AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IRCTC-Swiggy Tie-up: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀಆರ್ಡರ್ಡ್ ಫೂಡ್ ಡೆಲಿವರಿ

Delivery of pre-ordered meals: ಐಆರ್​ಸಿಟಿಸಿಯ ಇಕೆಟರಿಂಗ್ ಪೋರ್ಟಲ್​ನಲ್ಲಿ ಗ್ರಾಹಕರು ಮಾಡುವ ಪ್ರೀ ಆರ್ಡರ್ ಆಹಾರವನ್ನು ತಲುಪಿಸಲು ಸ್ವಿಗ್ಗಿ ಜೊತೆ ಐಆರ್​ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಆರಂಭಿಕ ಹಂತವಾಗಿ ಬೆಂಗಳೂರು, ವಿಜಯವಾಡ, ವಿಶಾಖಪಟ್ಟಣ ಮತ್ತು ಭುವನೇಶ್ವರದಲ್ಲಿ ಈ ಸೇವೆ ಆರಂಭವಾಗಲಿದೆ. ಆದರೆ, ಯಾವತ್ತು ಎಂದು ನಿರ್ದಿಷ್ಟಪಡಿಸಲಾಗಿಲ್ಲ. ಈ ಬೆಳವಣಿಗೆ ಬೆನ್ನಲ್ಲೇ ಫೆ. 23ರಂದು ಷೇರು ಮಾರುಕಟ್ಟೆಯಲ್ಲಿ ಐಆರ್​ಸಿಟಿಸಿ ಷೇರು ಮೌಲ್ಯ ಶೇ. 3ರಷ್ಟು ಏರಿದೆ.

IRCTC-Swiggy Tie-up: ಬೆಂಗಳೂರು ಸೇರಿದಂತೆ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಸ್ವಿಗ್ಗಿಯಿಂದ ಪ್ರೀಆರ್ಡರ್ಡ್ ಫೂಡ್ ಡೆಲಿವರಿ
ರೈಲ್ವೆ ನಿಲ್ದಾಣ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2024 | 6:46 PM

Share

ನವದೆಹಲಿ, ಫೆಬ್ರುವರಿ 23: ಐಆರ್​ಸಿಟಿಸಿಯ ಪೋರ್ಟಲ್ ಮೂಲಕ ರೈಲು ಪ್ರಯಾಣಿಕರು ಮುಂಗಡವಾಗಿ ಬುಕ್ ಮಾಡಲಾದ ಆಹಾರವನ್ನು ತಲುಪಿಸಲು ಸ್ವಿಗ್ಗಿ ಜೊತೆ ಐಆರ್​ಸಿಟಿಸಿ (IRCTC Swiggy tie up) ಕೈಜೋಡಿಸಿದೆ. ಸದ್ಯದ ಮಟ್ಟಿಗೆ ಬೆಂಗಳೂರು ಸೇರಿದಂತೆ ಕೆಲವೇ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ಆರಂಭಿಸಲಾಗುತ್ತದೆ. ಯಾವಾ ಈ ಸೇವೆ ಆರಂಭವಾಗುತ್ತದೆ ಎಂಬುದು ಗೊತ್ತಿಲ್ಲ. ಪ್ರೀ ಆರ್ಡರ್ಡ್ ಫೂಡ್ (pre ordered meals) ಡೆಲಿವರಿಗೆ ಸ್ವಿಗ್ಗಿ ಜೊತೆ ಕೈ ಜೋಡಿಸಿರುವ ವಿಚಾರವನ್ನು ಐಆರ್​ಸಿಟಿಸಿ ತನ್ನ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ (exchange filing) ಮಾಹಿತಿ ನೀಡಿದೆ.

‘ಐಆರ್​ಸಿಟಿಸಿ ಇ-ಕೆಟರಿಂಗ್ ಪೋರ್ಟಲ್ ಮೂಲಕ ಮುಂಗಡವಾಗಿ ಬುಕ್ ಮಾಡಲಾದ ಆಹಾರದ ಪೂರೈಕೆ ಮತ್ತು ಡೆಲಿವರಿಗಾಗಿ ಬಂಡಲ್ ಟೆಕ್ನಾಲಜೀಸ್ ಪ್ರೈ ಲಿ (ಸ್ವಿಗ್ಗಿ ಫೂಡ್ಸ್) ಜೊತೆ ಐಆರ್​ಸಿಟಿಸಿ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳಲ್ಲಿ ಈ ಸೇವೆ ಆರಂಭಿಸಲಾಗುತ್ತದೆ…’ ಎಂದು ಎಕ್ಸ್​ಚೇಂಜ್ ಫೈಲಿಂಗ್​ನಲ್ಲಿ ಐಆರ್​ಸಿಟಿಸಿ ಹೇಳಿದೆ.

ಸ್ವಿಗ್ಗಿಯಿಂದ ಆಹಾರ ಪೂರೈಕೆಯಾಗಲಿರುವ ನಾಲ್ಕು ನಿಲ್ದಾಣಗಳು

  • ಬೆಂಗಳೂರು
  • ವಿಜಯವಾಡ
  • ವಿಶಾಖಪಟ್ಟಣ
  • ಭುಬನೇಶ್ವರ

ಆದರೆ, ಯಾವಾಗ ಈ ಸೇವೆ ಆರಂಭವಾಗುತ್ತದೆ ಎಂದು ಐಆರ್​ಸಿಟಿಸಿ ಸ್ಪಷ್ಟಪಡಿಸಿಲ್ಲ, ಅಥವಾ ನಿರ್ದಿಷ್ಟ ಪಡಿಸಿಲ್ಲ.

ಇದನ್ನೂ ಓದಿ: ಸಂಸ್ಥೆ ನಡೆಸಲು ಇವರು ಅನರ್ಹರು: ಬೈಜುಸ್ ಮಾಲೀಕರ ವಿರುದ್ಧ ಷೇರುದಾರರ ದೂರು; ಫೋರೆನ್ಸಿಕ್ ಆಡಿಟಿಂಗ್​ಗೆ ಮನವಿ

ಐಆರ್​ಸಿಟಿಸಿ ಷೇರುಬೆಲೆ ಹೆಚ್ಚಳ

ಐಆರ್​ಸಿಟಿಸಿ ಸ್ವಿಗ್ಗಿ ಜೊತೆ ಒಪ್ಪಂದ ಮಾಡಿಕೊಂಡಿರುವ ಮಾಹಿತಿ ನಿನ್ನೆ ಗುರುವಾರ ಕೇಳಿಬಂದಿತ್ತು. ಇವತ್ತು ಬೆಳಗ್ಗೆ ಷೇರುಮಾರುಕಟ್ಟೆಯಲ್ಲಿ ಐಆರ್​ಸಿಟಿಸಿ ಷೇರುಗಳಿಗೆ ಉತ್ತಮ ಬೇಡಿಕೆ ಹುಟ್ಟಿತ್ತು. ಒಂದೇ ದಿನ ಶೇ. 2.92ರಷ್ಟು ಅಥವಾ 27 ರೂನಷ್ಟು ಏರಿಕೆ ಕಂಡಿದೆ. ಕಳೆದ ಎರಡು ವಾರದಿಂದ ಇಳಿಯುತ್ತಿದ್ದ ಇದರ ಷೇರು ಮತ್ತೆ ಏರಿಕೆಯ ಹಾದಿಗೆ ಬಂದಿದೆ.

2023ರ ಅಕ್ಟೋಬರ್ ತಿಂಗಳಲ್ಲಿ 659 ರೂ ಇದ್ದ ಐಆರ್​ಸಿಟಿಸಿ ಬೆಲೆ ಇದೀಗ 963 ರೂ ಮುಟ್ಟಿದೆ. ನಾಲ್ಕು ತಿಂಗಳಲ್ಲಿ ಶೇ. 45ಕ್ಕಿಂತಲೂ ಹೆಚ್ಚು ಬೆಲೆ ಪಡೆದಿದೆ.

ಲಕ್ಷದ್ವೀಪದಲ್ಲಿ ಸ್ವಿಗ್ಗಿ; ಸೈಕಲ್​ನಲ್ಲಿ ಡೆಲಿವರಿ

ಭಾರತದ ಎರಡನೇ ಅತಿದೊಡ್ಡ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಎನಿಸಿರುವ ಸ್ವಿಗ್ಗಿ ಇತ್ತೀಚೆಗೆ ಲಕ್ಷದ್ವೀಪದಲ್ಲೂ ತನ್ನ ಕಾರ್ಯಾಚರಣೆ ವಿಸ್ತರಿಸಿದೆ. ಅಗಟ್ಟಿ ದ್ವೀಪದಲ್ಲಿ ಸ್ವಿಗ್ಗಿ ಸೇವೆ ಲಭ್ಯ ಇದೆ. ಲಕ್ಷದ್ವೀಪದಲ್ಲಿ ಆನ್​ಲೈನ್ ಫೂಡ್ ಡೆಲಿವರಿ ಸೇವೆ ಆರಂಭಿಸಿದ ದಾಖಲೆ ಸ್ವಿಗ್ಗಿಯದ್ದಾಗಿದೆ. ಅಗಾಟ್ಟಿ ದ್ವೀಪದ ಎಎಫ್​ಸಿ ಫ್ರೈಡ್ ಚಿಕನ್, ಸಿಟಿ ಹೋಟೆಲ್, ಮುಬಾರಕ್ ಹೋಟೆಲ್​ಗಳ ಜೊತೆ ಸ್ವಿಗ್ಗಿ ಟಯಪ್ ಮಾಡಿಕೊಂಡಿದೆ.

ಇದನ್ನೂ ಓದಿ: ಬಾಡಿಗೆ ಮನೆಯಾ, ಸ್ವಂತ ಮನೆಯಾ? ನಿಖಿಲ್ ಕಾಮತ್ ಲಾಜಿಕ್ ಇದು; ಸೋಷಿಯಲ್ ಮೀಡಿಯಾದಲ್ಲಿ ತೀಕ್ಷ್ಣ ಪ್ರತಿಕ್ರಿಯೆ

ಕುತೂಹಲವೆಂದರೆ ಸ್ವಿಗ್ಗಿಯ ಡೆಲಿವರಿ ಬಾಯ್​ಗಳು ಲಕ್ಷದ್ವೀಪದಲ್ಲಿ ವಾಹನ ಬಳಸುವುದಿಲ್ಲ. ಸೈಕಲ್ ಮೂಲಕ ಆಹಾರ ತಲುಪಿಸುತ್ತಾರೆ. ಪರಿಸರ ಮಾಲಿನ್ಯ ಕಡಿಮೆ ಮಾಡಲು ಈ ಕ್ರಮ ಅನುಸರಿಸಲಾಗುತ್ತಿದೆ. ಅಲ್ಲದೇ ಲಕ್ಷದ್ವೀಪದಲ್ಲಿ ಪ್ರದೇಶ ವ್ಯಾಪ್ತಿ ದೊಡ್ಡದಿಲ್ಲದಿರುವುದರಿಂದ ಆಹಾರ ಸರಬರಾಜಿಗೆ ಸೈಕಲ್ ಬಳಕೆ ಸಾವಶ್ಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ