AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank CEO Salaries: ಭಾರತದಲ್ಲಿ ಹಣಕಾಸು ವರ್ಷ 2022ಕ್ಕೆ  ಹೆಚ್ಚಿನ ವೇತನ ಪಡೆದ  ಟಾಪ್​ ಸಿಒಗಳು

ಭಾರತದ ಟಾಪ್ ಸಿಇಒಗಳ ಬಗ್ಗೆ ವಿವರ ಇಲ್ಲಿದೆ. ಹಾಂ ಇದು ವೇತನಕ್ಕೆ ಸಮಬಂಧಿಸಲಾಗಿದ್ದು, ಯಾರ ವೇತನ ಎಷ್ಟು ಎಂಬ ಮಾಹಿತಿ ಈ ಲೇಖನದಲ್ಲಿದೆ,

Bank CEO Salaries: ಭಾರತದಲ್ಲಿ ಹಣಕಾಸು ವರ್ಷ 2022ಕ್ಕೆ  ಹೆಚ್ಚಿನ ವೇತನ ಪಡೆದ  ಟಾಪ್​ ಸಿಒಗಳು
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 19, 2022 | 8:34 AM

Share

ಅನೇಕ ಬ್ಯಾಂಕ್​ಗಳು ಹಣಕಾಸಿನ ವರ್ಷ 2022ಕ್ಕಾಗಿ ವಾರ್ಷಿಕ ವರದಿಯನ್ನು ಪ್ರಕಟಿಸಿವೆ ಮತ್ತು ಅವುಗಳ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒಗಳು ಅತ್ಯುತ್ತಮವಾದ ಟೇಕ್​ಹೋಮ್ ವೇತನ (Salary) ಪಡೆದಿದ್ದಾರೆ. ಯೆಸ್ ಬ್ಯಾಂಕ್ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಲು ಇತ್ತೀಚಿನದು. ಆದಾಗ್ಯೂ, ಎಸ್‌ಬಿಐ ಅಧ್ಯಕ್ಷ ದಿನೇಶ್ ಖರ ಮತ್ತು ಯೆಸ್ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಪ್ರಕಾಶ್ ಕುಮಾರ್ ಅವರ ವೇತನದ ನಡುವೆ ಭಾರಿ ಅಂತರವನ್ನು ನೋಡುವುದು ಆಸಕ್ತಿದಾಯಕವಾಗಿದೆ. ಯೆಸ್ ಬ್ಯಾಂಕ್ ಮಾತ್ರವಲ್ಲ, ಇತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ತಮ್ಮ ಎಂಡಿಗಳು ಮತ್ತು ಸಿಇಒಗಳಿಗೆ ಉತ್ತಮ ಸಂಬಳವನ್ನು ನೀಡುತ್ತಿವೆ. ಎಸ್‌ಬಿಐನ ಅಧ್ಯಕ್ಷ ದಿನೇಶ್ ಕುಮಾರ್ ಖರ ಅವರು ಹಣಕಾಸು ವರ್ಷ 2022ರಲ್ಲಿ ಒಟ್ಟು ರೂ. 34,42,500 ಅನ್ನು ಟೇಕ್ ಹೋಮ್ ಸ್ಯಾಲರಿ ಪಡೆದಿದ್ದಾರೆ. ಇದು ರೂ. 27 ಲಕ್ಷ ಮೂಲ ವೇತನ ಮತ್ತು ರೂ. 7,42,500 ತುಟ್ಟಿಭತ್ಯೆಯನ್ನು ಒಳಗೊಂಡಿದೆ.

ಯೆಸ್ ಬ್ಯಾಂಕ್‌ನ ಮುಖ್ಯಸ್ಥರ ವೇತನ ಎಸ್‌ಬಿಐ ಅಧ್ಯಕ್ಷರಿಗಿಂತ 7 ಪಟ್ಟು ಹೆಚ್ಚು.

ಹಣಕಾಸು ವರ್ಷ 2022ರ ವಾರ್ಷಿಕ ವರದಿಯಲ್ಲಿ ಯೆಸ್ ಬ್ಯಾಂಕ್ ಎಂಡಿ ಮತ್ತು ಸಿಇಒ ಪ್ರಶಾಂತ್ ಕುಮಾರ್ ರೂ. 2.52 ಕೋಟಿಗಿಂತ ಹೆಚ್ಚಿನ ಸಂಬಳವನ್ನು ಪಡೆದಿದ್ದಾರೆ ಎಂದು ಬಹಿರಂಗಪಡಿಸಲಾಗಿದೆ. ಇದರಲ್ಲಿ ಮೂಲ ಪಾವತಿಯಾಗಿ ರೂ 2.13 ಕೋಟಿ ಸೇರಿದ್ದು, ಆದಾಯ ತೆರಿಗೆ ಕಾಯ್ದೆಯಡಿ ಸವಲತ್ತುಗಳು 34.02 ಲಕ್ಷ ಮತ್ತು ಇತರ ಕಮಿಷನ್‌ಗಳು ರೂ. 5.40 ಲಕ್ಷ ಇತ್ತು. ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್‌ನಂತಹ ಇತರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ತಮ್ಮ ಎಂಡಿಗಳು ಮತ್ತು ಸಿಇಒಗಳಿಗೆ ಎಸ್‌ಬಿಐ ಅಧ್ಯಕ್ಷರಿಗೆ ಹೋಲಿಸಿದರೆ ಹೆಚ್ಚಿನ ಆದಾಯವನ್ನು ಪಾವತಿಸಿವೆ.

ಬ್ಯಾಂಕ್ ಆಫ್ ಬರೋಡಾದ ಎಂಡಿ ಮತ್ತು ಸಿಇಒ ಸಂಜೀವ್ ಚಡ್ಡಾ ಅವರು ಹಣಕಾಸು ವರ್ಷ 2022ರಲ್ಲಿ ರೂ. 40,46,242ರ ವೇತನವನ್ನು ಪಡೆದಿದ್ದಾರೆ. ಇದರಲ್ಲಿ ರೂ. 38,19,051 ಮೂಲ ವೇತನ ಮತ್ತು ರೂ. 2,27,191 ಸವಲತ್ತುಗಳು ಸೇರಿವೆ. ಈ ಮಧ್ಯೆ ಹಣಕಾಸು ವರ್ಷ 2022ರಲ್ಲಿ ಕೆನರಾ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಎಲ್‌ವಿ ಪ್ರಭಾಕರ್ ಅವರ ಆದಾಯವು ರೂ. 32,64,338.43 ರಷ್ಟಿದ್ದು, 2021ರಲ್ಲಿ ಪಡೆದಿದ್ದ ರೂ. 36,89,417ಕ್ಕಿಂತ ಅಧಿಕವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಎಂ.ಡಿ. ಮತ್ತು ಸಿಇಒ ಸಿಎಚ್ ಎಸ್​ಎಸ್​ ಮಲ್ಲಿಕಾರ್ಜುನ ರಾವ್ ಅವರಿಗೆ ಹಣಕಾಸು ವರ್ಷ 2022ರಲ್ಲಿ ಒಟ್ಟು ರೂ. 79,92,005 ಪಾವತಿಸಿದೆ. ಸಂಭಾವನೆಯ ವಿವರಗಳಲ್ಲಿ ಆರ್ಥಿಕ ವರ್ಷದಲ್ಲಿ ಭವಿಷ್ಯ ನಿಧಿ ಕೊಡುಗೆ ರೂ. 2,22,450 ಮತ್ತು ವೈದ್ಯಕೀಯಕ್ಕೆ ರೂ. 1,42,934 ಎಂದು ನಮೂದಿಸಲಾಗಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೊಟಕ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ಗಳು ತಮ್ಮ ಹಣಕಾಸು ವರ್ಷ 2022ರ ವಾರ್ಷಿಕ ವರದಿಯನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಎಚ್​ಡಿಎಫ್​ಸಿ ಬ್ಯಾಂಕ್‌ನ ಮಾತೃಸಂಸ್ಥೆ ಎಚ್​ಡಿಎಫ್​ಸಿ ಹಣಕಾಸು ವರ್ಷ 2022ಕ್ಕಾಗಿ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಿದೆ. ಎಚ್‌ಡಿಎಫ್‌ಸಿಯ ಎಂಡಿ, ಉಪಾಧ್ಯಕ್ಷ ಮತ್ತು ಸಿಇಒ ಕೇಕಿ ಎಂ. ಮಿಸ್ತ್ರಿ ಅವರ ಹಣಕಾಸು ವರ್ಷ 2022ರ ವೇತನವು ರೂ. 19.03 ಕೋಟಿಗಳಷ್ಟಿತ್ತು. ಮಿಸ್ತ್ರಿ ಅವರ ಸಂಬಳವು ಎಸ್‌ಬಿಐನ ಖರ ಈ ಆರ್ಥಿಕ ವರ್ಷದಲ್ಲಿ ಗಳಿಸಿದ್ದಕ್ಕಿಂತ 55 ಪಟ್ಟು ಹೆಚ್ಚಾಗಿದೆ. ಮಿಸ್ತ್ರಿಯವರ ಮೂಲ ವೇತನವು ಹಣಕಾಸು ವರ್ಷ 2022ರಲ್ಲಿ ರೂ. 7.001 ಕೋಟಿಗಳಷ್ಟಿತ್ತು. ಆದರೆ ಅವರು ರೂ. 1.539 ಕೋಟಿಗಳನ್ನು ಸವಲತ್ತುಗಳು, ಇತರ ಪ್ರಯೋಜನಗಳು, ಭತ್ಯೆಗಳು ಮತ್ತು ನಿವೃತ್ತಿ ಪ್ರಯೋಜನಗಳನ್ನು ಗಳಿಸಿದ್ದಾರೆ. ಇದೇ ವೇಳೆ ಅವರಿಗೆ ಹಣಕಾಸು ವರ್ಷದಲ್ಲಿ ರೂ.10.485 ಕೋಟಿ ಕಮಿಷನ್ ಕೂಡ ನೀಡಲಾಗಿದೆ.

2021ರ ಹಣಕಾಸು ವರ್ಷದ ಖಾಸಗಿ ಬ್ಯಾಂಕ್‌ಗಳ ನಾಯಕರಿಗೆ ಹೋಲಿಸಿದರೆ ಹಣಕಾಸು ವರ್ಷ 2022ರಲ್ಲಿ ಎಸ್​ಬಿಐ ಮುಖ್ಯಸ್ಥರ ವಾರ್ಷಿಕ ವೇತನವು ಇನ್ನೂ ಕಡಿಮೆಯಾಗಿದೆ. ಹಣಕಾಸು ವರ್ಷ 2021ರಲ್ಲಿ ಎಚ್​ಡಿಎಫ್​ಸಿ ಬ್ಯಾಂಕ್‌ನ ಪ್ರಸ್ತುತ ಸಿಇಒ ಶಶಿಧರ್ ಜಗದೀಶನ್ ರೂ. 4.77 ಕೋಟಿ ಗಳಿಸಿದ್ದರೆ, ಅವರ ಹಿಂದಿನ ಆದಿತ್ಯ ಪುರಿ ಅದೇ ಹಣಕಾಸು ವರ್ಷದಲ್ಲಿ ರೂ. 13.82 ಕೋಟಿ ತೆಗೆದುಕೊಂಡಿದ್ದಾರೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪುರಿ ಕೂಡ ಎಸ್‌ಬಿಐ ಅಧ್ಯಕ್ಷರ ವೇತನಕ್ಕಿಂತ 40 ಪಟ್ಟು ಹೆಚ್ಚು ಪಡೆದಿದ್ದಾರೆ. ಅಲ್ಲದೆ, ಆಕ್ಸಿಸ್ ಬ್ಯಾಂಕ್‌ನ ಸಿಇಒ ಮತ್ತು ಎಂಡಿ ಅಮಿತಾಭ್ ಚೌಧರಿ ಟೇಕ್​ ಹೋಮ್​ ಸ್ಯಾಲರಿ ರೂ. 6.52 ಕೋಟಿ ತೆಗೆದುಕೊಂಡರೆ, ಐಸಿಐಸಿಐ ಬ್ಯಾಂಕ್‌ನ ಸಂದೀಪ್ ಭಕ್ಷಿ ಅವರ ಸಂಬಳ ರೂ. 1.01 ಕೋಟಿಯಷ್ಟಿದೆ, ಇದು ಸಾಂಕ್ರಾಮಿಕ ರೋಗದಿಂದಾಗಿ ಅವರ ನಿಗದಿತ ಪರಿಹಾರವನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿದ ನಂತರದ ಮೊತ್ತವಾಗಿದೆ. ಕೊಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೊಟಕ್ ಅವರು ಸಾಂಕ್ರಾಮಿಕ ರೋಗದಿಂದಾಗಿ ಹಣಕಾಸು ವರ್ಷ 2021ರಲ್ಲಿ 1 ರೂಪಾಯಿಯನ್ನು ತೆಗೆದುಕೊಂಡರು, ಆದರೆ ಹಣಕಾಸು ವರ್ಷ 2020ರಲ್ಲಿ ಅವರ ಸಂಬಳ ರೂ.2.65 ಕೋಟಿ ಆಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್  ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ