AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TCS, Infosys Attrition Rate: ಕೆಲಸ ಬಿಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಟಿಸಿಎಸ್, ಇನ್ಫೋಸಿಸ್ ಪರದಾಟ

ಭಾರತದ ಪ್ರಮುಖ ಐಟಿ ಕಂಪೆನಿಗಳಾದ ಟಿಸಿಎಸ್, ಇನ್ಫೋಸಿಸ್​ನಲ್ಲಿ ಕೆಲಸ ಬಿಡುವವರ ಪ್ರಮಾಣ ಹೆಚ್ಚಾಗಿದ್ದು, ಇದೀಗ ಈ ಸವಾಲಿನ ವಿರುದ್ಧ ಹೋರಾಡುವಂತಾಗಿದೆ.

TCS, Infosys Attrition Rate: ಕೆಲಸ ಬಿಡುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿ ಟಿಸಿಎಸ್, ಇನ್ಫೋಸಿಸ್ ಪರದಾಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Jun 20, 2022 | 12:44 PM

Share

ಕಳೆದ ಕೆಲವು ತ್ರೈಮಾಸಿಕಗಳಲ್ಲಿ ಐಟಿ ಕಂಪೆನಿಗಳಲ್ಲಿ ಕೆಲಸ ಬಿಡುತ್ತಿರುವವರ ಪ್ರಮಾಣ (Attrition Rates) ಹೆಚ್ಚಿವೆ. ಡಿಜಿಟಲ್ ಕೌಶಲಗಳೊಂದಿಗೆ ತಂತ್ರಜ್ಞಾನ ಪ್ರತಿಭೆ ಬೇಡಿಕೆಯು ಹೆಚ್ಚುತ್ತಿರುವ ಕಾರ್ಮಿಕ ವೆಚ್ಚಗಳೊಂದಿಗೆ ಪೂರೈಕೆಯನ್ನು ಮೀರಿಸುತ್ತದೆ. ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಪ್ರತಿಭೆಯನ್ನು ಆಕರ್ಷಿಸುವುದು, ತರಬೇತಿ ಮತ್ತು ಉದ್ಯೋಗಿಗಳನ್ನು ಉಳಿಸಿಕೊಳ್ಳುವುದು ಪ್ರಾಮುಖ್ಯವನ್ನು ಪಡೆದಿದೆ. ಹಣಕಾಸು ವರ್ಷ 2022ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮತ್ತು ಇನ್ಫೋಸಿಸ್ ಎರಡೂ ದಾಖಲೆ ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡಿದ್ದರಿಂದ ಭಾರತದ ಅಗ್ರ ಭಾರತೀಯ ಐಟಿ ಕಂಪೆನಿಗಳು ನೇಮಕಾತಿಯನ್ನು ಹೆಚ್ಚಿಸಿವೆ. ಟಿಸಿಎಸ್ ಒಂದು ತ್ರೈಮಾಸಿಕದಲ್ಲಿ ಅತ್ಯಧಿಕ ಉದ್ಯೋಗಿ ಸೇರ್ಪಡೆಗಳಿಗೆ ಸಾಕ್ಷಿಯಾಗಿದೆ. ನಾಲ್ಕನೇ ತ್ರೈಮಾಸಿಕದಲ್ಲಿ ಟಿಸಿಎಸ್ ನಿವ್ವಳ ಆಧಾರದ ಮೇಲೆ 35,209 ಉದ್ಯೋಗಿಗಳನ್ನು ಸೇರಿಸಿದ್ದು, ಇದು ತ್ರೈಮಾಸಿಕದಲ್ಲಿ ಅತ್ಯಧಿಕ ನಿವ್ವಳ ಸೇರ್ಪಡೆಯಾಗಿದೆ. ಉದ್ಯೋಗಿಗಳ ಸಂಖ್ಯೆಯು 5,92,195 ರಷ್ಟಿದ್ದು, ವರ್ಷದಲ್ಲಿ 1,03,546 ನಿವ್ವಳ ಸೇರ್ಪಡೆಯಾಗಿದೆ. ಇದು ಮತ್ತೊಂದು ಸಾರ್ವಕಾಲಿಕ ಗರಿಷ್ಠವಾಗಿದೆ. ಅದೇ ರೀತಿ, ನಾಲ್ಕನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಸುಮಾರು 22,000 ಉದ್ಯೋಗಿಗಳನ್ನು ಸೇರಿಸಿದೆ.

“ಕಂಪೆನಿಗಳು ಸ್ಪರ್ಧಾತ್ಮಕವಾಗಿ ವೇತವನ್ನು ನೀಡುವುದು, ಉದ್ಯೋಗಿ ಕೆಲಸ ನಿರ್ವಹಣೆ ಸಮಯವನ್ನು ಸುಧಾರಿಸುವುದು, ಉದ್ಯೋಗಿ ಯೋಗಕ್ಷೇಮ, ಪುನರ್ ಕೌಶಲ ಮತ್ತು ಪ್ರತಿಭೆಯನ್ನು ಪಡೆಯಲು ಮತ್ತು ಉಳಿಸಿಕೊಳ್ಳಲು ಉತ್ತಮ ಅವಕಾಶಗಳನ್ನು ಒದಗಿಸುವಂತಹ ವಿವಿಧ ಕ್ರಮಗಳನ್ನು ತೆಗೆದುಕೊಂಡಿವೆ. ವಾರ್ಷಿಕವಾಗಿ ತ್ರೈಮಾಸಿಕ ಆಧಾರದ ಮೇಲೆ ಕೆಲಸ ಬಿಡುವವರ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ,” ಎಂದು ದೇಶೀಯ ಬ್ರೋಕರೇಜ್ ಮತ್ತು ಸಂಶೋಧನಾ ಸಂಸ್ಥೆ ಮೋತಿಲಾಲ್ ಓಸ್ವಾಲ್ ಟಿಪ್ಪಣಿಯಲ್ಲಿ ತಿಳಿಸಿದೆ. ಅಟ್ರಿಷನ್ ಕಡಿಮೆ ಮಾಡುವುದು, ಬೆಲೆಯಲ್ಲಿ ಸುಧಾರಣೆ, ಉಪ-ಗುತ್ತಿಗೆದಾರರ ಮೇಲೆ ಕಡಿಮೆ ಅವಲಂಬನೆ, ಹೆಚ್ಚಿನ ತಾಜಾ ಸೇರ್ಪಡೆಗಳು ಮತ್ತು ಬಲವಾದ ಕಾರ್ಯಾಚರಣೆ ಹತೋಟಿಯೊಂದಿಗೆ ಎರಡೂ ಕಂಪೆನಿಗಳು ಮುಂದಕ್ಕೆ ಹೋಗುವ ಮಾರ್ಜಿನ್​ಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ.

“ಟಿಸಿಎ್ ಮತ್ತು ಇನ್ಫೋಸಿಸ್ ಸಾಮರ್ಥ್ಯ ನೀಡಿದರೆ ಎರಡೂ ಕಂಪೆನಿಗಳು ದುರ್ಬಲಗೊಳ್ಳುತ್ತಿರುವ ಮ್ಯಾಕ್ರೋ ಪರಿಸರವನ್ನು ತಡೆದುಕೊಳ್ಳಲು ಉತ್ತಮ ಸ್ಥಿತಿಯಲ್ಲಿವೆ. ಉದ್ಯೋಗ ಬಿಡುವ ಪ್ರಮಾಣದಲ್ಲಿ ಮಿತ, ಬಲವಾದ ತಾಜಾ ಸೇರ್ಪಡೆ ಮತ್ತು ಸಕಾರಾತ್ಮಕ ಬೆಲೆ ಪರಿಸರದ ಕಾರಣದಿಂದಾಗಿ ಪ್ರತಿಕೂಲ ಪರಿಸ್ಥಿತಿ ಹೊರತಾಗಿಯೂ ಮಾರ್ಜಿನ್ ಸ್ಥಿರವಾಗಿರಬೇಕು,” ಎಂದು ಬ್ರೋಕರೇಜ್ ಹೇಳಿದೆ. ಮೋತಿಲಾಲ್ ಓಸ್ವಾಲ್ ಹಣಕಾಸು ವರ್ಷ 2023ರಲ್ಲಿ ಸಮಂಜಸವಾದ ಮೌಲ್ಯಮಾಪನಗಳು ಮತ್ತು ಉತ್ತಮ ಎರಡಂಕಿಯ ಗಳಿಕೆಯ ಬೆಳವಣಿಗೆ (INR v/s USD ನಲ್ಲಿನ ಸವಕಳಿಯಿಂದ 300-350 ಬೇಸಿಸ್ ಪಾಯಿಂಟ್ ಪ್ರಭಾವದಿಂದ ಭಾಗಶಃ ಸಹಾಯ) ಮಾಹಿತಿ ತಂತ್ರಜ್ಞಾನ ಸೇವೆಗಳ ವಲಯದಲ್ಲಿ ಪಾಸಿಟಿವ್ ಆದ ಭಾವನೆಯಲ್ಲಿ ಉಳಿದಿದ್ದಾರೆ.

ಹಣಕಾಸು ವರ್ಷ 2022ರ ನಾಲ್ಕನೇ ತ್ರೈಮಾಸಿಕ ಗಳಿಕೆಯನ್ನು ಪ್ರಕಟಿಸುವಾಗ, ಭಾರತದ ಉನ್ನತ ಐಟಿ ಸಂಸ್ಥೆ ಟಿಸಿಎಸ್ ತನ್ನ ಐಟಿ ಸೇವೆಗಳ ಉದ್ಯೋಗ ಬಿಡುವವರ ಪ್ರಮಾಣ ಜನವರಿ-ಮಾರ್ಚ್ 2022ರ ಅವಧಿಯಲ್ಲಿ ಶೇ 17.4 ತಲುಪಿದೆ ಎಂದು ಹೇಳಿದೆ. ಆದರೆ ಹೆಚ್ಚುತ್ತಿರುವ ಉದ್ಯೋಗ ಬಿಡುವ ದರ ‘ಇಳಿಮುಖ’ವಾಗಿದೆ. ಆದರೆ LTM – IT ಸೇವೆಗಳಿಗೆ ಐಟಿ ದೈತ್ಯ ಕಂಪೆನಿ ಇನ್ಫೋಸಿಸ್​ನಲ್ಲಿ ಕೆಲಸ ಬಿಡುವವರ ದರ ನಾಲ್ಕನೇ ತ್ರೈಮಾಸಿಕದಲ್ಲಿ ಶೇ 27.7ಕ್ಕೆ ಏರಿದೆ. ಅದರ ಹಿಂದಿನ ತ್ರೈಮಾಸಿಕದಲ್ಲಿ ದರವು ಶೇ 25.5ರಷ್ಟಿತ್ತು ಮತ್ತು ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 10.9ರಷ್ಟಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

Published On - 12:41 pm, Mon, 20 June 22

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್