AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ

India to build massive 1 trillion parameter AI model: ಚ್ಯಾಟ್​ಜಿಪಿಟಿಗೆ ಸಮನಾದ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಅನ್ನು ನಿರ್ಮಿಸಲು ಭಾರತ ಹೊರಟಿದೆ. ಮಹತ್ವಾಕಾಂಕ್ಷಿ ಎಐ ಮಿಷನ್ ಅಡಿಯಲ್ಲಿ ವಿವಿಧ ಎಐ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ 8 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಟೆಕ್ ಮಹೀಂದ್ರ, ಐಐಟಿ ಬಾಂಬೆ ಮೊದಲಾದ ಸಂಸ್ಥೆಗಳು ಈ ಹೊಣೆ ಪಡೆದಿವೆ.

ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ
ಎಐ ಮಿಷನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2025 | 3:21 PM

Share

ನವದೆಹಲಿ, ಸೆಪ್ಟೆಂಬರ್ 21: ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಲು ಹಾಗೂ ಬೃಹತ್ ಮಾರುಕಟ್ಟೆಯಾಗಿ ಬೆಳೆಯಲು ಸಕಲ ಪ್ರಯತ್ನಗಳನ್ನೂ ಹಾಕುತ್ತಿದೆ. ಈಗಾಗಲೇ ಬಹಳ ಮಹತ್ವ ಪಡೆದಿರುವ ಎಐ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಚೀನಾದ ಮುನ್ನಡೆಯ ಮಟ್ಟ ತಲುಪಲು ಭಾರತ ದೊಡ್ಡ ಯೋಜನೆ ಹಾಕಿದೆ. ಚ್ಯಾಟ್​ಜಿಪಿಟಿಯ ಸುಧಾರಿತ ಆವೃತ್ತಿಯಷ್ಟು ಪ್ರಬಲವಾದ ಎಐ ಮಾಡಲ್ ಅಥವಾ ಎಲ್​ಎಲ್​ಎಂಗಳನ್ನು (LLM- Large Language Model) ನಿರ್ಮಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಎಂಟು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ (ಸೆ. 18) ನಡೆದ ಎಐ ಇಂಪ್ಯಾಕ್ಟ್ ಸಮಿಟ್ 2026 (AI Impact Summit) ಸಂದರ್ಭದಲ್ಲಿ ಪ್ರಬಲ ಎಲ್​ಎಲ್​ಎಂಗಳನ್ನು ನಿರ್ಮಿಸಲು ಆಯ್ಕೆ ಮಾಡಲಾಗಿರುವ ಎಂಟು ಸಂಸ್ಥೆಗಳನ್ನು ಹೆಸರಿಸಿದ್ದಾರೆ. ಐಐಟಿ ಬಾಂಬೆ, ಟೆಕ್ ಮಹೀಂದ್ರ ಸಂಸ್ಥೆಗಳು ಇದರಲ್ಲಿ ಸೇರಿವೆ.

ಇದನ್ನೂ ಓದಿ: ಗಗನಕ್ಕೇರಿತು ರಾಜ್ಯಗಳ ಸಾಲ; ಮಿತಿಮೀರಿದ ಪಂಜಾಬ್ ಸಾಲ; ಕರ್ನಾಟಕದ್ದು ಎಷ್ಟು?

ಇಂಡಿಯಾ ಎಐ ಮಿಷನ್ ಮೂಲಕ ಈ ಪ್ರಯತ್ನಗಳಿಗೆ ಬೆಂಬಲ ನೀಡಲಾಗುತ್ತಿದೆ. ಸುಮಾರು 988.6 ಕೋಟಿ ರೂ ಮೊತ್ತದ ಧನಸಹಾಯಕ್ಕೆ ಅನುಮೋದನೆ ಕೊಡಲಾಗಿದೆ. ಈ ಮಿಷನ್​ನಲ್ಲಿ ಹಲವು ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಐಐಟಿ ಬಾಂಬೆ ಬಹಳ ಮಹತ್ವದ ಪ್ರಾಜೆಕ್ಟ್ ಮುನ್ನಡೆಸಲಿದೆ. ಭಾರತ್​ಜೆನ್ ಕನ್ಸಾರ್ಟಿಯಂ ಮೂಲಕ ಐಐಟಿ ಬಾಂಬೆ ಬಹಳ ಶಕ್ತಿಶಾಲಿ ಎಲ್​ಎಲ್​ಎಂ ಅನ್ನು ಅಭಿವೃದ್ದಿಪಡಿಸಲಿದೆ.

ಎಐ ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲು ಸರ್ಕಾರ ಆಯ್ಕೆ ಮಾಡಿದ 8 ಸಂಸ್ಥೆಗಳು

  1. ಐಐಟಿ ಬಾಂಬೆ (ಭಾರತ್ ಜೆನ್ ಕನ್ಸಾರ್ಟಿಯಂ)
  2. ಟೆಕ್ ಮಹೀಂದ್ರ
  3. ಫ್ರಾಕ್ಟಲ್ ಅನಾಲಿಟಿಕ್ಸ್
  4. ಅವತಾರ್ಎಐ
  5. ಜೇನ್​ಟೇಕ್ ಎಐಟೆಕ್ ಇನ್ನೋವೇಶನ್ಸ್
  6. ಜೆನ್​ಲೂಪ್ ಇಂಟೆಲಿಜೆನ್ಸ್ ಪ್ರೈ ಲಿ
  7. ನ್ಯೂರೋ ಡಿಎಕ್ಸ್ (ಇಂಟೆಲಿಹೆಲ್ತ್)
  8. ಶೋಧ್ ಎಐ

ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಲ್​ಎಲ್​ಎಂ

ಈ ಮೇಲಿನ ಎಂಟೂ ರಾಜ್ಯಗಳು ಬೇರೆ ಬೇರೆ ಗುರಿಗಳಿರುವ ಫೌಂಡೇಶನಲ್ ಎಐ ಮಾಡಲ್​ಗಳನ್ನು ನಿರ್ಮಿಸಲು ನೆರವಾಗಲಿವೆ. ಭಾರತ್​ಜೆನ್ ಕನ್ಸಾರ್ಟಿಯಂ (BharatGen Consortium) ಮೂಲಕ ಐಐಟಿ ಬಾಂಬೆ ನಡೆಸಲಿರುವ ಎಐ ಪ್ರಾಜೆಕ್ಟ್ ಮಹತ್ವದ್ದಾಗಿದೆ. ಒಂದು ಟ್ರಿಲಿಯನ್ ಪ್ಯಾರಮೀಟರ್​ಗಳಿರುವ ಎಲ್​ಎಲ್​ಎಂ ಅನ್ನು ಇದು ಅಭಿವೃದ್ಧಿಪಡಿಸಲಿದೆ. ಡೀಪ್​ಸೀಕ್, ಚ್ಯಾಟ್​ಜಿಪಿಟಿಯಂತಹ ಕೆಲವೇ ಕೆಲವು ಎಐ ಮಾಡಲ್​ಗಳು ಮಾತ್ರ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಪ್ಯಾರಮೀಟರ್ ಹೊಂದಿವೆ.

ಇದನ್ನೂ ಓದಿ: ಏಷ್ಯನ್ ಪೇಂಟ್ಸ್ ಕಥೆ… 1942ರಲ್ಲಿ ನಾಲ್ವರು ಹುಡುಗರು ಕಟ್ಟಿದ ಕಂಪನಿ; ಆರು ದಶಕಗಳಿಂದ ಇದು ನಂ. 1

ಪ್ಯಾರಮೀಟರ್ ಪ್ರಮಾನ ಹೆಚ್ಚಿದಷ್ಟೂ ಭಾಷೆಯನ್ನು ಅರಿಯುವ ನಿಖರತೆ ಹೆಚ್ಚುತ್ತದೆ. ಹೀಗಾಗಿ, ಭಾರತದ ಮಟ್ಟಿಗೆ ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಐ ಮಾಡಲ್ ನಿಜಕ್ಕೂ ಶ್ಲಾಘನೀಯ. ವಿದೇಶಗಳ ಎಐ ಮಾಡಲ್ ಬದಲು ದೇಶೀಯವಾದ ವಿಶ್ವಶ್ರೇಷ್ಠ ಎಐ ಬಳಸುವ ಅವಕಾಶ ಸಿಕ್ಕಲಿದೆ.

ಈಗಾಗಲೇ ಸರ್ವಂ ಎಐ ಇತ್ಯಾದಿ ಕೆಲ ಭಾರತೀಯ ಎಐ ಮಾಡಲ್​ಗಳು ನಿರ್ಮಾಣವಾಗಿವೆಯಾದರೂ ಅವು ಬೇರೆ ದೇಶದ ಪ್ಲಾಟ್​ಫಾರ್ಮ್​ಗಳಲ್ಲಿ ಅಭಿವೃದ್ಧಿಯಾಗಿರುವಂತಹವು. ಸರ್ವಂ ಎಐ ಅನ್ನು ಓಪನ್ ಸೋರ್ಸ್​ನ ಹಾಗೂ 24 ಬಿಲಿಯನ್ ಪ್ಯಾರಮೀಟರ್ ಇರುವ ಮಿಸ್ಟ್ರಾಲ್ ಎಐ ಪ್ಲಾಟ್​ಫಾರ್ಮ್ ಬಳಸಿ ನಿರ್ಮಿಸಲಾಗಿದೆ. ಈಗ ಸಂಪೂರ್ಣ ಸ್ವಂತವಾಗಿ ಎಲ್​ಎಲ್​ಎಂಗಳನ್ನು ನಿರ್ಮಿಸಲು ಹೊರಟಿದೆ. ಬೇರೆ ಪ್ಲಾಟ್​ಫಾರ್ಮ್​ಗಳ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ