AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌತಮ್ ಅದಾನಿ ನಂತರ ಯಾರು? ಬ್ಲೂಮ್​ಬರ್ಗ್ ಸಂದರ್ಶನದ ಎಕ್ಸ್​ಕ್ಲೂಸಿವ್ ವಿಡಿಯೋ

Gautam Adani succession plan: ಭಾರತದ ಅತಿದೊಡ್ಡ ಬಿಸಿನೆಸ್ ಫ್ಯಾಮಿಲಿಗಳಲ್ಲಿ ಅದಾನಿ ಒಂದು. ಗೌತಮ್ ಅದಾನಿ ಭಾರತದ ಎರಡನೇ ಅತಿದೊಡ್ಡ ಶ್ರೀಮಂತ. ಮುಕೇಶ್ ಅಂಬಾನಿ ನಂತರ ಅವರ ಮೂರು ಮಕ್ಕಳು ಮುಂದಿನ ಬಿಸಿನೆಸ್ ಮುನ್ನಡೆಸುತ್ತಾರೆ. ಗೌತಮ್ ಅದಾನಿ ನಂತರ ಅದಾನಿ ಗ್ರೂಪ್​ನ ಬಿಸಿನೆಸ್ ಯಾರು ನೋಡಿಕೊಳ್ಳುತ್ತಾರೆ? ಈ ಬಗ್ಗೆ ಎಕ್ಸ್​ಕ್ಲೂಸಿವ್ ಸಂದರ್ಶನದ ವಿಡಿಯೋ ಇಲ್ಲಿದೆ.

ಗೌತಮ್ ಅದಾನಿ ನಂತರ ಯಾರು? ಬ್ಲೂಮ್​ಬರ್ಗ್ ಸಂದರ್ಶನದ ಎಕ್ಸ್​ಕ್ಲೂಸಿವ್ ವಿಡಿಯೋ
ಅದಾನಿ ಫ್ಯಾಮಿಲಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 14, 2024 | 10:55 AM

Share

ನವದೆಹಲಿ, ಆಗಸ್ಟ್ 14: ಭಾರತದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ ಗೌತಮ್ ಅದಾನಿ ಅವರು 70 ವರ್ಷಕ್ಕೆ ನಿವೃತ್ತರಾಗ್ತಾರೆ, ತಮ್ಮ ಕುಟುಂಬದ ಇತರ ಸದಸ್ಯರಿಗೆ ಬಿಸಿನೆಸ್ ವಹಿಸಿ ಹೋಗ್ತಾರೆ ಎನ್ನುವಂತಹ ಸುದ್ದಿ ಕಳೆದ ವಾರ ಕೇಳಿಬಂದಿತ್ತು. ಬ್ಲೂಮ್​ಬರ್ಗ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ನಿವೃತ್ತಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿತ್ತು. ಅದರ ಬೆನ್ನಲ್ಲೆ ತಾನು 70 ವರ್ಷಕ್ಕೆ ನಿವೃತ್ತನಾಗುತ್ತೇನೆ ಎಂದು ಆ ಸಂದರ್ಶನದಲ್ಲಿ ಹೇಳಿಲ್ಲ ಎಂದು ಗೌತಮ್ ಅದಾನಿ ಸ್ಪಷ್ಟಪಡಿಸಿದ್ದಾರೆ. ಇದೀಗ ಬ್ಲೂಮ್​ಬರ್ಗ್ ನ್ಯೂಸ್​ಗೆ ನೀಡಲಾದ ಸಂದರ್ಶನದ 24 ನಿಮಿಷದ ವಿಡಿಯೋವೊಂದನ್ನು ಅದಾನಿ ಗ್ರೂಪ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ, ಅದಾನಿ ತಾನು 70ರ ವಯಸ್ಸಿಗೆ ರಿಟೈರ್ ಆಗುತ್ತೇನೆ ಎಂದು ಹೇಳಿಲ್ಲ. ಆದರೆ, ಅದಾನಿ ಕುಟುಂಬದ ವಿವಿಧ ಸದಸ್ಯರು ಅದಾನಿ ಗ್ರೂಪ್​ನ ವಿವಿಧ ಬಿಸಿನೆಸ್​ಗಳಲ್ಲಿ ಚುಕ್ಕಾಣಿ ಹಿಡಿದಿದ್ದಾರೆ. ಇವರ ಪೈಕಿ ನಾಲ್ವರು ಪ್ರಮುಖರಿದ್ದಾರೆ. ಇಬ್ಬರು ಗೌತಮ್ ಅದಾನಿಯ ಮಕ್ಕಳಾದರೆ, ಮತ್ತಿಬ್ಬರು ಅಣ್ಣಂದಿರ ಮಕ್ಕಳಾಗಿದ್ದಾರೆ.

ಬ್ಲೂಮ್​ಬರ್ಗ್ ನ್ಯೂಸ್ ಸಂದರ್ಶನದ ಈ ವಿಡಿಯೋದಲ್ಲಿ ಅದಾನಿ ಕುಟುಂಬದ ಮುಂದಿನ ವಾರಸುದಾರರೆನ್ನಲಾದ ಪ್ರಣವ್ ಅದಾನಿ, ಸಾಗರ್ ಅದಾನಿ, ಕರಣ್ ಅದಾನಿ ಮತ್ತು ಜೀತ್ ಅದಾನಿ ಅವರು ಬಿಸಿನೆಸ್ ಬಗ್ಗೆ ಮಾತನಾಡಿದ್ದಾರೆ. ಹಿಂಡನ್ಬರ್ಗ್ ವರದಿಯಿಂದ ಆದ ಪರಿಣಾಮ, ಮತ್ತು ಆ ಸವಾಲನ್ನು ಹೇಗೆ ಎದುರಿಸಲಾಗುತ್ತಿದೆ ಎಂಬುದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಅದಾನಿ ಗ್ರೂಪ್​ನಿಂದ ಅಪ್​ಲೋಡ್ ಮಾಡಲಾದ ಸಂದರ್ಶನದ ವಿಡಿಯೋ ಇಲ್ಲಿದೆ…

ಹತ್ತು ವರ್ಷದ ಹಿಂದೆಯೇ ಅದಾನಿ ಗ್ರೂಪ್​ನ ಬಿಸಿನೆಸ್ ಅನ್ನು ಮುಂದಿನ ಪೀಳಿಗೆಗೆ ಹಂಚಲು ಅದಾನಿ ಯೋಜಿಸಿದ್ದರೆನ್ನಲಾಗಿದೆ. ಅದಾನಿ ಫ್ಯಾಮಿಲಿಯ ಎರಡನೇ ಪೀಳಿಗೆಯಲ್ಲಿ ಹಿರಿಯನಾದ ಪ್ರಣವ್ ಅದಾನಿ ಅವರು ಅದಾನಿ ಎಂಟರ್​ಪ್ರೈಸಸ್​ನ ಡೈರೆಕ್ಟರ್ ಆಗಿದ್ದಾರೆ. ಗೌತಮ್ ಅದಾನಿಯ ಮತ್ತೊಬ್ಬ ಅಣ್ಣನ ಮಗನಾದ ಸಾಗರ್ ಅದಾನಿ ಅವರು ಅದಾನಿ ಗ್ರೀನ್ ಎನರ್ಜಿಯ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಅಧಿಕಾರ ಗೌತಮ್ ಅದಾನಿ ಮಕ್ಕಳಿಗೋ, ಸೋದರನ ಮಕ್ಕಳಿಗೋ? ಆರು ವರ್ಷದಲ್ಲಿ ಆಗಲಿದೆ ಅಧಿಕಾರ ಹಸ್ತಾಂತರ

ಅದಾನಿ ಗ್ರೂಪ್​ನ ಬಹಳ ಮುಖ್ಯ ಬಿಸಿನೆಸ್​ಗಳಾದ ಬಂದರು ಮತ್ತು ವಿಮಾನ ನಿಲ್ದಾಣಗಳ ಬಿಸಿನೆಸ್ ಅನ್ನು ಗೌತಮ್ ಅದಾನಿ ಅವರ ಇಬ್ಬರು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಅದಾನಿ ಪೋರ್ಟ್ಸ್​ಗೆ ಕರಣ್ ಅದಾನಿ ಎಂಡಿಯಾಗಿದ್ದಾರೆ. ಅದಾನಿ ಏರ್​ಪೋರ್ಟ್ಸ್​ಗೆ ಜೀತ್ ಅದಾನಿ ನಿರ್ದೇಶಕರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್