Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ

ಐಟಿಸಿ ಕಂಪೆನಿಯ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 12.7ರಷ್ಟು ಹೆಚ್ಚಳವಾಗಿ 4156 ಕೋಟಿ ರೂಪಾಯಿ ಮುಟ್ಟಿದೆ. 5.25 ರೂಪಾಯಿ ಮಧ್ಯಂತರ ಲಾಭಾಂಶ ದಾಖಲಾಗಿದೆ.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Feb 03, 2022 | 10:23 PM

ಭಾರತದ ಅತಿ ದೊಡ್ಡ ತಯಾರಕ ಮತ್ತು ಎಫ್​ಎಂಸಿಜಿ ಪ್ರಮುಖ ಕಂಪೆನಿ ಐಟಿಸಿ (ITC) ಲಿಮಿಟೆಡ್​ನ ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಲ್ಲಿ ಫೆಬ್ರವರಿ 3ರಂದು ಏಕೀಕೃತ ತೆರಿಗೆ ನಂತರದ ಲಾಭ (PAT) 4,156.20 ಕೋಟಿ ರೂಪಾಯಿ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದ ಅವಧಿಯಲ್ಲಿ 3,687.88 ಕೋಟಿ ರೂಪಾಯಿ ಆಗಿದ್ದು, ಅಲ್ಲಿಂದ ಶೇ 12.7ರಷ್ಟು ಏರಿಕೆ ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್​ಗೆ ಕೊನೆಯಾದ ಕಳೆದ ತ್ರೈಮಾಸಿಕಕ್ಕೆ 3,697.18 ಕೋಟಿ ರೂಪಾಯಿ ಬಂದಿತ್ತು. ಏಕೀಕೃತ ಆದಾಯ (ಅಬಕಾರಿ ಸುಂಕ ಹೊರತುಪಡಿಸಿ) ಶೇ 32.5ರಷ್ಟು ಹೆಚ್ಚಾಗಿ, 15,862.32 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 11,969 ಕೋಟಿ ರೂಪಾಯಿ ಬಂದಿತ್ತು.

2021ರ ಸೆಪ್ಟೆಂಬರ್​ಗೆ ಕೊನೆಯಾದ ತ್ರೈಮಾಸಿಕಕ್ಕೆ 12,533.6 ಕೋಟಿ ರೂಪಾಯಿ ಆಗಿದೆ. ಐಟಿಸಿಯು ಸಿಗರೇಟ್​ ಉದ್ಯಮದಲ್ಲಿ ಬಲವಾದ ಬೇಡಿಕೆ ಕಂಡಿದ್ದು, ಪ್ರಮಾಣವು ಕೊವಿಡ್​ ಮುಂಚಿನ ಹಂತವು ತಲುಪಿದ್ದು, ಎಫ್​ಎಂಸಿಜಿ ಮಾರಾಟ ಉತ್ತೇಜನ ಹಾಗೂ ಸಂಚಾರ ಮತ್ತು ಆಕ್ಯುಪೆನ್ಸಿಯು ಹೆಚ್ಚಾಗುತ್ತಿದ್ದಂತೆ ಹೋಟೆಲ್ ಉದ್ಯಮದಲ್ಲಿ ಬೆಳವಣಿಗೆ ಕಂಡಿದೆ.

ಕಂಪೆನಿಯು 31 ಮಾರ್ಚ್ 2022ರಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ 1 ರೂಪಾಯಿ ಸಾಮಾನ್ಯ ಷೇರಿಗೆ ರೂ. 5.25ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಡಿವಿಡೆಂಡ್ ಪಾವತಿಯ ದಾಖಲೆ ದಿನಾಂಕವನ್ನು ಫೆಬ್ರವರಿ 15, 2022ರಂದು ನಿಗದಿಪಡಿಸಲಾಗಿದೆ ಮತ್ತು ಲಾಭಾಂಶವು ಮಾರ್ಚ್ 4, 2022ರಂದು ಅರ್ಹ ಷೇರುದಾರರಿಗೆ ಪಾವತಿಸಲಾಗುತ್ತದೆ.

ಫೆಬ್ರವರಿ 3ರಂದು ಎನ್​ಎಸ್​ಇಯಲ್ಲಿ ಅದರ ಹಿಂದಿನ ಅಂತ್ಯದ ಕೊನೆಗಿಂತ 2.30 ರೂಪಾಯಿಗಳ ಏರಿಕೆಯೊಂದಿಗೆ ಸ್ಟಾಕ್ ರೂ. 234.45ಕ್ಕೆ ಕೊನೆಗೊಂಡಿತು. ಇದು ಕಳೆದ ಒಂದು ವರ್ಷದಲ್ಲಿ ಶೇ 8ರಷ್ಟು ಆದಾಯವನ್ನು ಗಳಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ ಮತ್ತು ಒಂದು ತಿಂಗಳ ಹಿಂದಿನಿಂದ ನೋಡಿದರೆ ಶೇ 7ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

Published On - 10:18 pm, Thu, 3 February 22

ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಬನಶಂಕರಿ ದೇವಿ ಸನ್ನಿಧಿಯಲ್ಲಿ ಪವಿತ್ರಾ ಗೌಡ, ಇಲ್ಲಿದೆ ವಿಡಿಯೋ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿ ಬೇಸಿಕ್ ಡಾಟಾ ಒದಗಿಸಿದೆ, ಆದರ ಆಧಾರದ ಮೇಲೆ ತೀರ್ಮಾನಗಳು: ಸಚಿವ
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಜಾತಿ ಗಣತಿಯ ಬಗ್ಗೆ ಕಾಂಗ್ರೆಸ್ ಸರ್ಕಾರದ ಗೊಂದಲ ಜನಕ್ಕೆ ಗೊತ್ತಾಗುತ್ತಿದೆ!
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಬಿಜೆಪಿಯ ರಾಜಕೀಯ ಪಿತೂರಿ; ಇಡಿ ಸಮನ್ಸ್ ಬಳಿಕ ರಾಬರ್ಟ್ ವಾದ್ರಾ ಆರೋಪ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಮತ್ತೊಮ್ಮೆ ಸಮೀಕ್ಷೆ ಮಾಡಿಸುವಂತೆ ಸಿಎಂ, ಡಿಸಿಎಂಗೆ ಆಗ್ರಹಿಸುತ್ತೇವೆ: ಶಾಸಕ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ