AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ

DRDO develops new hypersonic cruise missile: ಭಾರತದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ಡಿಆರ್​ಡಿಒ ಇತ್ತೀಚೆಗೆ ಹೊಸ ಹೈಪರ್​ಸಾನಿಕ್ ಕ್ಷಿಪಣಿಯೊಂದರ ಕಿರು ಪರೀಕ್ಷೆ ನಡೆಸಿದೆ. ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಅಭಿವೃದ್ಧಿಗೊಂಡಿರುವ ಈ ಕ್ಷಿಪಣಿ ಮ್ಯಾಕ್-8 ವೇಗದಲ್ಲಿ (ಗಂಟೆಗೆ 9,800 ಕಿಮೀ) ಹೋಗಬಲ್ಲುದು. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈ ಹೈಪರ್​ಸಾನಿಕ್ ವೇಗದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದು.

ಭಾರತದ ಪ್ರಾಜೆಕ್ಟ್ ವಿಷ್ಣು; ಸೆಕೆಂಡ್​ಗೆ 2-3 ಕಿಮೀ ವೇಗವಾಗಿ ಹೋಗಬಲ್ಲ ಹೊಸ ಕ್ಷಿಪಣಿ ಸದ್ಯದಲ್ಲೇ
ಸಾಂದರ್ಭಿಕ ಚಿತ್ರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 18, 2025 | 2:34 PM

Share

ನವದೆಹಲಿ, ಜುಲೈ 18: ಭಾರತದ ರಕ್ಷಣಾ ಕ್ಷೇತ್ರದಲ್ಲಿ (Indian defense) ಚಟುವಟಿಕೆ ತೀವ್ರ ಹಂತಕ್ಕೆ ಹೋಗಿದೆ. ಅದರಲ್ಲೂ ಆಪರೇಷನ್ ಸಿಂದೂರದ ಬಳಿಕ ಸರ್ಕಾರವು ತನ್ನ ಡಿಫೆನ್ಸ್ ಪ್ರಾಜೆಕ್ಟ್​​ಗಳೆಲ್ಲವನ್ನೂ ಅವಧಿಗೆ ಮುನ್ನ ಮುಗಿಸುವತ್ತ ಗಮನ ಕೊಟ್ಟಿದೆ. ಅಮೆರಿಕದ, ರಷ್ಯಾ, ಚೀನಾದ ರಕ್ಷಣಾ ಸಾಮರ್ಥ್ಯಕ್ಕೆ ಸಮೀಪ ಹೋಗಲು ಯತ್ನಿಸುತ್ತಿದೆ. ಇದೇ ವೇಳೆ, ಈ ವಾರ ಎರಡು ಪ್ರಮುಖ ಕ್ಷಿಪಣಿ ಪರೀಕ್ಷೆಗಳಾಗಿವೆ. ಮೊನ್ನೆ ಡಿಆರ್​ಡಿಒ ಸಂಸ್ಥೆ ಆಕಾಶ್ ಪ್ರೈಮ್ ಕ್ಷಿಪಣಿಗಳ ಯಶಸ್ವಿ ಪರೀಕ್ಷೆ ನಡೆಸಿದೆ. ಮೂರ್ನಾಲ್ಕು ದಿನಗಳ ಹಿಂದೆ ಹೈಪರ್​ಸಾನಿಕ್ ಕ್ರ್ಯೂಸ್ ಮಿಸೈಲ್​ವೊಂದರ (Hypersonic cruise missile) ಸಣ್ಣ ಪರೀಕ್ಷೆಯನ್ನೂ ಯಶಸ್ವಿಯಾಗಿ ಮಾಡಿದೆ.

ಬ್ರಹ್ಮೋಸ್​ಗಿಂತ ಮೂರು ಪಟ್ಟು ವೇಗ…

ಪ್ರಾಜೆಕ್ಟ್ ವಿಷ್ಣು ಅಡಿಯಲ್ಲಿ ಡಿಆರ್​ಡಿಒ ಹೈಪರ್​ಸಾನಿಕ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಇದು ಈಗಿರುವ ಬ್ರಹ್ಮೋಸ್ ಕ್ಷಿಪಣಿಗಿಂತ ಮೂರು ಪಟ್ಟು ಹೆಚ್ಚು ವೇಗದಲ್ಲಿ ಹೋಗಬಲ್ಲುದು. ಭಾರತದ ಮೊದಲ ಹೈಪರ್​ಸಾನಿಕ್ ಮಿಸೈಲ್ ಇದು. ಅಮೆರಿಕ, ಚೀನಾ ಮತ್ತು ರಷ್ಯಾ ದೇಶಗಳು ಮಾತ್ರ ಹೈಪರ್​ಸಾನಿಕ್ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿರುವುದು.

ಇದನ್ನೂ ಓದಿ: 12,000 ಕಿಮೀ ದೂರದ ಅಮೆರಿಕವನ್ನೂ ತಲುಪಬಲ್ಲುದು ಭಾರತದ ಹೊಸ ಬಾಂಬರ್; ಚೀನಾ ಬಳಿಯೂ ಇದಿಲ್ಲ

ಬ್ರಹ್ಮೋಸ್-2 ಎಂದೇ ಕೆಲವರು ಕರೆಯುತ್ತಿರುವ ಭಾರತದ ಈ ಹೊಸ ಕ್ಷಿಪಣಿ ಮುಂದಿನ ವರ್ಷ ಸೇನೆಗೆ ನಿಯೋಜನೆಯಾಗಬಹುದು. ಕ್ಷಿಪಣಿ ವೇಗವನ್ನು ಮ್ಯಾಚ್ ಮಾಪನದಲ್ಲಿ ಅಳೆಯಲಾಗುತ್ತದೆ. ಮ್ಯಾಚ್-5ಕ್ಕಿಂತ ಹೆಚ್ಚಿದ್ದರೆ ಅದು ಹೈಪರ್​ಸಾನಿಕ್. ಮ್ಯಾಚ್ ಎಂದರೆ ಇಲ್ಲಿ ಶಬ್ದದ ವೇಗ. ಒಂದು ಮ್ಯಾಚ್ ಎಂದರೆ ಗಂಟೆಗೆ ಸುಮಾರು 1,235 ಕಿಮೀ ಆಗುತ್ತದೆ. ಭಾರತದ ಹೊಸ ಕ್ಷಿಪಣಿಯು ಮ್ಯಾಚ್-8 ವೇಗದ್ದಾಗಿದೆ ಎನ್ನಲಾಗಿದೆ.

ಈ ಕ್ಷಿಪಣಿಗೆ ಸ್ಕ್ರಾಮ್​ಜೆಟ್ ಎಂಜಿನ್​ನ ಶಕ್ತಿ ಇದೆ. ವಾತಾವರಣದ ಗಾಳಿಯನ್ನೇ ಇದು ಶಕ್ತಿಯಾಗಿ ಮಾಡಿಕೊಳ್ಳಲಿದೆ. ಇದು 1,500-2,500 ಕಿಮೀ ದೂರ ಕ್ರಮಿಸಬಲ್ಲುದು. ಒಂದೇ ಒಂದು ಸೆಕೆಂಡ್​ನಲ್ಲಿ ಇದು 2.75 ಕಿಮೀ ದೂರ ಹೋಗಬಲ್ಲುದು. ಪಾಕಿಸ್ತಾನದ ಪರಮಾಣು ನೆಲೆ ಇರುವ ನೂರ್ ಖಾನ್ ಬೇಸ್ ಅನ್ನು ಇದು ಕೇವಲ ಮೂರೇ ನಿಮಿಷದಲ್ಲಿ ತಲುಪಿ ಉಡಾಯಿಸಬಲ್ಲುದು.

ಇದನ್ನೂ ಓದಿ: ಒಡಿಶಾದ ಚಂಡಿಪುರದಲ್ಲಿ ಪೃಥ್ವಿ-II ಮತ್ತು ಅಗ್ನಿ-I ಬ್ಯಾಲಿಸ್ಟಿಕ್ ಕ್ಷಿಪಣಿಗಳ ಯಶಸ್ವಿ ಉಡಾವಣೆ

ಅಮೆರಿಕ, ಚೀನಾ, ರಷ್ಯಾ ಸಾಲಿಗೆ ಭಾರತ

ರಷ್ಯಾದ ಏವನ್​ಗಾರ್ಡ್ ವಿಶ್ವದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಎನ್ನಲಾಗುತ್ತಿದೆ. ಇದಿನ್ನೂ ಅಭಿವೃದ್ಧಿ ಹಂತದಲ್ಲಿದೆ. ಇದರ ವೇಗ ಮ್ಯಾಚ್ 20 ಎನ್ನಲಾಗುತ್ತಿದೆ. ಅಂದರೆ, ಒಂದು ಸೆಕೆಂಡ್​​ಗೆ ಇದು 6.8 ಕಿಮೀ ವೇಗದಲ್ಲಿ ಹೋಗಬಲ್ಲುದು. ಬರೋಬ್ಬರಿ 6,000 ಕಿಮೀ ದೂರ ಸಾಗುವ ಇದು ಕೆಲವೇ ನಿಮಿಷದಲ್ಲಿ ಅಮೆರಿಕವನ್ನು ತಲುಪಿ ಗುರಿಯನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.

ಚೀನಾದ ಡಾಂಗ್ ಫೆಂಗ್, ಅಮೆರಿಕದ ಟ್ರೈಡೆಂಟ್-2, ಮೈನೂಟ್​ಮ್ಯಾನ್-3, ರಷ್ಯಾದ ಸರ್ಮಟ್, ಕಿಂಝಲ್ ಮೊದಲಾದ ಕ್ಷಿಪಣಿಗಳು ಅತ್ಯಂತ ವೇಗದ ಮಿಸೈಲ್​ಗಳೆಂದು ಹೆಸರಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು