Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನದಲ್ಲಿ ಶೇ. 30ರ ಗಡಿದಾಟಿದ ಹಣದುಬ್ಬರ; ಅತಿಹೆಚ್ಚು ಇನ್​ಫ್ಲೇಷನ್ ಇರುವ ದೇಶಗಳ ಟಾಪ್10 ಪಟ್ಟಿ

Pakistan Inflation 2023: ಪಾಕಿಸ್ತಾನದಲ್ಲಿ ಹಣದುಬ್ಬರ ಆಗಸ್ಟ್ 10ರಂದು ಅಂತ್ಯಗೊಂಡ ವಾರದಲ್ಲಿ ಶೇ. 30.82ಕ್ಕೆ ಏರಿದೆ. ಗೋದಿಹಿಟ್ಟು, ಬಾಸ್ಮತಿ ಅಕ್ಕಿ ಇತ್ಯಾದಿ ಅಗತ್ಯವಸ್ತುಗಳ ಬೆಲೆ ಏರಿದ್ದರಿಂದ ಹಣದುಬ್ಬರವೂ ಏರಿದೆ. 2022ರಲ್ಲಿ ಇದೇ ಅವಧಿಯಲ್ಲಿ ಇದ್ದ ಬೆಲೆಗೆ ತುಲನೆ ಮಾಡಿ ಹಣದುಬ್ಬರ ಅಳೆಯಲಾಗಿದೆ.

ಪಾಕಿಸ್ತಾನದಲ್ಲಿ ಶೇ. 30ರ ಗಡಿದಾಟಿದ ಹಣದುಬ್ಬರ; ಅತಿಹೆಚ್ಚು ಇನ್​ಫ್ಲೇಷನ್ ಇರುವ ದೇಶಗಳ ಟಾಪ್10 ಪಟ್ಟಿ
ಪಾಕಿಸ್ತಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2023 | 11:41 AM

ಇಸ್ಲಾಮಾಬಾದ್, ಆಗಸ್ಟ್ 13: ಪಾಕಿಸ್ತಾನದ ಹಣದುಬ್ಬರ (Inflation) ಮತ್ತೆ ಏರಿಕೆಯಾಗಿದೆ. ಆಗಸ್ಟ್ 10ರಂದು ಕೊನೆಗೊಂಡ ವಾರದಲ್ಲಿ ಅದರ ಹಣದುಬ್ಬರ ದರ ಶೇ. 30ರ ಗಡಿ ದಾಟಿ ಹೋಗಿದೆ. ಅಲ್ಲೀಗ ಹಣದುಬ್ಬರ ಶೇ. 30.82ರಷ್ಟಿದೆ. ಹಲವು ಅಗತ್ಯವಸ್ತುಗಳ ಬೆಲೆ ಏರಿದ್ದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿಲ್ಲ. ಮೇ ತಿಂಗಳಲ್ಲಿ ಅಲ್ಲಿನ ಇನ್​ಫ್ಲೇಷನ್ ದರ ಶೇ. 38ಕ್ಕಿಂತ ಮೇಲೇರಿತ್ತು. ಅದು ಪಾಕಿಸ್ತಾನದಲ್ಲಿ ದಾಖಲಾದ ಗರಿಷ್ಠ ಬೆಲೆ ಏರಿಕೆ ಪ್ರಮಾಣ.

ಪಾಕಿಸ್ತಾನದ ಅಂಕಿಅಂಶಗಳ ಸಂಸ್ಥೆ (PBS) ಆಗಸ್ಟ್ 12ರಂದು ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಹಣದುಬ್ಬರ ಸೂಚಕವೆನಿಸಿದ ಸೆನ್ಸಿಟಿವ್ ಪ್ರೈಸ್ ಇಂಡೆಕ್ಸ್ ವಿವರ ಬಹಿರಂಗಪಡಿಸಿದೆ. ಈ ಎಸ್​ಪಿಐ ಗುಂಪಿನಲ್ಲಿರುವ ಆಯ್ದ 51 ಅಗತ್ಯ ವಸ್ತುಗಳ ಪೈಕಿ 29 ವಸ್ತುಗಳ ಬೆಲೆ ಏರಿದೆ. ಐದು ಸರಕುಗಳ ಬೆಲೆ ಕಡಿಮೆಯಾಗಿದೆರುವುದು ತಿಳಿದುಬಂದಿದೆ. ಕಳೆದ ವರ್ಷದ ಇದೇ ವಾರಕ್ಕೆ ಹೋಲಿಸಿ ಬೆಲೆ ಹೆಚ್ಚಳವನ್ನು ಹೋಲಿಸಲಾಗಿದೆ.

ಗೋದಿಹಿಟ್ಟು, ಸಿಗರೇಟು, ಬಾಸ್ಮತಿ ಅಕ್ಕಿ, ಮೆಣಸಿನಕಾಯಿಪುಡಿ, ಸಕ್ಕರೆ, ಕೋಳಿ, ಆಲೂಗಡ್ಡೆ, ಟೊಮೆಟೋ ಮೊದಲಾದ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ಹಣದುಬ್ಬರ ಏರಿಕೆಯಾಗಿದೆ.

ಇದನ್ನೂ ಓದಿ: ಅನಿಲ್ ಅಂಬಾನಿ ಬೆಂಬಲಿತ ಕಂಪನಿಗಳದ್ದೂ ಸೇರಿ ಲಕ್ಷ ಕೋಟಿ ರೂನಷ್ಟು ಕೆಟ್ಟ ಸಾಲ ಮಾರಲಿರುವ ಎಸ್​ಬಿಐ; ಇದನ್ನು ಖರೀದಿಸುತ್ತಿರುವವರು ಯಾರು?

ವಿಶ್ವದಲ್ಲಿ ಅತಿಹೆಚ್ಚು ಹಣದುಬ್ಬರ ಇರುವ ದೇಶಗಳು

ವೆನಿಜುವೆಲಾ: ಶೇ. 1198

ಸೂಡಾನ್: ಶೇ. 340

ಲೆಬನಾನ್: ಶೇ. 201

ಸಿರಿಯಾ: ಶೇ. 139

ಸುರಿನಾಮ್: ಶೇ. 63.3

ಜಿಂಬಾಬ್ವೆ: ಶೇ. 60.7

ಅರ್ಜೆಂಟೀನಾ: ಶೇ. 51.2

ಟರ್ಕಿ: ಶೇ. 36.1

ಇರಾನ್: ಶೇ. 35.2

ಇಥಿಯೋಪಿಯಾ: ಶೇ. 33

ಭಾರತದಲ್ಲಿ ಹಣದುಬ್ಬರ ಸದ್ಯ ಶೇ. 4.7ರಷ್ಟಿದೆ. ಇಲ್ಲಿಯೂ ಸಾಕಷ್ಟು ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿರುವ ಪರಿಣಾಮ ಹಣದುಬ್ಬರ ಶೇ. 5ರ ಗಡಿದಾಟಿ ಹೋಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?