AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತತ್ವ್ ಚಿಂತನ್ ಐಪಿಒ ಹೂಡಿಕೆದಾರರ ಸಂಪತ್ತು ಲಿಸ್ಟಿಂಗ್ ದಿನವೇ ಡಬಲ್; 1083 ರೂ.ಗೆ ವಿತರಿಸಿದ್ದು ದಿನದ ಕೊನೆಗೆ 2310 ರೂ.

2021ರಲ್ಲಿ ಲಿಸ್ಟಿಂಗ್ ಆದ ಕಂಪೆನಿಗಳಲ್ಲೇ ಅದ್ಭುತ ಗಳಿಕೆ ದಾಖಲಿಸಿದೆ ಸ್ಪೆಷಾಲ್ಟಿ ಕೆಮಿಕಲ್ ಕಂಪೆನಿ ತತ್ವ ಚಿಂತನ್ ಫಾರ್ಮಾ ಕೆಮ್. ಗುರುವಾರದಂದು (ಜುಲೈ 29, 2021) ತತ್ವ್​ ಚಿಂತನ್ ಈ ವರ್ಷದ ಮೂರನೇ ಕಂಪೆನಿಯಾಗಿದ್ದು, ಲಿಸ್ಟಿಂಗ್​ ದಿನವೇ ಹೂಡಿಕೆ ಸಂಪತ್ತು ದುಪ್ಪಟ್ಟಾಗಿದೆ. ಇತರ ಎರಡು ಕಂಪೆನಿಗಳೆಂದರೆ ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಶೇ 108.7 ಹಾಗೂ ಇಂಡಿಗೋ ಪೇಂಟ್ಸ್ ಶೇ 109.31ರಷ್ಟು ಏರಿಕೆ ಆಗಿತ್ತು. ಬಿಎಸ್​ಇಯಲ್ಲಿ ತತ್ವ್ ಚಿಂತನ್ ಷೇರು ದಿನಾಂತ್ಯಕ್ಕೆ ರೂ. 2310.25ಕ್ಕೆ ಕೊನೆಯಾಗಿದೆ. ಈ ಷೇರನ್ನು ತಲಾ 1,083 […]

ತತ್ವ್ ಚಿಂತನ್ ಐಪಿಒ ಹೂಡಿಕೆದಾರರ ಸಂಪತ್ತು ಲಿಸ್ಟಿಂಗ್ ದಿನವೇ ಡಬಲ್; 1083 ರೂ.ಗೆ ವಿತರಿಸಿದ್ದು ದಿನದ ಕೊನೆಗೆ 2310 ರೂ.
ಲಾಭದ ನಗದು
TV9 Web
| Edited By: |

Updated on: Jul 29, 2021 | 7:09 PM

Share

2021ರಲ್ಲಿ ಲಿಸ್ಟಿಂಗ್ ಆದ ಕಂಪೆನಿಗಳಲ್ಲೇ ಅದ್ಭುತ ಗಳಿಕೆ ದಾಖಲಿಸಿದೆ ಸ್ಪೆಷಾಲ್ಟಿ ಕೆಮಿಕಲ್ ಕಂಪೆನಿ ತತ್ವ ಚಿಂತನ್ ಫಾರ್ಮಾ ಕೆಮ್. ಗುರುವಾರದಂದು (ಜುಲೈ 29, 2021) ತತ್ವ್​ ಚಿಂತನ್ ಈ ವರ್ಷದ ಮೂರನೇ ಕಂಪೆನಿಯಾಗಿದ್ದು, ಲಿಸ್ಟಿಂಗ್​ ದಿನವೇ ಹೂಡಿಕೆ ಸಂಪತ್ತು ದುಪ್ಪಟ್ಟಾಗಿದೆ. ಇತರ ಎರಡು ಕಂಪೆನಿಗಳೆಂದರೆ ಜಿಆರ್​ ಇನ್​ಫ್ರಾಪ್ರಾಜೆಕ್ಟ್ಸ್​ ಶೇ 108.7 ಹಾಗೂ ಇಂಡಿಗೋ ಪೇಂಟ್ಸ್ ಶೇ 109.31ರಷ್ಟು ಏರಿಕೆ ಆಗಿತ್ತು. ಬಿಎಸ್​ಇಯಲ್ಲಿ ತತ್ವ್ ಚಿಂತನ್ ಷೇರು ದಿನಾಂತ್ಯಕ್ಕೆ ರೂ. 2310.25ಕ್ಕೆ ಕೊನೆಯಾಗಿದೆ. ಈ ಷೇರನ್ನು ತಲಾ 1,083 ರೂಪಾಯಿಗೆ ವಿತರಿಸಲಾಗಿದ್ದು, ಅದಕ್ಕಿಂತ 1,227.25 ರೂಪಾಯಿ ಏರಿಕೆ ಆಗಿದೆ. ಇನ್ನು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಷೇರಿನ ಬೆಲೆ ಶೇ 113.50ರಷ್ಟು ಏರಿಕೆ ಆಗಿದ್ದು, ದಿನದ ಕೊನೆಗೆ 2,312.20 ರೂಪಾಯಿಯೊಂದಿಗೆ ವ್ಯವಹಾರ ಮುಗಿಸಿದೆ. ದಿನದ ಗರಿಷ್ಠ ಮಟ್ಟ ಶೇ 20ರಷ್ಟು ಮೇಲ್​ಸ್ತರದ ಮೊತ್ತವಾದ 2,534.20 ರೂಪಾಯಿ ಮುಟ್ಟಿತ್ತು.

ಎನ್​ಎಸ್​ಇಯಲ್ಲಿ ತತ್ವ್ ಚಿಂತನ್ 78.60 ಲಕ್ಷ ಈಕ್ವಿಟಿ ಷೇರುಗಳು ವಹಿವಾಟಾಗಿದ್ದು, ಬಿಎಸ್​ಇಯಲ್ಲಿ 8.99 ಲಕ್ಷ ಷೇರುಗಳು ಬಿಎಸ್​ಇಯಲ್ಲಿ ಕೈ ಬದಲಾಗಿವೆ. ಜುಲೈ 16ರಿಂದ 20ನೇ ತಾರೀಕಿನ ಮಧ್ಯೆ ಐಪಿಒ ಸಬ್​ಸ್ಕ್ರಿಪ್ಷನ್ ತೆರೆದಿತ್ತು. ಈಗ ಷೇರು ವಿತರಣೆಯಿಂದ ಸಂಗ್ರಹವಾದ 225 ಕೋಟಿ ರೂಪಾಯಿಯನ್ನು ದಹೇಜ್ ಉತ್ಪಾದನಾ ಫೆಸಿಲಿಟಿಯ ವಿಸ್ತರಣೆ ಮತ್ತು ವಡೋದರಾದಲ್ಲಿನ ಆರ್​ ಅಂಡ್ ಡಿ ಫೆಸಿಲಿಟಿಯನ್ನು ಮೇಲ್ದರ್ಜೆಗೆ ಏರಿಸುವುದಕ್ಕೆ ಬಳಸಲಾಗುತ್ತದೆ. ಈ ಕಂಪೆನಿಯು ಗುಜರಾತ್​ನ ಅಂಕ್ಲೇಶ್ವರ್ ಮತ್ತು ದಹೇಜ್​ನಿಂದ ಕಾರ್ಯ ನಿರ್ವಹಣೆ ಮಾಡುತ್ತದೆ.

ಈ ಕಂಪೆನಿಯಿಂದ ಯುಎಸ್​ ಮತ್ತು ನೆದರ್ಲೆಂಡ್ಸ್​ನಲ್ಲಿ ಮಾರ್ಕೆಟಿಂಗ್ ಹಾಗೂ ವಿತರಣಾ ಸಂಸ್ಥೆಗಳನ್ನು ಹೊಂದಲಾಗಿದೆ. ಇವುಗಳ ಮೂಲಕವಾಗಿ ಚೀನಾ, ಜರ್ಮನಿ, ಜಪಾನ್, ದಕ್ಷಿಣ ಆಫ್ರಿಕಾ ಹಾಗೂ ಯು.ಕೆ. ಸೇರಿದಂತೆ 25 ದೇಶಗಳು ಹಾಗೂ ದೇಶೀ ಬೇಡಿಕೆಯನ್ನು ಪೂರೈಸಲಾಗುತ್ತದೆ. ತತ್ವ ಚಿಂತನ್ ನಡೆಸುವಂಥದ್ದೇ ಉದ್ಯಮ ನಡೆಸುವಂಥವು ಮಾರುಕಟ್ಟೆಯಲ್ಲಿ ಎರಡು ಅಥವಾ ಮೂರು ಮಾತ್ರ ಇವೆ. ಆದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅವಕಾಶಗಳ ಅನ್ವೇಷಣೆ ಮತ್ತು ವಿಸ್ತರಣೆಗೆ ಬಹಳ ಸಾಧ್ಯತೆಗಳಿವೆ ಎನ್ನುತ್ತಾರೆ ವಿಶ್ಲೇಷಕರು.

ಇದನ್ನೂ ಓದಿ: Glenmark Life Sciences IPO: ಗ್ಲೆನ್​ಮಾರ್ಕ್​ ಲೈಫ್​ ಸೈನ್ಸಸ್ ಐಪಿಒ ಜುಲೈ 27ರಿಂದ ಆರಂಭ

(Investors Wealth Double In Tatva Chintan Chem Listing Rs 1083 Issue Price Become Rs 2310 On Day End)

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು