AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Old Notes: ಹಳೇ ನೋಟುಗಳಿಗೆ ಭರ್ಜರಿ ಬೇಡಿಕೆ; ರೂಪಾಯಿ ನೋಟಿಗೂ ಸಾವಿರಗಟ್ಟಲೆ ಹಣ

ನಿಮ್ಮ ಬಳಿ ಹಳೇ 1 ರೂಪಾಯಿ ನೋಟಿನ ಬಂಡಲ್ ಇದೆಯಾ? ಹಾಗಿದ್ದಲ್ಲಿ ಈ ಸುದ್ದಿಯನ್ನು ಒಮ್ಮೆ ಗಮನ ಇಟ್ಟು ಓದಿ ನೋಡಿ. ಸಾವಿರಗಟ್ಟಲೆ ಹಣ ಗಳಿಸುವ ದಾರಿ ಕಾಣಿಸಲಿದೆ.

Old Notes: ಹಳೇ ನೋಟುಗಳಿಗೆ ಭರ್ಜರಿ ಬೇಡಿಕೆ; ರೂಪಾಯಿ ನೋಟಿಗೂ ಸಾವಿರಗಟ್ಟಲೆ ಹಣ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 09, 2021 | 1:14 PM

Share

ದುಡ್ಡಿನ ವಿಚಾರ ಅಂತ ಬಂದಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಹಳೇ ನೋಟು- ನಾಣ್ಯಗಳನ್ನು ಸಂಗ್ರಹಿಸುವಂಥ ಹವ್ಯಾಸ ಇರುವವರು, ಅಪರೂಪದ ನೋಟು- ನಾಣ್ಯಗಳು ಇರುವಂಥವರಿಗೆ ತಮ್ಮ ಬಳಿ ಇರುವುದು ಅದೆಷ್ಟು ಅಮೂಲ್ಯವಾದದ್ದು ಎಂಬುದಂತೂ ಗೊತ್ತಿರಲೇಬೇಕು. ನಿಮಗೆ ಗೊತ್ತಾ? 1 ರೂಪಾಯಿ ನೋಟಿನ ಬಂಡಲ್​ ಅನ್ನು 45 ಸಾವಿರ ರೂಪಾಯಿ ತನಕ ಮಾರಬಹುದು. ನಿಮ್ಮ ಬಳಿ 1 ರೂಪಾಯಿಯ ಹಳೇ ನೋಟಿನ ಬಂಡಲ್​ ಇದ್ದಲ್ಲಿ ಆನ್​ಲೈನ್​ನಲ್ಲಿ ಮಾರಬಹುದು. ಒಂದು ರೂಪಾಯಿ ನೋಟಿನ ಬಂಡಲ್ 1957ರಲ್ಲಿ ಬಿಡುಗಡೆ ಆಗಿದ್ದು, ಕೇಂದ್ರದ ಮಾಜಿ ಹಣಕಾಸು ಸಚಿವರಾದ ಹೀರೂಭಾಯಿ ಎಂ. ಪಟೇಲ್ ಸಹಿ ಮಾಡಿದ್ದಾರೆ. ಅದರಲ್ಲಿ 123456 ಸಂಖ್ಯೆಗೆ ಭಾರೀ ಬೇಡಿಕೆ. ಕಾಯಿನ್​ಬಜಾರ್​ ಎಂಬ ವೆಬ್​ಸೈಟ್​ನಲ್ಲಿ ಈ ನೋಟು 44,999 ರೂಪಾಯಿಗೆ ಮಾರಾಟ ಆಗಿದೆ.

“ಸಂಗ್ರಹಕಾರರಿಗೆ ವಿಪರೀತ ಅಪರೂಪದ 1957ರ ಒಂದು ರೂಪಾಯಿ ಬಂಡಲ್​ಗೆ ಎಚ್​.ಎಂ. ಪಟೇಲ್ ಸಹಿ ಮಾಡಿದ ನೋಟು, 123456 ಸಂಖ್ಯೆಯ ಅಪರೂಪದ್ದು ಇದು,” ಎಂದು ವೆಬ್​ಸೈಟ್​ನ ಮಾಹಿತಿ ವಿವರದಲ್ಲಿ ಇದೆ. 1 ರೂಪಾಯಿ ನೋಟು ಬಂಡಲ್​ನ ನೋಟು ಬೆಲೆ ರೂ. 49,999. ಆದರೆ ವೆಬ್​ಸೈಟ್​ನಿಂದ ರಿಯಾಯಿತಿ ನಂತರ ರೂ. 44,999ಕ್ಕೆ ಮಾರಾಟ ಆಗುತ್ತಿದೆ. ಕಾಯಿನ್​ಬಜಾರ್​ ವೆಬ್​ಸೈಟ್​ಗೆ ತೆರಳಿ, ಶಾಪ್ ವಿಭಾಗಕ್ಕೆ ಹೋಗಬೇಕು. ಅಲ್ಲಿ “ನೋಟ್ ಬಂಡಲ್” ಕೆಟಗಿರಿಯಲ್ಲಿ ಎಲ್ಲ ಮಾಹಿತಿ ಸಿಗುತ್ತದೆ.

ಇಲ್ಲಿ ಹಳೇ 50 ರೂಪಾಯಿ ನೋಟನ್ನು ರೂ. 8200, ರೂ. 10 ಹಾಗೂ 5 ಅನ್ನು ರೂ. 2999ಕ್ಕೆ, ರೂ. 2ಕ್ಕೆ 4999 ಮತ್ತು 100 ರೂಪಾಯಿಗೆ ಖರೀದಿ ಮಾಡಬಹುದು. ನಿಮ್ಮ ಬಳಿ ಇರುವುದನ್ನೂ ವೆಬ್​ಸೈಟ್​ನಲ್ಲಿ ಮಾರಾಟ ಮಾಡಿ, ಹಣ ಗಳಿಸಬಹುದು. ಅದಕ್ಕಾಗಿ ಕಾಯಿನ್​ಬಜಾರ್ ವೆಬ್​ಸೈಟ್​ಗೆ ಹೋಗಬೇಕು. ಅಲ್ಲಿ “Start Selling With Us” ವಿಭಾಗಕ್ಕೆ ತೆರಳಬೇಕು. ಇದರಲ್ಲಿ ಯೂಸರ್ ನೇಮ್, ಇ-ಮೇಲ್, ವೆರಿಫಿಕೇಷನ್ ಕೋಡ್, ಮೊದಲ ಹೆಸರು, ಕೊನೆ ಹೆಸರು, ಮಳಿಗೆ ಹೆಸರು, ವಿಳಾಸ 1, ವಿಳಾಸ 2, ದೇಶ, ನಗರ ಅಥವಾ ಪಟ್ಟಣ, ರಾಜ್ಯ, ಪಿನ್​ಕೋಡ್ ಮತ್ತು ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಇದನ್ನೂ ಓದಿ: ನಿಮ್ಮ ಬಳಿ ಇರುವ 1 ರೂಪಾಯಿಯ ಹಳೆ ನೋಟು ಸಹ ಲಕ್ಷ ಲಕ್ಷ ಗಳಿಸಿಕೊಡಬಹುದು; ಖರ್ಚು ಮಾಡೋ ಮುಂಚೆ ಈ ಲೇಖನ ಓದಿ

(If You Have Old Rs 1 Bundle Can Earn Thousands Of Rupees For That)

ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ನಾಳೆ ಬಸ್ ಸಂಚಾರ ಇರುತ್ತಾ?
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಯುವತಿಯರಿಗೆ ಪ್ಲೈಯಿಂಗ್ ಕಿಸ್:ಬೀದಿ ಕಾಮಣ್ಣರ ವಿಡಿಯೋ ವೈರಲ್
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ
ಮಂಗಳೂರಿಗೆ ಹೂಡಿಕೆದಾರರು ಬರುತ್ತಿಲ್ಲ ಎಂದ ಖರ್ಗೆ ವಿರುದ್ಧ ಪೈ ಕಿಡಿ