AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟಾರ್ಟಪ್ ಅಂದ್ರೆ ಐಸ್​ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ

Piyush Goyal slams Indian startups: ಭಾರತೀಯ ಸ್ಟಾರ್ಟಪ್​​ಗಳು ಫುಡ್ ಡೆಲಿವರಿ, ಗ್ರಾಸರಿ ಡೆಲಿವರಿ, ರೀಪ್ಯಾಕೇಜಿಂಗ್​​ಗೆ ಸೀಮಿತವಾಗಿವೆ ಎಂದು ಪಿಯೂಶ್ ಗೋಯಲ್ ಟೀಕಿಸಿದ್ದಾರೆ. ಚೀನಾದ ಸ್ಟಾರ್ಟಪ್​​ಗಳಂತೆ ಭಾರತದ ಕಂಪನಿಗಳು ಡೀಪ್ ಟೆಕ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಆದರೆ, ಸಚಿವರ ಕೆಲ ಹೇಳಿಕೆಗಳನ್ನು ಕೆಲ ಭಾರತೀಯ ಉದ್ಯಮಿಗಳು ವಿರೋಧಿಸಿದ್ದಾರೆ.

ಸ್ಟಾರ್ಟಪ್ ಅಂದ್ರೆ ಐಸ್​ಕ್ರೀಮ್ ರೀಪ್ಯಾಕೇಜ್ ಮಾಡೋದಲ್ಲ ಎಂದ ಸಚಿವ ಗೋಯಲ್; ಉದ್ಯಮಿಗಳ ಅಸಮಾಧಾನ
ಪಿಯೂಶ್ ಗೋಯಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 04, 2025 | 4:13 PM

ನವದೆಹಲಿ, ಏಪ್ರಿಲ್ 4: ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ಭಾರತೀಯ ಸ್ಟಾರ್ಟಪ್​​ಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ದೇಶದ ಭವಿಷ್ಯಕ್ಕೆ ಒಳಿತಾಗುವ ಡೀಪ್ ಟೆಕ್ (deep tech) ಹಾದಿ ಹಿಡಿಯುವಂತೆ ಕರೆ ನೀಡಿದ್ದಾರೆ. ಸ್ಟಾರ್ಟಪ್​​ಗಳು ಫುಡ್ ಡೆಲಿವರಿ, ರೀಪ್ಯಾಕೇಜಿಂಗ್​​ಗೆ ಸೀಮಿತವಾಗಿ ಹೋಗಿವೆ. ನಾವೀನ್ಯತೆ ಕಾಣಿಸುತ್ತಿಲ್ಲ. ಇದು ಸ್ಟಾರ್ಟಪ್ ಅಲ್ಲ, ಆಂಟ್ರಪ್ರನ್ಯೂರ್ ಲಕ್ಷಣ ಎಂದು ಟೀಕಿಸಿದ್ದಾರೆ. ಪೀಯೂಶ್ ಗೋಯಲ್ (Piyush Goyal) ಅವರ ಈ ಕಟು ಮಾತಿಗೆ ಉದ್ಯಮ ವಲಯದ ಕೆಲ ಮುಖಂಡರು ಬೇಸರಗೊಂಡಿದ್ದು, ಸಚಿವರ ಮಾತುಗಳನ್ನು ಅಲ್ಲಗಳೆದಿದ್ದಾರೆ.

ಝೆಪ್ಟೋ ಎನ್ನುವ ಕ್ವಿಕ್ ಕಾಮರ್ಸ್ ಕಂಪನಿಯ ಸಹ-ಸಂಸ್ಥಾಪಕ ಆದಿತ್ ಪಲಿಚ ಪ್ರತಿಕ್ರಿಯಿಸಿದ್ದು, ಜಾಗತಿಕವಾಗಿ ತಂತ್ರಜ್ಞಾನ ಬಲ ಪಡಿಸಿದ್ದು ಇನ್ಸೂಮರ್ ಇಂಟರ್ನೆಟ್ ಕಂಪನಿಗಳೇ ಎಂದು ವಾದಿಸಿದ್ದಾರೆ.

ಇದನ್ನೂ ಓದಿ
Image
ಈ ಎರಡು ಕ್ರಮಗಳಿಂದ ಇಪಿಎಫ್​ ಪ್ರಕ್ರಿಯೆ ಮತ್ತಷ್ಟು ಸಲೀಸು
Image
ಟ್ರಂಪ್ ಟ್ಯಾರಿಫ್; ಭಾರತದ ಮೇಲೇನು ಪರಿಣಾಮ?
Image
ಇಂಧನದ ಯುಪಿಐ, ಡಿಇಜಿ: ನಂದನ್ ನಿಲೇಕಣಿ
Image
ಸರ್ಕಾರಕ್ಕೆ ಆದಾಯ ತರುವ ಇಲಾಖೆಯಾದ ಐಎಂಡಿ

‘ಭಾರತದಲ್ಲೇ ಸ್ವಂತವಾಗಿ ಯಾವ ದೊಡ್ಡ ಮಟ್ಟದ ಫೌಂಡೇಶನಲ್ ಎಐ ಮಾಡಲ್ ನಿರ್ಮಿಸಲು ಯಾಕೆ ಆಗಿಲ್ಲ? ಯಾಕೆಂದರೆ, ನಾವು ಇನ್ನೂ ಕೂಡ ದೊಡ್ಡ ಇಂಟರ್ನೆಟ್ ಕಂಪನಿಗಳನ್ನು ಹುಟ್ಟುಹಾಕಿಲ್ಲ. ಕಳೆದ ಎರಡು ದಶಕದಲ್ಲಿ ತಂತ್ರಜ್ಞಾನ ಆಧಾರಿತ ನಾವೀನ್ಯತೆ ಹುಟ್ಟಿದ್ದು ಕನ್ಸೂಮರ್ ಇಂಟರ್ನೆಟ್ ಕಂಪನಿಗಳಿಂದಲೇ. ಕ್ಲೌಡ್ ಕಂಪ್ಯೂಟಿಂಗ್ ವ್ಯಾಪಿಸಿದ್ದು ಯಾರು? ಅಮೇಜಾನ್ ಸಂಸ್ಥೆ. ಇದು ಮೂಲತಃ ಕನ್ಸೂಮರ್ ಇಂಟರ್ನೆಟ್ ಕಂಪನಿ. ಇವತ್ತು ಎಐನಲ್ಲಿ ಪ್ರಬಲವಾಗಿರುವ ಕಂಪನಿಗಳ್ಯಾವುವು? ಫೇಸ್​​ಬುಕ್, ಗೂಗಲ್, ಅಲಿಬಾಬಾ, ಟೆನ್ಸೆಂಟ್ ಇತ್ಯಾದಿ’ ಎಂದು ಆದಿತ್ ಪಲಿಚ ಹೇಳುತ್ತಾರೆ.

ಇದನ್ನೂ ಓದಿ: ಅಮೆರಿಕ ಷೇರುಮಾರುಕಟ್ಟೆ ಭಯಾನಕ ಕುಸಿತ; ಒಂದೇ ದಿನದಲ್ಲಿ 200 ಲಕ್ಷ ಕೋಟಿ ರೂ ನಷ್ಟ

‘ಕನ್ಸೂಮರ್ ಇಂಟರ್ನೆಟ್ ಕಂಪನಿಗಳ ಬಳಿ ಅತ್ಯುತ್ತಮ ಡಾಟಾ, ಪ್ರತಿಭೆ ಮತ್ತು ಬಂಡವಾಳ ಇರುವುದರಿಂದ ನಾವೀನ್ಯತೆ ಸಾಧ್ಯವಾಗುತ್ತದೆ. ಕೋಟ್ಯಂತರ ಆದಾಯ ಸೃಷ್ಟಿಸಬಲ್ಲಂತಹ ಸ್ಥಳೀಯ ಇಂಟರ್ನೆಟ್ ಕಂಪನಿಗಳನ್ನು ನಿರ್ಮಿಸುವ ಅವಶ್ಯಕತೆ ಇದೆ. ಆಗ ಮಾತ್ರ ದೊಡ್ಡ ಟೆಕ್ನಾಲಜಿ ಪರಿವರ್ತನೆಗಳನ್ನು ನಿರೀಕ್ಷಿಸಲು ಸಾಧ್ಯ’ ಎಂದು ಝೆಪ್ಟೋ ಸಹ-ಸಂಸ್ಥಾಪಕರು ಪರಿಹಾರವನ್ನೂ ನೀಡಿದ್ದಾರೆ.

ಪಿಯೂಶ್ ಗೋಯಲ್ ಹೇಳಿದ್ದೇನು?

ಇತ್ತೀಚೆಗೆ ನಡೆದ ಸ್ಟಾರ್ಟಪ್ ಮಹಾಕುಂಭ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಅವರು, ಭಾರತೀಯ ಸ್ಟಾರ್ಟಪ್​​ಗಳ ಧ್ಯೇಯಗಳನ್ನು ಪ್ರಶ್ನೆ ಮಾಡಿದರು. ಚೀನಾದಲ್ಲಿ ಸ್ಟಾರ್ಟಪ್​​ಗಳು ಡೀಪ್ ಟೆಕ್ ಇನ್ನೋವೇಶನ್​​ನಲ್ಲಿ ತೊಡಗುತ್ತಿದ್ದರೆ, ಭಾರತದಲ್ಲಿ ಸ್ಟಾರ್ಟಪ್​​ಗಳು ಕಡಿಮೆ ಸಂಬಳದ ಗಿಗ್ ಜಾಬ್​​ಗಳನ್ನು ಸೃಷ್ಟಿಸಲು ಸೀಮಿತವಾಗಿವೆ ಎಂದು ಲೇವಡಿ ಮಾಡಿದರು.

‘ಹೆಲ್ತಿ ಐಸ್​ಕ್ರೀಮ್ ಎಂದು ಹೇಳಿ ಐಸ್ ಕ್ರೀಮ್​ಗಳನ್ನು ರೀಪ್ಯಾಕೇಜ್ ಮಾಡಿ ಮಾರಾಟ ಮಾಡುವುದನ್ನು ಸ್ಟಾರ್ಪಟ್ ಎಂದು ಭಾವಿಸಲಾಗದು. ಅದು ಆಂಟ್ರಪ್ರನ್ಯೂರ್​ಶಿಪ್ ಅಷ್ಟೇ. ಸ್ಟಾರ್ಟಪ್​​ಗಳು ದೇಶಕ್ಕೆ ತಂತ್ರಜ್ಞಾನದ ಬಲ ನೀಡಲು ಗಮನ ಕೊಡಬೇಕು,’ ಎಂದು ಪೀಯುಶ್ ಗೋಯಲ್ ಸ್ಟಾರ್ಟಪ್ ಮಹಾಕುಂಭ್ ಕಾರ್ಯಕ್ರಮದಲ್ಲಿ ಹೇಳಿದರು.

ಇದನ್ನೂ ಓದಿ: ಎರಡು ಶತ್ರು ದೇಶಗಳನ್ನು ಒಂದು ಮಾಡುತ್ತಾ ಟ್ರಂಪ್ ಟ್ಯಾರಿಫ್?

ಗೋಯಲ್ ಹೇಳಿಕೆ ಖಂಡಿಸಿದ ಮೋಹನ್ ದಾಸ್ ಪೈ

ಇನ್ಫೋಸಿಸ್ ಸಂಸ್ಥೆಯ ಮಾಜಿ ಸಿಎಫ್​​ಒ ಮೋಹನ್ ದಾಸ್ ಪೈ ಅವರು ಪಿಯೂಶ್ ಗೋಯಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ನಮ್ಮ ಸ್ಟಾರ್ಟಪ್​​ಗಳನ್ನು ತುಚ್ಛವಾಗಿ ಕಾಣುವುದನ್ನು ನಿಲ್ಲಿಸಿ. ನೀವು ಭಾರತದಲ್ಲಿ ಡೀಪ್ ಟೆಕ್ ಸ್ಟಾರ್ಟಪ್​ ಬೆಳವಣಿಗೆ ಸಾಧ್ಯವಾಗಲು ಏನು ಮಾಡಿದ್ದೀರಿ ಮೊದಲು ಹೇಳಿ’ ಎಂದು ಒತ್ತಾಯಿಸಿದ್ದಾರೆ. ಹಾಗೆಯೇ, ಭಾರತದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್​​ಬಿಐನಿಂದ ಸ್ಟಾರ್ಟಪ್​​ಗಳಿಗೆ ಉತ್ತೇಜನ ಸಿಗುತ್ತಿಲ್ಲ ಎಂದೂ ಮೋಹನ್ ದಾಸ್ ಪೈ ದೂರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Fri, 4 April 25

ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್
ಬಹುದಿನಗಳ ಬಳಿಕ ಒಟ್ಟಿಗೆ ಕಾಣಿಸಿಕೊಂಡ ಜಾರಕಿಹೋಳಿ ಅಣ್ತಮ್ಮಸ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
5 ವಿಕೆಟ್ ಕಬಳಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಸ್ಫೋಟಕ ಬ್ಯಾಟರ್
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ, ಮೂವರು ಸಾವು, ಹಲವರಿಗೆ ಗಾಯ
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಮುಂದಿನ 3 ತಿಂಗಳಲ್ಲಿ ಡಿಕೆ ಶಿವಕುಮಾರ್​ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
ಏರು ಧ್ವನಿಯಲ್ಲಿ ಮಾತನಾಡಿದ್ರೆಂದು ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Video: ಉತ್ತರಕಾಶಿಯಲ್ಲಿ ಮೇಘಸ್ಫೋಟ, 9 ಮಂದಿ ನಾಪತ್ತೆ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
Weekly Horoscope: ಜೂನ್​ 30 ರಿಂದ ಜುಲೈ 6 ರವರೆಗಿನ ವಾರ ಭವಿಷ್ಯ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳನ್ನ ಯಾಕೆ ಮಾಡಬಾರದು ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಆಶ್ಲೇಷ ನಕ್ಷತ್ರದಲ್ಲಿ ಚಂದ್ರ ಸಂಚಾರ, ಈ ದಿನ ಯಾರಿಗೆಲ್ಲಾ ಶುಭ ತಿಳಿಯಿರಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ
ಉತ್ತರಾಖಂಡದಲ್ಲಿ ಪ್ರವಾಹ; ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಸರಯೂ ನದಿ