AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

My Home Group: ಸರಬರಾಜು ಸೇವೆ ತ್ವರಿತಗೊಳಿಸಲು 250 ಭಾರೀ ವಾಹನಗಳನ್ನು ಖರೀದಿಸಿದ ಮೈ ಹೋಂ ಇಂಡಸ್ಟ್ರೀಸ್

ತೆಲಂಗಾಣದ ಸೂರ್ಯಪೇಟ್​ನಲ್ಲಿರುವ ಮೈ ಇಂಡಸ್ಟ್ರೀಸ್​ ತನ್ನ ಹೊಸ ಫ್ಯಾಕ್ಟರಿಯ ಉತ್ಪನ್ನಗಳ ಸರಬರಾಜಿಗೆ 250 ದೊಡ್ಡ ಟ್ರಕ್​ಗಳನ್ನು ಖರೀದಿಸಿದೆ. ಇದರಲ್ಲಿ 30ರಿಂದ 41 ಎಂಟಿ ತೂಕ ಸಾಮರ್ಥ್ಯದ ವಾಹನಗಳು ಸೇರಿವೆ. ಗ್ರಾಹಕರಿಗೆ ತ್ವರಿತ ಸರಬರಾಜು ಸೇವೆ ನೀಡಲು ಈ ವಾಹನಗಳು ಸಹಾಯವಾಗಲಿವೆ. ಮೈ ಹೋಂ ಗ್ರೂಪ್ ಸಂಸ್ಥೆ ವಿವಿಧ ವಲಯಗಳಲ್ಲಿ ವ್ಯವಹಾರ ಹೊಂದಿದ್ದು, ದೇಶದ ಅತಿದೊಡ್ಡ ಉದ್ಯಮ ಸಮೂಹಗಳಲ್ಲಿ ಒಂದೆನಿಸಿದೆ.

My Home Group: ಸರಬರಾಜು ಸೇವೆ ತ್ವರಿತಗೊಳಿಸಲು 250 ಭಾರೀ ವಾಹನಗಳನ್ನು ಖರೀದಿಸಿದ ಮೈ ಹೋಂ ಇಂಡಸ್ಟ್ರೀಸ್
ಮಹಾ ಸಿಮೆಂಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2025 | 1:25 PM

Share

ಹೈದರಾಬಾದ್, ಫೆಬ್ರುವರಿ 9: ಮೈ ಹೋಂ ಇಂಡಸ್ಟ್ರೀಸ್ ಸಂಸ್ಥೆ ತನ್ನ ಉತ್ಪನ್ನಗಳ ಸರಬರಾಜು ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಬಲಗೊಳಿಸಲು ಭಾರೀ ಸಾಮರ್ಥ್ಯದ ವಾಹನಗಳನ್ನು ಖರೀದಿಸಿದೆ. ಒಟ್ಟು 250 ಹೆವಿ ವೆಹಿಕಲ್​ಗಳನ್ನು ಸೂರ್ಯಪೇಟ್​ನಲ್ಲಿರುವ ಅದರ ಫ್ಯಾಕ್ಟರಿಗೆ ಜೋಡಿಸಿಕೊಂಡಿದೆ. ಇದರಲ್ಲಿ 30 ಎಂಟಿ ಸಾಮರ್ಥ್ಯದ 100 ಟ್ರಕ್​ಗಳು, 35 ಎಂಟಿ ಸಾಮರ್ಥ್ಯದ 100 ಟ್ರಕ್​ಗಳು, ಹಾಗೂ 41 ಎಂಟಿ ಸಾಮರ್ಥ್ಯದ 50 ಟ್ರೇಲರ್​ಗಳನ್ನು ತರಿಸಿದೆ.

ಈ ವಾಹನಗಳ ನಿಯೋಜನೆಯಿಂದ ಸಂಸ್ಥೆಯ ವ್ಯಾವಹಾರಿಕ ಕಾರ್ಯಾಚರಣೆ ಮತ್ತಷ್ಟು ಸಮರ್ಪಕವಾಗಲಿದೆ. ಗ್ರಾಹಕರಿಗೆ ಹೆಚ್ಚು ತ್ವರಿತ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಮೈ ಹೋಂ ಗ್ರೂಪ್ ಹೇಳಿಕೆ ನೀಡಿದೆ. ದೇಶದ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿಯಲ್ಲಿ ಲಾಜಿಸ್ಟಿಕ್ಸ್ ಕೂಡ ಪ್ರಮುಖ ಭಾಗವಾಗಿರುವುದರಿಂದ, ಇದರಲ್ಲಿ ಮೈ ಹೋಂ ಇಂಡಸ್ಟ್ರೀಸ್​ನ ಈ ಉಪಕ್ರಮದ ಕೊಡುಗೆಯೂ ಸೇರುತ್ತದೆ ಎಂದು ಸಂಸ್ಥೆ ಹೇಳಿದೆ.

ಹೈದರಾಬಾದ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ಮೈ ಹೋಂ ಗ್ರೂಪ್ ಬಹಳ ವಿಸ್ತೃತ ಬಿಸಿನೆಸ್​ಗಳನ್ನು ಹೊಂದಿದೆ. ಸಿಮೆಂಟ್, ರಿಯಲ್ ಎಸ್ಟೇಟ್, ಕನ್ಸ್​ಟ್ರಕ್ಷನ್, ವಿದ್ಯುತ್, ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅದರ ವ್ಯವಹಾರಗಳಿವೆ. ಮೂರು ದಶಕಗಳಿಂದ ನಿರ್ಮಿತವಾದ ಈ ಗ್ರೂಪ್​ನ ಬಿಸಿನೆಸ್​ಗಳಿಂದ 10,000ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ಮೈಸೂರಿನಲ್ಲಿ ಇನ್ಫೋಸಿಸ್​ನಿಂದ ನೂರಾರು ಉದ್ಯೋಗಿಗಳ ಲೇ ಆಫ್; ಎರಡು ವರ್ಷ ಸತಾಯಿಸಿ ನೇಮಕಗೊಂಡಿದ್ದ ಫ್ರೆಷರ್ಸ್​ಗೆ ಶಾಕ್

ಡಾ. ರಾಮೇಶ್ವರ್ ರಾವ್ ಜುಪಲ್ಲಿ ಅವರಿಂದ ಸ್ಥಾಪಿತವಾದ ಮೈ ಹೋಂ ಗ್ರೂಪ್​ನಲ್ಲಿ ಮೈ ಹೋಂ ಇಂಡಸ್ಟ್ರೀಸ್ ಕೂಡ ಸೇರಿದೆ. ಮಹಾ ಸಿಮೆಂಟ್​ನ ಹೊಸ ಫ್ಯಾಕ್ಟರಿ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೆಲ್ಲಚೆರುವಿನ ಶ್ರೀನಗರದಲ್ಲಿ ಇದೆ. ಇಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಎರಡು ಎಂಟಿಪಿಎಗೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ