AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೊಮೆಟೋ ಬೆಲೆ ಇನ್ನಷ್ಟು ಇಳಿಸಿದ ಕೇಂದ್ರ; ಕೇವಲ 40 ರುಪಾಯಿಗೆ ಮಾರಾಟಕ್ಕೆ ಸೂಚನೆ

Tomato Price Reduced: ಟೊಮೆಟೋ ಬೆಲೆ ಹೆಚ್ಚು ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೋ ಮಾರುತ್ತಿರುವ ಸರ್ಕಾರ ಇದೀಗ ಟೊಮೆಟೋ ಬೆಲೆಯನ್ನು 50 ರೂನಿಂದ 40 ರೂಗೆ ಇಳಿಸಿದೆ. ಆಗಸ್ಟ್ 20ರಿಂದ ಹೊಸ ದರದಲ್ಲಿ ಟೊಮೆಟೋ ಮಾರಾಟವಾಗಲಿದೆ.

ಟೊಮೆಟೋ ಬೆಲೆ ಇನ್ನಷ್ಟು ಇಳಿಸಿದ ಕೇಂದ್ರ; ಕೇವಲ 40 ರುಪಾಯಿಗೆ ಮಾರಾಟಕ್ಕೆ ಸೂಚನೆ
ಟೊಮೆಟೋ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 18, 2023 | 6:35 PM

Share

ನವದೆಹಲಿ, ಆಗಸ್ಟ್ 18: ಟೊಮೆಟೋ ಬೆಲೆ ಇಳಿಮುಖವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ತನ್ನ ಮಾರಾಟ ದರವನ್ನು ಸತತವಾಗಿ ಇಳಿಸುತ್ತಿದೆ. ಸದ್ಯ 50 ರುಪಾಯಿಗೆ ಮಾರಾಟ ಮಾಡಲಾಗುತ್ತಿದ್ದು, ಮುಂಬರುವ ಭಾನುವಾರದಿಂದ (ಆಗಸ್ಟ್ 20) ಇನ್ನೂ ಕಡಿಮೆ ಬೆಲೆಗೆ ಮಾರಲು ನಿರ್ಧರಿಸಲಾಗಿದೆ. ಕಿಲೋಗೆ 40 ರೂ ದರದಲ್ಲಿ ಟೊಮೆಟೋವನ್ನು (Tomato) ಮಾರುವಂತೆ ಸರ್ಕಾರಿ ಸ್ವಾಮ್ಯದ ಎನ್​ಸಿಸಿಎಫ್ ಮತ್ತು ಎನ್​ಎಫ್​ಇಡಿ ಸಂಸ್ಥೆಗಳಿಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸೂಚಿಸಿದೆ. ಇವೆರಡೂ ಸಂಸ್ಥೆಗಳು ತಮ್ಮ ವಿವಿಧ ಮಳಿಗೆಗಳಲ್ಲಿ ಮತ್ತು ಮೊಬೈಲ್ ವಾಹನಗಳಲ್ಲಿ ಟೊಮೆಟೋ ಹಣ್ಣನ್ನು ಜನಸಾಮಾನ್ಯರಿಗೆ ಮಾರಾಟ ಮಾಡುತ್ತಾ ಬಂದಿದೆ.

ಕಳೆದ ತಿಂಗಳು ಭಾರತದಲ್ಲಿ ಟೊಮೆಟೋ ಹಣ್ಣಿನ ಬೆಲೆ 200 ರೂ ದಾಟಿ ಹೋದಾಗ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಟೊಮೆಟೋ ಮಾರಲು ಮುಂದಾಯಿತು. 2023ರ ಜುಲೈ 14ರಂದು ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಕಿಲೋಗೆ 90 ರೂ ದರದಲ್ಲಿ ಟೊಮೆಟೋ ಮಾರಾಟ ಆರಂಭವಾಯಿತು.

ಇದನ್ನೂ ಓದಿ: ಫಿಕ್ಸೆಡ್ ಇಂಟರೆಸ್ಟ್ ಬೇಕಾ, ಫ್ಲೋಟಿಂಗ್ ಇಂಟರೆಸ್ಟ್ ಬೇಕಾ? ಬ್ಯಾಂಕುಗಳು ಬಡ್ಡಿ ಪರಿಷ್ಕರಿಸುವ ಮುನ್ನ ಗ್ರಾಹಕರಿಗೆ ಆಯ್ಕೆ ಕೊಡಬೇಕು: ಆರ್​ಬಿಐ ನಿಯಮ

ಎನ್​ಸಿಸಿಎಫ್ ಮತ್ತು ಎನ್​ಎಎಫ್​ಇಡಿ ಸಂಸ್ಥೆಗಳು ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ, ಅತಿಹೆಚ್ಚು ಬೆಲೆ ಇರುವ ಪ್ರದೇಶಗಳಲ್ಲಿ ರಿಯಾಯಿತಿ ದರದಲ್ಲಿ ಅದನ್ನು ಮಾರಾಟ ಮಾಡುತ್ತಿದೆ. ಸುಮಾರು 15 ಲಕ್ಷ ಕಿಲೋನಷ್ಟು ಟೊಮೆಟೋವನ್ನು ವಿವಿಧ ಮಂಡಿಗಳಿಂದ ಇವು ಸಂಗ್ರಹಿಸಿ ದೇಶಾದ್ಯಂತ ಅಗತ್ಯ ಪ್ರದೇಶಗಳಲ್ಲಿ ವಿತರಿಸುತ್ತಿದೆ.

ಈಗ ಟೊಮೆಟೋ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಅದಕ್ಕೆ ಅನುಗುಣವಾಗಿ ಸರ್ಕಾರವೂ ಬೆಲೆ ಕಡಿಮೆ ಮಾಡುತ್ತಿದೆ. ಆದರೆ, ಈಗಲೂ ಕೆಲವೆಡೆ ಟೊಮೆಟೋ ಬೆಲೆ 100 ರೂ ಮೇಲೆಯೇ ಇದೆ. ಇಂಥ ಪ್ರದೇಶಗಳಲ್ಲಿ ಸರ್ಕಾರಿ ಸಹಕಾರಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಟೊಮೆಟೋ ನೀಡುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು