AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದಪ್ಪಾ ದರ್ಪ..! ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರಾಕರಿಸಿದ ಮ್ಯಾನೇಜರ್; ಇಡೀ ತಂಡವನ್ನೇ ಲೇ ಆಫ್ ಮಾಡಿದ ಇಲಾನ್ ಮಸ್ಕ್

Elon Musk Fires whole supercharger team: ಇಲಾನ್ ಮಸ್ಕ್ ತಮ್ಮ ಮಾಲಕತ್ವದ ಟೆಸ್ಲಾ ಸಂಸ್ಥೆಯ ಸೂಪರ್​ಚಾರ್ಜರ್ ಟೀಮ್​ನ ಎಲ್ಲರನ್ನೂ ಏಕಾಏಕಿಯಾಗಿ ಲೇ ಆಫ್ ಮಾಡಿದ ಘಟನೆ ನಡೆದಿದೆ. ಸೂಪರ್​ಚಾರ್ಜರ್ ತಂಡದ ಮುಖ್ಯಸ್ಥೆ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರಾಕರಿಸಿದ ಕಾರಣಕ್ಕೆ ಇಲಾನ್ ಮಸ್ಕ್ ಇಂಥ ನಿರ್ಧಾರ ತೆಗೆದುಕೊಂಡಿದ್ದಾರೆ. ಏಪ್ರಿಲ್ 29ರಂದು ಈ ಬೆಳವಣಿಗೆ ಆಗಿದೆ. ಕೆಲ ದಿನಗಳ ಬಳಿಕ ಸೂಪರ್​ಚಾರ್ಜರ್ ತಂಡದ ಕೆಲವರನ್ನು ವಾಪಸ್ ಕೆಲಸಕ್ಕೆ ಸೇರಿಸಿಕೊಂಡರು ಎಂದು ಹೇಳಲಾಗುತ್ತಿದೆ.

ಇದಪ್ಪಾ ದರ್ಪ..! ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರಾಕರಿಸಿದ ಮ್ಯಾನೇಜರ್; ಇಡೀ ತಂಡವನ್ನೇ ಲೇ ಆಫ್ ಮಾಡಿದ ಇಲಾನ್ ಮಸ್ಕ್
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2024 | 4:54 PM

Share

ನ್ಯೂಯಾರ್ಕ್, ಮೇ 17: ತನ್ನ ಮೂಗಿನ ನೇರಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಲಾನ್ ಮಸ್ಕ್ (Elon Musk) ಯಾರ ಮುಲಾಜೂ ಕೂಡ ನೋಡುವವರ ಪೈಕಿ ಅಲ್ಲ. ಇಲಾನ್ ಮಸ್ಕ್ ಟೆಸ್ಲಾ ಕಂಪನಿಯ ಸೂಪರ್​ಚಾರ್ಜರ್ (Tesla Super charger) ತಂಡದ ಎಲ್ಲಾ ಸದಸ್ಯರನ್ನೂ ಫೈರ್ ಮಾಡಿದ್ದಾರೆ. ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕೆಂದು ಸೂಪರ್ ಚಾರ್ಜರ್ ಟೀಮ್​ನ ಮುಖ್ಯಸ್ಥೆಗೆ ಮಸ್ಕ್ ತಿಳಿಸಿದ್ದರಂತೆ. ಆ ಕೆಲಸ ಮಾಡಲು ಆಕೆ ನಿರಾಕರಿಸಿದ್ದಕ್ಕೆ ಇಡೀ ತಂಡವನ್ನೇ ಲೇ ಆಫ್ ಮಾಡಿದ್ದಾರೆ ಮಸ್ಕ್.

ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ಚಾರ್ಜಿಂಗ್ ಮಾಡುವ ಇನ್​ಫ್ರಾಸ್ಟ್ರಕ್ಚರ್ ನಿರ್ಮಾಣದಲ್ಲಿ ಈ ತಂಡದ ಶ್ರಮ ಬಹಳ ಇದೆ. ಆದರೂ ಕೂಡ ಇಡೀ ತಂಡವನ್ನು ಹೊರ ಹಾಕುವಂತಹ ನಿರ್ಧಾರ ಇಲಾನ್ ಮಸ್ಕ್ ಅವರಂಥವರು ಮಾತ್ರವೇ ತೆಗೆದುಕೊಳ್ಳಬಹುದು. ಏಪ್ರಿಲ್ 29ರಂದು ಇಲಾನ್ ಮಸ್ಕ್ ತಮ್ಮ ಸಿಬ್ಬಂದಿಗೆ ಇಮೇಲ್ ಬರೆದು, ಟೆಸ್ಲಾದ ಚಾರ್ಜಿಂಗ್ ಇನ್​ಫ್ರಾಸ್ಟ್ರಕ್ಚರ್ ನಿರ್ಮಿಸಿದ ಇಡೀ ತಂಡವನ್ನು ವಿಸರ್ಜಿಸುತ್ತಿರುವುದಾಗಿ ತಿಳಿಸಿದ್ದಾರೆ.

ಈಗ ಬಂದಿರುವ ವರದಿಗಳ ಪ್ರಕಾರ ಇಲಾನ್ ಮಸ್ಕ್ ಅವರು ಆ ತಂಡದ ಕೆಲ ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡು ಮರುನೇಮಕ ಮಾಡಿಕೊಂಡಿದ್ದಾರೆ ಎಂದು ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ದೊಡ್ಡ ಲೂಸರ್​..! ಭಾರತ ಬಿಟ್ಟು ಚೀನಾ ಹಿಡಿದುಕೊಂಡಿದ್ದಕ್ಕೆ ಇಲಾನ್ ಮಸ್ಕ್​ರನ್ನು ಟೀಕಿಸಿದ ಅಮೆರಿಕನ್ ಉದ್ಯಮಿ ವಿವೇಕ್ ವಾಧವ

ಮತ್ತಷ್ಟು ಲೇ ಆಫ್ ಮಾಡಲು ನಿರಾಕರಿಸಿದ ಮ್ಯಾನೇಜರ್

ಏಪ್ರಿಲ್ 28ರಂದು ಟೆಸ್ಲಾದ ಸೂಪರ್​ಚಾರ್ಜರ್ ಟೀಮ್​ನ ಮುಖ್ಯಸ್ಥೆ ರೆಬೆಕಾ ಟಿನುಚ್ಚಿ ಅವರನ್ನು ಇಲಾನ್ ಮಸ್ಕ್ ಭೇಟಿ ಮಾಡಿದ್ದರಂತೆ. ಒಂದಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಬೇಕೆಂದು ಅವರಿಗೆ ಮಸ್ಕ್ ಸೂಚಿಸಿದ್ದರು. ಈಗಾಗಲೇ ತಂಡದ ಶೇ. 15ರಿಂದ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಮತ್ತಷ್ಟು ಮಂದಿಯನ್ನು ತೆಗೆದುಹಾಕಲು ಆಗುವುದಿಲ್ಲ ಎಂದು ರೆಬೆಕಾ ಹೇಳಿದ್ದಾರೆ. ಇದಾಗಿ ಮರುದಿನವೇ ಇಲಾನ್ ಮಸ್ಕ್ ಏಕಾ ಏಕಿಯಾಗಿ ಇಡೀ ಸೂಪರ್​ಚಾರ್ಜರ್ ಟೀಮ್ ಅನ್ನೇ ವಿಸರ್ಜಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಲೇ ಆಫ್ ಮಾಡುವುದರಲ್ಲಿ ಇಲಾನ್ ಮಸ್ಕ್ ಹೆಚ್ಚು ಕುಖ್ಯಾತರಾಗಿದ್ದಾರೆ. ಟ್ವಿಟ್ಟರ್ ಸಂಸ್ಥೆಯಲ್ಲಿ ಶೇ. 70ಕ್ಕೂ ಹೆಚ್ಚು ಉದ್ಯೋಗಗಳನ್ನು ಅವರು ಕೆಲಸದಿಂದ ತೆಗೆದುಹಾಕಿದ್ದರು. ಏಳು ಸಾವಿರಕ್ಕೂ ಹೆಚ್ಚು ಇದ್ದ ಉದ್ಯೋಗಿಗಳ ಸಂಖ್ಯೆ ಎರಡು ಸಾವಿರದ ಒಳಗೆ ಇಳಿದುಹೋಗಿತ್ತು.

ಇದನ್ನೂ ಓದಿ: ಹಕ್ಕಿ ಲೋಗೊ ಹೋಯ್ತು, ಈಗ ಟ್ವಿಟ್ಟರ್ ಯುಆರ್​ಎಲ್ ಕೂಡ ಎಕ್ಸ್ ಆಗಿ ಬದಲಾಯ್ತು

ಹತ್ತಿರಹತ್ತಿರ ಒಂದೂವರೆ ಲಕ್ಷ ಉದ್ಯೋಗಿಗಳಿರುವ ಟೆಸ್ಲಾದಲ್ಲೂ ಅವರು ಒಂದು ಹಂತದಲ್ಲಿ ಶೆ. 20ರಷ್ಟು ಲೇ ಆಫ್ ಮಾಡಲು ಯೋಜಿಸಿದ್ದರು. ಅಂತಿಮವಾಗಿ ಶೇ. 10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಪೊಲೀಸರು
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
34 ರನ್​ಗಳಿದ್ದಾಗ ಕ್ಯಾಚ್ ಬಿಟ್ಟ ಸಿರಾಜ್; 93 ರನ್ ಚಚ್ಚಿದ ಅಲೆನ್
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ