AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cognizant attrition: ಕಾಗ್ನಿಜಂಟ್ ಕಂಪೆನಿಯಿಂದ ಜೂನ್ ತ್ರೈಮಾಸಿಕದಲ್ಲಿ ಕೆಲಸ ಬಿಟ್ಟವರ ಪ್ರಮಾಣ ಶೇ 31ಕ್ಕೆ

ಕಾಗ್ನಿಜಂಟ್ ಕಂಪೆನಿ ಹೇಳಿರುವ ಪ್ರಕಾರ, ಅದರ ತ್ರೈಮಾಸಿಕದ ವಾರ್ಷಿಕ attrition (ಕೆಲಸ ಬಿಡುವವರ) ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ 31ರಷ್ಟು ತಲುಪಿದೆ. ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ 21ರಷ್ಟಿತ್ತು. ಆದರೆ ಭಾರತದಲ್ಲಿ ಜೂನಿಯರ್ ಮತ್ತು ಮಿಡ್- ಸೀನಿಯರ್ ಹಂತದ ಸಾವಿರಾರು ಸಿಬ್ಬಂದಿ ಉದ್ಯೋಗವನ್ನು ಬಿಡುವುದು ಜಾಸ್ತಿ ಆಗಿದೆ. ಅಮದ ಹಾಗೆ ಎಲ್ಲ ಐ.ಟಿ. ಸರ್ವೀಸಸ್ ಕಂಪೆನಿಗಳಲ್ಲೂ ಜೂನ್ ತ್ರೈಮಾಸಿಕದ ಕೊನೆಯ ಲೆಕ್ಕಾಚಾರದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗಿದೆ. ಆ ಕಾರಣಕ್ಕೆ ಎಂಜಿನಿಯರಿಂಗ್ ಪ್ರತಿಭೆಗಳು, […]

Cognizant attrition: ಕಾಗ್ನಿಜಂಟ್ ಕಂಪೆನಿಯಿಂದ ಜೂನ್ ತ್ರೈಮಾಸಿಕದಲ್ಲಿ ಕೆಲಸ ಬಿಟ್ಟವರ ಪ್ರಮಾಣ ಶೇ 31ಕ್ಕೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Jul 30, 2021 | 10:23 AM

Share

ಕಾಗ್ನಿಜಂಟ್ ಕಂಪೆನಿ ಹೇಳಿರುವ ಪ್ರಕಾರ, ಅದರ ತ್ರೈಮಾಸಿಕದ ವಾರ್ಷಿಕ attrition (ಕೆಲಸ ಬಿಡುವವರ) ಪ್ರಮಾಣ ಎರಡನೇ ತ್ರೈಮಾಸಿಕದಲ್ಲಿ ದಾಖಲೆಯ ಶೇ 31ರಷ್ಟು ತಲುಪಿದೆ. ಕಳೆದ ತ್ರೈಮಾಸಿಕದಲ್ಲಿ ಈ ಪ್ರಮಾಣ ಶೇ 21ರಷ್ಟಿತ್ತು. ಆದರೆ ಭಾರತದಲ್ಲಿ ಜೂನಿಯರ್ ಮತ್ತು ಮಿಡ್- ಸೀನಿಯರ್ ಹಂತದ ಸಾವಿರಾರು ಸಿಬ್ಬಂದಿ ಉದ್ಯೋಗವನ್ನು ಬಿಡುವುದು ಜಾಸ್ತಿ ಆಗಿದೆ. ಅಮದ ಹಾಗೆ ಎಲ್ಲ ಐ.ಟಿ. ಸರ್ವೀಸಸ್ ಕಂಪೆನಿಗಳಲ್ಲೂ ಜೂನ್ ತ್ರೈಮಾಸಿಕದ ಕೊನೆಯ ಲೆಕ್ಕಾಚಾರದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗಿದೆ. ಆ ಕಾರಣಕ್ಕೆ ಎಂಜಿನಿಯರಿಂಗ್ ಪ್ರತಿಭೆಗಳು, ಅದರಲ್ಲೂ ಡಿಜಿಟಲ್ ಕೌಶಲ ಇರುವವರಿಗೆ ಬೇಡಿಕೆ ತುಂಬ ಜಾಸ್ತಿ ಆಗಿದೆ. ಇನ್ನು ಇಲ್ಲಿ ಗೊತ್ತಾಗಬೇಕಾದ ಸಂಗತಿ ಏನಂದರೆ, ಪ್ರತಿಭೆಗಳ ಪೂರೈಕೆಗಿಂತ ಬೇಡಿಕೆ ಸಿಕ್ಕಾಪಟ್ಟೆ ಜಾಸ್ತಿ ಇದೆ. ಆ ಕಾರಣಕ್ಕೆ ಅಮತೋಲನ ಆಗುತ್ತಿದೆ.

ಪ್ರತಿಭೆಗಳಿಗಾಗಿ ಕದನ ಈ ವರ್ಷದ ಬಾಕಿ ಅವಧಿಗೂ ಮುಂದುವರಿಯುವ ಎಲ್ಲ ಸಾಧ್ಯತೆಗಳಿವೆ. ಆದರೆ ಕಾಗ್ನಿಜಂಟ್ ಕಂಪೆನಿಯ ಈಗಿನ ಸಂಖ್ಯೆಯು ಅದರದೇ ವಲಯದ ಉಳಿದೆಲ್ಲ ಕಂಪೆನಿಗಳಿಗಿಂತ ಬಹಳ ಹೆಚ್ಚಿದೆ. ಈ ಸ್ಥೂಲವಾದ ಬೇಡಿಕೆ ಹಿನ್ನೆಲೆಯಲ್ಲಿ ಪ್ರಮುಖ ಕೌಶಲಗಳ ಬೇಡಿಕೆ ಮತ್ತು ಪೂರೈಕೆಯ ಅಸಮತೋಲನಕ್ಕೆ ಕಾರಣವಾಗಿದೆ. ಐ.ಟಿ. ವಲಯದಲ್ಲಿ ಕೆಲಸ ಬಿಡುವವರ ಪ್ರಮಾಣ ಜಾಸ್ತಿ ಆಗುವುದರ ಮೂಲವಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಸತತವಾಗಿ ಇದು ಮುಂದುವರಿಯಬಹುದು ಎಂಬ ನಿರೀಕ್ಷೆ ನಮಗಿತ್ತು ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಕೆಲಸ ಬಿಡುವ ಪ್ರಮಾಣ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ಕಾಗ್ನಿಜಂಟ್​ನಲ್ಲಿ ಈಗ ಹೊರಬಂದಿರುವ ಸಂಖ್ಯೆಯು ಆತಂಕಕಾರಿ. ಅದು ಮೇಲ್ಮಟ್ಟದಲ್ಲಿಯೇ ಮುಂದುವರಿಯಲಿದೆ. ಅಂದರೆ ಶೇ 20ಕ್ಕಿಂತ ಹೆಚ್ಚು ಇರಲಿದೆ. ಏಕೆಂದರೆ ಕೆಲವು ತ್ರಯಮಾಸಿಕಗಳಲ್ಲಂತೂ ಹೊಸದಾಗಿ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಂಡೇ ಇಲ್ಲ ಎನ್ನಲಾಗಿದೆ. ಅದೇ ಟಿಸಿಎಸ್​, ಇನ್ಫೋಸಿಸ್ ಮತ್ತು ವಿಪ್ರೋದಲ್ಲಿ ಶೇ 8.6, ಶೇ13.9 ಹಾಗೈ ಶೇ 15.9ರಷ್ಟಿದೆ ಕೆಲಸ ತೊರೆಯುವವರ ಪ್ರಮಾಣ. ಇನ್ನು ಕಾಗ್ನಿಜಂಟ್​ನಲ್ಲಿ ಉದ್ಯೋಗ ತೊರೆಯುತ್ತಿರುವವರ ಪ್ರಮಾಣ ಕಡಿಮೆ ಮಾಡಬೇಕು ಎಂಬ ಕಾರಣಕ್ಕೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಲಾಗಿದೆ.

ಕೆಲಸ ಬಿಡುತ್ತಿರುವ ಸಮಸ್ಯೆಯಿಂದ ಹೊರಬರಲು ಈ ವರ್ಷ 1 ಲಕ್ಷ ಲ್ಯಾಟರಲ್ ನೇಮಕಾತಿ ಹಾಗೂ 1 ಲಕ್ಷಕ್ಕೂ ಹೆಚ್ಚು ಅಸೋಸಿಯೇಟ್ಸ್ ತರಬೇತಿ ನೀಡುವ ಆಲೋಚನೆ ಕಾಗ್ನಿಜಂಟ್ ಮಾಡುತ್ತಿದೆ. 2021ರಲ್ಲಿ 30 ಸಾವಿರ ಹೊಸ ಪದವೀಧರರು, 2022ರಲ್ಲಿ 45 ಸಾವಿರ ಪದವೀಧರರಿಗೆ ಭಾರತದಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ: Job Loss: ಆಟೋಮೆಷನ್​ನಿಂದ 2022ರ ಹೊತ್ತಿಗೆ ಕೆಲಸ ಕಳೆದುಕೊಳ್ಳಲಿದ್ದಾರೆ 30 ಲಕ್ಷ ಮಂದಿ; ಏಕೆ ಹಾಗೂ ಹೇಗೆ ಗೊತ್ತಾ?

(Cognizant Attrition Rate At 37 Percent In Second Quarter Reached Peak Level )

Published On - 4:25 pm, Thu, 29 July 21

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು