AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೌಕಾಪಡೆಗೆ ಬರಲಿವೆ 64,000 ಕೋಟಿ ರೂ ಮೊತ್ತದ 26 ರಫೇಲ್ ಯುದ್ಧವಿಮಾನಗಳು; ಭಾರತ-ಫ್ರಾನ್ಸ್ ಒಪ್ಪಂದ

Indian navy procuring 26 Rafale jets of Rs 64,000 value: ಫ್ರಾನ್ಸ್ ಕಂಪನಿಗಳು ತಯಾರಿಸುವ ರಫೇಲ್ ಯುದ್ಧವಿಮಾನಗಳು ಭಾರತದ ನೌಕಾಪಡೆಗೆ ಬರಲಿವೆ. 64,000 ಕೋಟಿ ರೂ ಮೌಲ್ಯದ 26 ರಫೇಲ್ ಜೆಟ್​​ಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಭಾರತ ಸರ್ಕಾರ ಒಪ್ಪಂದ ಮಾಡಿದೆ. ಈ ಹಿಂದೆ 36 ರಫೇಲ್ ಜೆಟ್​​ಗಳು ಭಾರತದ ವಾಯುಪಡೆಗೆ ಸರಬರಾಜಾಗಿದ್ದುವು. ಈಗ ನೌಕಾಪಡೆಗೂ ಇವುಗಳೇ ಪ್ರಬಲ ಶಸ್ತ್ರಗಳಾಗಲಿವೆ.

ನೌಕಾಪಡೆಗೆ ಬರಲಿವೆ 64,000 ಕೋಟಿ ರೂ ಮೊತ್ತದ 26 ರಫೇಲ್ ಯುದ್ಧವಿಮಾನಗಳು; ಭಾರತ-ಫ್ರಾನ್ಸ್ ಒಪ್ಪಂದ
ರಫೇಲ್ ಯುದ್ಧವಿಮಾನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 28, 2025 | 4:01 PM

Share

ನವದೆಹಲಿ, ಏಪ್ರಿಲ್ 28: ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳು ಮತ್ತಷ್ಟು ಸಂಖ್ಯೆಯಲ್ಲಿ ಭಾರತದ ಮಿಲಿಟರಿ (Indian Army) ಬತ್ತಳಿಕೆಗೆ ಸೇರಲಿವೆ. ಭಾರತೀಯ ನೌಕಾಪಡೆಗೆ 26 ರಫೇಲ್ ಜೆಟ್​​ಗಳನ್ನು (Rafale Fighter Jets) ಪಡೆಯಲು ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ಮಧ್ಯೆ ಒಪ್ಪಂದ ಆಗಿದೆ. ಆನ್​​ಲೈನ್​​ನಲ್ಲಿ ಈ 64,000 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸರ್ಕಾರಗಳು ಅಂಕಿತ ಹಾಕಿದವು. ಭಾರತದ ವತಿಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಏಪ್ರಿಲ್ ಮೊದಲ ವಾರದಲ್ಲಿ ಪ್​ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಪುಟ ಭದ್ರತಾ ಸಮಿತಿ (ಸಿಸಿಎಸ್) ಈ ಒಪ್ಪಂದಕ್ಕೆ ಹಸಿರು ನಿಶಾನೆ ಕೊಟ್ಟಿತ್ತು.

ಭಾರತದ ನೌಕಾಪಡೆಗೆ ಅಗತ್ಯ ಇರುವ ಫೈಟರ್ ಜೆಟ್​​ಗಳಿಗೆ ರಫೇಲ್ ಅಲ್ಲದೆ ಬೇರೆ ಬೇರೆ ಆಯ್ಕೆಗಳನ್ನು ಅವಲೋಕಿಸಲಾಗಿತ್ತು. ಅಮೆರಿಕದ ಬೋಯಿಂಗ್ ಸಂಸ್ಥೆಯ ಎಫ್/ಎ18 ಸೂಪರ್ ಹಾರ್ನೆಟ್ ಯುದ್ಧವಿಮಾನವೂ ಬಿಡ್​​ನಲ್ಲಿತ್ತು. ಆದರೆ, ಭಾರತದ ನೌಕಾಪಡೆಗೆ ರಫೇಲ್ ವಿಮಾನ ಹೆಚ್ಚು ಸೂಕ್ತವೆಂದು ಕಂಡು ಬಂದಿದ್ದರಿಂದ ಅಂತಿಮವಾಗಿ ಅದನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ ಕುರಿತು ಅಪಹಾಸ್ಯ, ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ

ಇದನ್ನೂ ಓದಿ
Image
ಪಹಲ್ಗಾಮ್ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನದ ಜೊತೆ ಕೈ ಜೋಡಿಸಿತಾ ಚೀನಾ?
Image
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
Image
ಭಾರತದಲ್ಲಿ ನೂರಾರು ಪಾಕಿಸ್ತಾನಿ ಯೂಟ್ಯೂಬ್​ ಚಾನೆಲ್​ಗಳಿಗೆ ನಿಷೇಧ
Image
ಭಾರತೀಯ ವಿಮಾನಗಳಿಗೆ ಪ್ರವೇಶ ನಿರ್ಬಂಧಿಸಿ ಪಾಕ್ ಯಡವಟ್ಟು?

ಭಾರತದ ವಾಯುಪಡೆ ಈಗಾಗಲೇ 36 ರಫೇಲ್ ಫೈಟರ್ ಜೆಟ್​​​ಗಳನ್ನು ಹೊಂದಿದೆ. ಈಗ ನೌಕಾಪಡೆಯೂ ಕೂಡ ಇದೇ ಜೆಟ್​​ಗಳನ್ನು ಪಡೆಯಲಿರುವುದರಿಂದ ಒಂದು ರೀತಿಯಲ್ಲಿ ಅನುಕೂಲಕ ಸ್ಥಿತಿ ಸಿಕ್ಕಂತಾಗುತ್ತದೆ.

ರಫೇಲ್ ಜೆಟ್​​​ಗಳು ಸದ್ಯ ವಿಶ್ವದ ಅತ್ಯಂತ ಪ್ರಬಲ ಫೈಟರ್ ಜೆಟ್​​ಗಲ್ಲೊಂದೆಂದು ಪರಿಗಣಿಸಲಾಗಿದೆ. ದೂರ ಶ್ರೇಣಿಯ ಕ್ಷಿಪಣಿ, ಆ್ಯಂಟಿ ಶಿಪ್ ಅಸ್ತ್ರ, ಎಲೆಕ್ಟ್ರಾನಿಕ್ ಸಮರ ಇತ್ಯಾದಿ ಹೊಸ ಶಸ್ತ್ರಾಸ್ತ್ರಗಳು ಈ ಫೈಟರ್ ಜೆಟ್​​ನಲ್ಲಿ ಇರಲಿವೆ.

ಫ್ರಾನ್ಸ್ ದೇಶದ ಡಸ್ಸೋ, ಥೇಲ್ಸ್, ಎಂಬಿಡಿಎ ಸಂಸ್ಥೆಗಳು ರಫೇಲ್ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ತೊಡಗಲಿವೆ. ಭಾರತದಲ್ಲಿ ಇವುಗಳ ತಯಾರಿಕೆ ಅಗುವುದಿಲ್ಲ. ಎಲ್ಲವೂ ಫ್ರಾನ್ಸ್​​ನಲ್ಲೇ ಅಸೆಂಬಲ್ ಆಗುತ್ತವೆ. ಆದರೆ, ಈ ವಿಮಾನ ತಯಾರಿಕೆಯಲ್ಲಿರುವ ಫ್ರಾನ್ಸ್ ಕಂಪನಿಗಳು ತಮಗೆ ಅಗತ್ಯವಿರುವ ವಿವಿಧ ಬಿಡಿಭಾಗಗಳಿಗೆ ಭಾರತೀಯ ಕಂಪನಿಗಳಿಗೆ ಆರ್ಡರ್ ಕೊಡಬಹುದು. ಇದರಿಂದ ರಫೇಲ್ ಜೆಟ್ ನಿರ್ಮಾಣದಲ್ಲಿ ಭಾರತದ ಪರೋಕ್ಷ ಪಾತ್ರ ಇರುತ್ತದೆ.

ಇದನ್ನೂ ಓದಿ: ವಾಯುಪ್ರದೇಶ ನಿರ್ಬಂಧ: ಪಾಕಿಸ್ತಾನಕ್ಕೆ ಆದಾಯ ನಷ್ಟ; ಭಾರತೀಯರಿಗೆ ವಿಮಾನ ಪ್ರಯಾಣ ದರ ಏರಿಕೆ

ಭಾರತಕ್ಕೆ ಈಗ ರಫೇಲ್ ಜೆಟ್​​ಗಳ ಅವಶ್ಯಕತೆ ಹೆಚ್ಚು

ಭಾರತದ ನೌಕಾಪಡೆಯಲ್ಲಿರುವ ಸಮರನೌಕೆಗಳಾದ ಐಎನ್​​ಎಸ್ ವಿಕ್ರಮಾದಿತ್ಯ ಮತ್ತು ಐಎನ್​​ಎಸ್ ವಿಕ್ರಾಂತ್ ಬಳಿ ಸದ್ಯ ಮಿಗ್ 29ಕೆ ಫೈಟರ್ ಜೆಟ್​​ಗಳಿವೆ. ಆದರೆ, ಇವುಗಳು ಮೊದಲಿನಂತೆ ಕ್ಷಮತೆ ಹೊಂದಿಲ್ಲ. ಮೈಂಟೆನೆನ್ಸ್ ಸಮಸ್ಯೆ ಈ ಮಿಗ್ ವಿಮಾನಗಳಲ್ಲಿವೆ. ಹೀಗಾಗಿ, ಹೊಸ ತಲೆಮಾರಿನ ಫೈಟರ್ ಜೆಟ್ ಅವಶ್ಯಕತೆ ಇತ್ತು. ಈಗ ರಫೇಲ್ ಎಂ ಏರ್​​ಕ್ರಾಫ್ಟ್​​​ಗಳು ಮಿಗ್ 29ಕೆ ಸ್ಥಾನ ತುಂಬಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:58 pm, Mon, 28 April 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ವಿಜಯ್ ನೋಡಲು ಟಿವಿಕೆ ಬಾವುಟ ಹಿಡಿದು ಕಾಯುತ್ತಿರುವ ಫ್ಯಾನ್ಸ್
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?