AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LIC Shares: ಎಲ್​ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ

ಎರಡನೇ ತ್ರೈಮಾಸಿಕ ಫಲಿತಾಂಶಲ್ಲಿ ಎಲ್​ಐಸಿ ಉತ್ತಮ ಸಾಧನೆ ಮಾಡಿದೆ. ಕಂಪನಿಯ ನಿವ್ವಳ ಲಾಭ ವರ್ಷದ ಹಿಂದಿನ 1,434 ಕೋಟಿ ರೂ.ನಿಂದ 15,952 ಕೋಟಿ ರೂ.ಗೆ ಜಿಗಿದಿದೆ. ಪರಿಣಾಮವಾಗಿ ಎಲ್​ಐಸಿ ಷೇರು ಮೌಲ್ಯ ಜಿಗಿತ ಕಂಡಿದೆ. ಎಲ್​ಐಸಿ ಷೇರು ಖರೀದಿ ಬಗ್ಗೆ ತಜ್ಞರ ಅಭಿಪ್ರಾಯ ಇಲ್ಲಿದೆ.

LIC Shares: ಎಲ್​ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ
ಎಲ್​ಐಸಿImage Credit source: PTI
Follow us
TV9 Web
| Updated By: Ganapathi Sharma

Updated on: Nov 14, 2022 | 2:25 PM

ತ್ರೈಮಾಸಿಕ ಫಲಿತಾಂಶ ಪ್ರಕಟಗೊಂಡು ನಿವ್ವಳ ಲಾಭದಲ್ಲಿ ಹೆಚ್ಚಳ ಕಂಡುಬರುತ್ತಿದ್ದಂತೆಯೇ ಷೇರುಪೇಟೆಯಲ್ಲಿ (Stock Market) ಎಲ್​ಐಸಿ (LIC) ಷೇರು ಮೌಲ್ಯ ಜಿಗಿತ ಕಂಡಿದೆ. ಇನೀಷಿಯಲ್ ಪಬ್ಲಿಕ್ ಆಫರ್​ ಬಳಿಕ ಈವರೆಗೂ ವೃದ್ಧಿ ಕಾಣದ ಎಲ್ಐಸಿ ಷೇರುಗಳು ಈಗ ಏಕಾಏಕಿ ಮೇಲ್ಮುಖವಾಗಿ ಚಲಿಸತೊಡಗಿವೆ. ಸೋಮವಾರದ ಆರಂಭಿಕ ವಹಿವಾಟಿನ ವೇಳೆ ಎಲ್​ಐಸಿ ಷೇರಿನ ಮೌಲ್ಯ ಶೇಕಡಾ 9ರಷ್ಟು ವೃದ್ಧಿಯಾಗಿ ಪ್ರತಿ ಷೇರಿನ ಬೆಲೆ 682 ರೂ. ತಲುಪಿತ್ತು. ಇದು ಮೇ ನಂತರ ಕಂಪನಿಯುವ ದಿನವೊಂದರಲ್ಲಿ ಕಂಡ ಅತ್ಯುತ್ತಮ ಗಳಿಕೆಯಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ ವರ್ಷದ ಹಿಂದಿನ 1,434 ಕೋಟಿ ರೂ.ನಿಂದ 15,952 ಕೋಟಿ ರೂ.ಗೆ ಜಿಗಿದಿತ್ತು.

ವ್ಯಾಲ್ಯೂ ಆಫ್ ನ್ಯೂ ಬ್ಯುಸಿನೆಸ್ (VNB) ಹಾಗೂ ಎಂಬೆಡೆಡ್ ವ್ಯಾಲ್ಯೂನಲ್ಲಿ (EV) ಎಲ್​ಐಸಿ ಗಣನೀಯ ಬೆಳವಣಿಗೆ ಸಾಧಿಸಿದೆ. ಇದು ಎಲ್​ಐಸಿಯನ್ನು ಬಲಿಷ್ಠ ಹೂಡಿಕೆಯ ಸಾಧನವಾಗಿ ಪರಿವರ್ತಿಸಿದೆ ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿರುವುದಾಗಿ ‘ಲೈವ್ ಮಿಂಟ್’ ವರದಿ ಮಾಡಿದೆ. ಎಲ್​ಐಸಿ ಷೇರುಗಳನ್ನು 917 ರೂ. ಗಳಿಕೆಯ ಗುರಿಯೊಂದಿಗೆ ಖರೀದಿಸಬಹುದು ಎಂದು ಸಂಸ್ಥೆ ಸಲಹೆ ನೀಡಿದೆ.

ದೀರ್ಘಾವಧಿ ಹೂಡಿಕೆಗೆ ಈಗಲೇ ಖರೀದಿಸಬಹುದೇ?

ಇದನ್ನೂ ಓದಿ
Image
ಎಸ್​ಬಿಐ ವೆಬ್​​ಸೈಟ್, ಮೊಬೈಲ್ ಆ್ಯಪ್ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ
Image
World Diabetes Day 2022: ಮಧುಮೇಹಿಗಳ ಆರೋಗ್ಯ ವಿಮೆಗಿರುವ ಷರತ್ತುಗಳು, ಪ್ರೀಮಿಯಂ ಬಗ್ಗೆ ಇಲ್ಲಿದೆ ವಿವರ
Image
ಎಚ್​ಡಿಎಫ್​ಸಿ, ಐಸಿಐಸಿಐ, ಎಸ್​ಬಿಐ, ಆ್ಯಕ್ಸಿಸ್; ಎಫ್​ಡಿಗೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಬಗ್ಗೆ ಇಲ್ಲಿದೆ ವಿವರ
Image
RD Account: ಆರ್​ಡಿ ಉಳಿತಾಯ ಖಾತೆ ತೆರೆಯುವ ಮುನ್ನ ಈ ವಿಷಯಗಳನ್ನು ತಿಳಿದಿರಿ

ದೀರ್ಘಾವಧಿಯ ಹೂಡಿಕೆ ಗುರಿ ಹೊಂದಿರುವರರು ಎಲ್​ಐಸಿ ಷೇರಿನ ಮುಖಬೆಲೆ 700 ರೂ. ತಲುಪುವ ವರೆಗೆ ಕಾಯುವುದು ಉತ್ತಮ. ಪ್ರಸ್ತುತ (ನವೆಂಬರ್ 14ರ ಮಧ್ಯಾಹ್ನ 2 ಗಂಟೆ ವೇಳೆಗೆ) ಬಿಎಸ್​​ಇಯಲ್ಲಿ ಎಲ್​ಐಷಿ ಷೇರು 630 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇದು ಮುಂದಿನ ಕೆಲವು ಅವಧಿಗೆ 580 ರೂ.ವರೆಗೆ ಇಳಿಕೆ ಮತ್ತು 700 ರೂ. ವರೆಗೆ ವೃದ್ಧಿಯಾಗುವ ನಿರೀಕ್ಷೆ ಇದೆ. ಹೀಗಾಗಿ ದೀರ್ಘಾವಧಿಯ ಹೂಡಿಕೆದಾರರು ಈಗಲೇ ಖರೀದಿ ಮಾಡುವುದರ ಬದಲು ತುಸು ಕಾಯುವುದು ಉತ್ತಮ ಎಂದು ಚಾಯ್ಸ್ ಬ್ರೋಕಿಂಗ್​ನ ಕಾರ್ಯನಿರ್ವಾಹಕ ನಿರ್ದೇಶಕ ಸುಮಿತ್ ಬಗಾಡಿಯಾ ಸಲಹೆ ನೀಡಿರುವುದಾಗಿ ವರದಿ ಉಲ್ಲೇಖಿಸಿದೆ.

ಖರೀದಿಸಿದವರು ಮಾರಬಹುದೇ?

ಸದ್ಯದಲ್ಲೇ ಎಲ್​​ಐಸಿ ಷೇರು ಮೌಲ್ಯದಲ್ಲಿ 700 ರೂ.ನಿಂದ 720 ರೂ.ವರೆಗೆ ವೃದ್ಧಿ ಕಾಣಬಹುದು. ಯಾರು ಈಗಾಗಲೇ ಈ ಷೇರು ಖರೀದಿಸಿದ್ದಾರೋ ಅಂಥವರು ಸದ್ಯ ಮೌಲ್ಯ ವೃದ್ಧಿಯಾಗಿದೆ ಎಂದು ಮಾರಾಟ ಮಾಡುವ ಬದಲು ಇನ್ನಷ್ಟು ಸಮಯ ಇಟ್ಟುಕೊಳ್ಳುವುದು ಉತ್ತಮ. ಹೊಸ ಹೂಡಿಕೆದಾರರು 720 ರೂ. ಗುರಿ ಮತ್ತು 630 ರೂ. ಕನಿಷ್ಠ ಮೌಲ್ಯದ ಲೆಕ್ಕಾಚಾರದೊಂದಿಗೆ ಖರೀದಿಸಬಹುದು ಎಂದಿದ್ದಾರೆ ಐಐಎಫ್​ಎಲ್​ ಸೆಕ್ಯುರಿಟೀಸ್ ಸಂಶೋಧಕ, ಉಪಾಧ್ಯಕ್ಷ ಅನುಜ್ ಗುಪ್ತಾ.

ಹೂಡಿಕೆದಾರರಿಗೆ ಉತ್ತಮ ಗಳಿಕೆ ತಂದುಕೊಡುವ ನಿಟ್ಟಿನಲ್ಲಿ ಉತ್ಪನ್ನ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡುವಂತೆ ಎಲ್​ಐಸಿಗೆ ಸರ್ಕಾರ ಇತ್ತೀಚೆಗೆ ಸೂಚಿಸಿತ್ತು. ಹೂಡಿಕೆದಾರರಿಗೆ ಉತ್ತಮ ಸಂಪತ್ತು ಮರಳಿಸಲು ಗಮನಹರಿಸಬೇಕು. ಉತ್ತಮವಾಗಿ ಕಾರ್ಯನಿರ್ವಹಿಸದ ಉತ್ಪನ್ನಗಳ ಲಾಭದಾಯಕತೆಯನ್ನು ಸುಧಾರಿಸುವುದಕ್ಕಾಗಿ ಯೋಜನೆಗಳನ್ನು ರೂಪಿಸಿ ಅವುಗಳ ಮೇಲೆ ಗಮನ ಕೇಂದ್ರೀಕರಿಸುವಂತೆ ಹಣಕಾಸು ಸಚಿವಾಲಯವು ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ ಎಲ್​ಐಸಿಗೆ ಸೂಚಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

(ತಜ್ಞರ ಅಭಿಪ್ರಾಯ ಆಧಾರಿತ ಸುದ್ದಿಯನ್ನು ಇಲ್ಲಿ ನೀಡಲಾಗಿದೆಯೇ ಹೊರತು ಇದು ‘ಟಿವಿ9 ಕನ್ನಡ ಡಿಜಿಟಲ್’​ನ ಅಭಿಪ್ರಾಯವಲ್ಲ. ಷೇರು ವಹಿವಾಟು ಮಾರುಕಟ್ಟೆ ರಿಸ್ಕ್​​ಗಳಿಗೆ ಕಾರಣವಾಗುವುದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹೂಡಿಕೆ ಸಲಹೆಗಾರರ ಅಭಿಪ್ರಾಯ ಕೇಳಿಕೊಳ್ಳುವುದು ಉತ್ತಮ)

ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ನೀರು ಕುಡಿಯಲು ಬಂದ ಜಿಂಕೆಯನ್ನು ಬೇಟೆಯಾಡಿದ ಹುಲಿ: ವಿಡಿಯೋ ನೋಡಿ
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ತುಮಕೂರು ಸಿದ್ಧಗಂಗಾ ಶ್ರೀಗಳ ಆಶೀರ್ವಾದ ಪಡೆದ ನಟ ಯುವರಾಜ್ ಕುಮಾರ್
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ಗಂಡನ ಮನೆಯಿಂದ ಮಗಳನ್ನ ಹೊತ್ತೊಯ್ದ ಪೋಷಕರು, ಮುಂದೇನಾಯ್ತು?
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
ನೀಟ್​ ನಲ್ಲಿ ಫಸ್ಟ್ ರ‍್ಯಾಂಕ್: ತಂದೆಗೆ ಫಾದರ್ಸ್ ಡೇ ಗಿಫ್ಟ್ ಕೊಟ್ಟ ಮಗ
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಅವಘಡ, ನಿಜಕ್ಕೂ ನಡೆದಿದ್ದೇನು?
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ