AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ

Dream11 Co-founder Harsh Jain: ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆದ ಡ್ರೀಮ್11 ಇವತ್ತು 64,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಆದರೆ, ಈ ವ್ಯವಹಾರದ ಆರಂಭಿಕ ತೊಡರುಗಳು ಅಷ್ಟಿಷ್ಟಲ್ಲ. ಹರ್ಷ್ ಜೈನ್ ಮತ್ತು ಭವಿತ್ ಶುರು ಮಾಡಿದ ಈ ಯಶಸ್ವಿ ಉದ್ಯಮದ ಹಿಂದಿನ ಕೆಲ ಶ್ರಮಗಳು ಮತ್ತು ಹತಾಶೆಗಳನ್ನು ಸ್ಮರಿಸಬಹುದು. ಆ ಕಷ್ಟಗಳ ಬಗ್ಗೆ ಹರ್ಷ್ ಜೈನ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ.

Inspiring Story: ಅಂದು ತಮ್ಮ ಬಿಸಿನೆಸ್​ಗೆ ಬಂಡವಾಳ ತರಲು 150 ಬಾರಿ ವಿಫಲ; ಇಂದು ಹರ್ಷ್ ಕನಸಿನ ಬಿಸಿನೆಸ್ ಮೌಲ್ಯ 64,000 ಕೋಟಿ ರೂ
ಹರ್ಷ್ ಜೈನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 26, 2023 | 1:39 PM

ನೀವು ಪಠ್ಯಪುಸ್ತಕಗಳಲ್ಲಿ ಈ ದಂತಕಥೆ ಓದಿರಬಹುದು. ಶತಮಾನಗಳ ಹಿಂದೆ ಸ್ಕಾಟ್ಲೆಂಡ್ ದೊರೆ ರಾಬರ್ಟ್ ದಿ ಬ್ರೂಸ್ (Robert The Bruce) ಅವರು ಇಂಗ್ಲೆಂಡ್ ರಾಜನೊಂದಿಗೆ ಆರು ಬಾರಿ ಯುದ್ದ ಮಾಡಿ ಸೋತುಹೋಗಿದ್ದ. ಕೊನೆಗೆ ಗುಹೆಯಲ್ಲಿ ಅಡಗಿಕೊಳ್ಳಬೇಕಾಯಿತು. ಅಲ್ಲಿ ಜೇಡವೊಂದು ಬಲೆ (story of spider weaving web) ಕಟ್ಟುತ್ತಿರುವುದನ್ನು ನೋಡಿದ. ಬಲೆ ಕಟ್ಟುವ ಕಾರ್ಯದಲ್ಲಿ ಆರು ಬಾರಿ ವಿಫಲವಾಗಿತ್ತು. ಆದರೂ ಅದು ಪ್ರಯತ್ನ ನಿಲ್ಲಿಸಲಿಲ್ಲ. ಏಳನೇ ಬಾರಿ ಅದು ಯಶಸ್ವಿಯಾಯಿತು. ಇದನ್ನು ಕಂಡ ರಾಬರ್ಟ್ ಬ್ರೂಸ್ ಜಾಗೃತಗೊಂಡು ಹೊಸ ಹುಮ್ಮಸ್ಸಿನಲ್ಲಿ ಯುದ್ಧಕ್ಕೆ ಹೋಗಿ ಗೆದ್ದನಂತೆ. ಇಂಗ್ಲೀಷ್​ನಲ್ಲಿ ನೆವರ್ ಗಿವ್ ಅಪ್ ಎನ್ನುವುದಕ್ಕೆ ಇಂಥ ಘಟನೆಗಳು ನಿದರ್ಶನ. ಇವತ್ತಿನ ಉದ್ಯಮಸಾಹಸಗಳಿಗೆ ಇದು ಖಂಡಿತವಾಗಿ ಅನ್ವಯ ಆಗುತ್ತದೆ. ಡ್ರೀಮ್ ಇಲವೆನ್ ಸಂಸ್ಥೆಯ ಸಂಸ್ಥಾಪಕ ಹರ್ಷ್ ಜೈನ್ (Inspiring story of Dream11 co-founder Harsh Jain) ಅವರ ಕಥೆಯೂ ಉಲ್ಲೇಖನೀಯ.

ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಪ್ಲಾಟ್​ಫಾರ್ಮ್ ಆದ ಡ್ರೀಮ್11 ಇವತ್ತು 64,000 ಕೋಟಿ ರೂ ಮೌಲ್ಯದ ಕಂಪನಿಯಾಗಿ ಬೆಳೆದಿದೆ. ಆದರೆ, ಈ ವ್ಯವಹಾರದ ಆರಂಭಿಕ ತೊಡರುಗಳು ಅಷ್ಟಿಷ್ಟಲ್ಲ. ಹರ್ಷ್ ಜೈನ್ ಮತ್ತು ಭವಿತ್ ಶುರು ಮಾಡಿದ ಈ ಯಶಸ್ವಿ ಉದ್ಯಮದ ಹಿಂದಿನ ಕೆಲ ಶ್ರಮಗಳು ಮತ್ತು ಹತಾಶೆಗಳನ್ನು ಸ್ಮರಿಸಬಹುದು. ಆ ಕಷ್ಟಗಳ ಬಗ್ಗೆ ಹರ್ಷ್ ಜೈನ್ ಕೆಲ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಿದೆ.

ಇದನ್ನೂ ಓದಿ: ದುಡ್ಡು ಮಾಡಲು ಹೋಗಿ 50 ಬಾರಿ ಕೈಸುಟ್ಟುಕೊಂಡವನ ಕೈಹಿಡಿಯಿತು ನಾಟಿಕೋಳಿಮೊಟ್ಟೆ; ಇದು ವೈಟಲ್ ಫಾರ್ಮ್ಸ್ ಕಥೆ..!

ನೀವು ಪ್ರಾರಂಭಿಸಿದ ಹೊಸ ಬಿಸಿನೆಸ್​ಗೆ ಬಂಡವಾಳ ಪಡೆಯಲು ಯಾರಾದರೂ ಬಳಿ ಹೋಗುತ್ತೀರಿ. ಯಾರೂ ಕೊಡಲು ಮುಂದೆ ಬರದಿದ್ದರೆ? ಹತಾಶರಾಗುವುದು ಹೌದು. ಹತ್ತು, ಇಪ್ಪತ್ತು ಮಂದಿಯನ್ನು ಹಣ ಕೇಳಿ ಇಲ್ಲ ಎನಿಸಿಕೊಂಡಾಗ ಈ ಬಿಸಿನೆಸ್ ಸಹವಾಸ ಸಾಕಪ್ಪ ಎಂದುಬಿಡುತ್ತೇವೆ. ಆದರೆ, ಹರ್ಷ್ ಜೈನ್ ಬಹಳ ಸಂಯಮ ತೋರಿದರು. ಅವರ ಡ್ರೀಮ್11 ಬಿಸಿನೆಸ್ ಮಾಡೆಲ್ ಕೇಳಿ ಬಂಡವಾಳ ಕೊಡಲು 150 ಸಂಸ್ಥೆಗಳು ನಿರಾಕರಿಸಿದವು.

ಹರ್ಷ್ ಜೈನ್ ಮೈಕ್ರೋಸಾಫ್ಟ್​ನಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಸ್ನೇಹಿತ ಭವಿತ್ ಶೇಠ್ ಜೊತೆ ಸೇರಿ ಡ್ರೀಮ್11 ಕನಸು ಶುರು ಮಾಡಿದ್ದರು. 2008ರಲ್ಲಿ ಐಪಿಎಲ್ ಸೀಸನ್ ವೇಳೆ ಡ್ರೀಮ್11 ಆರಂಭವಾಯಿತು. ಆ ಕಂಪನಿಗೆ ಹಣ ಕ್ರೋಢೀಕರಿಸಲು ಎರಡು ವರ್ಷ ಸತತವಾಗಿ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಇವರ ಫ್ಯಾಂಟಸಿ ಸ್ಪೋರ್ಟ್ಸ್ ಬಿಸಿನೆಸ್​ಗೆ ಹಣ ಕೊಡಲು ಯಾರೂ ಮುಂದೆ ಬರಲಿಲ್ಲ.

ಇದನ್ನೂ ಓದಿ: ಇನ್ಫೋಸಿಸ್​ನಲ್ಲಿ ಆಫೀಸ್ ಬಾಯ್ ಆಗಿದ್ದವ ಇವತ್ತು ಎರಡು ಕಂಪನಿಗಳಿಗೆ ಸಿಇಒ; ಮೋದಿಯಿಂದಲೂ ಪ್ರಶಂಸೆಗೊಳಗಾದ ಭಗತ್​ನ ಯಶೋಗಾಥೆ

ಆದರೂ ಕೂಡ ಹರ್ಷ್ ಜೈನ್ ಮತ್ತು ಭವಿತ್ ಶೇಠ್ ತಮ್ಮ ಪ್ರಯತ್ನ ನಿಲ್ಲಿಸಲಿಲ್ಲ. ಅವರ ಡ್ರೀಮ್ ಇಲವೆನ್ ವೆಬ್​ಸೈಟ್ ನಿಧಾನವಾಗಿ ಜನಪ್ರಿಯವಾಗತೊಡಗಿತು. ಆರು ವರ್ಷದ ಬಳಿಕ, ಅಂದರೆ 2014ರಲ್ಲಿ ವೆಬ್​ಸೈಟ್ ಯೂಸರ್​ಗಳ ಸಂಖ್ಯೆ 10 ಲಕ್ಷಕ್ಕೆ ಏರಿತು. ಈಗ ಇದನ್ನು ಗಂಭೀರ ಬಿಸಿನೆಸ್ ಎಂದು ಪರಿಗಣಿತವಾಯಿತು. 2019ರಲ್ಲಿ ಯೂಸರ್ಸ್ ಸಂಖ್ಯೆ 20 ಕೋಟಿ ಮುಟ್ಟಿತು. ಇವತ್ತು ಯೂನಿಕಾರ್ನ್ ಕಂಪನಿಯಾಗಿ ಬೆಳೆದಿದೆ. ಟೀಮ್ ಇಂಡಿಯಾ ಜರ್ಸಿಯ ಸ್ಪಾನ್ಸರ್ ಹಕ್ಕು ಪಡೆಯುವ ಮಟ್ಟಕ್ಕೆ ಬೆಳೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
ಕೆಲವರು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ: ಮತ್ತೆ ಗುಡುಗಿದ ಡಿಕೆಶಿ
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
VIDEO: ರನೌಟ್​ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
ಮತ್ತೋರ್ವ ಶಂಕಿತ ಉಗ್ರ ಫಾರೂಕ್ ಅಹ್ಮದ್ ತಡ್ವಾನ ಮನೆ ಧ್ವಂಸ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ