AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Elon Musk vs Sam Altman: ನನ್ನ ನೀನು ‘ಕೊಳ್ಳ’ಲಾರೆ… ಎಕ್ಸ್ ಮ್ಯಾನ್ vs ಆಲ್ಟ್​ಮ್ಯಾನ್ ‘ಓಪನ್’ ವಾರ್; ಎಕ್ಸ್ ಹಿಂದಿಕ್ಕಿದ ಚ್ಯಾಟ್​ಜಿಪಿಟಿ

X vs OpenAI: ಓಪನ್ಎಐ ಸಂಸ್ಥೆಯನ್ನು 97.4 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ಇಲಾನ್ ಮಸ್ಕ್ ನೇತೃತ್ವದಲ್ಲಿ ಹೂಡಿಕೆದಾರರ ಗುಂಪೊಂದು ಓಪನ್ ಆಫರ್ ಕೊಟ್ಟಿದೆ. ಈ ಆಫರ್ ಅನ್ನು ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ತಣ್ಣಗೆ ತಿರಸ್ಕರಿಸಿದ್ದಾರೆ. ಬದಲಾಗಿ, ತಾನೆಯೇ ಟ್ವಿಟ್ಟರ್ (ಎಕ್ಸ್) ಅನ್ನು 9.74 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ಪ್ರತಿ ಆಫರ್ ನೀಡಿದ್ದಾರೆ. ಇದಕ್ಕೆ ಇಲಾನ್ಸ್ ಮಸ್ಕ್ ‘ಸ್ವಿಂಡ್ಲರ್’ ಎಂದು ಪ್ರತಿಕ್ರಿಯಿಸಿದ್ದಾರೆ.

Elon Musk vs Sam Altman: ನನ್ನ ನೀನು ‘ಕೊಳ್ಳ’ಲಾರೆ... ಎಕ್ಸ್ ಮ್ಯಾನ್ vs ಆಲ್ಟ್​ಮ್ಯಾನ್ ‘ಓಪನ್’ ವಾರ್; ಎಕ್ಸ್ ಹಿಂದಿಕ್ಕಿದ ಚ್ಯಾಟ್​ಜಿಪಿಟಿ
ಇಲಾನ್ ಮಸ್ಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 11, 2025 | 1:14 PM

Share

ವಾಷಿಂಗ್ಟನ್, ಫೆಬ್ರುವರಿ 11: ಓಪನ್​ಎಐನಿಂದ ಚ್ಯಾಟ್​ಜಿಪಿಟಿ ಆರಂಭವಾದಾಗಿನಿಂದ ಇಲಾನ್ ಮಸ್ಕ್ ಮತ್ತು ಸ್ಯಾಮ್ ಆಲ್ಟ್​ಮ್ಯಾನ್ ನಡುವಿನ ಆನ್ಲೈನ್ ವಾಗ್ಯುದ್ಧ ಹೆಸರುವಾಸಿಯಾಗಿದೆ. ಇಲಾನ್ ಮಸ್ಕ್ ಸಾಕಷ್ಟು ಬಾರಿ ಓಪನ್ ಎಐ ಕಂಪನಿ ಹಾಗೂ ಅದರ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ವಿರುದ್ಧ ಕಟುವಾಗಿ ಮಾತನಾಡಿದ್ದಿದೆ. ಇದೀಗ ಇಲಾನ್ ಮಸ್ಕ್ ನೇತೃತ್ವದಲ್ಲಿ ಹೂಡಿಕೆದಾರರ ಗುಂಪೊದು ಓಪನ್​ಎಐ ಅನ್ನು 97.4 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ಆಫರ್ ಮಾಡಿರುವುದು ತಿಳಿದುಬಂದಿದೆ.

ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಅವರು ಎಕ್ಸ್​ನಲ್ಲಿ ಈ ಬಗ್ಗೆ ನೇರವಾಗಿ ಸ್ಪಂದಿಸಿದ್ದಾರೆ. ತಾವು ಬಯಸಿದರೆ ಟ್ವಿಟ್ಟರ್ ಅನ್ನು 9.74 ಬಿಲಿಯನ್ ಡಾಲರ್​ಗೆ ಖರೀದಿಸುವುದಾಗಿ ನೇರವಾಗಿ ಇಲಾನ್ ಮಸ್ಕ್ ಅವರಿಗೆ ಸ್ಯಾಮ್ ಸವಾಲು ಹಾಕಿದ್ದಾರೆ. ಇದಕ್ಕೆ ಇಲಾನ್ ಮಸ್ಕ್ ಅಷ್ಟೇ ಖಾರದ ಪ್ರತಿಕ್ರಿಯೆ ನೀಡಿದ್ದಾರೆ. ‘ಸ್ವಿಂಡ್ಲರ್’ ಎಂದು ಏಕಪದದಲ್ಲಿ ಉತ್ತರ ಕೊಟ್ಟಿದ್ದಾರೆ. ಇಲ್ಲಿ ಸ್ವಿಂಡ್ಲರ್ ಎಂದರೆ ವಂಚಕ ಎಂದರ್ಥ.

ಇದನ್ನೂ ಓದಿ: ಭಾರತದ ಆಧಾರ್ ಪ್ರಾಜೆಕ್ಟ್ ಟ್ರೋಲ್ ಮಾಡಿದ ಹಾಟ್​ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ

ಸ್ಯಾಮ್ ಆಲ್ಟ್​ಮ್ಯಾನ್​ರನ್ನು ಮಸ್ಕ್ ವಂಚಕ ಅಂದಿದ್ಯಾಕೆ?

ಓಪನ್​ಎಐ ಸಂಸ್ಥೆಗೆ ಮೂಲನಿಧಿಗಳನ್ನು ಕೊಟ್ಟವರಲ್ಲಿ, ಅಂದರೆ ಸೀಡಿಂಗ್ ಫಂಡ್ ನೀಡಿದವರಲ್ಲಿ ಇಲಾನ್ ಮಸ್ಕ್ ಕೂಡ ಒಬ್ಬರು. ಸೀಡಿಂಗ್ ಫಂಡ್ ಎಂದರೆ ಒಂದು ಸಂಸ್ಥೆಯ ಆರಂಭಿಕ ಹಂತದಲ್ಲಿ ನೀಡಲಾಗುವ ಬಂಡವಾಳ. ಇಲಾನ್ ಮಸ್ಕ್ ಹೇಳುವ ಪ್ರಕಾರ ಓಪನ್​ಎಐ ಒಂದು ನಾನ್ ಪ್ರಾಫಿಟ್ ಸಂಸ್ಥೆ. ಅಂದರೆ ಲಾಭಾಪೇಕ್ಷೆ ಇಲ್ಲದ ಸಂಸ್ಥೆ. ಆದರೆ, ಚ್ಯಾಟ್​ಜಿಪಿಟಿ ಇತ್ಯಾದಿ ಹೊರತಂದು ಅದು ಕಮರ್ಷಿಯಲ್ ಆಗಿದೆ. ಎಐ ಅನ್ನು ಮನುಕುಲದ ಒಳಿತನ್ನು ಬಿಟ್ಟು ಲಾಭಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಇಲಾನ್ ಮಸ್ಕ್ ಹಾಗು ಕೆಲವರು ಆರೋಪಿಸುತ್ತಿದ್ದಾರೆ.

ಓಪನ್​ಎಐ ಸ್ಥಾಪನೆಯ ಮೂಲ ಉದ್ದೇಶದ ಹಾದಿ ಬಿಟ್ಟು ಹೋಗಲಾಗಿದೆ ಎನ್ನುವ ಕಾರಣಕ್ಕೆ ಸ್ಯಾಮ್ ಆಲ್ಟ್​​ಮ್ಯಾನ್ ಅವರನ್ನು ಇಲಾನ್ ಮಸ್ಕ್ ಸ್ವಿಂಡ್ಲರ್ ಅಥವಾ ವಂಚಕ ಎಂದು ಕರೆದಿರಬಹುದು.

ಇದನ್ನೂ ಓದಿ: India AI: ಪ್ಯಾರಿಸ್​ನಲ್ಲಿ ಎಐ ಆ್ಯಕ್ಷನ್ ಸಮಿಟ್ 2025: ಭಾರತದಿಂದ ‘ಅಭಿವೃದ್ಧಿಗೆ ದತ್ತಾಂಶ’

ಎಕ್ಸ್ ಅನ್ನು ಹಿಂದಿಕ್ಕಿದ ಚ್ಯಾಟ್​ಜಿಪಿಟಿ

ಇದೇ ವೇಳೆ, ವಿಶ್ವದ ಟಾಪ್ ವೆಬ್​​ಸೈಟ್​ಗಳ ಪಟ್ಟಿಯಲ್ಲಿ ಎಕ್ಸ್ ಅನ್ನು ಚ್ಯಾಟ್​ಜಿಪಿಟಿ ಹಿಂದಿಕ್ಕಿದೆ. ಚ್ಯಾಟ್​ಜಿಪಿಟಿ 6ನೇ ಸ್ಥಾನಕ್ಕೆ ಏರಿದೆ. ಎಕ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ಸಿಮಿಲರ್ ವೆಬ್ ಖಾತೆಯಲ್ಲಿ ಟಾಪ್-10 ವೆಬ್​ಸೈಟ್​ಗಳ ಪಟ್ಟಿ ಇದ್ದ ಪೋಸ್ಟ್​ವೊಂದನ್ನು ಸ್ಯಾಮ್ ಆಲ್ಟ್​​ಮ್ಯಾನ್ ಹಂಚಿಕೊಂಡಿದ್ದಾರೆ.

ಈ ಪಟ್ಟಿಯಲ್ಲಿ ಗೂಗಲ್ ಅಗ್ರಸ್ಥಾನದಲ್ಲಿದೆ. ಶೇ. 29.21ರಷ್ಟು ವೆಬ್ ಟ್ರಾಫಿಕ್ ಗೂಗಲ್​ಗೆ ಹೋಗುತ್ತಿದೆ. ಗೂಗಲ್ ಮತ್ತು ಯೂಟ್ಯೂಬ್ ಸೇರಿಸಿದರೆ ಅರ್ಧದಷ್ಟು ಟ್ರಾಫಿಕ್​ನ ಪಾಲು ಅವುಗಳಿಗೆ ಸಿಗುತ್ತದೆ. ಚ್ಯಾಟ್​ಜಿಪಿಟಿಗೆ ಸಿಗುತ್ತಿರುವ ಟ್ರಾಫಿಕ್ ಶೇ. 2.44 ಇದೆ. ಎಕ್ಸ್ ಶೇ. 1.92ರಷ್ಟು ಟ್ರಾಫಿಕ್ ಪಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ