AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jack Dorsey: ಎಲಾನ್​ ಮಸ್ಕ್​ ಖರೀದಿಸಿದ್ದಕ್ಕೆ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆಯಿಂದ ಬಹುಪರಾಕ್

ಎಲಾನ್ ಮಸ್ಕ್​ರಿಂದ ಟ್ವಿಟ್ಟರ್ ಇಂಕ್ ಖರೀದಿ ಆದ ಮೇಲೆ ಮಾಜಿ ಸಿಇಒ ಜಾಕ್ ಡೋರ್ಸೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಂಪೆನಿಯ ಬೆಳವಣಿಗೆಗೆ ಮಸ್ಕ್ ಒಬ್ಬರೇ ಪರಿಹಾರ ಎಂದಿದ್ದಾರೆ.

Jack Dorsey: ಎಲಾನ್​ ಮಸ್ಕ್​ ಖರೀದಿಸಿದ್ದಕ್ಕೆ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆಯಿಂದ ಬಹುಪರಾಕ್
ಜಾಕ್ ಡೋರ್ಸೆ (ಸಂಗ್ರಹ ಚಿತ್ರ)
TV9 Web
| Edited By: |

Updated on: Apr 26, 2022 | 11:14 AM

Share

ಎಲಾನ್ ಮಸ್ಕ್ ಅವರು ಟ್ವಿಟ್ಟರ್ (Twitter) ಅನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಸೋಮವಾರ ಒಪ್ಪಂದವನ್ನು ಘೋಷಿಸಲಾಗಿದೆ. ಈ ಸ್ವಾಧೀನ ಪ್ರಕ್ರಿಯೆಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಟ್ವಿಟ್ಟರ್​ನ ಮಾಜಿ ಸಿಇಒ ಜಾಕ್ ಡೋರ್ಸೆ ಅವರು ಈ ಖರೀದಿಗೆ ಪೂರ್ಣ ಹೃದಯದ ಅನುಮೋದನೆ ನೀಡಿದ್ದಾರೆ. ಡೋರ್ಸೆ ಅವರು ಮಸ್ಕ್ ಒಪ್ಪಂದವನ್ನು ಅನುಮೋದಿಸಿದ ಟ್ವೀಟ್‌ಗಳ ಸರಣಿಯಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ‘ವಾಲ್ ಸ್ಟ್ರೀಟ್‌ನಿಂದ ಅದನ್ನು ಹಿಂತೆಗೆದುಕೊಳ್ಳುವುದು’ ಸರಿಯಾದ ಮೊದಲ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ. ತಿಳಿದಿಲ್ಲದವರಿಗೆ, ಮಸ್ಕ್ ಕಂಪೆನಿಯನ್ನು ಖಾಸಗಿಯಾಗಿ ತೆಗೆದುಕೊಳ್ಳಲು ಉದ್ದೇಶಿಸಿದ್ದಾರೆ. ಹಾಗಂದರೆ ಅದು ಸಾರ್ವಜನಿಕವಾಗಿ ಲಿಸ್ಟ್ ಮಾಡುವುದಿಲ್ಲ.

ಡೋರ್ಸೆ ಅವರು ಇನ್ನೂ ಮುಂದುವರಿದು, “ತಾತ್ವಿಕವಾಗಿ, ಯಾರಾದರೂ ಟ್ವಿಟ್ಟರ್ ಅನ್ನು ಹೊಂದಿರಬೇಕು ಅಥವಾ ಚಲಾಯಿಸಬೇಕು ಎಂದು ನಾನು ನಂಬುವುದಿಲ್ಲ. ಇದು ಪ್ರೋಟೋಕಾಲ್ ಮಟ್ಟದಲ್ಲಿ ಸಾರ್ವಜನಿಕ ಒಳಿತನ್ನು ಬಯಸುತ್ತದೆ, ಕಂಪೆನಿಯಲ್ಲ. ಆದರೆ ಇದು ಕಂಪೆನಿಯ ಸಮಸ್ಯೆಯನ್ನು ಪರಿಹರಿಸುವುದು, ಎಲಾನ್ ಮಸ್ಕ್ ನಾನು ನಂಬುವ ಏಕೈಕ ಪರಿಹಾರ. ಪ್ರಜ್ಞೆಯ ಬೆಳಕನ್ನು ವಿಸ್ತರಿಸುವ ಅವರ ಉದ್ದೇಶವನ್ನು ನಾನು ನಂಬುತ್ತೇನೆ”.

“ಗರಿಷ್ಠ ವಿಶ್ವಾಸಾರ್ಹ ಮತ್ತು ವಿಶಾಲವಾಗಿ ಒಳಗೊಳ್ಳುವ’ ವೇದಿಕೆಯನ್ನು ರಚಿಸುವ ಎಲಾನ್‌ನ ಗುರಿ ಸರಿಯಾದದ್ದು,” ಎಂದು ಅವರು ಹೇಳಿದ್ದಾರೆ. ಪರಾಗ್ ಅಗರವಾಲ್ ಅವರನ್ನು ಸಿಇಒ ಆಗಿ ಆಯ್ಕೆ ಮಾಡಲು ಸಹ ಇದೇ ಕಾರಣ. ಅವರು ಕೂಡ ಅದೇ ಗುರಿಯನ್ನು ಹಂಚಿಕೊಂಡಿದ್ದಾರೆ ಎಂದು ಡೋರ್ಸೆ ಹೇಳಿದ್ದಾರೆ.

“ಕಂಪೆನಿಯನ್ನು ಅಸಾಧ್ಯವಾದ ಪರಿಸ್ಥಿತಿಯಿಂದ ಹೊರತಂದಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು. ಇದು ಸರಿಯಾದ ಮಾರ್ಗವಾಗಿದೆ. ಅದನ್ನು ನನ್ನ ಹೃದಯದಿಂದ ನಂಬುತ್ತೇನೆ,” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Parag Agarwal: ಟ್ವಿಟ್ಟರ್ ಸಿಇಒ ಪರಾಗ್ ಅಗರ್​ವಾಲ್​ರನ್ನು ಕೆಲಸದಿಂದ ತೆಗೆದಲ್ಲಿ 300 ಕೋಟಿ ರೂ.ಗೂ ಹೆಚ್ಚು ಪರಿಹಾರ

ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ಸಾರಿಗೆ ನೌಕರರ ವೇತನ ಪರಿಷ್ಕರಣೆ ಬಗ್ಗೆ ರಾಮಲಿಂಗಾರೆಡ್ಡಿ ಹೇಳಿದ್ದಿಷ್ಟು
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ದಿ ರೈಸ್ ಆಫ್ ಅಶೋಕ: ವೇದಿಕೆಯಲ್ಲಿ ಭಾವುಕವಾಗಿ ಮಾತನಾಡಿದ ಸತೀಶ್ ನೀನಾಸಂ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಸಿಎಂ ಬದಲಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಸ್ಫೋಟಕ ಭವಿಷ್ಯ
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಎಐ ಶೃಂಗಸಭೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಎಂಜಾಯ್ ಮಾಡಿದ ಜಾಗತಿಕ ನಾಯಕರು
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ