AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC: ರಿಲಯನ್ಸ್ ಕ್ಯಾಪಿಟಲ್​ಗೆ ಸಾಲ ಕೊಟ್ಟು ಕೈಸುಟ್ಟುಕೊಂಡ ಎಲ್​ಐಸಿ; 3,400 ಕೋಟಿ ರೂ. ನಷ್ಟ ಸಾಧ್ಯತೆ

ರಿಲಯನ್ಸ್ ಕ್ಯಾಪಿಟಲ್​ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್​ಐಸಿ ನಿರ್ಧರಿಸಿದೆ. ಎಸಿಆರ್​ಇ ಎಸ್​ಎಸ್​ಜಿ ಸಾಲದ ಖಾತೆಯನ್ನು ಖರೀದಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

LIC: ರಿಲಯನ್ಸ್ ಕ್ಯಾಪಿಟಲ್​ಗೆ ಸಾಲ ಕೊಟ್ಟು ಕೈಸುಟ್ಟುಕೊಂಡ ಎಲ್​ಐಸಿ; 3,400 ಕೋಟಿ ರೂ. ನಷ್ಟ ಸಾಧ್ಯತೆ
ಎಲ್​ಐಸಿImage Credit source: PTI
TV9 Web
| Updated By: Ganapathi Sharma|

Updated on: Nov 30, 2022 | 11:49 AM

Share

ನವದೆಹಲಿ: ಉದ್ಯಮಿ ಅನಿಲ್ ಅಂಬಾನಿ (Anil Ambani) ಅವರ ರಿಲಯನ್ಸ್ ಕ್ಯಾಪಿಟಲ್​ಗೆ (Reliance Capital) ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ಜೀವ ವಿಮಾ ನಿಗಮ (LIC) 3,400 ಕೋಟಿ ರೂ. ನಷ್ಟ ಅನುಭವಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಸಾಲ ವಸೂಲಿ ಕಷ್ಟಕರವಾಗಿ ಪರಿಣಮಿಸಿದ್ದು, ಕೇವಲ 782 ಕೋಟಿ ರೂ. ಮಾತ್ರ ಮರುಪಾವತಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್​ಐಸಿ ಮುಂದಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ರಿಲಯನ್ಸ್ ಕ್ಯಾಪಿಟಲ್​ ಸಾಲದ ಖಾತೆಗಳನ್ನೇ ಮಾರಾಟ ಮಾಡಲು ಎಲ್​ಐಸಿ ನಿರ್ಧರಿಸಿದೆ. ಎಸಿಆರ್​ಇ ಎಸ್​ಎಸ್​ಜಿ ಸಾಲದ ಖಾತೆಯನ್ನು ಖರೀದಿಸುವ ಸಾಧ್ಯತೆ ಇದೆ. ಆದರೆ, ಎಲ್​ಐಸಿ ಭಾರೀ ಬೆಲೆ ತೆರಬೇಕಾಗಿ ಬರಲಿದೆ. ಎಸಿಆರ್​ಇ ಎಸ್​ಎಸ್​ಜಿಗೆ ಶೇಕಡಾ 73ರ ರಿಯಾಯಿತಿ ದರದಲ್ಲಿ ರಿಲಯನ್ಸ್ ಕ್ಯಾಪಿಟಲ್​ ಸಾಲದ ಖಾತೆ ಮಾರಾಟ ಮಾಡಲು ಎಲ್​ಐಸಿ ಮುಂದಾಗಿದೆ. ಆದರೆ, ದೊಡ್ಡ ಮೊತ್ತವನ್ನು ಎಲ್​ಐಸಿ ಕಳೆದುಕೊಳ್ಳಬೇಕಾಗಬಹುದು ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.

ಇದನ್ನೂ ಓದಿ: LIC Shares: ಎಲ್​ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ

ಸ್ವಿಸ್ ಚಾಲೆಂಜ್ ಬಿಡ್ಡಿಂಗ್ ವಿಧಾನದ ಮೂಲಕ ಸಾಲದ ಖಾತೆಗಳ ಮಾರಾಟ ಮಾಡಲಾಗುತ್ತದೆ. ಈ ವಿಧಾನದಲ್ಲಿ ಸಾಲದ ಖಾತೆಯ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕಾಗುತ್ತದೆ. ಯಾರು ಬೇಕಾದರೂ ಬಿಡ್ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ವಿಧಾನದಲ್ಲಿ, ಮೊತ್ತ ಮೊದಲು ಬಿಡ್ ಸಲ್ಲಿಸಿದ ವ್ಯಕ್ತಿಯಿಂದ ಹೆಚ್ಚು ಮೊತ್ತಕ್ಕೆ ಬೇರೆ ಯಾರಾದರೂ ಬಿಡ್ ಸಲ್ಲಿಸಿದಲ್ಲಿ ಇಷ್ಟೇ ಮೊತ್ತದ ಬಿಡ್ ಸಲ್ಲಿಸಲು ಮೊದಲ ಗುತ್ತಿಗೆದಾರನಿಗೆ ಅವಕಾಶ ಒದಗಿಸಲಾಗುತ್ತದೆ. ಆದರೆ, ರಿಲಯನ್ಸ್ ಕ್ಯಾಪಿಟಲ್ ವಿಚಾರಕ್ಕೆ ಬಂದಾಗ ಬಿಡ್ ಸಲ್ಲಿಕೆಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ ಎನ್ನಲಾಗಿದೆ.

ರಿಲಯನ್ಸ್ ಕ್ಯಾಪಿಟಲ್ ಬಳಿ 20 ಕಂಪನಿಗಳು

ರಿಲಯನ್ಸ್ ಕ್ಯಾಪಿಟಲ್ ಒಡೆತನದಲ್ಲಿ ಸುಮಾರು 20 ಹಣಕಾಸು ಸೇವಾ ಕಂಪನಿಗಳಿವೆ. ಇದರಲ್ಲಿ ಸೆಕ್ಯುರಿಟೀಸ್ ಬ್ರೋಕಿಂಗ್, ವಿಮಾ ಕಂಪನಿಗಳೂ ಸೇರಿವೆ. 2021ರ ನವೆಂಬರ್ 30ರಂದು ಆರ್​ಬಿಐ ಭಾರೀ ಸಾಲದ ಸುಳಿಯಲ್ಲಿ ಸಿಲುಕಿರುವ ರಿಲಯನ್ಸ್ ಕ್ಯಾಪಿಟಲ್ ಆಡಳಿತ ಮಂಡಳಿಯನ್ನು ವಿಸರ್ಜಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು