AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನಿಮ್ಮ ಸಂಸ್ಥೆಯನ್ನು ನೋಂದಣಿ ಮಾಡುವ ಯೋಜನೆ ಇದೆಯಾ? ಇಲ್ಲಿವೆ ಹಂತಗಳು

ಎಂಎಸ್​ಎಂಇ ಸಚಿವಾಲಯದ ಉದ್ಯಮ್ ಪೋರ್ಟಲ್​ನಲ್ಲಿ ಎಂಎಸ್​ಎಂಇಗಳ ನೋಂದಣಿ ಹೇಗೆ ಎಂಬ ಬಗ್ಗೆ ಇಲ್ಲಿದೆ ಹಂತಹಂತವಾದ ವಿವರಣೆ.

ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನಿಮ್ಮ ಸಂಸ್ಥೆಯನ್ನು ನೋಂದಣಿ ಮಾಡುವ ಯೋಜನೆ ಇದೆಯಾ? ಇಲ್ಲಿವೆ ಹಂತಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jul 01, 2021 | 11:13 PM

Share

ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳ (ಎಂಎಸ್​ಎಇ) ಸಚಿವಾಲಯದ ಉದ್ಯಮ್ ಪೋರ್ಟಲ್​ನಿಂದ​ ಉದ್ಯಮಿಗಳಿಗೆ ತಮ್ಮ ಸಂಸ್ಥೆಯ ನೋಂದಣಿಗೆ ಸ್ವಘೋಷಿತ ಮತ್ತು ವೆಚ್ಚ-ರಹಿತವಾದ ಪ್ಲಾಟ್​ಫಾರ್ಮ್ ಒದಗಿಸುತ್ತದೆ. ಉದ್ಯಮ ಪೋರ್ಟಲ್ ಈಗ ಆದಾಯ ತೆರಿಗೆ ಹಾಗೂ ಜಿಎಸ್​ಟಿಐಎನ್​ ವ್ಯವಸ್ಥೆ ಜತೆಗೆ ಒಗ್ಗೂಡಿದೆ ಮತ್ತು ಪ್ಯಾನ್ ಮತ್ತು ಜಿಎಸ್​ಟಿಗೆ ಜೋಡಣೆಯಾದ ಹೂಡಿಕೆ ಮಾಹಿತಿಯನ್ನು ತಾನೇತಾನಾಗಿ ಹೊರತರುತ್ತದೆ. ಉದ್ಯಮಿಗಳಿಗೆ ನೋಂದಣಿ ಮಾಡುವುದಕ್ಕೆ ಆಧಾರ್​ ಸಂಖ್ಯೆ ಇದ್ದರೆ ಸಾಕು ಮತ್ತು ಎಂಎಸ್​ಎಂಇಗಳಿಗೆ ಶಾಶ್ವತ ನೋಂದಣಿ ಸಂಖ್ಯೆಯೊಂದಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಆ ಪ್ರಮಾಣಪತ್ರದಲ್ಲಿ ಕ್ಯೂಆರ್ ಕೋಡ್ ಇರುತ್ತದೆ. ಅದರ ಮೂಲಕವಾಗಿ ಪೋರ್ಟಲ್ ಮೂಲಕ ಸಂಸ್ಥೆಯ ಮಾಹಿತಿ ಪಡೆಯಬಹುದು. ಎಂಎಸ್​ಎಂಇ ಉದ್ಯಮ್ ಪೋರ್ಟಲ್ ನೋಂದಣಿ ಬಹಳ ಸರಳ ಹಾಗೂ ಒಂದು ಸಲದ ಪ್ರಕ್ರಿಯೆ. ಇದನ್ನು ಉದ್ಯಮ್ ಪೋರ್ಟಲ್ ಮೂಲಕ ಮತ್ತು ಏಕಗವಾಕ್ಷಿ (ಸಿಂಗಲ್ ವಿಂಡೋ) ವ್ಯವಸ್ಥೆಯಲ್ಲಿ ಮಾಡಬಹುದು.

ಸಣ್ಣ ಉದ್ಯಮಗಳು ಎಂಎಸ್​ಎಂಇ ಉದ್ಯಮ್​ ಪೋರ್ಟಲ್​ನಲ್ಲಿ ನೋಂದಣಿ ಹೇಗೆ? ಹಂತ 1: ಎಂಎಸ್​ಎಂಇ ವೆಬ್​ಸೈಟ್​ udyamregistration.gov.inಗೆ ಭೇಟಿ ನೀಡಬೇಕು. ವೆಬ್​ಸೈಟ್​ನ ಎಡಭಾಗದ ತುದಿಯಲ್ಲಿ ರಾಷ್ಟ್ರೀಯ ಚಿಹ್ನೆ ಪರಿಶೀಲಿಸಬೇಕು ಮತ್ತು MSME ಸಚಿವಾಲಯ ಎಂದು ಅದರ ಹಿಂಭಾಗದಲ್ಲಿ ಇರಬೇಕು.

ಹಂತ 2: ನೋಂದಣಿ ಅರ್ಜಿ ಪಡೆದುಕೊಳ್ಳಿ, ಹೋಮ್​ಪೇಜ್​ನಲ್ಲಿ New Registration ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಈಗ ಸಂಬಂಧಪಟ್ಟ ಆಧಾರ್​ ಸಂಖ್ಯೆ ಮತ್ತು ಉದ್ಯಮಿಯ ಹೆಸರನ್ನು ನಮೂದಿಸಬೇಕು.

ಹಂತ 3: Validate and Generate OTP ಮೇಲೆ ಕ್ಲಿಕ್ ಮಾಡಬೇಕು ಮತ್ತು ಪ್ಯಾನ್ ದೃಢೀಕರಣದ ಹಂತಕ್ಕೆ ಬೇಕಾದ ಮಾಹಿತಿಯನ್ನು ನಮೂದಿಸಿ.

ಹಂತ 4:ಈಗ ಉದ್ಯಮ್ ನೋಂದಣಿ ಬಾಕ್ಸ್ ಕಾಣಿಸಿಕೊಳ್ಳಲಿದೆ ಮತ್ತು ಎಲ್ಲ ಮಾಹಿತಿಯನ್ನು ಭರ್ತಿ ಮಾಡುವಂತೆ ಕೇಳಿಕೊಳ್ಳಲಾಗುತ್ತದೆ.

ಹಂತ 5: ಒಂದು ಸಲ ನೋಂದಣಿ ಸಂಪೂರ್ಣವಾದಲ್ಲಿ, ಥ್ಯಾಂಕ್​ ಯೂ ಎಂಬ ಸಂದೇಶದೊಂದಿಗೆ ನೋಂದಣಿ ಸಂಖ್ಯೆಯು UDYAM ಎಂಬುದರ ಆರಂಭದೊಂದಿಗೆ ಬರುತ್ತದೆ.

ಒಂದು ವೇಳೆ ಉದ್ಯಮವು ಎರಡು ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಲ್ಲಿ ಒಂದು ಉದ್ಯಮ ನೋಂದಣಿ ಸಾಕು. ಅದನ್ನೇ ನೋಂದಣಿಯಲ್ಲಿ ನಿರ್ದಿಷ್ಟವಾಗಿ ತಿಳಿಸಬೇಕು. ಸೆಕ್ಷನ್ 27 ಸಿಜಿಎಸ್​ಟಿ ಕಾಯ್ದೆ ಪ್ರಕಾರ, ಉದ್ದೇಶಪೂರ್ವಕವಾಗಿ ಸ್ವಘೋಷಿತ ಮಾಹಿತಿ ಹಾಗೂ ಅಂಕಿ- ಅಂಶಗಳನ್ನು ಘೋಷಣೆ ಮಾಡಿದಾಗ ದಂಡ ಕಟ್ಟಬೇಕಾಗುತ್ತದೆ.

ಏನಿದು ಉದ್ಯಮ್ ಪೋರ್ಟಲ್? ಉದ್ಯಮ್​ ಪೋರ್ಟಲ್ ಎಂಬುದು ಶೂನ್ಯ- ವೆಚ್ಚದ ಎಂಎಸ್​ಎಂಇ ನೋಂದಣಿ ವೆಬ್​ಸೈಟ್​ ಅನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಆರಂಭಿಸಿತು. ಜೂನ್ 2, 2021ರ ಹೊತ್ತಿಗೆ 31.56 ಲಕ್ಷ ಸಂಸ್ಥೆಗಳಿವೆ. ದೇಶದಲ್ಲಿರುವ ಎಂಎಸ್​ಎಂಇಗಳ ಸರಾಸರಿ ಮತ್ತು ಮಾಹಿತಿ ಸಂಗ್ರಹಿಸುವುದಕ್ಕೆ ಉದ್ಯಮ್​ ಪೋರ್ಟಲ್​ನಿಂದ ಸರ್ಕಾರಕ್ಕೆ ಸಹಾಯ ಮಾಡಲಾಗುತ್ತದೆ. ಈ ಪೋರ್ಟಲ್​ನಿಂದ ಎಂಎಸ್​ಎಂಇಗಳ ಉತ್ಪಾದನಾ ಗಾತ್ರ, ಭೌಗೋಳಿಕ ಮಾಹಿತಿ, ಹೂಡಿಕೆ ಹಾಗೂ ವಹಿವಾಟಿನ ಮಾಹಿತಿಯನ್ನು ಸಹ ಈ ಪೋರ್ಟಲ್ ಒದಗಿಸುತ್ತದೆ. ಇದು ಉದ್ಯೋಗ್ ಆಧಾರ್ ಮೆಮೊರಂಡಮ್ (UAM)ಗೆ ಬದಲಿಯಾಗುತ್ತದೆ.

ಎಂಎಸ್​ಎಂಇ ಅಂದರೇನು? – ಯಾವ ಸಂಸ್ಥೆಯ ಹೂಡಿಕೆ 1 ಕೋಟಿ ರೂ. ದಾಟುವುದಿಲ್ಲವೋ ಮತ್ತು ವಹಿವಾಟು 5 ಕೋಟಿ ರೂ. ದಾಟಲ್ಲವೋ ಅದು ಕಿರು ಸಂಸ್ಥೆಗಳು – ಯಾವಾಗ 10 ಕೋಟಿ ರೂ. ಹೂಡಿಕೆ ದಾಟುವುದಿಲ್ಲವೋ ಮತ್ತು ವಹಿವಾಟು 50 ಕೋಟಿ ಇರುತ್ತದೋ ಅಂಥವು ಸಣ್ಣ ಸಂಸ್ಥೆಗಳು -ಮಧ್ಯಮ ಸಂಸ್ಥೆಗಳು ಹೂಡಿಕೆಯು ರೂ. 50 ಕೋಟಿ ದಾಟಲ್ಲ ಮತ್ತು ವಹಿವಾಟು 250 ಕೋಟಿ ರೂ.ಗಿಂತ ಕಡಿಮೆ. ​

ಇದನ್ನೂ ಓದಿ: Shopsy App: ಸ್ಥಳೀಯ ಉದ್ಯಮಿಗಳ ನೆರವಿಗಾಗಿ ಫ್ಲಿಪ್​ಕಾರ್ಟ್​ನಿಂದ ಆರಂಭವಾಯಿತು ಹೊಸ ಆ್ಯಪ್​​; ಇದರ ಕೆಲಸ ಏನು ಗೊತ್ತಾ?

(How to register enterprise in MSME ministry Udyam portal? Here is the step by step details)

Published On - 10:55 pm, Thu, 1 July 21

Follow Us
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಹೊಸ ರಾಜಕೀಯ ಪಕ್ಷದ ಬಗ್ಗೆ ವಿವರ ಹಂಚಿಕೊಂಡ ನಟ ಚೇತನ್ ಅಹಿಂಸ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!