AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಮತ್ತಿನಲ್ಲಿ ಗೆಳೆಯ ಒಳಚರಂಡಿಯ ಮ್ಯಾನ್​ಹೋಲ್​ಗೆ ಬಿದ್ದಿದ್ದೇ ತಿಳಿಯಲಿಲ್ಲ!

ದೆಹಲಿಯ ರೋಹಿಣಿ ಪ್ರದೇಶದಲ್ಲಿ ಒಳಚರಂಡಿಯ ಮ್ಯಾನ್​ಹೋಲ್​ಗೆ ಬಿದ್ದು ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ, ಕುಡಿದ ಮತ್ತಿನಲ್ಲಿ ಸ್ನೇಹಿತ ಮ್ಯಾನ್​ಹೋಲ್​ಗೆ ಬಿದ್ದಿದ್ದು ಆ ವ್ಯಕ್ತಿಯ ಗೆಳೆಯನಿಗೆ ಗೊತ್ತೇ ಆಗಿರಲಿಲ್ಲ. ಮರುದಿನ ಈ ವಿಷಯ ಎಲ್ಲೆಡೆ ಹರಡಿದಾಗಲೇ ಅವರಿಗೂ ಗೊತ್ತಾಗಿತ್ತು. ಕುಡಿದ ಮತ್ತಿನಲ್ಲಿದ್ದ ಇಬ್ಬರು ಸ್ನೇಹಿತರು ನಡೆಯುತ್ತಿದ್ದಾಗ ಬಿರ್ಜು ಮ್ಯಾನ್​ಹೋಲ್​ಗೆ ಬಿದ್ದಿದ್ದರು. ಮುಂದೆ ನಡೆಯುತ್ತಿದ್ದ ಗೆಳಯನಿಗೆ ಇದರ ಸುಳಿವೇ ಇರಲಿಲ್ಲ. ಆತ ತನ್ನ ಪಾಡಿಗೆ ತಾನು ಮನೆಗೆ ಹೋಗಿದ್ದ.

ಕುಡಿದ ಮತ್ತಿನಲ್ಲಿ ಗೆಳೆಯ ಒಳಚರಂಡಿಯ ಮ್ಯಾನ್​ಹೋಲ್​ಗೆ ಬಿದ್ದಿದ್ದೇ ತಿಳಿಯಲಿಲ್ಲ!
Rohini Manhole Death
ಸುಷ್ಮಾ ಚಕ್ರೆ
|

Updated on: Feb 11, 2026 | 3:40 PM

Share

ನವದೆಹಲಿ, ಫೆಬ್ರವರಿ 11: ದೆಹಲಿಯ ರೋಹಿಣಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರೋಹಿಣಿ ಸೆಕ್ಟರ್ 32ರಲ್ಲಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗೆ (Manhole) ಬಿದ್ದು ಕಾರ್ಮಿಕ ಸಾವನ್ನಪ್ಪಿದ್ದಾರೆ. ಮೃತರನ್ನು ಬಿಹಾರದ ಸಮಸ್ತಿಪುರ ಜಿಲ್ಲೆಯ ನಿವಾಸಿ ಬಿರ್ಜು ಕುಮಾರ್ ರೈ ಎಂದು ಗುರುತಿಸಲಾಗಿದೆ. ಈ ಘಟನೆ ಸೋಮವಾರ ಸಂಜೆ ಬೇಗಂಪುರ ಪ್ರದೇಶದ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿ ಸಂಭವಿಸಿದೆ. ಬಿರ್ಜು ಕುಮಾರ್ ಸೋಮವಾರ ಸಂಜೆ ರೋಹಿಣಿ ಸೆಕ್ಟರ್ 32ರಲ್ಲಿ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದರು. ಆ ಸಮಯದಲ್ಲಿ ಬಿರ್ಜು ಆಕಸ್ಮಿಕವಾಗಿ ತೆರೆದ ಒಳಚರಂಡಿ ಮ್ಯಾನ್‌ಹೋಲ್‌ಗೆ ಬಿದ್ದರು. ಆದರೆ, ಅವರ ಮುಂದೆ ನಡೆಯುತ್ತಿದ್ದ ಅವರ ಸ್ನೇಹಿತನಿಗೆ ಈ ಘಟನೆಯ ಬಗ್ಗೆ ತಿಳಿದೇ ಇರಲಿಲ್ಲ. ಕುಡಿದ ನಶೆಯಲ್ಲಿದ್ದ ಆತ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗಿದ್ದರಿಂದ ಗೆಳೆಯ ಬಿದ್ದ ವಿಷಯವೇ ಗೊತ್ತಾಗಲಿಲ್ಲ. ಈ ವಿಷಯ ಮಂಗಳವಾರ ಅವರ ಗಮನಕ್ಕೆ ಬಂದಿತು.

ಬಿರ್ಜು ಒಳಚರಂಡಿಗೆ ಬಿದ್ದ ವಿಷಯವನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಘಟನೆಯ ಬಗ್ಗೆ ತಿಳಿಸಲಾಯಿತು. ಸುಮಾರು ಮೂರು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ನಂತರ ಬಿರ್ಜು ಅವರ ಶವವನ್ನು ಒಳಚರಂಡಿಯಿಂದ ಹೊರತೆಗೆಯಲಾಯಿತು. ಈ ಘಟನೆಯ ನಂತರ ಸರ್ಕಾರ ತೆರೆದ ಮ್ಯಾನ್‌ಹೋಲ್ ಅನ್ನು ಮುಚ್ಚಿ, ಹೆಚ್ಚಿನ ಅಪಘಾತಗಳನ್ನು ತಪ್ಪಿಸಲು ಪ್ರದೇಶದ ಸುತ್ತಲೂ ಕಲ್ಲುಗಳನ್ನು ಹಾಕಿತು.

ಇದನ್ನೂ ಓದಿ: ದೆಹಲಿ ಉದ್ಯಮಿಯ ಕೊಲೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡ

ದೆಹಲಿ ಪೊಲೀಸರ ಪ್ರಕಾರ, ಇಬ್ಬರೂ ವ್ಯಕ್ತಿಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಹಗಲಿನಲ್ಲಿಯೇ ಮದ್ಯ ಸೇವಿಸಿದ್ದರು. ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಆ ಸ್ಥಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಂದೆ ನಡೆಯುತ್ತಿದ್ದ ಕಾರ್ಮಿಕ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದರೂ ಮುಂದೆ ಇದ್ದವನಿಗೆ ಏನಾಯಿತು ಎಂದು ತಿಳಿದಿರಲಿಲ್ಲ. ಈ ವಿಷಯದಲ್ಲಿ ನಿರ್ಲಕ್ಷ್ಯಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ