AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೋ ಬೆಲೆ ಇನ್ನಷ್ಟು ಇಳಿಸಿದ ಕೇಂದ್ರ; ಕೇವಲ 40 ರುಪಾಯಿಗೆ ಮಾರಾಟಕ್ಕೆ ಸೂಚನೆ

Tomato Price Reduced: ಟೊಮೆಟೋ ಬೆಲೆ ಹೆಚ್ಚು ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೋ ಮಾರುತ್ತಿರುವ ಸರ್ಕಾರ ಇದೀಗ ಟೊಮೆಟೋ ಬೆಲೆಯನ್ನು 50 ರೂನಿಂದ 40 ರೂಗೆ ಇಳಿಸಿದೆ. ಆಗಸ್ಟ್ 20ರಿಂದ ಹೊಸ ದರದಲ್ಲಿ ಟೊಮೆಟೋ ಮಾರಾಟವಾಗಲಿದೆ.

ಟೊಮೆಟೋ ಬೆಲೆ ಇನ್ನಷ್ಟು ಇಳಿಸಿದ ಕೇಂದ್ರ; ಕೇವಲ 40 ರುಪಾಯಿಗೆ ಮಾರಾಟಕ್ಕೆ ಸೂಚನೆ
ಟೊಮೆಟೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2023 | 6:35 PM

Share

ನವದೆಹಲಿ, ಆಗಸ್ಟ್ 18: ಟೊಮೆಟೋ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಮಾರಾಟ ದರವನ್ನು ಸತತವಾಗಿ ಇಳಿಸುತ್ತಿದೆ. ಸದ್ಯ 50 ರುಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ಭಾನುವಾರದಿಂದ (ಆಗಸ್ಟ್ 20) ಇನ್ನೂ ಕಡಿಮೆ ಬೆಲೆಗೆ ಮಾರಲು ನಿರ್ಧರಿಸಲಾಗಿದೆ. ಕಿಲೋಗೆ 40 ರೂ ದರದಲ್ಲಿ ಟೊಮೆಟೋವನ್ನು (Tomato) ಮಾರುವಂತೆ ಸರ್ಕಾರಿ ಸ್ವಾಮ್ಯದ ಎನ್​ಸಿಸಿಎಫ್ ಮತ್ತು ಎನ್​ಎಫ್​ಇಡಿ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ. ಇವೆರಡೂ ಸಂಸ್ಥೆಗಳು ತಮ್ಮ ವಿವಿಧ ಮಳಿಗೆಗಳಲ್ಲಿ ಮತ್ತು ಮೊಬೈಲ್ ವಾಹನಗಳಲ್ಲಿ ಟೊಮೆಟೋ ಹಣ್ಣನ್ನು ಜನಸಾಮಾನ್ಯರಿಗೆ ಮಾರಾಟ ಮಾಡುತ್ತಾ ಬಂದಿದೆ.

ಕಳೆದ ತಿಂಗಳು ಭಾರತದಲ್ಲಿ ಟೊಮೆಟೋ ಹಣ್ಣಿನ ಬೆಲೆ 200 ರೂ ದಾಟಿ ಹೋದಾಗ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಲು ಮುಂದಾಯಿತು. 2023ರ ಜುಲೈ 14ರಂದು ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಕಿಲೋಗೆ 90 ರೂ ದರದಲ್ಲಿ ಟೊಮೆಟೋ ಮಾರಾಟ ಆರಂಭವಾಯಿತು.

ಇದನ್ನೂ ಓದಿ: ಫಿಕ್ಸೆಡ್ ಇಂಟರೆಸ್ಟ್ ಬೇಕಾ, ಫ್ಲೋಟಿಂಗ್ ಇಂಟರೆಸ್ಟ್ ಬೇಕಾ? ಬ್ಯಾಂಕುಗಳು ಬಡ್ಡಿ ಪರಿಷ್ಕರಿಸುವ ಮುನ್ನ ಗ್ರಾಹಕರಿಗೆ ಆಯ್ಕೆ ಕೊಡಬೇಕು: ಆರ್​ಬಿಐ ನಿಯಮ

ಎನ್​ಸಿಸಿಎಫ್ ಮತ್ತು ಎನ್​ಎಎಫ್​ಇಡಿ ಸಂಸ್ಥೆಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ, ಅತಿಹೆಚ್ಚು ಬೆಲೆ ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಅದನ್ನು ಮಾರಾಟ ಮಾಡುತ್ತಿದೆ. ಸುಮಾರು 15 ಲಕ್ಷ ಕಿಲೋನಷ್ಟು ಟೊಮೆಟೋವನ್ನು ವಿವಿಧ ಮಂಡಿಗಳಿಂದ ಇವು ಸಂಗ್ರಹಿಸಿ ದೇಶಾದ್ಯಂತ ಅಗತ್ಯ ಪ್ರದೇಶಗಳಲ್ಲಿ ವಿತರಿಸುತ್ತಿದೆ.

ಈಗ ಟೊಮೆಟೋ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ಸರ್ಕಾರವೂ ಬೆಲೆ ಕಡಿಮೆ ಮಾಡುತ್ತಿದೆ. ಆದರೆ, ಈಗಲೂ ಕೆಲವೆಡೆ ಟೊಮೆಟೋ ಬೆಲೆ 100 ರೂ ಮೇಲೆಯೇ ಇದೆ. ಇಂಥ ಪ್ರದೇಶಗಳಲ್ಲಿ ಸರ್ಕಾರಿ ಸಹಕಾರಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಟೊಮೆಟೋ ನೀಡುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್