15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್​​ಡಿಎಫ್​ಸಿ ಬ್ಯಾಂಕ್; ಏನು ಕಾರಣ?

HDFC bank sells loans of Rs 15,000 crore: ಎಚ್​ಡಿಎಫ್​ಸಿ ಬ್ಯಾಂಕ್ ತನ್ನ ಕೆಲ ಗೃಹ ಸಾಲ ಮತ್ತು ವಾಹನ ಸಾಲಗಳನ್ನು ಮಾರಿದೆ. ಕ್ರೆಡಿಟ್ ಡೆಪಾಸಿಟ್ ರೇಶಿಯೋ ಕಡಿಮೆ ಮಾಡುವ ಸಲುವಾಗಿ ದೇಶದ ಅತಿದೊಡ್ಡ ಬ್ಯಾಂಕ್ ಈ ಕ್ರಮ ಕೈಗೊಂಡಿದೆ. ವರದಿಗಳ ಪ್ರಕಾರ ಎಚ್​ಡಿಎಫ್​ಸಿ ಬ್ಯಾಂಕ್ 6,000 ಕೋಟಿ ರೂ ಮೊತ್ತದ ಗೃಹಸಾಲ, 9,000 ಕೋಟಿ ರೂ ಮೊತ್ತದ ಕಾರ್ ಸಾಲವನ್ನು ಮಾರಿದೆ.

15,000 ಕೋಟಿ ರೂ ಮೊತ್ತದ ಸಾಲವನ್ನೇ ಮಾರಿಬಿಟ್ಟ ಎಚ್​​ಡಿಎಫ್​ಸಿ ಬ್ಯಾಂಕ್; ಏನು ಕಾರಣ?
ಎಚ್​ಡಿಎಫ್​ಸಿ

Updated on: Sep 27, 2024 | 1:02 PM

ಮುಂಬೈ, ಸೆಪ್ಟೆಂಬರ್ 27: ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿದ ಎಚ್​ಡಿಎಫ್​ಸಿ ಸುಮಾರು 15,000 ಕೋಟಿ ರೂ ಮೊತ್ತದ ಗೃಹ ಸಾಲ ಮತ್ತು ಕಾರು ಸಾಲಗಳನ್ನು ಮಾರಿರುವುದು ತಿಳಿದುಬಂದಿದೆ. ಇದರಲ್ಲಿ 6,000 ಕೋಟಿ ರೂ ಮೊತ್ತದ ಗೃಹ ಸಾಲ, ಹಾಗೂ 9,000 ಕೋಟಿ ರೂ ಮೊತ್ತದ ಕಾರ್ ಲೋನ್​ಗಳು ಸೇರಿವೆ. ಆರು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಎಚ್​ಡಿಎಫ್​ಸಿಯ ಗೃಹ ಸಾಲಗಳನ್ನು ಖರೀದಿಸಿವೆ. ಖಾಸಗಿ ಡೀಲ್​ಗಳ ಮೂಲಕ ಈ ವ್ಯವಹಾರ ನಡೆದಿದೆ. ಎಚ್​ಡಿಎಫ್​ಸಿಯ ಕಾರ್ ಲೋನ್​ಗಳನ್ನು ಮುಂಬೈನ ಹಲವು ಸ್ಥಳೀಯ ಅಸೆಟ್ ಮ್ಯಾನೇಜ್ಮೆಮೆಂಟ್ ಕಂಪನಿಗಳು ಪಡೆದುಕೊಂಡಿವೆ.

ಎಚ್​ಡಿಎಫ್​ಸಿ ತನ್ನ ಸಾಲಗಳನ್ನು ಮಾರಿದ್ದು ಯಾಕೆ?

ಬ್ಯಾಂಕುಗಳು ಠೇವಣಿ ಮತ್ತು ಸಾಲ ಮಧ್ಯೆ ಸಮತೋಲನ ಹೊಂದಿರುವುದು ಅಗತ್ಯ. ಎಚ್​ಡಿಎಫ್​ಸಿ ಸೇರಿದಂತೆ ಬಹಳಷ್ಟು ಬ್ಯಾಂಕುಗಳು ಠೇವಣಿಗಳ ಕೊರತೆ ಎದುರಿಸುತ್ತಿವೆ. ಅದರಲ್ಲೂ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದರ ಹೊರೆ ತೀರಾ ಹೆಚ್ಚಿತ್ತು. ಎಚ್​ಡಿಎಫ್​ಸಿ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್​ಗೆ ಸಾಲದ ಪ್ರಮಾಣ ವಿಪರೀತ ಆಗಿದೆ. ಎಚ್​ಡಿಎಫ್​ಸಿ ಗೃಹ ಸಾಲಗಳನ್ನು ನೀಡುತ್ತಿದ್ದ ಸಂಸ್ಥೆ. ಆ ಸಾಲವೆಲ್ಲವೂ ಎಚ್​ಡಿಎಫ್​ಸಿ ಬ್ಯಾಂಕ್​ಗೆ ವರ್ಗವಾಗಿತ್ತು.

ಬ್ಯಾಂಕುಗಳು ಠೇವಣಿ ಮತ್ತು ಸಾಲದ ಅನುಪಾತ ಸರಿಯಾಗಿ ಪಾಲಿಸಬೇಕು ಎಂದು ಆರ್​ಬಿಐ ನಿರ್ದೇಶನ ಇದೆ. ಈ ಕಾರಣಕ್ಕೆ ಎಚ್​ಡಿಎಫ್​ಸಿ ತನ್ನ ಸಾಲಗಳನ್ನು ಮಾರಿ ಕೈತೊಳೆದುಕೊಳ್ಳುವುದು ಅಗತ್ಯ ಇತ್ತು.

ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ

ಮಾರ್ಚ್ ವೇಳೆ ಎಚ್​ಡಿಎಫ್​ಸಿ ಬ್ಯಾಂಕ್​ನ ಕ್ರೆಡಿಟ್ ಮತ್ತು ಡೆಪಾಸಿಟ್ ರೇಶಿಯೋ ಶೇ. 104ರಷ್ಟಿತ್ತು. ಅಂದರೆ ಡೆಪಾಸಿಟ್​ಗಿಂತ ಸಾಲದ ಪ್ರಮಾಣ ಎರಡು ಪಟ್ಟು ಹೆಚ್ಚಿತ್ತು. ಹಿಂದಿನ ಮೂರು ವರ್ಷಗಳಲ್ಲಿ ಅದರ ಅನುಪಾತ ಶೇ. 85ರಿಂದ ಶೇ. 88ರ ಶ್ರೇಣಿಯಲ್ಲಿ ಇತ್ತು. ಜೂನ್ ತಿಂಗಳಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್ 5,000 ಕೋಟಿ ರೂ ಸಾಲವನ್ನು ಮಾರಿತ್ತು. ಈಗ 15,000 ಕೋಟಿ ರೂ ಮೊತ್ತದ ಸಾಲವನ್ನು ಮಾರಿದರೆ. ಅಲ್ಲಿಗೆ ಕಳೆದ ಮೂರು ತಿಂಗಳಲ್ಲಿ ಒಟ್ಟು 20,000 ಕೋಟಿ ರೂ ಸಾಲವನ್ನು ಎಚ್​ಡಿಎಫ್​ಸಿ ಮಾರಿ, ಹೊರೆ ತಗ್ಗಿಸಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us