AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ

India to build massive 1 trillion parameter AI model: ಚ್ಯಾಟ್​ಜಿಪಿಟಿಗೆ ಸಮನಾದ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಅನ್ನು ನಿರ್ಮಿಸಲು ಭಾರತ ಹೊರಟಿದೆ. ಮಹತ್ವಾಕಾಂಕ್ಷಿ ಎಐ ಮಿಷನ್ ಅಡಿಯಲ್ಲಿ ವಿವಿಧ ಎಐ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ 8 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಟೆಕ್ ಮಹೀಂದ್ರ, ಐಐಟಿ ಬಾಂಬೆ ಮೊದಲಾದ ಸಂಸ್ಥೆಗಳು ಈ ಹೊಣೆ ಪಡೆದಿವೆ.

ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ
ಎಐ ಮಿಷನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 21, 2025 | 3:21 PM

Share

ನವದೆಹಲಿ, ಸೆಪ್ಟೆಂಬರ್ 21: ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಲು ಹಾಗೂ ಬೃಹತ್ ಮಾರುಕಟ್ಟೆಯಾಗಿ ಬೆಳೆಯಲು ಸಕಲ ಪ್ರಯತ್ನಗಳನ್ನೂ ಹಾಕುತ್ತಿದೆ. ಈಗಾಗಲೇ ಬಹಳ ಮಹತ್ವ ಪಡೆದಿರುವ ಎಐ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಚೀನಾದ ಮುನ್ನಡೆಯ ಮಟ್ಟ ತಲುಪಲು ಭಾರತ ದೊಡ್ಡ ಯೋಜನೆ ಹಾಕಿದೆ. ಚ್ಯಾಟ್​ಜಿಪಿಟಿಯ ಸುಧಾರಿತ ಆವೃತ್ತಿಯಷ್ಟು ಪ್ರಬಲವಾದ ಎಐ ಮಾಡಲ್ ಅಥವಾ ಎಲ್​ಎಲ್​ಎಂಗಳನ್ನು (LLM- Large Language Model) ನಿರ್ಮಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಎಂಟು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ (ಸೆ. 18) ನಡೆದ ಎಐ ಇಂಪ್ಯಾಕ್ಟ್ ಸಮಿಟ್ 2026 (AI Impact Summit) ಸಂದರ್ಭದಲ್ಲಿ ಪ್ರಬಲ ಎಲ್​ಎಲ್​ಎಂಗಳನ್ನು ನಿರ್ಮಿಸಲು ಆಯ್ಕೆ ಮಾಡಲಾಗಿರುವ ಎಂಟು ಸಂಸ್ಥೆಗಳನ್ನು ಹೆಸರಿಸಿದ್ದಾರೆ. ಐಐಟಿ ಬಾಂಬೆ, ಟೆಕ್ ಮಹೀಂದ್ರ ಸಂಸ್ಥೆಗಳು ಇದರಲ್ಲಿ ಸೇರಿವೆ.

ಇದನ್ನೂ ಓದಿ: ಗಗನಕ್ಕೇರಿತು ರಾಜ್ಯಗಳ ಸಾಲ; ಮಿತಿಮೀರಿದ ಪಂಜಾಬ್ ಸಾಲ; ಕರ್ನಾಟಕದ್ದು ಎಷ್ಟು?

ಇಂಡಿಯಾ ಎಐ ಮಿಷನ್ ಮೂಲಕ ಈ ಪ್ರಯತ್ನಗಳಿಗೆ ಬೆಂಬಲ ನೀಡಲಾಗುತ್ತಿದೆ. ಸುಮಾರು 988.6 ಕೋಟಿ ರೂ ಮೊತ್ತದ ಧನಸಹಾಯಕ್ಕೆ ಅನುಮೋದನೆ ಕೊಡಲಾಗಿದೆ. ಈ ಮಿಷನ್​ನಲ್ಲಿ ಹಲವು ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಐಐಟಿ ಬಾಂಬೆ ಬಹಳ ಮಹತ್ವದ ಪ್ರಾಜೆಕ್ಟ್ ಮುನ್ನಡೆಸಲಿದೆ. ಭಾರತ್​ಜೆನ್ ಕನ್ಸಾರ್ಟಿಯಂ ಮೂಲಕ ಐಐಟಿ ಬಾಂಬೆ ಬಹಳ ಶಕ್ತಿಶಾಲಿ ಎಲ್​ಎಲ್​ಎಂ ಅನ್ನು ಅಭಿವೃದ್ದಿಪಡಿಸಲಿದೆ.

ಎಐ ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲು ಸರ್ಕಾರ ಆಯ್ಕೆ ಮಾಡಿದ 8 ಸಂಸ್ಥೆಗಳು

  1. ಐಐಟಿ ಬಾಂಬೆ (ಭಾರತ್ ಜೆನ್ ಕನ್ಸಾರ್ಟಿಯಂ)
  2. ಟೆಕ್ ಮಹೀಂದ್ರ
  3. ಫ್ರಾಕ್ಟಲ್ ಅನಾಲಿಟಿಕ್ಸ್
  4. ಅವತಾರ್ಎಐ
  5. ಜೇನ್​ಟೇಕ್ ಎಐಟೆಕ್ ಇನ್ನೋವೇಶನ್ಸ್
  6. ಜೆನ್​ಲೂಪ್ ಇಂಟೆಲಿಜೆನ್ಸ್ ಪ್ರೈ ಲಿ
  7. ನ್ಯೂರೋ ಡಿಎಕ್ಸ್ (ಇಂಟೆಲಿಹೆಲ್ತ್)
  8. ಶೋಧ್ ಎಐ

ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಲ್​ಎಲ್​ಎಂ

ಈ ಮೇಲಿನ ಎಂಟೂ ರಾಜ್ಯಗಳು ಬೇರೆ ಬೇರೆ ಗುರಿಗಳಿರುವ ಫೌಂಡೇಶನಲ್ ಎಐ ಮಾಡಲ್​ಗಳನ್ನು ನಿರ್ಮಿಸಲು ನೆರವಾಗಲಿವೆ. ಭಾರತ್​ಜೆನ್ ಕನ್ಸಾರ್ಟಿಯಂ (BharatGen Consortium) ಮೂಲಕ ಐಐಟಿ ಬಾಂಬೆ ನಡೆಸಲಿರುವ ಎಐ ಪ್ರಾಜೆಕ್ಟ್ ಮಹತ್ವದ್ದಾಗಿದೆ. ಒಂದು ಟ್ರಿಲಿಯನ್ ಪ್ಯಾರಮೀಟರ್​ಗಳಿರುವ ಎಲ್​ಎಲ್​ಎಂ ಅನ್ನು ಇದು ಅಭಿವೃದ್ಧಿಪಡಿಸಲಿದೆ. ಡೀಪ್​ಸೀಕ್, ಚ್ಯಾಟ್​ಜಿಪಿಟಿಯಂತಹ ಕೆಲವೇ ಕೆಲವು ಎಐ ಮಾಡಲ್​ಗಳು ಮಾತ್ರ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಪ್ಯಾರಮೀಟರ್ ಹೊಂದಿವೆ.

ಇದನ್ನೂ ಓದಿ: ಏಷ್ಯನ್ ಪೇಂಟ್ಸ್ ಕಥೆ… 1942ರಲ್ಲಿ ನಾಲ್ವರು ಹುಡುಗರು ಕಟ್ಟಿದ ಕಂಪನಿ; ಆರು ದಶಕಗಳಿಂದ ಇದು ನಂ. 1

ಪ್ಯಾರಮೀಟರ್ ಪ್ರಮಾನ ಹೆಚ್ಚಿದಷ್ಟೂ ಭಾಷೆಯನ್ನು ಅರಿಯುವ ನಿಖರತೆ ಹೆಚ್ಚುತ್ತದೆ. ಹೀಗಾಗಿ, ಭಾರತದ ಮಟ್ಟಿಗೆ ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಐ ಮಾಡಲ್ ನಿಜಕ್ಕೂ ಶ್ಲಾಘನೀಯ. ವಿದೇಶಗಳ ಎಐ ಮಾಡಲ್ ಬದಲು ದೇಶೀಯವಾದ ವಿಶ್ವಶ್ರೇಷ್ಠ ಎಐ ಬಳಸುವ ಅವಕಾಶ ಸಿಕ್ಕಲಿದೆ.

ಈಗಾಗಲೇ ಸರ್ವಂ ಎಐ ಇತ್ಯಾದಿ ಕೆಲ ಭಾರತೀಯ ಎಐ ಮಾಡಲ್​ಗಳು ನಿರ್ಮಾಣವಾಗಿವೆಯಾದರೂ ಅವು ಬೇರೆ ದೇಶದ ಪ್ಲಾಟ್​ಫಾರ್ಮ್​ಗಳಲ್ಲಿ ಅಭಿವೃದ್ಧಿಯಾಗಿರುವಂತಹವು. ಸರ್ವಂ ಎಐ ಅನ್ನು ಓಪನ್ ಸೋರ್ಸ್​ನ ಹಾಗೂ 24 ಬಿಲಿಯನ್ ಪ್ಯಾರಮೀಟರ್ ಇರುವ ಮಿಸ್ಟ್ರಾಲ್ ಎಐ ಪ್ಲಾಟ್​ಫಾರ್ಮ್ ಬಳಸಿ ನಿರ್ಮಿಸಲಾಗಿದೆ. ಈಗ ಸಂಪೂರ್ಣ ಸ್ವಂತವಾಗಿ ಎಲ್​ಎಲ್​ಎಂಗಳನ್ನು ನಿರ್ಮಿಸಲು ಹೊರಟಿದೆ. ಬೇರೆ ಪ್ಲಾಟ್​ಫಾರ್ಮ್​ಗಳ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ತಮಿಳು ನಟ ಜಯಂ ರವಿ ಕಣ್ಣೀರು, ಆಕ್ರೋಶ: ಆಗಿದ್ದೇನು? ವಿಡಿಯೋ ನೋಡಿ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ