AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?

Ace investor Shankar Sharma's take on Stock Market: ಭಾರತದ ಕಾರ್ಪೊರೇಟ್ ವಲಯದಲ್ಲಿ ಮರ್ಚಂಟ್ ಬ್ಯಾಂಕ್​ಗಳು ವಿಲನ್​ಗಳಾಗಿವೆಯಾ? ಹೂಡಿಕೆದಾರ ಶಂಕರ್ ಶರ್ಮಾ ಪ್ರಕಾರ ಮರ್ಚಂಟ್ ಬ್ಯಾಂಕರ್​ಗಳು ಕಂಪನಿಗಳನ್ನು ಅನಗತ್ಯವಾಗಿ ಬಂಡವಾಳ ಹೆಚ್ಚಿಸಲು ಒತ್ತಡ ಹಾಕುತ್ತಿವೆ. ಈ ಬ್ಯಾಂಕ್​ಗಳ ತಾಳಕ್ಕೆ ಈ ಮೂರ್ಖ ಪ್ರೊಮೋಟರ್ಸ್ ಕುಣಿಯುತ್ತಿದ್ದಾರೆ. ಇದರಿಂದ ಕಂಪನಿಯ ಬ್ಯಾಲನ್ಸ್ ಶೀಟ್​ಗೆ ಹೊಡೆತ ಬೀಳುತ್ತದೆ. ಈ ರೀತಿ ಅನಗತ್ಯ ಬಂಡವಾಳ ಪೂರಣ ಪಡೆದ ಕಂಪನಿಗಳ ಷೇರು ಶೇ. 90ರಷ್ಟು ಕುಸಿಯುತ್ತವೆ ಎಂದು ಶಂಕರ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ಈ ಷೇರುಗಳು ಶೇ. 90ರಷ್ಟು ಬೀಳುತ್ತವೆ, ಹುಷಾರ್: ಹೂಡಿಕೆದಾರ ಶಂಕರ್ ಶರ್ಮಾ ಎಚ್ಚರಿಸಿದ ಸ್ಟಾಕ್ಸ್ ಯಾವುವು?
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 07, 2024 | 4:29 PM

Share

ನವದೆಹಲಿ, ಮೇ 7: ಭಾರತ ಷೇರು ಮಾರುಕಟ್ಟೆ (Share Market) ಕಳೆದ ಎರಡು ದಿನಗಳಿಂದ ಕುಸಿತ ಕಂಡಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದು ಎಫ್​ಐಐಗಳು, ಅಥವಾ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (FII) ಭಾರತೀಯ ಷೇರು ಮಾರುಕಟ್ಟೆಯಿಂದ ನಿರ್ಗಮಿಸುತ್ತಿರುವುದು. ಮೂರು ಟ್ರೇಡಿಂಗ್ ಸೆಷನ್​ಗಳಲ್ಲಿ ಎಫ್​​ಐಐಗಳು ಹೆಚ್ಚೂಕಡಿಮೆ ಒಂದು ಸಾವಿರ ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿವೆ. ಇದು ಸ್ಥಳೀಯ ರೀಟೇಲ್ ಹೂಡಿಕೆದಾರರನ್ನು ಗೊಂದಲವಾಗಿಸಿರಬಹುದು. ಹಾಗೆಯೇ, ಚುನಾವಣಾ ಮುಂಚಿನ ಗೊಂದಲಮಯ ವಾತಾವರಣ ಕೂಡ ಷೇರು ಕುಸಿಯುವಂತೆ ಮಾಡಬಹುದು. ಇದಲ್ಲೆದರ ಮಧ್ಯೆ ಕೆಲ ತಜ್ಞರು ಷೇರು ಮಾರುಕಟ್ಟೆಯಲ್ಲಿ ಭಾರೀ ವ್ಯತ್ಯಯ ಕಾಣುವ ದಿನಗಳು ಬರಲವೆ ಎಂದು ಎಚ್ಚರಿಸಿದ್ದಾರೆ.

ಶಂಕರ್ ಶರ್ಮಾ ಎಂಬ ಹೂಡಿಕೆದಾರರ ಪ್ರಕಾರ ಭಾರತೀಯ ಕಂಪನಿಗಳು ಅನಗತ್ಯವಾಗಿ ಬಂವಾಳ ತುಂಬುತ್ತಿವೆ. ಇದು ಅಪಾಯವನ್ನು ಮೈಮೇಲೆ ಎಳೆದಂತೆ ಎಂದಿದ್ದಾರೆ. ಈ ಬೆಳವಣಿಗೆಗೆ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್​ಗಳ ಸ್ವಾರ್ಥತೆ ಕಾರಣ ಎಂದು ಅವರು ದೂಷಿಸಿದ್ದಾರೆ.

ಇದನ್ನೂ ಓದಿ: ಎಸ್​ಬಿಐ ಕಾಂಟ್ರಾ ಫಂಡ್; ಒಂದು ಲಕ್ಷಕ್ಕೆ 84 ಲಕ್ಷ ಲಾಭ; ಕಳೆದ ಒಂದು ವರ್ಷದಲ್ಲೇ ಶೇ. 47ರಷ್ಟು ಬೆಳವಣಿಗೆ

‘ಭಾರತೀಯ ಷೇರು ಮಾರುಕಟ್ಟೆಗೆ ಈ ಸ್ವಾರ್ಥ ಮರ್ಚಂಟ್ ಬ್ಯಾಂಕರ್ಸ್ ಮತ್ತು ಆಪರೇಟರ್ಸ್ ಬಹಳ ದೊಡ್ಡ ಅಪಾಯ ಒಡ್ಡುತ್ತಿದ್ದಾರೆ. ಹೆಚ್ಚುವರಿ ಬಂಡವಾಳ ತರಲು ಈ ಮೂರ್ಖ ಪ್ರೊಮೋಟರ್ಸ್​ಗೆ (ಕಂಪನಿ ಮಾಲೀಕರು) ಉತ್ತೇಜಿಸುತ್ತಿದ್ದಾರೆ. ಇದರಿಂದ ಈ ಕಂಪನಿಗಳ ಬ್ಯಾಲನ್ಸ್ ಶೀಟ್​ಗೆ ಭಾರೀ ಹೊಡೆತ ಬೀಳುತ್ತದೆ’ ಎಂದು ಶಂಕರ್ ಶರ್ಮಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಮುಂದಿನ ಬೇರ್ ಮಾರ್ಕೆಟ್​ನಲ್ಲಿ (ಷೇರು ಕುಸಿತದ ಸ್ಥಿತಿ) ಇಂಥ ಕಂಪನಿಗಳ ಷೇರುಬೆಲೆ ಶೇ. 90ರಷ್ಟು ಕುಸಿಯಬಹುದು ಎಂದೂ ಶಂಕರ್ ಶರ್ಮಾ ಎಚ್ಚರಿಸಿದ್ದಾರೆ. ಇಲ್ಲಿ ಬೇರೆ ಮಾರ್ಕೆಟ್ ಎಂದರೆ ಯಾವುದಾದರೂ ಷೇರು ಸೂಚ್ಯಂಕ ತನ್ನ ಗರಿಷ್ಠ ಮಟ್ಟದಿಂದ ಶೇ. 20ಕ್ಕಿಂತ ಹೆಚ್ಚು ಕುಸಿತ ಕಾಣುವುದು.

ಇದನ್ನೂ ಓದಿ: ರಿಟೈರ್ಮೆಂಟ್ ಪ್ಲಾನಿಂಗ್: ಈ ಮೂರು ವಿಧದ ಹಣಕಾಸು ವ್ಯವಸ್ಥೆ ನಿಮ್ಮದಿರಲಿ

ಯಾವುವು ಈ ಮರ್ಚಂಟ್ ಬ್ಯಾಂಕರ್ಸ್?

ಮರ್ಚಂಟ್ ಬ್ಯಾಂಕರ್ ಎಂಬುದು ಒಂದು ಕಂಪನಿಗೆ ಸಾಲದ ವ್ಯವಸ್ಥೆ ಸಿಗಲು ಸಹಾಯ ಮಾಡುವ ಹಣಕಾಸು ಮಧ್ಯವರ್ತಿ ಸಂಸ್ಥೆಯಾಗಿರುತ್ತದೆ. ಬಂಡವಾಳ ಎತ್ತುವುದು, ಹೂಡಿಕೆ ಸಂಗ್ರಹಿಸುವುದು ಇತ್ಯಾದಿ ಕಾರ್ಯಗಳಲ್ಲಿ ಸಹಾಯವಾಗುತ್ತವೆ. ಜೆಪಿ ಮಾರ್ಗನ್ ಚೇಸ್, ಗೋಲ್ಡ್​ಮ್ಯಾನ್ ಸ್ಯಾಕ್ಸ್, ಸಿಟಿ ಗ್ರೂಪ್ ಇತ್ಯಾದಿ ಸಂಸ್ಥೆಗಳು ಪ್ರಮುಖ ಮರ್ಚಂಟ್ ಬ್ಯಾಂಕ್​ಗಳಾಗಿವೆ. ಅವೆಂಡಸ್ ಕ್ಯಾಪಿಟಲ್, ಕೋಟಲ್ ಮಹೀಂದ್ರ ಕ್ಯಾಪಿಟಲ್, ಎಡಲ್​ವೇಸ್ ಫೈನಾನ್ಷಿಯಲ್ ಸರ್ವಿಸಸ್ ಇತ್ಯಾದಿ ಮರ್ಚಂಟ್ ಬ್ಯಾಂಕ್​ಗಳೂ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Tue, 7 May 24

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು