Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ್ ಎಲೆಕ್ಟ್ರಾನಿಕ್ಸ್​ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್​ ನೀಡಿದ ಎಚ್​ಎಎಲ್

ಎಚ್​ಎಎಲ್​ನಿಂದ ಆತ್ಮನಿರ್ಭರ್​ ಯೋಜನೆ ಅಡಿಯಲ್ಲಿ ಬಿಇಎಲ್​ ಜತೆಗೆ ರೂ. 2400 ಕೋಟಿಯ ಅತಿ ದೊಡ್ಡ ಆರ್ಡರ್ ಮಾಡಿದೆ. ಆ ಬಗ್ಗೆ ವಿವರ ಇಲ್ಲಿದೆ.

ಭಾರತ್ ಎಲೆಕ್ಟ್ರಾನಿಕ್ಸ್​ಗೆ ಆತ್ಮನಿರ್ಭರ್ ಪ್ಯಾಕೇಜ್ ಅಡಿ ರೂ. 2400 ಕೋಟಿಯ ಆರ್ಡರ್​ ನೀಡಿದ ಎಚ್​ಎಎಲ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 16, 2021 | 11:57 PM

ಬೆಂಗಳೂರು: ದೇಶೀ ಉತ್ಪಾದನೆಗೆ ಉತ್ತೇಜನ ನೀಡುವ ಸಲುವಾಗಿ, LCA ತೇಜಸ್ MklA ಕಾರ್ಯಕ್ರಮಕ್ಕಾಗಿ 20 ವಿಧದ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಪೂರೈಕೆಗಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಜತೆಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ (HAL) ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದೆ. 2023ರಿಂದ 2028ರ ವರೆಗಿನ ಐದು ವರ್ಷಗಳ ಒಪ್ಪಂದವು ರೂ. 2,400 ಕೋಟಿಗಳ ಮೌಲ್ಯದ್ದಾಗಿದೆ ಮತ್ತು ನಿರ್ಣಾಯಕ ಏವಿಯಾನಿಕ್ಸ್ ಲೈನ್ ರಿಪ್ಲೇಸಬಲ್ ಯೂನಿಟ್‌ಗಳು (ಎಲ್‌ಆರ್‌ಯುಗಳು), ಫ್ಲೈಟ್ ಕಂಟ್ರೋಲ್ ಕಂಪ್ಯೂಟರ್‌ಗಳು ಮತ್ತು ರಾತ್ರಿ ಹಾರುವ ಎಲ್‌ಆರ್‌ಯುಗಳನ್ನು ಪೂರೈಸುವುದನ್ನು ಒಳಗೊಂಡಿರುತ್ತದೆ. ‘ಆತ್ಮ ನಿರ್ಭರ್ ಭಾರತ್’ ಅಭಿಯಾನವನ್ನು ಉತ್ತೇಜಿಸುವ ಯಾವುದೇ ಭಾರತೀಯ ಕಂಪೆನಿಗೆ ಎಚ್‌ಎಎಲ್ ನೀಡಿದ ಅತಿದೊಡ್ಡ ಆರ್ಡರ್ ಇದಾಗಿದೆ.

“LCA ತೇಜಸ್ ಪ್ರೋಗ್ರಾಂ ಎಚ್ಎಎಲ್​, ಡಿಆರ್​ಡಿಒ ಮತ್ತು ಬಿಇಎಲ್​ನಂತಹ ಭಾರತೀಯ ರಕ್ಷಣಾ ಸಂಸ್ಥೆಗಳ ಮಧ್ಯದ ಬಾಂಧವ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ತೇಜಸ್ MklAಗಾಗಿ 20 ವಿಧದ ಪ್ರಮುಖ ಏವಿಯಾನಿಕ್ಸ್ LRUಗಳ ಅಭಿವೃದ್ಧಿ ಮತ್ತು ಪೂರೈಕೆಯ ಈಗಿನ ಆರ್ಡರ್ ಮೇಕ್ ಇನ್ ಇಂಡಿಯಾ ಚಟುವಟಿಕೆ ಆಗಿದೆ. ಎಚ್‌ಎಎಲ್ ಸ್ವದೇಶಿ ಉತ್ಪನ್ನಗಳಿಗೆ ಬದ್ಧವಾಗಿದೆ,” ಎಂದು ಎಚ್‌ಎಎಲ್ ಸಿಎಂಡಿ ಆರ್. ಮಾಧವನ್ ಹೇಳಿದ್ದಾರೆ. “ಪ್ರತಿಷ್ಠಿತ LCA ತೇಜಸ್ ಕಾರ್ಯಕ್ರಮಕ್ಕಾಗಿ ಎಚ್​ಎಎಲ್​ನಿಂದ ಈ ಆರ್ಡರ್​ ಸ್ವೀಕರಿಸಲು ನಮಗೆ ಸಂತೋಷವಾಗಿದೆ ಮತ್ತು ಎಚ್​ಎಎಲ್​ನೊಂದಿಗೆ ಬಲವಾದ ಪಾಲುದಾರಿಕೆ ಹಾಗೂ ಜಂಟಿ ಯಶಸ್ಸನ್ನು ಮುಂದುವರಿಸಲು ಎದುರು ನೋಡುತ್ತಿದ್ದೇವೆ,” ಎಂದು ಬಿಇಎಲ್​ ಸಿಎಂಡಿ ಆನಂದಿ ರಾಮಲಿಂಗ್ ಹೇಳಿದ್ದಾರೆ.

83 ತೇಜಸ್ ಎಂಕೆಎಲ್ಎ ಫೈಟರ್ ಫ್ಲೀಟ್‌ಗೆ ಈ ವ್ಯವಸ್ಥೆಗಳ ಪೂರೈಕೆ ಆದೇಶವನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಎರಡು ವಿಭಾಗಗಳು ಬೆಂಗಳೂರು ಮತ್ತು ಪಂಚಕುಲ (ಹರ್ಯಾಣ)ದಲ್ಲಿ ಕಾರ್ಯಗತಗೊಳಿಸುತ್ತವೆ. ಎಲ್ಲ ಒಪ್ಪಂದದ ವಸ್ತುಗಳನ್ನು ಬಿಇಎಲ್​ನಿಂದ ಎಚ್​ಎಎಲ್​ಗೆ ಸನ್ನದ್ಧ ಸ್ಥಿತಿಯಲ್ಲಿ ತಲುಪಿಸಲಾಗುತ್ತದೆ. 83 ತೇಜಸ್ MkJA ಆದೇಶದ ಅಡಿಯಲ್ಲಿ IAFಗೆ ವಿತರಣೆಗಳು ಹಣಕಾಸು ವರ್ಷ 2023-24ರಿಂದ ಪ್ರಾರಂಭವಾಗುತ್ತವೆ. ಸ್ವದೇಶಿ-ನಿರ್ಮಿತ ಯುದ್ಧವಿಮಾನವು ಸ್ವದೇಶಿ ಆರ್‌ಎನ್‌ಎಚ್‌ಟಿ ಕಂಟ್ರೋಲ್ ಕಂಪ್ಯೂಟರ್‌ಗಳು, ಏರ್ ಡೇಟಾ ಕಂಪ್ಯೂಟರ್‌ಗಳನ್ನು ಹೊಂದಿದ್ದು, ಈ ಒಪ್ಪಂದದ ಅಡಿಯಲ್ಲಿ ಬಿಇಎಲ್‌ನಿಂದ ಸರಬರಾಜು ಮಾಡಲಾಗುವುದು. ಈ ವ್ಯವಸ್ಥೆಗಳನ್ನು ಡಿಆರ್‌ಡಿಒ ಮತ್ತು ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ವಿವಿಧ ಲ್ಯಾಬ್‌ಗಳು ವಿನ್ಯಾಸಗೊಳಿಸಿವೆ ಮತ್ತು ಅಭಿವೃದ್ಧಿಪಡಿಸಿವೆ. ಎಚ್​ಎಎಲ್​ನ LCA ತೇಜಸ್ ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಇಪಿ ಜಯದೇವ ಅವರು ಮನೋಜ್ ಜೈನ್, ಜನರಲ್ ಮ್ಯಾನೇಜರ್ (EW&A)ಗೆ ಗುತ್ತಿಗೆ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: ರಕ್ಷಣಾ ಶಸ್ತ್ರಾಸ್ತ್ರಗಳ ಎರಡನೇ ಅತಿ ದೊಡ್ಡ ಆಮದುದಾರ ದೇಶ ಭಾರತ, ಮೊದಲ ಸ್ಥಾನದಲ್ಲಿ ಸೌದಿ ಅರೇಬಿಯಾ

ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ
ಸಿದ್ದರಾಮಯ್ಯ ಸರ್ಕಾರ ಭ್ರಷ್ಟವೆಂದು ನಾನು ಹೇಳಿಲ್ಲ: ಬಸವರಾಜ ರಾಯರೆಡ್ಡಿ