AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Atal Pension Yojana: ದಿನಕ್ಕೆ 7 ರೂಪಾಯಿ ಉಳಿಸಿ; ವಾರ್ಷಿಕ 60 ಸಾವಿರ ರೂ. ಪೆನ್ಷನ್, ತೆರಿಗೆ ಅನುಕೂಲ ಪಡೆಯಿರಿ

ಸರ್ಕಾರದ ಈ ಯೋಜನೆಯಲ್ಲಿ ದಿನಕ್ಕೆ 7 ರೂಪಾಯಿಯಂತೆ ಹೂಡಿಕೆ ಮಾಡಿದರೂ ವರ್ಷಕ್ಕೆ ರೂ. 60 ಸಾವಿರ ಪೆನ್ಷನ್ ಪಡೆಯಬಹುದು. ಯಾವುದು ಸ್ಕೀಮ್ ಮತ್ತು ಇತರ ವಿವರಗಳು ಇಲ್ಲಿವೆ.

Atal Pension Yojana: ದಿನಕ್ಕೆ 7 ರೂಪಾಯಿ ಉಳಿಸಿ; ವಾರ್ಷಿಕ 60 ಸಾವಿರ ರೂ. ಪೆನ್ಷನ್, ತೆರಿಗೆ ಅನುಕೂಲ ಪಡೆಯಿರಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Dec 22, 2021 | 12:39 PM

Share

ಅಟಲ್ ಪಿಂಚಣಿ ಯೋಜನೆ (Atal Pension Yojana) ಎಂಬುದು ಭಾರತ ಸರ್ಕಾರದ ಬೆಂಬಲ ಇರುವಂಥ ಖಾತ್ರಿ ಪೆನ್ಷನ್ ಸ್ಕೀಮ್. ಖಾಸಗಿ ಉದ್ಯೋಗಿಗಳಿಗೆ ಇರುವ ಈ ಯೋಜನೆಯಲ್ಲಿ ತಿಂಗಳಿಗೆ ಕನಿಷ್ಠ ಮೊತ್ತವಾದ 7 ರೂಪಾಯಿಯಂತೆ ಹೂಡಿಕೆ ಮಾಡಿದರೂ ನಿವೃತ್ತಿ ಜೀವನಕ್ಕೆ ಅನುಕೂಲ ಆಗುತ್ತದೆ. ಮೊದಲೇ ಹೇಳಿದಂತೆ ಈ ಯೋಜನೆಯನ್ನು ನಡೆಸುವುದು ಸರ್ಕಾರವೇ ಆದರೂ ಆಡಳಿತ ನಿರ್ವಹಣೆ ನೋಡಿಕೊಳ್ಳುವುದು ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್​ ಅಥಾರಿಟಿ (PFRDA). ಈ ಪಿಂಚಣಿ ಯೋಜನೆಯನ್ನು ಸರ್ಕಾರವು ಆರಂಭ ಮಾಡಿದ್ದು 2015ರಲ್ಲಿ; ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ವಯಸ್ಸಾದ ನಂತರ ಆದಾಯ ಭದ್ರತೆ ಒದಗಿಸಬೇಕು ಎಂಬ ಕಾರಣಕ್ಕಾಗಿ ಆರಂಭಿಸಲಾಯಿತು.

APY ನಿಯಮಾವಳಿಯ ಪ್ರಕಾರ, 18ರಿಂದ 40 ವರ್ಷ ವಯೋಮಾನದ ಭಾರತೀಯ ನಾಗರಿಕರು ಈ ಖಾತೆಯನ್ನು ತೆರೆಯಬಹುದು. ಅಲ್ಲಿಂದ 60 ವರ್ಷದ ತನಕ ಉಳಿತಾಯ ಮಾಡಿದಲ್ಲಿ ಆ ನಂತರ ಮಾಸಿಕ ಪಿಂಚಣಿಗೆ ಅರ್ಹರಾಗುತ್ತಾರೆ. ಅಂದರೆ ಈ ಯೋಜನೆಯ ಅನುಕೂಲ ಪಡೆಯುವುದಕ್ಕೆ ಕನಿಷ್ಠ 20 ವರ್ಷಗಳ ಕಾಲ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಹೂಡಿಕೆದಾರರು ಬದುಕಿರುವ ತನಕ ತಿಂಗಳ ಪೆನ್ಷನ್ ಪಡೆಯುತ್ತಾರೆ. ಆ ನಂತರ ಸಂಗಾತಿಯು ಬದುಕಿರುವ ತನಕ ಪೆನ್ಷನ್ ಪಡೆಯುತ್ತಾರೆ. ಹೂಡಿಕೆದಾರರು ಮತ್ತು ಸಂಗಾತಿ ಇಬ್ಬರೂ ಮೃತರಾದಲ್ಲಿ ನಿಧಿಯ ಸಂಪೂರ್ಣ ಮೊತ್ತವನ್ನು ನಾಮಿನಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

APY ಅಡಿಯಲ್ಲಿ ಚಂದಾದಾರರಿಗೆ ನಿಶ್ಚಿತ ಮಾಸಿಕ ಪಿಂಚಣಿಯಾಗಿ 1000, 2000, 3000, 4000 ಮತ್ತು 5000 ರೂಪಾಯಿ ಪಡೆಯುವಂಥ ಆಯ್ಕೆಗಳಿರುತ್ತವೆ. ತಿಂಗಳಿಗೆ ಎಷ್ಟು ಪಿಂಚಣಿ ಬರಬೇಕು ಎಂದುಕೊಂಡಿರುತ್ತಾರೋ ಅದರ ಆಧಾರದಲ್ಲಿ ವ್ಯಕ್ತಿಯೊಬ್ಬರು ತಿಂಗಳಿಗೆ ಎಷ್ಟು ಮೊತ್ತ ಕಟ್ಟಬೇಕು ಎಂದು ನಿರ್ಧಾರ ಆಗುತ್ತದೆ. APY ಖಾತೆ ತೆರೆಯುವುದಕ್ಕೆ ಹತ್ತಿರದ ಬ್ಯಾಂಕ್​ ಶಾಖೆಗೆ ಗುರುತಿನ ಪುರಾವೆ, ವಿಳಾಸ ದೃಢೀಕರಣ, ವಯಸ್ಸಿನ ದೃಢೀಕರಣಕ್ಕೆ ಸೂಕ್ತ ದಾಖಲೆಯೊಂದಿಗೆ ತೆರಳಬೇಕು. ಆ ನಂತರ ನೋಂದಣಿಗಾಗಿ ಅರ್ಜಿ ಭರ್ತಿ ಮಾಡಬೇಕು.

ಅಟಲ್​ ಪೆನ್ಷನ್ ಯೋಜನಾದ ಚಾರ್ಟ್​ನಂತೆ, ಒಬ್ಬ ವ್ಯಕ್ತಿಗೆ 18 ವರ್ಷ ವಯಸ್ಸಿದ್ದಲ್ಲಿ ತಿಂಗಳಿಗೆ 42 ರೂಪಾಯಿ ಕಟ್ಟಿದ್ದರೆ 60 ವರ್ಷದ ನಂತರ 1000 ರೂಪಾಯಿ ಮಾಸಿಕ ಪೆನ್ಷನ್ ಬರುತ್ತದೆ. ಅದೇ ರೀತಿ 84 ರೂಪಾಯಿ ಕಟ್ಟಿದಲ್ಲಿ 2000 ರೂಪಾಯಿ, 126 ಆದಲ್ಲಿ 3000 ರೂ., 168ಕ್ಕೆ 4000 ರೂ. ಮತ್ತು ತಿಂಗಳಿಗೆ 210 ರೂಪಾಯಿಯಂತೆ ಕಟ್ಟಿದರೆ 60 ವರ್ಷದ ನಂತರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಬರುತ್ತದೆ. ಇದೇ ರೀತಿ 20, 25, 30, 35 ಹಾಗೂ 40 ವರ್ಷಕ್ಕೆ ಚಾರ್ಟ್​ ಇದೆ. ಅದರ ಪ್ರಕಾರ ತಿಂಗಳಿಗೆ 5000 ರೂಪಾಯಿ ಪೆನ್ಷನ್ ಪಡೆಯುವುದಕ್ಕೆ ಕ್ರಮವಾಗಿ ತಿಂಗಳಿಗೆ 248 ರೂ., 376 ರೂ., 577 ರೂ., 902 ರೂ., ಮತ್ತು 1454 ರೂ. ಪಾವತಿಸಬೇಕಾಗುತ್ತದೆ.

ವಯಸ್ಸಾಗುತ್ತಾ ಎಷ್ಟು ತಡವಾಗಿ APY ಖಾತೆಯನ್ನು ತೆರೆಯಲಾಗುತ್ತದೋ ಅಷ್ಟು ಮೊತ್ತವು ಕಟ್ಟುವುದಕ್ಕೆ ಹೆಚ್ಚುತ್ತಾ ಹೋಗುತ್ತದೆ. APY ಖಾತೆಯನ್ನು 18ನೇ ವಯಸ್ಸಿಗೆ ತೆರೆದರೆ 42 ವರ್ಷಗಳ ಕಾಲ ಕಟ್ಟಬೇಕಾಗುತ್ತದೆ. ಅದೇ 30 ವರ್ಷದ ವ್ಯಕ್ತಿಗೆ 1000 ರೂಪಾಯಿಗೆ ಪೆನ್ಷನ್​ಗೆ ತಿಂಗಳಿಗೆ 116 ರೂ. ಪಾವತಿಸ ಬೇಕಾದರೆ, 5000 ರೂಪಾಯಿ ಪೆನ್ಷನ್​ಗಾಗಿ ತಿಂಗಳಿಗೆ 577 ರೂಪಾಯಿ ಕಟ್ಟಬೇಕಾಗುತ್ತದೆ. ಆದ್ದರಿಂದ 18ನೇ ವಯಸ್ಸಿಗೇ ಒಬ್ಬ ವ್ಯಕ್ತಿ APY ಖಾತೆ ತೆರೆದಲ್ಲಿ ತಿಂಗಳಿಗೆ 210 ರೂಪಾಯಿ ಪಾವತಿ ಮಾಡಿದರೂ ಸಾಕು, 60 ವರ್ಷದ ನಂತರ ಮಾಸಿಕ ಪಿಂಚಣಿ 5000 ರೂಪಾಯಿ ಬರುತ್ತದೆ.

ಇದನ್ನೂ ಓದಿ: Post Office Scheme: ಪೋಸ್ಟ್​ ಆಫೀಸ್​ನ ಈ ಸ್ಕೀಮ್​ನಲ್ಲಿ 50 ಸಾವಿರ ರೂಪಾಯಿ ಇಟ್ಟರೆ 3300 ರೂ. ಪೆನ್ಷನ್

ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು