AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಇಪ್ಯಾನ್​ ಅನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

Instant ePAN Online: ಆಧಾರ್ ಸಂಖ್ಯೆ ಬಳಸಿ ತಕ್ಷಣ ePAN ಆನ್​ಲೈನ್​ನಲ್ಲಿ ಪಡೆಯುವುದು ಹೇಗೆ?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 28, 2022 | 1:36 PM

Share

ಆಧಾರ್ ಕಾರ್ಡ್, ಪರ್ಮನೆಂಟ್ ಅಕೌಂಟ್ ನಂಬರ್ (PAN), ವೋಟರ್ ಐಡಿ -ಇವೆಲ್ಲ ಬಹಳ ಮುಖ್ಯವಾದ ದಾಖಲೆಗಳು. ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆಯಬೇಕು ಅಂದರೆ ಇವುಗಳು ತುಂಬ ಮುಖ್ಯ. ನಿಮ್ಮ ಬಳಿ ಇವೆಲ್ಲ ಇದೆಯಾ? ಒಂದು ವೇಳೆ ಇಲ್ಲ ಎಂದಾದಲ್ಲಿ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮೂಲಕ ನೀವು ಅಪ್ಲೈ ಮಾಡಬಹುದು. ನಿಮ್ಮ ಬಳಿ ಆಧಾರ್​ ಕಾರ್ಡ್ ಇದೆ ಅಂತಾದರೆ ಅದರ ಸಂಖ್ಯೆಯನ್ನು ಬಳಸಿ ePANಗೆ ಅಪ್ಲೈ ಮಾಡಬಹುದು. ಆದರೆ ಗೊತ್ತಿರಬೇಕಾದ ಸಂಗತಿ ಏನೆಂದರೆ, ಒಂದು ವೇಳೆ ಪ್ಯಾನ್ ಇಲ್ಲ, ಆದರೆ ಸಿಂಧುವಾದ ಆಧಾರ್​ ಇದೆ ಹಾಗೂ ಕೆವೈಸಿ ಮಾಹಿತಿ ಅಪ್​ಡೇಟ್​ ಆಗಿದೆ ಎಂದಾಗ ಮಾತ್ರ ಈ ಸೇವೆಯನ್ನು ಬಳಸುವುದು ಸಾಧ್ಯ. ಆಧಾರ್​ ಕಾರ್ಡ್ ಅನ್ನು UIDAIನಿಂದ ಒದಗಿಸಲಾಗುತ್ತದೆ. ಐಟಿಆರ್​ ಫೈಲಿಂಗ್​ಗೆ, ಬ್ಯಾಂಕ್​ ಖಾತೆ ತೆರೆಯುವುದಕ್ಕೆ ಮುಂತಾದವಕ್ಕೆ ಅದರ ಉಪಯೋಗ ಇದೆ.

ಪ್ಯಾನ್​ ಕಾರ್ಡ್​ ಅನ್ನು ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುತ್ತದೆ. ಇದು ಡಿಜಿಟಲ್​ ಸಹಿ ಆದಂಥ ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ಫಾರ್ಮಾಟ್​ನ ಪ್ಯಾನ್​ಕಾರ್ಡ್. ಐಟಿಆರ್​ ಫೈಲಿಂಗ್​ ಮಾಡುವಾಗ ಪ್ಯಾನ್​ ನಮೂದಿಸುವುದು ಕಡ್ಡಾಯ ಆಗಿದೆ. ನಿಮ್ಮ ಆಧಾರ್ ಹಾಗೂ ಮೊಬೈಲ್ ನಂಬರ್ ಅನ್ನು ಬಳಸಿ ಇಪ್ಯಾನ್ ಜನರೇಟ್ ಮಾಡಬಹುದು. ಇದು ಉಚಿತವಾಗಿರುತ್ತದೆ ಹಾಗೂ ಆನ್​ಲೈನ್​ನಲ್ಲಿ ಮಾಡಬಹುದಾಗಿರುತ್ತದೆ.

ಆಧಾರ್​ ಕಾರ್ಡ್​ ಮೂಲಕ ePANಗೆ ಅಪ್ಲೈ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರ ಇಲ್ಲಿದೆ:

ಹಂತ 1: ಆದಾಯ ತೆರಿಗೆ ಅಧಿಕೃತ ವೆಬ್​ಸೈಟ್ ಅಥವಾ ಲಿಂಕ್ – https://www.incometax.gov.in/iec/foportalಗೆ ​ಗೆ ತೆರಳಬೇಕು.

ಹಂತ 2: ಹೋಮ್​ ಪೇಜ್​ನಲ್ಲಿ ಲಭ್ಯ ಇರುವ “ಕ್ವಿಕ್ ಲಿಂಕ್ಸ್” vಇಭಾಗದಿಂದ “ಇನ್​ಸ್ಟಂಟ್​ ಇಪ್ಯಾನ್” ಆಯ್ಕೆಯನ್ನು ಕ್ಲಿಕ್ ಮಾಡಬೇಕು.

ಹಂತ 3: ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಗೆಟ್​ ನ್ಯೂ ಇ-ಪ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

ಹಂತ 4: ಪ್ಯಾನ್​ ವಿತರಣೆಗಾಗಿ ಆಧಾರ್​ ಸಂಖ್ಯೆಯನ್ನು ನಮೂದಿಸಬೇಕು ಮತ್ತು ಮುಂದುವರಿಯಿರಿ ಬಟನ್ ಒತ್ತುವ ಮುನ್ನ, ನಾನು ಖಾತ್ರಿ ಪಡಿಸುತ್ತೇನೆ ಎಂಬುದರ ಮೇಲೆ ಟಿಕ್ ಮಾಡಬೇಕು.

ಹಂತ 5: ಇದಾದ ಮೇಲೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅಗತ್ಯ ಸ್ಥಳದಲ್ಲಿ ಒಟಿಪಿ ಹಾಕಬೇಕು ಮತ್ತು ವ್ಯಾಲಿಡೇಟ್ ಆಧಾರ್ ಒಟಿಪಿ ಹಾಗೂ ಮುಂದುವರಿಯಿರಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

ಹಂತ 6: ಒಟಿಪಿ ವ್ಯಾಲಿಡೇಷನ್ ಪುಟದಲ್ಲಿ ಇರುವ ನಿಯಮ, ನಿಬಂಧನಗೆಳನ್ನು ಸಮ್ಮತಿಸಬೇಕು ಹಾಗೂ ಮುಂದುವರಿಯಿರಿ ಬಟನ್​ ಮೇಲೆ ಕ್ಲಿಕ್ ಮಾಡಬೇಕು.

ಹಂತ 7: ನಿಮ್ಮ ಒಟಿಪಿ ಒದಗಿಸಿ, ಬಾಕ್ಸ್​ ಚೆಕ್ ಮಾಡಬೇಕು ಮತ್ತು ಇನ್ನೊಂದು ಸಲ ಮುಂದುವರಿಯಿರಿ ಬಟನ್ ಒತ್ತಬೇಕು.

ಹಂತ 8: ಇಮೇಲ್ ಐಡಿ ಅಥೆಂಟಿಕೇಟ್ ಆಗಿಲ್ಲ ಅಂತಾದಲ್ಲಿ “ವ್ಯಾಲಿಡೇಟ್​ ಇಮೇಲ್​ ಐಡಿ” ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಕ್ರೆಡೆನ್ಷಿಯಲ್ಸ್ ನಮೂದಿಸಬೇಕು ಮತ್ತು ಮುಂದುವರಿಯಿರಿ ಎಂಬ ಬಟ್ ಒತ್ತಬೇಕು.

ಹಂತ 9: ವ್ಯಾಲಿಡೇಷನ್​ಗಾಗಿ ನಿಮ್ಮ ಆಧಾರ್​ ಮಾಹಿತಿ ಸಲ್ಲಿಸಿದ ಮೇಲೆ ಅದಕ್ಕೆ ಅಕ್​ನಾಲೆಡ್ಜ್​ಮೆಂಟ್ ಸಂಖ್ಯೆ ಬರುತ್ತದೆ. ನಿಮ್ಮ ಆಧಾರ್​ ಸಂಖ್ಯೆಯನ್ನು ನಮೂದಿಸುವ ಮೂಲಕ ಪ್ಯಾನ್ ವಿತರಣೆ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಹಂತ 10: ಇಪ್ಯಾನ್​ ಡೌನ್​ಲೋಡ್ ಮಾಡವುದಕ್ಕೆ ಮೊದಲಿ ಎರಡು ಹಂತಗಳನ್ನು ಪೂರ್ಣಗೊಳಿಸಬೇಕು. ಚೆಕ್​ ಸ್ಟೇಟಸ್/ಡೌನ್​ಲೋಡ್ ಪ್ಯಾನ್ ಮೇಲೆ ಕ್ಲಿಕ್ ಮಾಡಿ, ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್​ ಒದಗಿಸಬೇಕು. ಸಬ್​ಮಿಟ್​ ಐಕಾನ್​ ಮೇಲೆ ಒತ್ತಬೇಕು. ಒಟಿಪಿ ನಮೂದಿಸುವ ಮೂಲಕ ವ್ಯಾಲಿಡೇಟ್ ಮಾಡಬೇಕು ಮತ್ತು ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಹಂತ 11: ಪ್ಯಾನ್​ ವಿತರಣೆ ಯಶಸ್ವಿಯಾದಲ್ಲಿ 10 ನಿಮಿಷದೊಳಗಾಗಿ ಪಿಡಿಎಫ್​ ಫೈಲ್ ಲಿಂಕ್ ವಿತರಣೆ ಆಗುತ್ತದೆ.

ಇದನ್ನೂ ಓದಿ: ಮಾಹಿತಿ ಹೊಂದಾಣಿಕೆಯಾಗದ ಕಾರಣ ಪ್ಯಾನ್-ಆಧಾರ್ ಲಿಂಕ್ ಆಗುತ್ತಿಲ್ಲವಾ?; ಹೀಗೆ ಮಾಡಿ ನೋಡಿ

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?