Gold Price Today: ಇಂದು ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ತುಸು ದುಬಾರಿ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಇಂದು ಬದಲಾಗಿಲ್ಲ ಚಿನ್ನದ ದರ, ಬೆಳ್ಳಿ ತುಸು ದುಬಾರಿ
ಚಿನ್ನದ ದರ (ಸಾಂದರ್ಭಿಕ ಚಿತ್ರ)

Updated on: Jan 31, 2023 | 5:00 AM

Gold Silver Price in Bangalore | ಬೆಂಗಳೂರು: ಕಳೆದೆರಡು ವಹಿವಾಟುಗಳಲ್ಲಿ ಏರಿಕೆಯಾಗದೇ ಇದ್ದ ಬೆಳ್ಳಿ ಬೆಲೆ ಇಂದು ತುಸು ಹೆಚ್ಚಾಗಿದೆ. ಹಿಂದಿನ ದಿನದ ವಹಿವಾಟಿನಲ್ಲಿ ತುಸು ಇಳಿಕೆಯಾಗಿದ್ದ ಬೆಳ್ಳಿ ದರ ಅದಕ್ಕೂ ಮೊದಲಿನ ವಹಿವಾಟಿನಲ್ಲಿ ತಟಸ್ಥವಾಗಿತ್ತು. ಮತ್ತೊಂದೆಡೆ, ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಇಂದು ತಟಸ್ಥವಾಗಿದೆ. 1 ಕೆಜಿ ಬೆಳ್ಳಿ ಬೆಲೆ 200 ರೂ. ಏರಿಕೆಯಾಗಿ 72,400 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ ಬದಲಾಗದೆ 52,650 ರೂ. ಇದೆ. 24 ಕ್ಯಾರೆಟ್ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, 57,440 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಏರಿಕೆಯಾಗಿ 72,400 ರೂ. ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 53,500 ರೂ.
  • ಮುಂಬೈ- 52,650 ರೂ.
  • ದೆಹಲಿ- 52,800 ರೂ.
  • ಕೊಲ್ಕತ್ತಾ- 52,650 ರೂ.
  • ಬೆಂಗಳೂರು- 52,700 ರೂ.
  • ಹೈದರಾಬಾದ್- 52,650 ರೂ.
  • ಕೇರಳ- 52,650 ರೂ.
  • ಪುಣೆ- 52,650 ರೂ.
  • ಮಂಗಳೂರು- 52,700 ರೂ.
  • ಮೈಸೂರು- 52,700 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 58,370 ರೂ.
  • ಮುಂಬೈ- 57,440 ರೂ.
  • ದೆಹಲಿ- 57,590 ರೂ.
  • ಕೊಲ್ಕತ್ತಾ- 57,440 ರೂ.
  • ಬೆಂಗಳೂರು- 57,490 ರೂ.
  • ಹೈದರಾಬಾದ್- 57,440 ರೂ.
  • ಕೇರಳ- 57,440 ರೂ.
  • ಪುಣೆ- 57,440 ರೂ.
  • ಮಂಗಳೂರು- 57,490 ರೂ.
  • ಮೈಸೂರು- 57,490 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,700 ರೂ.
  • ಮೈಸೂರು- 74,700 ರೂ.
  • ಮಂಗಳೂರು- 74,700 ರೂ.
  • ಮುಂಬೈ- 72,400 ರೂ.
  • ಚೆನ್ನೈ- 74,700 ರೂ.
  • ದೆಹಲಿ- 72,400 ರೂ.
  • ಹೈದರಾಬಾದ್- 74,700 ರೂ.
  • ಕೊಲ್ಕತ್ತಾ- 72,400 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us