AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ

ಐಟಿಸಿ ಕಂಪೆನಿಯ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 12.7ರಷ್ಟು ಹೆಚ್ಚಳವಾಗಿ 4156 ಕೋಟಿ ರೂಪಾಯಿ ಮುಟ್ಟಿದೆ. 5.25 ರೂಪಾಯಿ ಮಧ್ಯಂತರ ಲಾಭಾಂಶ ದಾಖಲಾಗಿದೆ.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 03, 2022 | 10:23 PM

Share

ಭಾರತದ ಅತಿ ದೊಡ್ಡ ತಯಾರಕ ಮತ್ತು ಎಫ್​ಎಂಸಿಜಿ ಪ್ರಮುಖ ಕಂಪೆನಿ ಐಟಿಸಿ (ITC) ಲಿಮಿಟೆಡ್​ನ ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಲ್ಲಿ ಫೆಬ್ರವರಿ 3ರಂದು ಏಕೀಕೃತ ತೆರಿಗೆ ನಂತರದ ಲಾಭ (PAT) 4,156.20 ಕೋಟಿ ರೂಪಾಯಿ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದ ಅವಧಿಯಲ್ಲಿ 3,687.88 ಕೋಟಿ ರೂಪಾಯಿ ಆಗಿದ್ದು, ಅಲ್ಲಿಂದ ಶೇ 12.7ರಷ್ಟು ಏರಿಕೆ ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್​ಗೆ ಕೊನೆಯಾದ ಕಳೆದ ತ್ರೈಮಾಸಿಕಕ್ಕೆ 3,697.18 ಕೋಟಿ ರೂಪಾಯಿ ಬಂದಿತ್ತು. ಏಕೀಕೃತ ಆದಾಯ (ಅಬಕಾರಿ ಸುಂಕ ಹೊರತುಪಡಿಸಿ) ಶೇ 32.5ರಷ್ಟು ಹೆಚ್ಚಾಗಿ, 15,862.32 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 11,969 ಕೋಟಿ ರೂಪಾಯಿ ಬಂದಿತ್ತು.

2021ರ ಸೆಪ್ಟೆಂಬರ್​ಗೆ ಕೊನೆಯಾದ ತ್ರೈಮಾಸಿಕಕ್ಕೆ 12,533.6 ಕೋಟಿ ರೂಪಾಯಿ ಆಗಿದೆ. ಐಟಿಸಿಯು ಸಿಗರೇಟ್​ ಉದ್ಯಮದಲ್ಲಿ ಬಲವಾದ ಬೇಡಿಕೆ ಕಂಡಿದ್ದು, ಪ್ರಮಾಣವು ಕೊವಿಡ್​ ಮುಂಚಿನ ಹಂತವು ತಲುಪಿದ್ದು, ಎಫ್​ಎಂಸಿಜಿ ಮಾರಾಟ ಉತ್ತೇಜನ ಹಾಗೂ ಸಂಚಾರ ಮತ್ತು ಆಕ್ಯುಪೆನ್ಸಿಯು ಹೆಚ್ಚಾಗುತ್ತಿದ್ದಂತೆ ಹೋಟೆಲ್ ಉದ್ಯಮದಲ್ಲಿ ಬೆಳವಣಿಗೆ ಕಂಡಿದೆ.

ಕಂಪೆನಿಯು 31 ಮಾರ್ಚ್ 2022ರಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ 1 ರೂಪಾಯಿ ಸಾಮಾನ್ಯ ಷೇರಿಗೆ ರೂ. 5.25ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಡಿವಿಡೆಂಡ್ ಪಾವತಿಯ ದಾಖಲೆ ದಿನಾಂಕವನ್ನು ಫೆಬ್ರವರಿ 15, 2022ರಂದು ನಿಗದಿಪಡಿಸಲಾಗಿದೆ ಮತ್ತು ಲಾಭಾಂಶವು ಮಾರ್ಚ್ 4, 2022ರಂದು ಅರ್ಹ ಷೇರುದಾರರಿಗೆ ಪಾವತಿಸಲಾಗುತ್ತದೆ.

ಫೆಬ್ರವರಿ 3ರಂದು ಎನ್​ಎಸ್​ಇಯಲ್ಲಿ ಅದರ ಹಿಂದಿನ ಅಂತ್ಯದ ಕೊನೆಗಿಂತ 2.30 ರೂಪಾಯಿಗಳ ಏರಿಕೆಯೊಂದಿಗೆ ಸ್ಟಾಕ್ ರೂ. 234.45ಕ್ಕೆ ಕೊನೆಗೊಂಡಿತು. ಇದು ಕಳೆದ ಒಂದು ವರ್ಷದಲ್ಲಿ ಶೇ 8ರಷ್ಟು ಆದಾಯವನ್ನು ಗಳಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ ಮತ್ತು ಒಂದು ತಿಂಗಳ ಹಿಂದಿನಿಂದ ನೋಡಿದರೆ ಶೇ 7ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

Published On - 10:18 pm, Thu, 3 February 22

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ