AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂರು ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆದಿದ್ದ 30,000 ಕೋಟಿ ರೂ ಟೆಂಡರ್ ರದ್ದು; ಫ್ರೆಂಚ್ ಸಂಸ್ಥೆಗೆ ನಿರಾಸೆ

Vande Bharat train manufacturing: ರೈಲ್ವೆ ಇಲಾಖೆ 2023ರ ಮೇನಲ್ಲಿ 100 ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆಯಲಾಗಿದ್ದ ಟೆಂಡರ್ ಅನ್ನು ಈಗ ರದ್ದುಗೊಳಿಸಿದೆ. ಸಮಾಧಾನವಾಗುವಂತಹ ಬೆಲೆ ಸಿಕ್ಕದ ಹಿನ್ನೆಲೆಯಲ್ಲಿ ಟೆಂಡರ್ ಹಿಂಪಡೆಯಲಾಗಿರುವುದು ತಿಳಿದುಬಂದಿದೆ. ಎರಡು ಕಂಪನಿಗಳು ಮಾತ್ರವೇ ಬಿಡ್ ಸಲ್ಲಿಸಿದ್ದವು. ಈ ಪೈಕಿ ಫ್ರಾನ್ಸ್ ಮೂಲದ ಆಲ್​ಸ್ಟೋಮ್ ಇಂಡಿಯಾ ಒಂದು ಟ್ರೈನ್ ಸೆಟ್​ಗೆ 150.9 ಕೋಟಿ ರೂ ಬೆಲೆ ಹಾಕಿತ್ತು. ಇಲಾಖೆ ಮತ್ತೊಮ್ಮೆ ಬಿಡ್ ಆಹ್ವಾನಿಸುವ ಸಾಧ್ಯತೆ ಇದೆ.

ನೂರು ವಂದೇ ಭಾರತ್ ರೈಲುಗಳ ತಯಾರಿಕೆಗೆ ಕರೆದಿದ್ದ 30,000 ಕೋಟಿ ರೂ ಟೆಂಡರ್ ರದ್ದು; ಫ್ರೆಂಚ್ ಸಂಸ್ಥೆಗೆ ನಿರಾಸೆ
ವಂದೇ ಭಾರತ್ ರೈಲು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2024 | 9:12 PM

Share

ನವದೆಹಲಿ, ಆಗಸ್ಟ್ 13: ನೂರು ವಂದೇ ಭಾರತ್ ರೈಲುಗಳ ತಯಾರಿಕೆ ಮತ್ತು ನಿರ್ವಹಣೆಗೆ ಕಳೆದ ವರ್ಷ ಕರೆಯಲಾಗಿದ್ದ 30,000 ಕೋಟಿ ರೂ ಮೊತ್ತದ ಟೆಂಡರ್ ಅನ್ನು ಭಾರತೀಯ ರೈಲ್ವೇಸ್ ರದ್ದುಗೊಳಿಸಿದೆ. ಟೆಂಡರ್​ನಲ್ಲಿ ಭಾಗಿಯಾಗಿದ್ದ ಎರಡು ಕಂಪನಿಗಳಲ್ಲಿ ಅತಿಕಡಿಮೆಗೆ ಬಿಡ್ ಮಾಡಿದ್ದು ಫ್ರಾನ್ಸ್ ಮೂಲದ ಆಲ್ಸ್​ಟಾಮ್ ಇಂಡಿಯಾ ಸಂಸ್ಥೆ. ಟೆಂಡರ್ ರದ್ದುಗೊಳಿಸಲಾಗಿರುವುದನ್ನು ಈ ಫ್ರೆಂಚ್ ಸಂಸ್ಥೆಯ ಎಂಡಿ ಓಲಿವಿಯರ್ ಲೋಯ್ಸನ್ ಹೇಳಿದ್ದಾರೆ. ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಮತ್ತೆ ಬಿಡ್ ಸಲ್ಲಿಸಿ ವಂದೇ ಭಾರತ್ ರೈಲುಗಳನ್ನು ತಯಾರಿಸುವುದಾಗಿ ಅವರು ಹೇಳಿದ್ದಾರೆ.

ಟೆಂಡರ್ ರದ್ದುಗೊಳಿಸಲು ಅಧಿಕ ಬೆಲೆ ಕಾರಣ

2023ರ ಮೇ 30ರಂದು ಅಲೂಮಿನಿಯಮ್​ನಿಂದ 100 ವಂದೇ ಭಾರತ್ ರೈಲುಗಳನ್ನು ತಯಾರಿಸಲು ಟೆಂಡರ್ ಕರೆಯಲಾಗಿತ್ತು. ಐದಾರು ಕಂಪನಿಗಳು ಆಸಕ್ತಿ ತೋರಿದವರಾದರೂ ತಾಂತ್ರಿಕ ಅರ್ಹತೆ ಗಿಟ್ಟಿಸಲು ಹೆಚ್ಚಿನವು ವಿಫಲವಾಗಿದ್ದವು. ಅಂತಿಮವಾಗಿ ಫ್ರಾನ್ಸ್​ನ ಆಲ್​ಸ್ಟೋಮ್ ಇಂಡಿಯಾ ಮತ್ತು ಸ್ವಿಟ್ಜರ್​ಲ್ಯಾಂಡ್ ಮೂಲದ ಸ್ಟಾಡ್ಲರ್ ರೈಲ್ ಸಂಸ್ಥೆ ಮಾತ್ರವೆ ಬಿಡ್ ಸಲ್ಲಿಸಿದ್ದು. ಹೈದರಾಬಾದ್​ನ ಮೇಧಾ ಸರ್ವೋ ಡ್ರೈವ್ಸ್ ಮತ್ತು ಸ್ಟಾಡ್ಲರ್ ರೈಲ್ ಜಂಟಿಯಾಗಿ ಬಿಡ್ ಸಲ್ಲಿಸಿದ್ದವು. ಫ್ರೆಂಚ್ ಕಂಪನಿ ಒಂದು ರೈಲಿಗೆ 150.9 ಕೋಟಿ ರೂ ಬೆಲೆ ಪಟ್ಟಿ ಕೊಟ್ಟಿತ್ತು. ಸ್ವಿಸ್ ಕಂಪನಿ ನಿಗದಿ ಮಾಡಿದ ಬೆಲೆ 170 ರೂ ಆಗಿತ್ತು.

ಇದನ್ನೂ ಓದಿ: ಉತ್ತರ ಪ್ರದೇಶ: 111 ಕಿಲೋಮೀಟರ್ ಕನ್ವರ್ ಮಾರ್ಗ ನಿರ್ಮಾಣಕ್ಕಾಗಿ 1 ಲಕ್ಷ ಮರ ಕಡಿಯಲಾಗಿತ್ತೇ?

ಆದರೆ, ರೈಲ್ವೆ ಇಲಾಖೆ ಒಂದು ರೈಲಿಗೆ 140 ಕೋಟಿ ರೂನಂತೆ ಗುತ್ತಿಗೆ ಪಡೆಯುವ ಗುರಿ ಹೊಂದಿದೆ. ಎರಡು ಬಿಡ್​ಗಳಲ್ಲಿ ಅತಿಕಡಿಮೆ ಬೆಲೆ 150 ರೂ ಆಗಿತ್ತು. ಇದು ದುಬಾರಿ ಎನಿಸಿದ್ದರಿಂದ ರೈಲ್ವೆ ಇಲಾಖೆ ಟೆಂಡರ್ ಅನ್ನು ರದ್ದುಗೊಳಿಸಲು ನಿರ್ಧರಿಸಿತು ಎನ್ನಲಾಗಿದೆ.

ಮತ್ತೆ ಹೊಸದಾಗಿ ಬಿಡ್ ಕರೆಯಲು ಇಲಾಖೆ ಸಜ್ಜು

ಕಳೆದ ವರ್ಷ ಕರೆಯಲಾಗಿದ್ದ ಟೆಂಡರ್​ನಲ್ಲಿ ಹೆಚ್ಚು ಕಂಪನಿಗಳು ತಾಂತ್ರಿಕ ಕಾರಣಕ್ಕೆ ಬಿಡ್ ಸಲ್ಲಿಸಲು ಆಗಿರಲಿಲ್ಲ. ಟ್ರೈನ್ ತಯಾರಿಸುವ ಸಂಸ್ಥೆ ಆರ್ ಅಂಡ್ ಡಿ ಘಟಕ ಹೊಂದಿರಬೇಕು. ವರ್ಷಕ್ಕೆ ಕನಿಷ್ಠ ಐದು ಟ್ರೈನ್ ಸೆಟ್​ಗಳನ್ನು ಹೊಂದಿಸುವ ಸಾಮರ್ಥ್ಯ ಇರಬೇಕು ಎಂಬುದು ತಾಂತ್ರಿಕ ಅರ್ಹತೆಗೆ ಇರುವ ಮಾನದಂಡ.

ರಷ್ಯಾದ ಟ್ರಾನ್ಸ್​ಮ್ಯಾಷ್ ಹೋಲ್ಡಿಂಗ್ ಮತ್ತು ರೈಲ ವಿಕಾಸ್ ನಿಗಮ್; ಜರ್ಮನಿಯ ಸೀಮನ್ಸ್ ಮತ್ತು ಬೆಮೆಲ್ ಮೊದಲಾದ ಕಂಪನಿಗಳು ಕಳೆದ ವರ್ಷದ ಬಿಡ್ಡಿಂಗ್​ನಲ್ಲಿ ವಿಫಲಗೊಂಡಿದ್ದವು. ಈಗ ಅವುಗಳಿಗೆ ತಾಂತ್ರಿಕ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಕಾಲಾವಕಾಶ ಕೊಟ್ಟು ಬಿಡ್ಡಿಂಗ್ ಸಲ್ಲಿಸುವಂತೆ ರೈಲ್ವೆ ಇಲಾಖೆ ಉತ್ತೇಜಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಹುಟ್ಟಿಸಿದವರ ಅಹಂ..! ಪೇಟಿಎಂ, ಬೈಜುಸ್ ವೈಫಲ್ಯಕ್ಕೆ ಕಾರಣ ಹುಡುಕಿದ ಸಂಜಯ್ ನಾಯರ್

ಅಲೂಮಿನಿಯನ್ ಟ್ರೈನ್ ಯಾಕೆ?

ಹಿಂದೆ ಸ್ಟೈನ್ಲೆಸ್ ಸ್ಟೀಲ್​ನ 200 ವಂದೇ ಭಾರತ್ ಟ್ರೈನ್​ಗಳ ತಯಾರಿಕೆಗೆ ಗುತ್ತಿಗೆ ಕೊಡಲಾಗಿತ್ತು. ಇದರ ಒಂದು ಟ್ರೈನ್ ಸೆಟ್ ತಯಾರಿಕೆಗೆ 160 ಕೋಟಿ ರೂಗೂ ಹೆಚ್ಚು ವೆಚ್ಚವಾಗುತ್ತದೆ. ಅಲೂಮಿನಿಯಮ್​ನ ಟ್ರೈನುಗಳು ಹೆಚ್ಚು ಹಗುರವಾಗಿರುತ್ತವೆ. ಹೆಚ್ಚು ವೇಗದಲ್ಲಿ ಹೋಗಬಲ್ಲುವು.

ಹೊಸ ವಂದೇ ಭಾರತ್ ರೈಲುಗಳು ಬಹಳ ಕಡಿಮೆ ಸಮಯದಲ್ಲಿ ಗರಿಷ್ಠ ವೇಗ ಪಡೆದುಕೊಳ್ಳುವಷ್ಟು ಸಮರ್ಥವಾಗಿರಲಿವೆ. ಗಂಟೆಗೆ 160 ಕಿಮೀ ವೇಗ ಪಡೆಯಲು ಕೇವಲ 140 ಸೆಕೆಂಡ್ ಸಾಕಾಗುತ್ತದೆ. ಈ ರೈಲುಗಳನ್ನು ನಿಲ್ಲಿಸಲು ಆಗುವ ಅವಧಿ ಕೂಡ ಬಹಳ ಕಡಿಮೆ ಹಿಡಿಯುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ