AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ

ಐಟಿಸಿ ಕಂಪೆನಿಯ 2022ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇ 12.7ರಷ್ಟು ಹೆಚ್ಚಳವಾಗಿ 4156 ಕೋಟಿ ರೂಪಾಯಿ ಮುಟ್ಟಿದೆ. 5.25 ರೂಪಾಯಿ ಮಧ್ಯಂತರ ಲಾಭಾಂಶ ದಾಖಲಾಗಿದೆ.

ITC Q3 Results: ಐಟಿಸಿ ಮೂರನೇ ತ್ರೈಮಾಸಿಕ ಲಾಭ 4,156 ಕೋಟಿ ರೂಪಾಯಿ; ರೂ. 5.25 ಮಧ್ಯಂತರ ಲಾಭಾಂಶ ಘೋಷಣೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Feb 03, 2022 | 10:23 PM

Share

ಭಾರತದ ಅತಿ ದೊಡ್ಡ ತಯಾರಕ ಮತ್ತು ಎಫ್​ಎಂಸಿಜಿ ಪ್ರಮುಖ ಕಂಪೆನಿ ಐಟಿಸಿ (ITC) ಲಿಮಿಟೆಡ್​ನ ಅಕ್ಟೋಬರ್​ನಿಂದ ಡಿಸೆಂಬರ್​ ತ್ರೈಮಾಸಿಕದಲ್ಲಿ ಫೆಬ್ರವರಿ 3ರಂದು ಏಕೀಕೃತ ತೆರಿಗೆ ನಂತರದ ಲಾಭ (PAT) 4,156.20 ಕೋಟಿ ರೂಪಾಯಿ ಮಾಡಿದೆ. ಒಂದು ವರ್ಷದ ಹಿಂದಿನ ಇದೇ ತ್ರೈಮಾಸಿಕದ ಅವಧಿಯಲ್ಲಿ 3,687.88 ಕೋಟಿ ರೂಪಾಯಿ ಆಗಿದ್ದು, ಅಲ್ಲಿಂದ ಶೇ 12.7ರಷ್ಟು ಏರಿಕೆ ದಾಖಲಿಸಿದೆ. ಜುಲೈನಿಂದ ಸೆಪ್ಟೆಂಬರ್​ಗೆ ಕೊನೆಯಾದ ಕಳೆದ ತ್ರೈಮಾಸಿಕಕ್ಕೆ 3,697.18 ಕೋಟಿ ರೂಪಾಯಿ ಬಂದಿತ್ತು. ಏಕೀಕೃತ ಆದಾಯ (ಅಬಕಾರಿ ಸುಂಕ ಹೊರತುಪಡಿಸಿ) ಶೇ 32.5ರಷ್ಟು ಹೆಚ್ಚಾಗಿ, 15,862.32 ಕೋಟಿ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 11,969 ಕೋಟಿ ರೂಪಾಯಿ ಬಂದಿತ್ತು.

2021ರ ಸೆಪ್ಟೆಂಬರ್​ಗೆ ಕೊನೆಯಾದ ತ್ರೈಮಾಸಿಕಕ್ಕೆ 12,533.6 ಕೋಟಿ ರೂಪಾಯಿ ಆಗಿದೆ. ಐಟಿಸಿಯು ಸಿಗರೇಟ್​ ಉದ್ಯಮದಲ್ಲಿ ಬಲವಾದ ಬೇಡಿಕೆ ಕಂಡಿದ್ದು, ಪ್ರಮಾಣವು ಕೊವಿಡ್​ ಮುಂಚಿನ ಹಂತವು ತಲುಪಿದ್ದು, ಎಫ್​ಎಂಸಿಜಿ ಮಾರಾಟ ಉತ್ತೇಜನ ಹಾಗೂ ಸಂಚಾರ ಮತ್ತು ಆಕ್ಯುಪೆನ್ಸಿಯು ಹೆಚ್ಚಾಗುತ್ತಿದ್ದಂತೆ ಹೋಟೆಲ್ ಉದ್ಯಮದಲ್ಲಿ ಬೆಳವಣಿಗೆ ಕಂಡಿದೆ.

ಕಂಪೆನಿಯು 31 ಮಾರ್ಚ್ 2022ರಂದು ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಪ್ರತಿ 1 ರೂಪಾಯಿ ಸಾಮಾನ್ಯ ಷೇರಿಗೆ ರೂ. 5.25ರ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ. ಡಿವಿಡೆಂಡ್ ಪಾವತಿಯ ದಾಖಲೆ ದಿನಾಂಕವನ್ನು ಫೆಬ್ರವರಿ 15, 2022ರಂದು ನಿಗದಿಪಡಿಸಲಾಗಿದೆ ಮತ್ತು ಲಾಭಾಂಶವು ಮಾರ್ಚ್ 4, 2022ರಂದು ಅರ್ಹ ಷೇರುದಾರರಿಗೆ ಪಾವತಿಸಲಾಗುತ್ತದೆ.

ಫೆಬ್ರವರಿ 3ರಂದು ಎನ್​ಎಸ್​ಇಯಲ್ಲಿ ಅದರ ಹಿಂದಿನ ಅಂತ್ಯದ ಕೊನೆಗಿಂತ 2.30 ರೂಪಾಯಿಗಳ ಏರಿಕೆಯೊಂದಿಗೆ ಸ್ಟಾಕ್ ರೂ. 234.45ಕ್ಕೆ ಕೊನೆಗೊಂಡಿತು. ಇದು ಕಳೆದ ಒಂದು ವರ್ಷದಲ್ಲಿ ಶೇ 8ರಷ್ಟು ಆದಾಯವನ್ನು ಗಳಿಸಿದೆ ಮತ್ತು ಈ ಹಣಕಾಸು ವರ್ಷದಲ್ಲಿ ಮತ್ತು ಒಂದು ತಿಂಗಳ ಹಿಂದಿನಿಂದ ನೋಡಿದರೆ ಶೇ 7ರಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: Inox: ಥೇಟರ್​ನೊಳಗೆ ಆಹಾರ, ಪಾನೀಯ ಪೂರೈಕೆಗೆ ಐಟಿಸಿ ಜತೆಗೆ ಐನಾಕ್ಸ್​ ಸಹಯೋಗ

Published On - 10:18 pm, Thu, 3 February 22

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ