್ರಪತಿ ಭವನವು ಶುಕ್ರವಾರ ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಜ್ಯಪಾಲರು ಹಾಗೂ ಲೆಫ್ಟಿನೆಂಟ್ ಗವರ್ನರ್ಗಳ ಮಹತ್ವದ ನೇಮಕಾತಿ ಮತ್ತು ವರ್ಗಾವಣೆಯನ್ನು ಘೋಷಿಸಿದೆ. ದೆಹಲಿ, ಲಡಾಖ್, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ 9 ರಾಜ್ಯಗಳಲ್ಲಿ ಈ ಬದಲಾವಣೆ ಮಾಡಲಾಗಿದೆ. ದೆಹಲಿಗೆ ತರಣ್ಜಿತ್ ಸಿಂಗ್ ಸಂಧು, ಲಡಾಖ್ಗೆ ವಿನಯ್ ಕುಮಾರ್ ಸಕ್ಸೇನಾ ಅವರನ್ನು ನೇಮಿಸಲಾಗಿದೆ.
- Bhavana Hegde
- Updated on: Mar 6, 2026
- 7:16 am
ದೆಹಲಿ ಅಬಕಾರಿ ಹಗರಣ; ಕೇಜ್ರಿವಾಲ್ ಬಿಡುಗಡೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ
ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ಮದ್ಯ ಹಗರಣದಲ್ಲಿ ಖುಲಾಸೆಗೊಳಿಸಲಾಗಿದೆ. ದೆಹಲಿಯ ಕೆಳ ನ್ಯಾಯಾಲಯವು ಒಟ್ಟು 23 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಕೇಜ್ರಿವಾಲ್ ನ್ಯಾಯಾಲಯದ ತೀರ್ಪನ್ನು ಐತಿಹಾಸಿಕ ಎಂದು ಕರೆದಿದ್ದಾರೆ ಮತ್ತು ಬಿಜೆಪಿ ಪಿತೂರಿ ಮಾಡಿದೆ ಎಂದು ಆರೋಪಿಸಿದ್ದಾರೆ. ಇದೆಲ್ಲದರ ನಡುವೆ, ಸಿಬಿಐ ಈಗ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನ ಮೊರೆ ಹೋಗಿದೆ.
- Sushma Chakre
- Updated on: Feb 27, 2026
- 6:59 pm
ಆ ತಪ್ಪು ಮಾಡಿದ ನಂತರ ಜಾತಕ ಸರಿಯಿಲ್ಲವೆಂದು ಮದುವೆ ಬೇಡವೆನ್ನುವಂತಿಲ್ಲ; ಹೈಕೋರ್ಟ್ ತೀರ್ಪು
ಗಂಡು-ಹೆಣ್ಣು ಲೈಂಗಿಕ ಸಂಬಂಧ ಹೊಂದಿದ ನಂತರ ಜಾತಕ ಸರಿಯಿಲ್ಲವೆಂಬ ಕಾರಣ ನೀಡಿ ಮದುವೆಯನ್ನು ನಿರಾಕರಿಸುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಇದೇ ಕಾರಣ ನೀಡಿ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ನಿರಾಕರಿಸಲಾಗಿದೆ. ಮಹಿಳೆಯೊಂದಿಗೆ ದೈಹಿಕ ಸಂಬಂಧವನ್ನು ಉಳಿಸಿಕೊಂಡು ನಂತರ ಜಾತಕ ಹೊಂದಾಣಿಕೆಯಿಲ್ಲದ ಕಾರಣ ಮದುವೆಯಿಂದ ಹಿಂದೆ ಸರಿದ ಆರೋಪ ಹೊತ್ತಿರುವ ವ್ಯಕ್ತಿಗೆ ಕೋರ್ಟ್ ಜಾಮೀನು ನಿರಾಕರಿಸಿದೆ.
- Sushma Chakre
- Updated on: Feb 24, 2026
- 8:58 pm
ದೆಹಲಿಯಲ್ಲಿ ಅತಿವೇಗದ ಕಾರು ಡಿಕ್ಕಿಯಾಗಿ 23 ವರ್ಷದ ವ್ಯಕ್ತಿ ಸಾವು; ಅಪಘಾತಕ್ಕೂ ಮೊದಲ ವಿಡಿಯೋ ವೈರಲ್
ದೆಹಲಿಯ ದ್ವಾರಕಾದಲ್ಲಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು 23 ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಈ ಅಪಘಾತಕ್ಕೂ ಮುನ್ನ ಅತಿವೇಗದಲ್ಲಿ ಚಲಿಸುತ್ತಿದ್ದ ಎಸ್ಯುವಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡ್ರೈವಿಂಗ್ ಲೈಸೆನ್ಸ್ ಇಲ್ಲದ ಅಪ್ರಾಪ್ತ ವಯಸ್ಕನಾದ ಎಸ್ಯುವಿ ಚಾಲಕನನ್ನು ಸ್ಥಳದಲ್ಲೇ ಬಂಧಿಸಿ ಬಾಲ ನ್ಯಾಯ ಮಂಡಳಿಯ (ಜೆಜೆಬಿ) ಮುಂದೆ ಹಾಜರುಪಡಿಸಲಾಗಿದೆ. ಆರಂಭದಲ್ಲಿ ಆತನನ್ನು ವೀಕ್ಷಣಾ ಗೃಹಕ್ಕೆ ಕಳುಹಿಸಲಾಯಿತು. ನಂತರ ಫೆಬ್ರವರಿ 10ರಂದು 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಮಧ್ಯಂತರ ಜಾಮೀನು ನೀಡಲಾಯಿತು.
- Sushma Chakre
- Updated on: Feb 18, 2026
- 8:32 pm
ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್
Bengaluru startup's patented AI product stolen at Delhi summit: ಎಐ ಇಂಪ್ಯಾಕ್ಟ್ ಸಮಿಟ್ನಲ್ಲಿ ಎಕ್ಸ್ಪೋಗೆಂದು ತೆಗೆದುಕೊಂಡು ಹೋಗಿದ್ದ ಎಐ ಸಾಧನವೊಂದು ಕಳ್ಳತನವಾದ ಘಟನೆ ನಡೆದಿದೆ. ಬೆಂಗಳೂರಿನ ನಿಯೋಸೇಪಿಯನ್ ಎನ್ನುವ ಕಂಪನಿಯ ಎಐ ದಿರಿಸು ಕಳ್ಳತನವಾಗಿದೆ. ಕಂಪನಿಯ ಸಂಸ್ಥಾಪಕ ಹಾಗು ಸಿಇಒ ಧನಂಜಯ್ ಯಾದವ್ ಈ ಘಟನೆಯನ್ನು ವಿವರಿಸಿ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ.
- Vijaya Sarathy SN
- Updated on: Feb 17, 2026
- 5:33 pm
ಯಾರನ್ನೂ ನಂಬಬೇಡಿ; ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ನಡೆಸದಂತೆ ಸುಪ್ರೀಂ ಕೋರ್ಟ್ ಸಲಹೆ
ಇತ್ತೀಚೆಗೆ ಮದುವೆಗೂ ಮುಂಚೆ ದೈಹಿಕ ಸಂಬಂಧ ಹೊಂದಿ, ಮೋಸ ಹೋಗುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಈ ಬಗ್ಗೆ ಪ್ರಕರಣವೊಂದರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು 'ಮದುವೆಗೆ ಮುನ್ನ ಯಾರನ್ನೂ ನಂಬಬೇಡಿ. ವಿವಾಹಪೂರ್ವ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಎಚ್ಚರ ವಹಿಸಿ' ಎಂದು ಎಚ್ಚರಿಕೆ ನೀಡಿದ್ದಾರೆ. ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ನಡೆಸಿದ ಪ್ರಕರಣವೊಂದರ ವಿಚಾರಣೆ ವೇಳೆ ಈ ಸಲಹೆ ನೀಡಿದ್ದಾರೆ.
- Sushma Chakre
- Updated on: Feb 16, 2026
- 9:52 pm
ಫೆ. 16ರಿಂದ ಎಐ ಇಂಪ್ಯಾಕ್ಟ್ ಸಮಿಟ್; ದಕ್ಷಿಣ ದೇಶಗಳ ಪ್ರಬಲ ಉಪಸ್ಥಿತಿ; 2 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ
AI Impact Summit 2026 at Delhi's Bharat Mandapam from Feb 16-20: ದೆಹಲಿಯ ಭಾರತ್ ಮಂಡಪಂನಲ್ಲಿ ಫೆಬ್ರುವರಿ 16ರಿಂದ 20ರವರೆಗೆ ಎಐ ಇಂಪ್ಯಾಕ್ಟ್ ಸಮಿಟ್ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವ ಈ ಸಭೆಯಲ್ಲಿ ಹಲವು ಜಾಗತಿಕ ನೇತಾರರು, ಟೆಕ್ ಉದ್ಯಮಿಗಳು ಪಾಲ್ಗೊಳ್ಳಬಹುದು. ಈವರೆಗೂ ಎರಡು ಲಕ್ಷಕ್ಕೂ ಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ.
- Vijaya Sarathy SN
- Updated on: Feb 15, 2026
- 11:31 am
ಕುಡಿದ ಮತ್ತಿನಲ್ಲಿ ಗೆಳೆಯ ಒಳಚರಂಡಿಯ ಮ್ಯಾನ್ಹೋಲ್ಗೆ ಬಿದ್ದಿದ್ದೇ ತಿಳಿಯಲಿಲ್ಲ!
ದೆಹಲಿಯ ರೋಹಿಣಿ ಪ್ರದೇಶದಲ್ಲಿ ಒಳಚರಂಡಿಯ ಮ್ಯಾನ್ಹೋಲ್ಗೆ ಬಿದ್ದು ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿ ಸ್ನೇಹಿತ ಮ್ಯಾನ್ಹೋಲ್ಗೆ ಬಿದ್ದಿದ್ದು ಆ ವ್ಯಕ್ತಿಯ ಗೆಳೆಯನಿಗೆ ಗೊತ್ತೇ ಆಗಿರಲಿಲ್ಲ. ಮರುದಿನ ಈ ವಿಷಯ ಎಲ್ಲೆಡೆ ಹರಡಿದಾಗಲೇ ಅವರಿಗೂ ಗೊತ್ತಾಗಿತ್ತು. ಕುಡಿದ ಮತ್ತಿನಲ್ಲಿದ್ದ ಇಬ್ಬರು ಸ್ನೇಹಿತರು ನಡೆಯುತ್ತಿದ್ದಾಗ ಬಿರ್ಜು ಮ್ಯಾನ್ಹೋಲ್ಗೆ ಬಿದ್ದಿದ್ದರು. ಮುಂದೆ ನಡೆಯುತ್ತಿದ್ದ ಗೆಳಯನಿಗೆ ಇದರ ಸುಳಿವೇ ಇರಲಿಲ್ಲ. ಆತ ತನ್ನ ಪಾಡಿಗೆ ತಾನು ಮನೆಗೆ ಹೋಗಿದ್ದ.
- Sushma Chakre
- Updated on: Feb 11, 2026
- 3:40 pm
ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ
ಸೋಮವಾರ ಮಧ್ಯಾಹ್ನ ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದ ಬಳಿ 35 ವರ್ಷದ ಉದ್ಯಮಿಯನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪ್ಲಾಸ್ಟಿಕ್ ವ್ಯಾಪಾರಿಯಾಗಿದ್ದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಬೈಕ್ಗಳಲ್ಲಿ ಬಂದ 3ರಿಂದ 4 ಜನರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಹೀಗಾಗಿ, ಈ ನಿಟ್ಟಿನಲ್ಲಿ ಪೊಲೀಸ್ ತನಿಖೆ ಶುರುವಾಗಿದೆ.
- Sushma Chakre
- Updated on: Feb 10, 2026
- 3:25 pm
ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು
ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ನಡುವಿನ ಗಲಭೆಯ ಕೇಂದ್ರಬಿಂದುವಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಆತ್ಮಚರಿತ್ರೆಯನ್ನು ಪಿಡಿಎಫ್ ರೂಪದಲ್ಲಿ ಎಲ್ಲೆಡೆ ಹಂಚುತ್ತಿರುವ ಬಗ್ಗೆ ದೆಹಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಪುಸ್ತಕದ ಸಾಫ್ಟ್ ಕಾಪಿಯನ್ನು ಆನ್ಲೈನ್ನಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದ ಬಳಿಕ ದೆಹಲಿ ಪೊಲೀಸ್ ಕೇಸ್ ದಾಖಲಿಸಿದ್ದಾರೆ.
- Sushma Chakre
- Updated on: Feb 9, 2026
- 9:05 pm
JNU: ವಿದ್ಯಾರ್ಥಿ ಒಕ್ಕೂಟದ ಇಡೀ ನಾಯಕತ್ವವನ್ನು ಅಮಾನತುಗೊಳಿಸಿದ ಜೆಎನ್ಯು ಆಡಳಿತ
JNU rusticates entire elected students union leadership: ಜೆಎನ್ಯು ಅಂಗಳದಲ್ಲಿ ದಾಂದಲೆ ನಡೆಸಿದ ಕಾರಣಕ್ಕೆ ವಿದ್ಯಾರ್ಥಿ ಒಕ್ಕೂಟದ ಚುನಾಯಿತ ನಾಲ್ವರು ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಸೇರಿ ಐವರನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಒಕ್ಕೂಟದ ಇಡೀ ನಾಯಕತ್ವವೇ ಅಮಾನತುಗೊಂಡಂತಾಗಿದೆ. ಕ್ಯಾಂಪಸ್ನಲ್ಲಿರುವ ಲೈಬ್ರರಿಯ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಸಿಸ್ಟಂ ಅಳವಡಿಸಿದ್ದನ್ನು ವಿರೋಧಿಸಿ ಪ್ರತಿಭಟಿಸುವ ವೇಳೆ ದಾಂದಲೆ ನಡೆಸಲಾಗಿತ್ತು.
- Vijaya Sarathy SN
- Updated on: Feb 8, 2026
- 7:46 pm