AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?

Companies with Highest Market Capitalization: ಮೈಕ್ರೋಸಾಫ್ಟ್ ಸಂಸ್ಥೆಯ ಮಾರ್ಕೆಟ್ ಕ್ಯಾಪಿಟಲೈಸೇಶನ್ ಅಥವಾ ಷೇರುಸಂಪತ್ತು ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಗಡಿ ಮುಟ್ಟಿದೆ. ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಹೊಂದಿದ ಮೊದಲ ಕಂಪನಿ ಮೈಕ್ರೋಸಾಫ್ಟ್ ಆಗಿದೆ. ಅತಿಹೆಚ್ಚು ಮಾರ್ಕೆಟ್ ಕ್ಯಾಪಿಟಲ್ ಹೊಂದಿರುವ ಜಾಗತಿಕ 100 ಕಂಪನಿಗಳಲ್ಲಿ ಮೂರು ಭಾರತೀಯ ಕಂಪನಿಗಳಿವೆ.

Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?
ಮೈಕ್ರೋಸಾಫ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 25, 2024 | 10:58 AM

Share

ನ್ಯೂಯಾರ್ಕ್, ಜನವರಿ 25: ಮೈಕ್ರೋಸಾಫ್ಟ್ ಕಂಪನಿಯ ಷೇರುಮೌಲ್ಯ ಏರಿಕೆಯಾದ ಹಿನ್ನೆಲೆಯಲ್ಲಿ ಅದರ ಷೇರುಮೊತ್ತ ಅಥವಾ ಮಾರ್ಕೆಟ್ ಕ್ಯಾಪಿಟಲ್ (Market capitalization) ಮೊದಲ ಬಾರಿಗೆ ಮೂರು ಟ್ರಿಲಿಯನ್ ಡಾಲರ್ ಮೊತ್ತ ತಲುಪಿದೆ. ಜನವರಿ 24ರಂದು ಮೈಕ್ರೋಸಾಫ್ಟ್ ಷೇರುಬೆಲೆ ಶೇ. 1.31ರಷ್ಟು ಏರಿದ್ದು ಪ್ರತೀ ಷೇರಿಗೆ 404 ಡಾಲರ್ ತಲುಪಿದೆ. ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಷೇರುಸಂಪತ್ತು ಗಡಿ ಮುಟ್ಟಿದ ಮೊದಲ ಕಂಪನಿ ಮೈಕ್ರೋಸಾಫ್ಟ್ ಆಗಿದೆ.

ಆ್ಯಪಲ್ ಸಂಸ್ಥೆ 2022ರ ಜನವರಿ ತಿಂಗಳಲ್ಲಿ ಮೊದಲ ಬಾರಿಗೆ 3 ಟ್ರಿಲಿಯನ್ ಡಾಲರ್ ಮೊತ್ತ ತಲುಪಿತ್ತು. ಈಗಲೂ ಅದೇ ನಂಬರ್ ಒನ್ ಎನಿಸಿದೆ. ಆದರೆ, ಮೈಕ್ರೋಸಾಫ್ಟ್ ಎರಡನೇ ಸ್ಥಾನದಲ್ಲಿದ್ದರೂ ಆ್ಯಪಲ್ ಮತ್ತು ಅದರ ನಡುವಿನ ಅಂತರ ಬಹಳ ಕಿರಿದಾಗಿದೆ. ಆ್ಯಪಲ್ ಮಾರ್ಕೆಟ್ ಕ್ಯಾಪಿಟಲ್ 3.02 ಟ್ರಿಲಿಯನ್ ಡಾಲರ್ ಇದ್ದರೆ ಮೈಕ್ರೋಸಾಫ್​ನದ್ದು 3.00 ಟ್ರಿಲಿಯನ್ ಡಾಲರ್ ಇದೆ.

ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳ ಪೈಪೋಟಿಯಲ್ಲಿ ಆ್ಯಪಲ್ ಮತ್ತು ಮೈಕ್ರೋಸಾಫ್ಟ್ ಸದಾ ಮುಂಚೂಣಿಯಲ್ಲಿವೆ. ಹೆಚ್ಚಿನ ಬಾರಿ ಆ್ಯಪಲ್ ಅಗ್ರಸ್ಥಾನ ಕಾಯ್ದುಕೊಂಡಿದೆ. ಇತ್ತೀಚೆಗಷ್ಟೇ ಮೈಕ್ರೋಸಾಫ್ಟ್ ಒಮ್ಮೆ ಆ್ಯಪಲ್ ಅನ್ನು ಹಿಂದಿಕ್ಕಿತ್ತು.

ಇದನ್ನೂ ಓದಿ: eBay Layoff: ಇಬೇ ಸಂಸ್ಥೆಯಿಂದ ಶೇ. 9ರಷ್ಟು ಉದ್ಯೋಗಿಗಳ ಲೇ ಆಫ್; ಗುತ್ತಿಗೆ ಆಧಾರಿತ ಉದ್ಯೋಗಿಗಳ ಕೆಲಸಕ್ಕೂ ಕತ್ತರಿ?

ಮೈಕ್ರೋಸಾಫ್ಟ್ ಷೇರು ಬೆಲೆ ಹೆಚ್ಚಲು ಏನು ಕಾರಣ?

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಕ್ಕೆ ಮೈಕ್ರೋಸಾಫ್ಟ್ ಬಹಳ ಹೆಚ್ಚು ಒತ್ತು ಕೊಡುತ್ತಿದೆ. ಓಪನ್​ಎಐ ಸಂಸ್ಥೆ ಜೊತೆಗೆ ಮೈಕ್ರೋಸಾಫ್ಟ್ ಪ್ರಮುಖ ಪಾಲುದಾರಿಕೆ ಹೊಂದಿದೆ. ಚ್ಯಾಟ್​ಜಿಪಿಟಿಗೆ ಮಾತ್ರ ಸೀಮಿತವಾಗದೇ ಹಲವು ಜನರೇಟಿವ್ ಎಐ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಅದರ ಬಿಂಗ್ ಸರ್ಚ್ ಎಂಜಿನ್, ಕೋಪೈಲಟ್ ವರ್ಚುವಲ್ ಅಸಿಸ್ಟೆಂಟ್ ಇತ್ಯಾದಿ ಅಪ್ಲಿಕೇಶನ್​ಗಳಲ್ಲಿ ಜನರೇಟಿವ್ ಎಐ ಅನ್ನೂ ಅಳವಡಿಸಲಾಗಿದೆ. ಮೈಕ್ರೋಸಾಫ್ಟ್ ತನ್ನ ಆ್ಯಪ್​ಗಳಲ್ಲಿ ಎಐ ಅನ್ನು ಅಳವಡಿಸುತ್ತಿರುವುದು ಅದರ ಮೇಲಿನ ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿರಬಹುದು.

ಚ್ಯಾಟ್​ಜಿಪಿಟಿ ಶುರುವಾಗಿದ್ದು 2022ರ ನವೆಂಬರ್ ತಿಂಗಳಲ್ಲಿ. ಆಗಿಂದಲೇ ಮೈಕ್ರೋಸಾಫ್ಟ್​ಗೆ ಶುಕ್ರ ದೆಸೆ ಶುರುವಾಗಿದೆ. ಅಲ್ಲಿಂದೀಚೆಗೆ ಅದರ ಷೇರುಬೆಲೆ ಶೇ. 67ರಷ್ಟು ಹೆಚ್ಚಿದೆ. ಅದೇ ವೇಳೆ ಆ್ಯಪಲ್ ಷೇರುಬೆಲೆ ಹೆಚ್ಚಿದ್ದು ಶೇ. 40 ಮಾತ್ರ.

ಅತಿಹೆಚ್ಚು ಷೇರುಸಂಪತ್ತು ಹೊಂದಿರುವ ಕಂಪನಿಗಳ ಪಟ್ಟಿ

  1. ಆ್ಯಪಲ್: 3.02 ಟ್ರಿಲಿಯನ್ ಡಾಲರ್
  2. ಮೈಕ್ರೋಸಾಫ್ಟ್: 3 ಟ್ರಿಲಿಯನ್ ಡಾಲರ್
  3. ಸೌದಿ ಅರಾಮ್ಕೋ: 2.046 ಟ್ರಿಲಿಯನ್ ಡಾಲರ್
  4. ಆಲ್ಫಬೆಟ್ (ಗೂಗಲ್): 1.870 ಟ್ರಿಲಿಯನ್ ಡಾಲರ್
  5. ಅಮೇಜಾನ್: 1.621 ಟ್ರಿಲಿಯನ್ ಡಾಲರ್
  6. ಎನ್​ವಿಡಿಯಾ: 1.515 ಟ್ರಿಲಿಯನ್ ಡಾಲರ್
  7. ಮೆಟಾ ಪ್ಲಾಟ್​ಫಾರ್ಮ್ಸ್ (ಫೇಸ್​ಬುಕ್: 1.004 ಟ್ರಿಲಿಯನ್ ಡಾಲರ್
  8. ಬರ್ಕ್​ಶೈರ್ ಹಾತವೇ: 819.17 ಬಿಲಿಯನ್ ಡಾಲರ್
  9. ಟೆಸ್ಲಾ: 660.67 ಬಿಲಿಯನ್ ಡಾಲರ್
  10. ಟಿಎಸ್​ಎಂಸಿ: 604.32 ಬಿಲಿಯನ್ ಡಾಲರ್

ಇದನ್ನೂ ಓದಿ: Zee vs Sony: ಕೈಕೊಟ್ಟ ಸೋನಿ; ಕಂಪನಿ ಕಾನೂನು ನ್ಯಾಯಮಂಡಳಿ ಮೊರೆಹೋದ ಝೀ

ಟಾಪ್ 100 ಪಟ್ಟಿಯಲ್ಲಿರುವ ಭಾರತೀಯ ಕಂಪನಿಗಳು

  1. ರಿಲಾಯನ್ಸ್ ಇಂಡಸ್ಟ್ರೀಸ್: 217.85 ಬಿಲಿಯನ್ ಡಾಲರ್ (49ನೇ ಸ್ಥಾನ)
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್: 165.27 ಬಿಲಿಯನ್ ಡಾಲರ್ (72ನೇ ಸ್ಥಾನ)
  3. ಎಚ್​ಡಿಎಫ್​ಸಿ ಬ್ಯಾಂಕ್: 138.72 ಬಿಲಿಯನ್ ಡಾಲರ್ (92ನೇ ಸ್ಥಾನ)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ