AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಮುಖ್ಯಾಂಶಗಳು; ಬದಲಾದ ತೆರಿಗೆಗಳ ಪಟ್ಟಿ

53rd GST Council Meeting highlights: ಜಿಎಸ್​ಟಿ ಕೌನ್ಸಿಲ್ ಸಭೆ ಜೂನ್ 22ರಂದು ನಡೆಯಿತು. ಕೆಲ ಸರಕು ಮತ್ತು ಸೇವೆಗಳಿಗೆ ಜಿಎಸ್​ಟಿ ವಿನಾಯಿತಿ ಘೋಷಿಸಲಾಗಿದೆ. ಸೋಲಾರ್ ಕುಕರ್, ಪೇಪರ್ ಕಾರ್ಟನ್ ಬಾಕ್ಸ್, ಸ್ಪ್ರಿಂಕ್ಲರ್​ಗಳ ಜಿಎಸ್​ಟಿ ದರವನ್ನು ಇಳಿಸಲಾಗಿದೆ. ಜಿಎಸ್​ಟಿ ರಿಜಿಸ್ಟ್ರೇಶನ್​ನಲ್ಲಿ ವಂಚನೆ ತಡೆಯಲು ನೊಂದಣಿ ವೇಳೆ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಗತ್ಯಪಡಿಸಲಾಗಿದೆ.

53ನೇ ಜಿಎಸ್​ಟಿ ಕೌನ್ಸಿಲ್ ಸಭೆ ಮುಖ್ಯಾಂಶಗಳು; ಬದಲಾದ ತೆರಿಗೆಗಳ ಪಟ್ಟಿ
ಜಿಎಸ್​ಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 24, 2024 | 1:02 PM

Share

ನವದೆಹಲಿ, ಜೂನ್ 24: ಇದೇ ಶುಕ್ರವಾರ ನಡೆದ 53ನೇ ಜಿಎಸ್​ಟಿ ಮಂಡಳಿ ಸಭೆಯಲ್ಲಿ (GST council meeting) ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜಿಎಸ್​ಟಿ ದರ ಪರಿಷ್ಕರಣೆ, ವಿನಾಯಿತಿ, ರಿಯಾಯಿತಿ ಇತ್ಯಾದಿ ಕ್ರಮಗಳನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸೋಲಾರ್ ಕುಕರ್, ಕಾರ್ಟನ್ ಬಾಕ್ಸ್, ಮಿಲ್ಕ್ ಕ್ಯಾನ್ ಇತ್ಯಾದಿಗಳಿಗೆ ಜಿಎಸ್​ಟಿ ಪರಿಷ್ಕರಣೆ ಮಾಡಲಾಗಿದೆ. ಕೆಲ ಆಮದುಗಳಿಗೆ ಐಜಿಎಸ್​ಟಿಯಿಂದ ವಿನಾಯಿತಿ ಕೊಡಲಾಗಿದೆ. ಜಿಎಸ್​ಟಿ ಸಭೆಯಲ್ಲಿ ತೆಗೆದುಕೊಳ್ಳಲಾದ ಕೆಲ ಮಹತ್ವದ ನಿರ್ಧಾರಗಳ ಪಟ್ಟಿ ಇಲ್ಲಿದೆ…

ಜಿಎಸ್​ಟಿ ದರ ಪರಿಷ್ಕರಣೆಯಾಗಿರುವವು

  • ವಿಮಾನ ಬಿಡಿಭಾಗಗಳು, ಪರೀಕ್ಷಾ ಉಪಕರಣ, ಟೂಲ್ಸ್ ಇತ್ಯಾದಿಗಳ ಆಮದಿಗೆ ಶೇ. 5ರಷ್ಟು ಸಮಾನ ಐಜಿಎಸ್​ಟಿ ವಿಧಿಸಲಾಗುವುದು
  • ಉಕ್ಕು, ಕಬ್ಬಿಣ ಅಥವಾ ಅಲೂಮಿನಿಯಮ್​ನ ಯಾವುದೇ ಹಾಲಿನ ಕ್ಯಾನ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ ವಿಧಿಸಲಾಗುವುದು.
  • ಪೇಪರ್ ಕಾರ್ಟನ್ ಬಾಕ್ಸ್ ಮತ್ತು ಕೇಸ್​ಗಳ ಮೇಲಿನ ಜಿಎಸ್​ಟಿ ಶೇ. 18ರಿಂದ ಶೇ. 12ಕ್ಕೆ ಇಳಿಕೆ.
  • ಎಲ್ಲಾ ರೀತಿಯ ಸೋಲಾರ್ ಕುಕರ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ
  • ಪೌಲ್ಟ್ರಿ ಯಂತ್ರೋಪಕರಣದಂತೆ ಅದರ ಬಿಡಿಭಾಗಗಳಿಗೂ ಶೇ. 12ರಷ್ಟು ಜಿಎಸ್​ಟಿ.
  • ಫೈರ್ ವಾಟರ್ ಸ್ಪ್ರಿಂಕ್ಲರ್ ಸೇರಿದಂತೆ ಎಲ್ಲಾ ರೀತಿಯ ಸ್ಪ್ರಿಂಕ್ಲರ್​ಗಳಿಗೆ ಶೇ. 12ರಷ್ಟು ಜಿಎಸ್​ಟಿ.

ಇದನ್ನೂ ಓದಿ: ಕ್ವಾಂಟ್ ಮ್ಯೂಚುವಲ್ ಫಂಡ್ ಮೇಲೆ ಫ್ರಂಟ್ ರನಿಂಗ್ ಕಪ್ಪು ಚುಕ್ಕೆ; ಸೆಬಿಯಿಂದ ತನಿಖೆ; ಏನಿದು ಪ್ರಕರಣ?

ತೆರಿಗೆ ವಿನಾಯಿತಿ ಇರುವ ಟ್ರೇಡ್ ಮತ್ತು ಸರ್ವಿಸಸ್

  • ರಕ್ಷಣಾ ಕ್ಷೇತ್ರದ ಕೆಲ ನಿರ್ದಿಷ್ಟ ವಸ್ತುಗಳ ಆಮದು ಮೇಲೆ ಐಜಿಎಸ್​ಟಿಯಿಂದ ವಿನಾಯಿತಿ ಇದೆ. ಇದನ್ನು ಇನ್ನೂ ಐದು ವರ್ಷ ವಿಸ್ತರಿಸಲಾಗಿದೆ.
  • RAMA ಯೋಜನೆ ಅಡಿಯಲ್ಲಿ ರೀಸರ್ಚ್ ಉಪಕರಣಗಳ ಆಮದಿಗೆ ಐಜಿಎಸ್​ಟಿ ವಿನಾಯಿತಿ.
  • ಪ್ಲಾಟ್​ಫಾರ್ಮ್​ ಟಿಕೆಟ್ ಮಾರಾಟ, ಬ್ಯಾಟರಿ ಚಾಲಿತ ಕಾರ್ ಸರ್ವಿಸ್ ಸೇರಿದಂತೆ ಸಾರ್ವಜನಿಕರಿಗೆ ರೈಲ್ವೆಯಿಂದ ನೀಡಲಾಗುವ ಸರ್ವಿಸ್​ಗೆ ಜಿಎಸ್​ಟಿಯಿಂದ ವಿನಾಯಿತಿ ನೀಡಲಾಗುವುದು.
  • ಇನ್ಷೂರೆನ್ಸ್ ಕಂಪನಿಗಳ ಮಧ್ಯೆ ನಡೆಯುವ ಕೋ ಇನ್ಷೂರೆನ್ಸ್ ಪ್ರೀಮಿಯಮ್​ಗಳು ಮತ್ತು ರೀ-ಇನ್ಷೂರೆನ್ಸ್ ಕಮಿಷನ್​ನ ವಹಿವಾಟುಗಳಿಗೆ ಜಿಎಸ್​ಟಿ ಇರುವುದಿಲ್ಲ.

ಜಿಎಸ್​ಟಿ ಸಭೆಯಲ್ಲಿ ಇತರ ಕ್ರಮಗಳು

  • ಜಿಎಸ್​ಟಿ ರಿಜಿಸ್ಟ್ರೇಶನ್​ನಲ್ಲಿ ವಂಚನೆ ನಿಯಂತ್ರಿಸಲು ಬಯೋಮೆಟ್ರೆಕ್ ಆಧಾರಿತ ಆಧಾರ್ ದೃಢೀಕರಣ ಅಗತ್ಯ.
  • 2017-18ರಿಂದ 2019-20ರವರೆಗೆ ಇರುವ ಟ್ಯಾಕ್ಸ್ ಡಿಮ್ಯಾಂಡ್ ಮೊತ್ತವನ್ನು 2025ರ ಮಾರ್ಚ್ 31ರೊಳಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ವಿನಾಯಿತಿ ಸಿಗುತ್ತದೆ.
  • ಮದ್ಯ ತಯಾರಿಕೆಯಲ್ಲಿ ಬಳಸಲಾಗುವ ಇಎನ್​ಎ ಆಲ್ಕೋಹಾಲ್ ಅನ್ನು ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗುವುದು.
  • ಎಲೆಕ್ಟ್ರಾನಿಕ್ ಕಾಮರ್ಸ್ ಆಪರೇಟರ್ಸ್​ಗೆ ವಿಧಿಸಲಾಗುವ ಟಿಸಿಎಸ್ ತೆರಿಗೆಯನ್ನು ಶೇ. 1ರಿಂದ ಶೇ. 0.5ಕ್ಕೆ ಇಳಿಸಲಾಗುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ