AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಡ್ಡಿದರ ಕಡಿಮೆ ಮಾಡಬೇಕು: ಸಚಿವ ಪಿಯೂಶ್ ಗೋಯಲ್ ಒತ್ತಾಯಕ್ಕೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಿಯಾಕ್ಷನ್ ಇದು…

RBI rates and inflation: Piyush Goyal vs Shaktikanta Das: ಕಳೆದ ಹತ್ತು ವರ್ಷದಲ್ಲಿ ಸರಾಸರಿ ಹಣದುಬ್ಬರವು ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಹಣದುಬ್ಬರ ಡಿಸೆಂಬರ್​ನಲ್ಲೋ, ಫೆಬ್ರುವರಿಯಲ್ಲೋ ಇಳಿಯುತ್ತದೆ. ಆರ್​ಬಿಐ ಡಿಸೆಂಬರ್​ನಲ್ಲಿ ರಿಪೋ ರೇಟ್ ಇಳಿಸಲೇಬೇಕು ಎಂದಿದ್ದಾರೆ ಸಚಿವರು.

ಬಡ್ಡಿದರ ಕಡಿಮೆ ಮಾಡಬೇಕು: ಸಚಿವ ಪಿಯೂಶ್ ಗೋಯಲ್ ಒತ್ತಾಯಕ್ಕೆ ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಿಯಾಕ್ಷನ್ ಇದು...
ಪೀಯೂಶ್ ಗೋಯಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 14, 2024 | 4:09 PM

Share

ನವದೆಹಲಿ, ನವೆಂಬರ್ 14: ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಮೀರಿ ಮೇಲ್ಮಟ್ಟದಲ್ಲಿ ಇರುವುದರಿಂದ ಎಲ್ಲರ ಗಮನ ಈಗ ರಿಪೋ ದರ ಇಳಿಯುತ್ತಾ ಇಲ್ಲವಾ ಎನ್ನುವುದರ ಮೇಲೆ ಹೋಗಿದೆ. ಎಸ್​ಬಿಐ ರಿಸರ್ಚ್ ಪ್ರಕಾರ ಡಿಸೆಂಬರ್ ಮಾತ್ರವಲ್ಲ ಫೆಬ್ರುವರಿಯಲ್ಲೂ ಆರ್​ಬಿಐ ಬಡ್ಡಿದರ ಇಳಿಸದೇ ಹೋಗಬಹುದು ಎಂದಿದೆ. ಇದೇ ವೇಳೆ, ಇಂದು ಗುರುವಾರ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಈ ಡಿಸೆಂಬರ್​ನಲ್ಲಿ ಆರ್​ಬಿಐ ಬಡ್ಡಿದರ ಇಳಿಕೆ ಮಾಡಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಯೊಂದರ ಗ್ಲೋಬಲ್ ಲೀಡರ್​ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಇಂದು ಗುರುವಾರ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪಿಯೂಶ್ ಗೋಯಲ್ ಅವರು ಅಕ್ಟೋಬರ್​ನಲ್ಲಿ ಹೆಚ್ಚಾಗಿರುವ ಹಣದುಬ್ಬರದ ಬಗ್ಗೆ ಪ್ರತಿಕ್ರಿಯಿಸಿ, ಆ ಏರಿಕೆ ನಿರೀಕ್ಷಿತವೇ ಆಗಿದೆ ಎಂದಿದ್ದಾರೆ.

‘ಆರ್​​ಬಿಐ ಮಾನಿಟರಿ ಪಾಲಿಸಿ ಕಮಿಟಿ ಕಳೆದ ಬಾರಿ ತಮ್ಮ ಶಿಫಾರಸುಗಳನ್ನು ನೀಡಿದ್ದಾಗ, ಈ ತಿಂಗಳು ಹಣದುಬ್ಬರ ಹೆಚ್ಚಬಹುದು ಎಂದು ಊಹಿಸಿತ್ತು. ಇದೇನೂ ಬ್ರಹ್ಮವಿದ್ಯೆ (ರಾಕೆಟ್ ಸೈನ್ಸ್) ಅಲ್ಲ,’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಡಿಮೆ ಆಗಿದೆ ಮಧ್ಯಮ ವರ್ಗದವರ ತೆರಿಗೆ ಪಾವತಿ; ಹೆಚ್ಚು ಆದಾಯದ ಗುಂಪಿನವರಿಂದ ಹೆಚ್ಚು ತೆರಿಗೆ

‘ಅಕ್ಟೋಬರ್ ಹಣದುಬ್ಬರ ದರವೇನೂ ಅಚ್ಚರಿ ಅಲ್ಲ. ಡಿಸೆಂಬರ್​ನಲ್ಲೋ ಅಥವಾ ಜನವರಿಯಲ್ಲೋ ಇದು ಮತ್ತೆ ಇಳಿಯುತ್ತದೆ. ಯಾಕೆ ಈ ವ್ಯತ್ಯಯ ಆಗುತ್ತಿದೆ ಅಂತ ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ನಮಗಿದೆ. ಬೇಸ್ ಎಫೆಕ್ಟ್ ಏನು, ಯಾವ್ಯಾವ ಅಂಶಗಳು ಪರಿಣಾಮ ಬೀರುತ್ತವೆ, ಹಬ್ಬದ ಬೇಡಿಕೆ ಏನು ಇವೆಲ್ಲವೂ ತಿಳಿಯುತ್ತದೆ,’ ಎಂದು ಪೀಯೂಶ್ ಗೋಯಲ್ ತಿಳಿಸಿದ್ದಾರೆ.

ಕಳೆದ ಹತ್ತು ವರ್ಷದಲ್ಲಿ ಭಾರತದ ಸರಾಸರಿ ಹಣದುಬ್ಬರ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ ಎನ್ನುವ ಸಂಗತಿಯನ್ನು ಪಿಯೂಶ್ ಗೋಯಲ್ ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಶೇ. 6.1ರಷ್ಟಿದೆ. ಇದು ಕಳೆದ 14 ತಿಂಗಳಲ್ಲೇ ಗರಿಷ್ಠ ಹಣದುಬ್ಬರ ಮಟ್ಟವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಮೊದಲ ಬಾರಿಗೆ ಹಣದುಬ್ಬರವು ಆರ್​ಬಿಐ ನಿಗದಿ ಮಾಡಿಕೊಂಡಿದ್ದ ಶೇ. 2-6ರ ಶ್ರೇಣಿ ಮಿತಿಗಿಂತ ಹೊರಗೆ ಇದೆ.

ಇದನ್ನೂ ಓದಿ: ಇಸ್ರೋ ವೆಚ್ಚ ಅಪ್ರಯೋಜಕವಾಗಿಲ್ಲ; ಪ್ರತೀ ರುಪಾಯಿಯೂ ಎರಡೂವರೆ ಪಟ್ಟು ಲಾಭ ಕೊಟ್ಟಿದೆ ಎಂತಾರೆ ಎಸ್ ಸೋಮನಾಥ್

ಪಿಯೂಶ್ ಗೋಯಲ್ ಅಭಿಪ್ರಾಯಕ್ಕೆ ಆರ್​ಬಿಐ ಗವರ್ನರ್ ಪ್ರತಿಕ್ರಿಯೆ ಇದು…

ಡಿಸೆಂಬರ್​ನ ಎಂಪಿಸಿ ಸಭೆಯಲ್ಲಿ ಆರ್​ಬಿಐ ಬಡ್ಡಿದರ ಕಡಿಮೆ ಮಾಡಲೇಬೇಕಾಗುತ್ತದೆ ಎನ್ನುವ ಪಿಯೂಶ್ ಗೋಯಲ್ ಹೇಳಿಕೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕ್ರಿಯಿಸಿದ್ದಾರೆ. ‘ಡಿಸೆಂಬರ್ ಪಾಲಿಸಿಯಲ್ಲಿ ರೇಟ್ ಇಳಿಸಬೇಕೋ ಬೇಡವೋ ಎಂಬ ಬಗ್ಗೆ ತನ್ನ ಪ್ರತಿಕ್ರಿಯೆಯನ್ನು ಕಾಯ್ದಿರಿಸಲು ಬಯಸುತ್ತೇನೆ,’ ಎಂದು ಶಕ್ತಿಕಾಂತ್ ದಾಸ್ ರಾಜತಾಂತ್ರಿಕ ರೀತಿಯ ಉತ್ತರ ನೀಡಿದ್ದಾರೆ. ಶಕ್ತಿಕಾಂತ ದಾಸ್ ಕೂಡ ಗ್ಲೋಬಲ್ ಲೀಡರ್​ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ