Sign In

By signing in or creating an account, you agree with Associated Broadcasting Company's Terms & Conditions and Privacy Policy.

GAIL: ಗೇಲ್​ನಿಂದ ಪ್ರತಿ ಷೇರಿಗೆ ರೂ. 4ರ ಮಧ್ಯಂತರ ಲಾಭಾಂಶ ಘೋಷಣೆ

ಗೇಲ್ ಇಂಡಿಯಾ ಮಧ್ಯಂತರ ಲಾಭಾಂಶವಾಗಿ ರೂ. 4 ಅನ್ನು ಡಿಸೆಂಬರ್ 23ನೇ ತಾರೀಕಿನಂದು ಘೋಷಣೆ ಮಾಡಿದೆ. ರೆಕಾರ್ಡ್ ದಿನಾಂಕ ಮತ್ತಿತರ ವಿವರ ಇಲ್ಲಿದೆ.

GAIL: ಗೇಲ್​ನಿಂದ ಪ್ರತಿ ಷೇರಿಗೆ ರೂ. 4ರ ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 23, 2021 | 3:05 PM

ಹಣಕಾಸು ವರ್ಷ 2021-22ಕ್ಕಾಗಿ ಗೇಲ್ (ಇಂಡಿಯಾ) ಲಿಮಿಟೆಡ್ ಗುರುವಾರ ತನ್ನ ಸಭೆಯಲ್ಲಿ ಮಂಡಳಿಯು ಪ್ರತಿ ಷೇರಿಗೆ 4 ರೂಪಾಯಿಯ ಮಧ್ಯಂತರ ಲಾಭಾಂಶವನ್ನು (Interim dividend) ಪಾವತಿಸಲು ಅನುಮೋದಿಸಿದೆ ಎಂದು ಘೋಷಿಸಿದೆ. ಮಧ್ಯಂತರ ಲಾಭಾಂಶಕ್ಕೆ ‘ರೆಕಾರ್ಡ್ ದಿನಾಂಕ’ ಅಂದರೆ ಶುಕ್ರವಾರ, ಡಿಸೆಂಬರ್ 31, 2021 ನಿಗದಿಪಡಿಸಲಾಗಿದೆ ಎಂದು ಅದು ಸೇರಿಸಿದೆ. “ಕಂಪೆನಿಯ ನಿರ್ದೇಶಕರ ಮಂಡಳಿಯು ಇಂದು (23.12.2021ರಂದು) ನಡೆದ 435ನೇ ಸಭೆಯಲ್ಲಿ ಪೇಯ್ಡ್ ಅಪ್ ಕ್ಯಾಪಿಟಲ್ ಮೇಲೆ FY 2021-22ರಲ್ಲಿ ಶೇ 40ರಷ್ಟು (ಪ್ರತಿ ಈಕ್ವಿಟಿ ಷೇರಿಗೆ 4) ಡಿವಿಡೆಂಡ್ ಅನುಮೋದಿಸಿದೆ,” ಎಂದು ಕಂಪೆನಿಯು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ.

ಗೇಲ್ ಷೇರುಗಳು ಗುರುವಾರ ಮಧ್ಯಾಹ್ನದ ವಹಿವಾಟಿನಲ್ಲಿ ಬಿಎಸ್​ಇನಲ್ಲಿ ರೂ. 132ರಂತೆ ಶೇ 2ಕ್ಕಿಂತ ಹೆಚ್ಚಿನ ಏರಿಕೆ ದರದಲ್ಲಿ ವಹಿವಾಟು ನಡೆಸುತ್ತಿದ್ದವು. ಇತ್ತೀಚಿನ “ಬುಲ್ ಮಾರ್ಕೆಟ್”ನಲ್ಲಿ ಸ್ಟಾಕ್ ಸ್ವಲ್ಪಮಟ್ಟಿಗೆ ಮಂದ ಪ್ರದರ್ಶನ ತೋರಿದೆ. ಏಕೆಂದರೆ ಇದು ಬೆಂಚ್‌ಮಾರ್ಕ್ ಸೆನ್ಸೆಕ್ಸ್‌ನಲ್ಲಿನ ಸುಮಾರು ಶೇ 20ರ ಏರಿಕೆಗೆ ಹೋಲಿಸಿದರೆ ಕೇವಲ ಶೇ 7ರಷ್ಟು ಹೆಚ್ಚಳವಾಗಿದೆ. ಒಂದು ವರ್ಷದ ಅವಧಿಯಲ್ಲಿ ಗೇಲ್ ಷೇರುಗಳು ಶೇ 11ಕ್ಕಿಂತ ಹೆಚ್ಚಿವೆ.

ಗೇಲ್ (ಇಂಡಿಯಾ) ಲಿಮಿಟೆಡ್ ಭಾರತದ ಪ್ರಮುಖ ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪಿಎಸ್‌ಯು ಹಿಂದಿನ ವರ್ಷದ ಅವಧಿಯಲ್ಲಿ ರೂ. 1,239.6 ಕೋಟಿಗೆ ಹೋಲಿಸಿದರೆ ರೂ. 2,862.9 ಕೋಟಿ ನಿವ್ವಳ ಲಾಭವನ್ನು ವರದಿ ಮಾಡಿದೆ. ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ 13,647 ಕೋಟಿ ರೂಪಾಯಿಯಿಂದ ಪರಿಶೀಲನೆಯಲ್ಲಿರುವ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಅದರ ಆದಾಯವು ರೂ.21,515 ಕೋಟಿಗೆ ಶೇ 57.6ಕ್ಕೆ ಹೆಚ್ಚಾಗಿದೆ.

ಇದನ್ನೂ ಓದಿ: Tech Mahindra: ಟೆಕ್​ ಮಹೀಂದ್ರಾ ಎರಡನೇ ತ್ರೈಮಾಸಿಕ ಲಾಭ ಶೇ 26ರಷ್ಟು ಹೆಚ್ಚಳ; 15 ರೂ. ವಿಶೇಷ ಡಿವಿಡೆಂಡ್ ಘೋಷಣೆ

‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ
ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ