AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

GST Record: ಏಪ್ರಿಲ್ ಒಂದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​​ಟಿ ಕಲೆಕ್ಷನ್; ಸಾರ್ವಕಾಲಿಕ ದಾಖಲೆ, ಕರ್ನಾಟಕ ನಂ. 2

Karnataka Sees 2nd Highest GST Collection: 2023ರ ಏಪ್ರಿಲ್ ತಿಂಗಳಲ್ಲಿ ದೇಶಾದ್ಯಂತ 1,87,035 ಕೋಟಿ ರೂ ಜಿಎಸ್​ಟಿ ಸಂಗ್ರಹ ಆಗಿದೆ. ಇದು ಹೊಸ ದಾಖಲೆಯಾಗಿದೆ. ರಾಜ್ಯಾವಾರು ಲೆಕ್ಕದಲ್ಲಿ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಜಿಎಸ್​ಟಿ ಕಲೆಕ್ಷನ್ ಆದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

GST Record: ಏಪ್ರಿಲ್ ಒಂದೇ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​​ಟಿ ಕಲೆಕ್ಷನ್; ಸಾರ್ವಕಾಲಿಕ ದಾಖಲೆ, ಕರ್ನಾಟಕ ನಂ. 2
ಹಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 01, 2023 | 6:47 PM

ನವದೆಹಲಿ: ಕೇಂದ್ರ ಸರ್ಕಾರದ ಬೊಕ್ಕಸ ಸೇರುತ್ತಿರುವ ಜಿಎಸ್​ಟಿ ತೆರಿಗೆ (GST) ಪ್ರಮಾಣ ಹೆಚ್ಚಾಗುತ್ತಿದೆ. 2023 ಏಪ್ರಿಲ್ ತಿಂಗಳಲ್ಲಿ ಸರ್ಕಾರಕ್ಕೆ ಬಂದಿರುವ ಒಟ್ಟು ಜಿಎಸ್​ಟಿ ಆದಾಯ 1,87,035 ರೂ ಆಗಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ. ಯಾವುದೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಜಿಎಸ್​ಟಿ ಕಲೆಕ್ಷನ್ ಆಗಿದ್ದು ಇದೇ ಮೊದಲು. ಬಂದಿರುವ 1.87 ಲಕ್ಷ ರೂ ಮೊತ್ತದ ಜಿಎಸ್​ಟಿ ಆದಾಯದಲ್ಲಿ ಸಿಜಿಎಸ್​ಟಿ 38,440 ಕೋಟಿ ರೂ, ಎಸ್​ಜಿಎಸ್​ಟಿ 47,412 ಕೋಟಿ ರೂ, ಐಜಿಎಸ್​ಟಿ 89,158 ಕೋಟಿ ರೂ ಹಾಗು 12,025 ಕೋಟಿ ರೂ ಮೊತ್ತದ ಸೆಸ್​ನ ಆದಾಯ ಸೇರಿದೆ. ಇದು ಮೇ 1ರಂದು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ.

ಮೂರು ವಿಧದ ಜಿಎಸ್​ಟಿಯಲ್ಲಿ ಎಸ್​ಜಿಎಸ್​ಟಿಯಲ್ಲಿ ಬಂದಿರುವ ಸಂಗ್ರಹವೆಲ್ಲವೂ ಆಯಾ ರಾಜ್ಯಗಳಿಗೆ ಸಂದಾಯವಾಗುತ್ತದೆ. ಐಜಿಎಸ್​ಟಿ ಎಂದರೆ ಇಂಟಿಗ್ರೇಟೆಡ್ ಜಿಎಸ್​ಟಿ. ಇದು ಅಂತಾರಾಜ್ಯ ವಹಿವಾಟುಗಳಲ್ಲಿ ಸಂಗ್ರಹವಾದ ತೆರಿಗೆಯಾಗಿದೆ. ಈ ಐಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ 34,972 ಕೋಟಿ ರೂ ಮೊತ್ತದ ಹಣ ಸರಕುಗಳ ಆಮದಿನಿಂದ ಬಂದಿದೆ. ಈ ಐಜಿಎಸ್​ಟಿ ತೆರಿಗೆಯಲ್ಲಿ ಅರ್ಧದಷ್ಟು ಮೊತ್ತ ಕೇಂದ್ರಕ್ಕೆ ಹೋದರೆ, ಉಳಿದ ಅರ್ಧ ಮೊತ್ತ ಸಂಬಂಧಿತ ರಾಜ್ಯಗಳಿಗೆ ಹಂಚಿಕೆ ಆಗುತ್ತದೆ.

ಇದನ್ನೂ ಓದಿNew GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

2022ರ ಏಪ್ರಿಲ್ ತಿಂಗಳಲ್ಲಿ 1,67,540 ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿತ್ತು. ಇಲ್ಲಿವರೆಗೂ ಅದೇ ದಾಖಲೆ ಆಗಿತ್ತು. ಇದೀಗ 2023 ಏಪ್ರಿಲ್ ತಿಂಗಳಲ್ಲಿ 1,87,035 ಕೋಟಿ ರೂ ಸಂಗ್ರಹವಾಗುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಹಿಂದಿನ ವರ್ಷದ ಕಲೆಕ್ಷನ್​ಗಿಂತ ಈ ಬಾರಿ 19,495 ಕೋಟಿಯಷ್ಟು ಹೆಚ್ಚು ಜಿಎಸ್​ಟಿ ಹರಿದುಬಂದಿದೆ.

ಕರ್ನಾಟಕದಲ್ಲಿ 14,593 ಕೋಟಿ ರೂ ಜಿಎಸ್​ಟಿ ಕಲೆಕ್ಷನ್

ದೇಶಾದ್ಯಂತ ಸಂಗ್ರಹವಾಗಿರುವ ಒಟ್ಟು ಜಿಎಸ್​ಟಿ ಕಲೆಕ್ಷನ್ ಪೈಕಿ ಕರ್ನಾಟಕದ ಪಾಲು ಗಮನಾರ್ಹವಾಗಿದೆ. ಕರ್ನಾಟಕದಲ್ಲಿ 14,593 ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್​ಟಿ ಬಂದಿರುವುದು. 33,196 ಕೋಟಿ ರೂ ಜಿಎಸ್​ಟಿ ಸಂಗ್ರಹ ಮಹಾರಾಷ್ಟ್ರದಲ್ಲಿ ಆಗಿದೆ. ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳು 10,000 ಕೋಟಿ ರೂಗೂ ಹೆಚ್ಚು ಮೊತ್ತದ ಜಿಎಸ್​ಟಿ ಕಲೆಕ್ಷನ್ ಕಂಡಿವೆ.

ಇದನ್ನೂ ಓದಿGold Loan: ಚಿನ್ನದ ಮೇಲೆ ಸಾಲ; ಬಹಳ ವೇಗ, ಬಹಳ ಸುಲಭ; ಬಡ್ಡಿಯೂ ಕಡಿಮೆ; ಆದರೆ, ಸಾಲ ಪಡೆಯುವ ಮುನ್ನ ಈ ವಿಷಯ ಗಮನಿಸಿರಿ

ಹಿಂದಿನ ವರ್ಷದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಜಿಎಸ್​ಟಿಯಲ್ಲಿ ಅತಿ ಹೆಚ್ಚು ಶೇಕಡವಾರು ಹೆಚ್ಚಳ ಕಂಡಿರುವ ರಾಜ್ಯಗಳೆಂದರೆ ಸಿಕ್ಕಿಂ, ಮಿಜೋರಾಮ್, ಜಮ್ಮು ಕಾಶ್ಮೀರ, ಲಡಾಕ್, ಗೋವಾ, ನಾಗಾಲ್ಯಾಂಡ್. ಕರ್ನಾಟಕದಲ್ಲಿ ಶೇ. 23ರಷ್ಟು ಜಿಎಸ್​ಟಿ ಸಂಗ್ರಹ ಹೆಚ್ಚಾಗಿದೆ.

2023ರ ಏಪ್ರಿಲ್​ನಲ್ಲಿ ಅತಿಹೆಚ್ಚು ಜಿಎಸ್​ಟಿ ಸಂಗ್ರಹ ಮಾಡಿರುವ ರಾಜ್ಯಗಳ ಪಟ್ಟಿ

  1. ಮಹಾರಾಷ್ಟ್ರ: 33,196 ಕೋಟಿ ರೂ
  2. ಕರ್ನಾಟಕ: 14,593 ಕೋಟಿ ರೂ
  3. ಗುಜರಾತ್: 11,721 ಕೋಟಿ ರೂ
  4. ತಮಿಳುನಾಡು: 11,559 ಕೋಟಿ ರೂ
  5. ಉತ್ತರಪ್ರದೇಶ: 10,320 ಕೋಟಿ ರೂ
  6. ಹರ್ಯಾಣ: 10,035 ಕೋಟಿ ರೂ
  7. ಪಶ್ಚಿಮ ಬಂಗಾಳ: 6,447 ಕೋಟಿ ರೂ
  8. ದೆಹಲಿ: 6,320 ಕೋಟಿ ರೂ
  9. ತೆಲಂಗಾಣ: 5,622 ಕೋಟಿ ರೂ
  10. ಒಡಿಶಾ: 5,036 ಕೋಟಿ ರೂ
  11. ರಾಜಸ್ಥಾನ: 4,785 ಕೋಟಿ ರೂ
  12. ಮಧ್ಯಪ್ರದೇಶ: 4,267 ಕೋಟಿ ರೂ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:47 pm, Mon, 1 May 23

‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್