IRCTC Down: ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಆ್ಯಪ್​ನಲ್ಲಿ ಸಮಸ್ಯೆ; ರೈಲ್ವೆ ಟಿಕೆಟ್ ಬುಕಿಂಗ್​ಗೆ ಪರ್ಯಾಯವೇನು? ಇಲ್ಲಿದೆ ಪಟ್ಟಿ

Alternative For Train Ticket Booking: ಭಾರತೀಯ ರೈಲ್ವೆ ಇಲಾಖೆಯ ಟ್ರೈನ್ ಟಿಕೆಟ್ ಬುಕಿಂಗ್ ಸರ್ವಿಸ್ ನೀಡುವ ಐಆರ್​ಸಿಟಿಸಿಯ ವೆಬ್ ಮತ್ತು ಆ್ಯಪ್​ನಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಟಿಕೆಟ್ ಬುಕಿಂಗ್​ಗೆ ಪರ್ಯಾಯ ಆ್ಯಪ್​ಗಳನ್ನು ಬಳಸಬಹುದು.

IRCTC Down: ಐಆರ್​ಸಿಟಿಸಿ ವೆಬ್​ಸೈಟ್ ಮತ್ತು ಆ್ಯಪ್​ನಲ್ಲಿ ಸಮಸ್ಯೆ; ರೈಲ್ವೆ ಟಿಕೆಟ್ ಬುಕಿಂಗ್​ಗೆ ಪರ್ಯಾಯವೇನು? ಇಲ್ಲಿದೆ ಪಟ್ಟಿ
ಐಆರ್​ಸಿಟಿಸಿ

Updated on: Jul 25, 2023 | 11:45 AM

ಬೆಂಗಳೂರು, ಜುಲೈ 25: ಆನ್​ಲೈನ್​ನಲ್ಲಿ ರೈಲು ಟಿಕೆಟ್ ಬುಕ್ ಮಾಡುವ ಐಆರ್​ಸಿಟಿಸಿ (IRCTC) ಸಂಸ್ಥೆಯ ವೆಬ್​ಸೈಟ್ ಮತ್ತು ಮೊಬೈಲ್ ಆ್ಯಪ್ ಎರಡೂ ಕೂಡ ಡೌನ್ ಆಗಿವೆ. ಟ್ರೈನ್ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಹಳಷ್ಟು ಜನರು ಸಮಸ್ಯೆ ತೋಡಿಕೊಂಡಿದ್ದಾರೆ. ಬೆಳಗ್ಗೆಯಿಂದಲೂ ಐಆರ್​ಸಿಟಿಸಿ ಸಮಸ್ಯೆ ಎದುರಿಸುತ್ತಿರುವುದು ಕಂಡುಬಂದಿದೆ. ಐಆರ್​ಸಿಟಿಸಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಂದಿಸಿದ್ದು, ತಮ್ಮ ತಾಂತ್ರಿಕ ತಂಡದಿಂದ ಸಮಸ್ಯೆ ನಿವಾರಣೆಗೆ ಪ್ರಯತ್ನವಾಗುತ್ತಿದೆ. ಈ ಸಮಸ್ಯೆ ಪರಿಹಾರವಾದ ಬಳಿಕ ನಾವು ನೋಟಿಫೈ ಮಾಡುತ್ತೇವೆ ಎಂದು ಹೇಳಿದೆ.

ಬೆಳಗ್ಗೆ 10ಗಂಟೆಯಿಂದ ಈ ಸಮಸ್ಯೆ ಇದೆ. ಕುತೂಹಲವೆಂದರೆ ಬೆಳಗ್ಗೆ 10 ಗಂಟೆಗೆ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಆರಂಭವಾಗುತ್ತದೆ. ಬಹಳ ತುರ್ತಾಗಿ ಟಿಕೆಟ್ ಅಗತ್ಯ ಇರುವವರಿಗೆಂದು ತತ್ಕಾಲ್ ಯೋಜನೆ ಇರುವುದು. ಈ ಸಮಯದಲ್ಲೇ ಇ-ಟಿಕೆಟ್ ಸರ್ವಿಸ್ ಅಲಭ್ಯ ಇರುವುದು ಹಲವರನ್ನು ನಿರಾಸೆಗೊಳಿಸಿದೆ.


ಇದನ್ನೂ ಓದಿ: Rs.2000 Exchange Deadline: 2,000 ರೂ ನೋಟುಗಳು ಇನ್ನೂ ಇವೆಯೇ? ಸೆಪ್ಟಂಬರ್ 30ರ ಡೆಡ್​ಲೈನ್ ವಿಸ್ತರಣೆ ಆಗೊಲ್ಲ; ಬೇಗ ಮರಳಿಸಿಬಿಡಿ

ರೈಲು ಟಿಕೆಟ್ ಬುಕಿಂಗ್​ಗೆ ಪರ್ಯಾಯ ಮಾರ್ಗಗಳು

ಐಆರ್​ಸಿಟಿಸಿಯಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ಅಮೇಜಾನ್, ಮೇಕ್ ಮೈ ಟ್ರಿಪ್ ಮೊದಲಾದ ಆ್ಯಪ್​ಗಳ ಮೂಲಕ ಟಿಕೆಟ್ ಬುಕ್ ಮಾಡಿ ಎಂದು ಐಆರ್​ಸಿಟಿಸಿ ಟ್ವೀಟ್ ಮಾಡಿದೆ.

ಇಲ್ಲಿ ಸಮಸ್ಯೆಯಾಗಿರುವ ಐಆರ್​ಸಿಟಿಸಿಯಲ್ಲಿ ಬುಕ್ ಮಾಡುವ ಇಟಿಕೆಟ್​ಗೆ ಮಾತ್ರ. ರೈಲ್ವೆ ಕೌಂಟರುಗಳಲ್ಲಿ ಟಿಕೆಟ್ ಬುಕಿಂಗ್ ಮಾಡಲು ಸಾಧ್ಯ.


ಇದನ್ನೂ ಓದಿ: ITR Deadline: ಐಟಿ ರಿಟರ್ನ್ ಫೈಲ್ ಮಾಡುವ ಗಡುವು ವಿಸ್ತರಣೆಯಾಗುತ್ತಾ? ಇಲ್ಲಿಯವರೆಗೆ ಐಟಿಆರ್ ಸಲ್ಲಿಸಿದವರೆಷ್ಟು? ಇಲ್ಲಿದೆ ಡೀಟೇಲ್ಸ್

ಹಾಗೆಯೇ, ಐಆರ್​ಸಿಟಿಸಿಯದ್ದೇ ಪ್ಲಾಟ್​ಫಾರ್ಮ್ ಬಳಸಿ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಬೇರೆ ಹಲವು ಆ್ಯಪ್​ಗಳಲ್ಲೂ ಲಭ್ಯ ಇವೆ. ಗೋ ಐಬಿಬೋ, ಮೇಕ್ ಮೈ ಟ್ರಿಪ್, ಪೇಟಿಎಂ, ಟ್ರೈನ್​ಮ್ಯಾನ್, ಇಕ್ಸಿಗೋ, ರೆಡ್​ರೈಲ್ ಇತ್ಯಾದಿ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us