AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಯವಿಟ್ಟು… ಭಾರತ ಮೂಲದ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ ಇಲಾನ್ ಮಸ್ಕ್; ಕ್ಯಾಲಿಫೋರ್ನಿಯಾ ಬೀಚ್​ವೊಂದರ ಕಥೆ ಇದು

Elon Musk apologises to Vinod Khosla: ಅಮೆರಿಕದ ಕ್ಯಾಲಿಫೋರ್ನಿಯಾದ ಮಾರ್ಟಿನ್ಸ್ ಬೀಚ್​ನಲ್ಲಿ ವಿನೋದ್ ಖೋಸ್ಲಾ ಪ್ರಾಪರ್ಟಿ ವಿವಾದ ಇದೆ. ಈ ಸಂಬಂಧ ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್​ನಿಂದ ಒಂದು ಇಮೇಜ್ ಪೋಸ್ಟ್ ಮಾಡಿದ್ದರು. ಇದರಲ್ಲಿ ಬೀಚ್​ನಲ್ಲಿ ಸಾಮಾನ್ಯರಿಗೆ ಪ್ರವೇಶ ಇಲ್ಲ ಎಂದು ವಿನೋದ್ ಖೋಸ್ಲಾ ಬೋರ್ಡ್ ಹಾಕಿದಂತಿತ್ತು ಈ ಫೋಟೋ. ಈ ವಿಚಾರವಾಗಿ ಇಲಾನ್ ಮಸ್ಕ್ ಅವರು ಖೋಸ್ಲಾ ಬಳಿ ಕ್ಷಮೆ ಯಾಚಿಸಿದ್ದಾರೆ.

ದಯವಿಟ್ಟು... ಭಾರತ ಮೂಲದ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ ಇಲಾನ್ ಮಸ್ಕ್; ಕ್ಯಾಲಿಫೋರ್ನಿಯಾ ಬೀಚ್​ವೊಂದರ ಕಥೆ ಇದು
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2024 | 4:45 PM

Share

ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 25: ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿರುವ ಇಲಾನ್ ಮಸ್ಕ್ ಅವರು ಭಾರತ ಮೂಲದ ಅಮೆರಿಕನ್ ಉದ್ಯಮಿ ವಿನೋದ್ ಖೋಸ್ಲಾ ಬಳಿ ಕ್ಷಮೆ ಯಾಚಿಸಿದ್ದಾರೆ. ಕ್ಯಾಲಿಫೋರ್ನಿಯಾ ಬೀಚ್​ನಲ್ಲಿ ಸಾಮಾನ್ಯ ಜನರ ಪ್ರವೇಶ ನಿರ್ಬಂಧಿಸಿ ವಿನೋದ್ ಖೋಸ್ಲಾ ಬೋರ್ಡ್ ಹಾಕಿದ್ದಾರೆಂದು ಬಿಂಬಿಸುವ ಫೋಟೋವೊಂದನ್ನು ಇಲಾನ್ ಮಸ್ಕ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಸ್ಪಂದಿಸಿದ ವಿನೋದ್ ಖೋಸ್ಲಾ, ಆ ಬೋರ್ಡ್ ತಾನು ಹಾಕಿಲ್ಲ. ಈ ತಪ್ಪಿಗೆ ತಾವು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಪ್ರತಿಯಾಗಿ ಮಸ್ಕ್ ಅವರು ಕ್ಷಮೆ ಕೋರಿದ್ದಾರೆ.

‘ಸುಳ್ಳುಗಳನ್ನು ಹರಡುತ್ತಿರುವ ನೀವು ನನ್ನ ಬಳಿ ಕ್ಷಮೆ ಯಾಚಿಸಬೇಕಾಗಿದೆ. ವಂಚನೀಯ ಎನಿಸುವ ಫೋಟೋ ಹಾಕಿದ್ದಕ್ಕೆ ನಿಮ್ಮ ಪೋಸ್ಟ್​ಗೆ ಕಮ್ಯೂನಿಟಿ ಕಮೆಂಟ್ ಅವಶ್ಯಕತೆ ಇದೆ. ಇಂಥ ಯಾವುದೇ ಸೈನ್ ಬೋರ್ಡ್ ಅನ್ನು ನಾನು ಹಾಕಿಲ್ಲ. ಎಐನಿಂದ ಜನರೇಟ್ ಆಗಿರುವ ಇಮೇಜ್ ಇದೆಂದು ಭಾವಿಸಿದ್ದೇನೆ. ನೀವೂ ಅದನ್ನು ಪರಿಶೀಲಿಸಬಹುದು,’ ಎಂದು ವಿನೋದ್ ಖೋಸ್ಲಾ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಊಟದ ಜೊತೆಗೆ ಉಪ್ಪಿನಕಾಯಿ ಇದ್ದಂತೆ; ಹೂಡಿಕೆದಾರರಿಗೆ 80:20 ಸೂತ್ರ ಕೊಟ್ಟ ರಾಧಿಕಾ ಗುಪ್ತ

‘ನೀವು ಪಬ್ಲಿಕ್ ಬೀಚ್​ನಲ್ಲಿ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿರುವ ಬಗ್ಗೆ ಒಂದು ಸೈನ್ಬೋರ್ಡ್ ಮಾಡಿದೆ. ಅದು ನಿಜಕ್ಕೂ ತಪ್ಪಾಯಿತು. ದಯವಿಟ್ಟು ಕ್ಷಮಿಸಿ’ ಎಂದು ಇಲಾನ್ ಮಸ್ಕ್ ಪ್ರತಿಕ್ರಿಯಿಸಿದರು. ಆದರೆ, ತಾವು ಈ ವಿಚಾರದಲ್ಲಿ ವಿನೋದ್ ಖೋಸ್ಲಾಗೆ ತಿವಿಯಬೇಕಿದ್ದ ಅಂಶವನ್ನು ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದು ಹೌದು.

‘ನೋ ಪ್ಲೆಬ್ಸ್ ಅಲೋಡ್… ಪ್ರಾಪರ್ಟಿ ಆಫ್ ವಿನೋದ್ ಖೋಸ್ಲಾ’ ಎಂದಿತ್ತು ಇಲಾನ್ ಮಸ್ಕ್ ಪೋಸ್ಟ್ ಮಾಡಿದ ಸೈನ್ ಬೋರ್ಡ್​ನಲ್ಲಿ. ಇಲ್ಲಿ ಪ್ಲೆಬ್ಸ್ ಎಂದರೆ ಸಾಮಾನ್ಯ ಜನರು.

ಏನಿದು ಕ್ಯಾಲಿಫೋರ್ನಿಯಾ ಬೀಚ್​ನಲ್ಲಿನ ಸೈನ್ ಬೋರ್ಡ್?

ಅಮೆರಿಕದ ಕ್ಯಾಲಿಫೋರ್ನಿಯಾದ ಮಾರ್ಟಿನ್ಸ್ ಬೀಚ್​ನಲ್ಲಿ ಇದ್ದ ಪಾರ್ಕಿಂಗ್ ಜಾಗವೊಂದನ್ನು ವಿನೋದ್ ಖೋಸ್ಲಾ 2008ರಲ್ಲಿ ಖರೀದಿಸಿದ್ದರು. ಬೀಚ್​ನಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ. ಆದರೆ, ವಿನೋದ್ ಖೋಸ್ಲಾ ತಾನು ಖರೀದಿಸಿದ ಪ್ಲಾಟ್​ಗೆ ಸಾರ್ವಜನಿಕ ಪ್ರವೇಶವನ್ನು ವಿರೋಧಿಸುತ್ತಿದ್ದಾರೆ. ಹದಿನಾರು ವರ್ಷಗಳಿಂದಲೂ ಅವರು ಮತ್ತು ರಾಜ್ಯ ಸರ್ಕಾರದ ಮಧ್ಯೆ ಈ ಬಗ್ಗೆ ವ್ಯಾಜ್ಯ ನಡೆಯುತ್ತಲೇ ಬಂದಿದೆ. ಇನ್ನೂ ಅದು ಇತ್ಯರ್ಥ ಆಗಿಲ್ಲ.

ಇಲಾನ್ ಮಸ್ಕ್ ವ್ಯಂಗ್ಯ ಮಾಡಿದ್ದು ಯಾಕೆ?

ವಿನೋದ್ ಖೋಸ್ಲಾ ಮತ್ತು ಇಲಾನ್ ಮಸ್ಕ್ ಮಧ್ಯೆ ಹಲವು ವಿಚಾರಗಳಲ್ಲಿ ಅಭಿಪ್ರಾಯಭೇದಗಳಿವೆ. ವಿನೋದ್ ಖೋಸ್ಲಾ ಡೆಮಾಕ್ರಾಟ್ ಪಕ್ಷದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಒಬಾಮ, ಕ್ಲಿಂಟನ್, ಬೈಡನ್ ಮತ್ತು ಈಗ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸುತ್ತಿದ್ದಾರೆ. ಇನ್ನೊಂದೆಡೆ, ಇಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್​ಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದ್ದಾರೆ.

ಇದನ್ನೂ ಓದಿ: ಆಲೂಗಡ್ಡೆಯಿಂದ ಎಥನಾಲ್ ಇಂಧನ; ಸಿಪಿಆರ್​ಐನಿಂದ ಸದ್ಯದಲ್ಲೇ ಪ್ರಾಯೋಗಿಕ ಘಟಕ

ರಾಜಕೀಯ ವಿಚಾರವೊಂದೇ ಅಲ್ಲ, ಅಮೆರಿಕಕ್ಕೆ ವಲಸಿಗರು ಬರುತ್ತಿರುವ ವಿಚಾರ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಯಾವ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು ಎಂಬಿತ್ಯಾದಿ ಕೆಲ ಪ್ರಮುಖ ಸಂಗತಿಗಳಲ್ಲಿ ಇಬ್ಬರ ಧೋರಣೆಗಳಲ್ಲಿ ವ್ಯತ್ಯಾಸಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ